ETV Bharat / state

ಸಚಿವ ನಾಗೇಶ್​ಗೆ ಕೋಕ್.. ಬಿಎಸ್​ವೈ ಸಂಪುಟ ಸೇರಿದ ಸಪ್ತ ಸಚಿವರು..

author img

By

Published : Jan 13, 2021, 11:27 AM IST

Updated : Jan 13, 2021, 12:05 PM IST

ಸಂಪುಟ ಸೇರಿದ ನೂತನ ಸಚಿವರು
ಸಂಪುಟ ಸೇರಿದ ನೂತನ ಸಚಿವರು

11:24 January 13

ಬೆಂಗಳೂರಿನಲ್ಲಿ ಸಿಎಂ ಯಡಿಯೂರಪ್ಪ ಹೇಳಿಕೆ

ಬೆಂಗಳೂರಿನಲ್ಲಿ ಸಿಎಂ ಯಡಿಯೂರಪ್ಪ ಹೇಳಿಕೆ

ಬೆಂಗಳೂರು: ಇಂದು ಮಧ್ಯಾಹ್ನ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 7 ಸಚಿವರ ಹೆಸರಿರುವ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸಲಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.

ನಾಗೇಶ್​ಗೆ ಕೋಕ್: ಸಚಿವ ನಾಗೇಶ್​ಗೆ ರಾಜೀನಾಮೆ ನೀಡುವಂತೆ ಸೂಚಿಸಿದ್ದೇವೆ. ಈಗ ಸಚಿವ ಸಂಪುಟ ಸಭೆಯಲ್ಲಿ ಮನವೊಲಿಸುತ್ತೇನೆ. ಆ ಸ್ಥಾನ ಖಾಲಿ ಇಡುತ್ತೇವೆ ಎಂದು ತಿಳಿಸಿದರು.

ಸಂಪುಟ ಸೇರಿದ ನೂತನ ಸಚಿವರು: ಎಂಟಿಬಿ ನಾಗರಾಜ್, ಆರ್.ಶಂಕರ್, ಉಮೇಶ್ ಕತ್ತಿ, ಅಂಗಾರ, ಮುರುಗೇಶ್ ನಿರಾಣಿ, ಸಿ.ಪಿ.ಯೋಗೇಶ್ವರ್, ಅರವಿಂದ ಲಿಂಬಾವಳಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.  

ಒಂದೂವರೆ ತಿಂಗಳೊಳಗೆ ಮುನಿರತ್ನಗೆ ಸಚಿವ ಸ್ಥಾನ: ಮೂಲಗಳ ಪ್ರಕಾರ ಒಂದೂವರೆ ತಿಂಗಳ ಒಳಗೆ ಮುನಿರತ್ನಗೆ ಸಚಿವ ಸ್ಥಾನ ಕೊಡುವ ಭರವಸೆಯನ್ನು ಸಿಎಂ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಕುತೂಹಲ ಮೂಡಿಸಿದ ದೂರವಾಣಿ ಸಂಭಾಷಣೆ: ವಿಧಾನಸೌಧಕ್ಕೆ ಆಗಮಿಸುತ್ತಿದ್ದ ವೇಳೆ ಮಾರ್ಗ ಮಧ್ಯೆ ತಮ್ಮ ಕಾರು ನಿಲ್ಲಿಸಿ, ಸಿಎಂ ದೂರವಾಣಿ ಸಂಭಾಷಣೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ:‘ಕೈ’ ಬಿಟ್ಟರೂ ಮುನಿರತ್ನ ಕೈಗೆಟುಕದ ಮಂತ್ರಿ ಸ್ಥಾನ? ಮನವೊಲಿಸುವ ಕೇಂದ್ರವಾಯ್ತಾ ಸಿಎಂ ನಿವಾಸ.!

11:24 January 13

ಬೆಂಗಳೂರಿನಲ್ಲಿ ಸಿಎಂ ಯಡಿಯೂರಪ್ಪ ಹೇಳಿಕೆ

ಬೆಂಗಳೂರಿನಲ್ಲಿ ಸಿಎಂ ಯಡಿಯೂರಪ್ಪ ಹೇಳಿಕೆ

ಬೆಂಗಳೂರು: ಇಂದು ಮಧ್ಯಾಹ್ನ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 7 ಸಚಿವರ ಹೆಸರಿರುವ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸಲಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.

ನಾಗೇಶ್​ಗೆ ಕೋಕ್: ಸಚಿವ ನಾಗೇಶ್​ಗೆ ರಾಜೀನಾಮೆ ನೀಡುವಂತೆ ಸೂಚಿಸಿದ್ದೇವೆ. ಈಗ ಸಚಿವ ಸಂಪುಟ ಸಭೆಯಲ್ಲಿ ಮನವೊಲಿಸುತ್ತೇನೆ. ಆ ಸ್ಥಾನ ಖಾಲಿ ಇಡುತ್ತೇವೆ ಎಂದು ತಿಳಿಸಿದರು.

ಸಂಪುಟ ಸೇರಿದ ನೂತನ ಸಚಿವರು: ಎಂಟಿಬಿ ನಾಗರಾಜ್, ಆರ್.ಶಂಕರ್, ಉಮೇಶ್ ಕತ್ತಿ, ಅಂಗಾರ, ಮುರುಗೇಶ್ ನಿರಾಣಿ, ಸಿ.ಪಿ.ಯೋಗೇಶ್ವರ್, ಅರವಿಂದ ಲಿಂಬಾವಳಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.  

ಒಂದೂವರೆ ತಿಂಗಳೊಳಗೆ ಮುನಿರತ್ನಗೆ ಸಚಿವ ಸ್ಥಾನ: ಮೂಲಗಳ ಪ್ರಕಾರ ಒಂದೂವರೆ ತಿಂಗಳ ಒಳಗೆ ಮುನಿರತ್ನಗೆ ಸಚಿವ ಸ್ಥಾನ ಕೊಡುವ ಭರವಸೆಯನ್ನು ಸಿಎಂ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಕುತೂಹಲ ಮೂಡಿಸಿದ ದೂರವಾಣಿ ಸಂಭಾಷಣೆ: ವಿಧಾನಸೌಧಕ್ಕೆ ಆಗಮಿಸುತ್ತಿದ್ದ ವೇಳೆ ಮಾರ್ಗ ಮಧ್ಯೆ ತಮ್ಮ ಕಾರು ನಿಲ್ಲಿಸಿ, ಸಿಎಂ ದೂರವಾಣಿ ಸಂಭಾಷಣೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ:‘ಕೈ’ ಬಿಟ್ಟರೂ ಮುನಿರತ್ನ ಕೈಗೆಟುಕದ ಮಂತ್ರಿ ಸ್ಥಾನ? ಮನವೊಲಿಸುವ ಕೇಂದ್ರವಾಯ್ತಾ ಸಿಎಂ ನಿವಾಸ.!

Last Updated : Jan 13, 2021, 12:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.