ETV Bharat / state

ಕ್ಷೇತ್ರದ ಅನುದಾನ ಬಗ್ಗೆ ಸಮಸ್ಯೆ ಇದೆಯಷ್ಟೇ ಯಾವುದೇ ಬಂಡಾಯ ಇಲ್ಲ: ಸೋಮನಗೌಡ ಪಾಟೀಲ್ - ಬಿಜಿಪಿಯಲ್ಲಿ ಯಾವುದೆ ಬಂಡಾಯವಿಲ್ಲ

ಬಿಜೆಪಿ ಪಕ್ಷದ ಎದ್ದಿರುವ ಬಂಡಾಯದ ಕುರಿತಂತೆ ಮಾತನಾಡಿದ ಶಾಸಕ ಸೋಮನಗೌಡ ಪಾಟೀಲ್, ನಿನ್ನೆ ಉಮೇಶ್ ಕತ್ತಿ ಭೋಜನಕ್ಕಾಗಿ ಕರೆದಿದ್ದರು. ಅದಕ್ಕಾಗಿ ಹೋಗಿದ್ದೆವು. ಯಾವುದೇ ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ಮಾಡಲಿಲ್ಲ ಎಂದು ಸ್ಪಷ್ಟಪಡಿಸಿದರು.

Somanagowda patil
ಸೋಮನಗೌಡ ಪಾಟೀಲ್
author img

By

Published : May 29, 2020, 3:59 PM IST

ಬೆಂಗಳೂರು: ಕ್ಷೇತ್ರದ ಅನುದಾನದ ಸಂಬಂಧ ಸಮಸ್ಯೆ ಇದ್ದು, ಯಾವುದೇ ಬಂಡಾಯ ಇಲ್ಲ ಎಂದು ಬಿಜೆಪಿ ಶಾಸಕ ಸೋಮನಗೌಡ ಪಾಟೀಲ್ ಸಾಸನೂರು ತಿಳಿಸಿದರು.

ಬಿಜೆಪಿ ಶಾಸಕ ಸೋಮನಗೌಡ ಪಾಟೀಲ್ ಸಾಸನೂರು

ವಿಧಾನಸೌಧದಲ್ಲಿ ಮಾತನಾಡಿದ ಅವರು, ನಿನ್ನೆ ಉಮೇಶ್ ಕತ್ತಿ ಭೋಜನಕ್ಕಾಗಿ ಕರೆದಿದ್ದರು. ಅದಕ್ಕಾಗಿ ಹೋಗಿದ್ದೆವು. ಯಾವುದೇ ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ಮಾಡಲಿಲ್ಲ ಎಂದು ಸ್ಪಷ್ಟಪಡಿಸಿದರು.

ಕ್ಷೇತ್ರದ ಅನುದಾನ ಕುರಿತು ಸಮಸ್ಯೆ ಇದೆ. ಅನುದಾನ ಕೊರತೆ ಬಗ್ಗೆ ಚರ್ಚೆ ಮಾಡಿದ್ದೇವೆ. ಬೇರೆ ಯಾವುದೇ ವಿಚಾರದ ಬಗ್ಗೆ ಚರ್ಚೆ ನಡೆದಿಲ್ಲ. ಸ್ಥಾನಮಾನ ಬಗ್ಗೆನೂ ಯಾವುದೇ ಸಮಾಲೋಚನೆ ನಡೆದಿಲ್ಲ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆದಿದೆ. ಅನುದಾನ ಕೊರತೆ ಬಗ್ಗೆ ಚರ್ಚೆ ನಡೆಸಿದ್ದೇವೆ ಅಷ್ಟೇ ಎಂದರು.

ನಾನು ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ. ಪಕ್ಷ ನನಗೆ ಯಾವ ಜಬಾವ್ದಾರಿ ಕೊಡುತ್ತೆ ಅದನ್ನು ನಾನು ನಿಭಾಯಿಸುತ್ತೇನೆ ಎಂದು ತಿಳಿಸಿದರು.

ಬೆಂಗಳೂರು: ಕ್ಷೇತ್ರದ ಅನುದಾನದ ಸಂಬಂಧ ಸಮಸ್ಯೆ ಇದ್ದು, ಯಾವುದೇ ಬಂಡಾಯ ಇಲ್ಲ ಎಂದು ಬಿಜೆಪಿ ಶಾಸಕ ಸೋಮನಗೌಡ ಪಾಟೀಲ್ ಸಾಸನೂರು ತಿಳಿಸಿದರು.

ಬಿಜೆಪಿ ಶಾಸಕ ಸೋಮನಗೌಡ ಪಾಟೀಲ್ ಸಾಸನೂರು

ವಿಧಾನಸೌಧದಲ್ಲಿ ಮಾತನಾಡಿದ ಅವರು, ನಿನ್ನೆ ಉಮೇಶ್ ಕತ್ತಿ ಭೋಜನಕ್ಕಾಗಿ ಕರೆದಿದ್ದರು. ಅದಕ್ಕಾಗಿ ಹೋಗಿದ್ದೆವು. ಯಾವುದೇ ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ಮಾಡಲಿಲ್ಲ ಎಂದು ಸ್ಪಷ್ಟಪಡಿಸಿದರು.

ಕ್ಷೇತ್ರದ ಅನುದಾನ ಕುರಿತು ಸಮಸ್ಯೆ ಇದೆ. ಅನುದಾನ ಕೊರತೆ ಬಗ್ಗೆ ಚರ್ಚೆ ಮಾಡಿದ್ದೇವೆ. ಬೇರೆ ಯಾವುದೇ ವಿಚಾರದ ಬಗ್ಗೆ ಚರ್ಚೆ ನಡೆದಿಲ್ಲ. ಸ್ಥಾನಮಾನ ಬಗ್ಗೆನೂ ಯಾವುದೇ ಸಮಾಲೋಚನೆ ನಡೆದಿಲ್ಲ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆದಿದೆ. ಅನುದಾನ ಕೊರತೆ ಬಗ್ಗೆ ಚರ್ಚೆ ನಡೆಸಿದ್ದೇವೆ ಅಷ್ಟೇ ಎಂದರು.

ನಾನು ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ. ಪಕ್ಷ ನನಗೆ ಯಾವ ಜಬಾವ್ದಾರಿ ಕೊಡುತ್ತೆ ಅದನ್ನು ನಾನು ನಿಭಾಯಿಸುತ್ತೇನೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.