ETV Bharat / state

ಮೆಕ್ಕಾಗೆ ತೆರಳಲು ನಲಪಾಡ್​ಗೆ  ಹೈಕೋರ್ಟ್​ ಗ್ರೀನ್ ಸಿಗ್ನಲ್

ಯುಬಿಸಿಟಿಯಲ್ಲಿ ನಡೆದ ಹಲ್ಲೆ ಪ್ರಕರಣದ ಸಂಬಂಧ ಜಾಮೀನಿನ ಮೇಲೆ ಹೊರಬಂದಿರುವ ಕಾಂಗ್ರೆಸ್​ ನಾಯಕ ಹ್ಯಾರೀಸ್​ ಪುತ್ರ ನಲಪಾಡ್​ಗೆ ಮೆಕ್ಕಾಗೆ ತೆರಳು ಹೈಕೋರ್ಟ್​ ಸಮ್ಮತಿ ನೀಡಿದೆ.

author img

By

Published : May 14, 2019, 5:58 PM IST

Updated : May 14, 2019, 7:00 PM IST

ಮೆಕ್ಕಾಗೆ ತೆರಳಲು ಹೈಕೋರ್ಟ್​ನಿಂದ ಗ್ರೀನ್ ಸಿಗ್ನಲ್

ಬೆಂಗಳೂರು: ಯುಬಿಸಿಟಿಯಲ್ಲಿ ವಿದ್ವತ್​ ಎಂಬ ಯುವಕನ ಮೇಲೆ ಹಲ್ಲೆ ನಡೆಸಿ ಜಾಮೀನಿನ ಮೇಲೆ ಹೊರಬಂದಿದ್ದ ಕಾಂಗ್ರೆಸ್​ ನಾಯಕ ಹ್ಯಾರೀಸ್ ಪುತ್ರ ನಲಪಾಡ್ ಮೆಕ್ಕಾಗೆ ತೆರಳಲು ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್​ ಪುರಸ್ಕರಿಸಿದೆ.

ಈಗಾಗ್ಲೇ ಇದ್ದ ಜಾಮೀನು ಷರತ್ತು ಸಡಿಲಿಕೆ ಮಾಡಿ ರಂಜಾನ್ ಹಿನ್ನೆಲೆಯಲ್ಲಿ ಮೇ 15ರಿಂದ ಜೂ. 6ರ ವರೆಗೆ ಮೆಕ್ಕಾ ಯಾತ್ರೆ ಕೈಗೊಳ್ಳಲು ಮೊಹಮದ್ ನಲಪಾಡ್​​​ಗೆ ಕೋರ್ಟ್ ಅನುಮತಿ ನೀಡಿದೆ.

ಈ ಪ್ರಕರಣದಲ್ಲಿ ಷರತ್ತು ಬದ್ಧ ಜಾಮೀನು ನೀಡಿದ್ದ ಕೋರ್ಟ್, ವಿಚಾರಣಾ ಕೋರ್ಟ್ ವ್ಯಾಪ್ತಿ ಬಿಟ್ಟು ತೆರಳಬಾರದು, ತನಿಖೆಗೆ ಸಹಕಾರ ನೀಡಬೇಕೆಂದು ಷರತ್ತು ವಿಧಿಸಿತ್ತು. ಈ ಹಿನ್ನೆಲೆ ಷರತ್ತನ್ನು ಸಡಿಲಿಸಿ ಮೆಕ್ಕಾಗೆ ತೆರಳಲು ಅನುಮತಿ ನೀಡುವಂತೆ ಮನವಿ ಮಾಡಿದ್ದ ನಲಪಾಡ್​​ಗೆ ಇದೀಗ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.

ಬೆಂಗಳೂರು: ಯುಬಿಸಿಟಿಯಲ್ಲಿ ವಿದ್ವತ್​ ಎಂಬ ಯುವಕನ ಮೇಲೆ ಹಲ್ಲೆ ನಡೆಸಿ ಜಾಮೀನಿನ ಮೇಲೆ ಹೊರಬಂದಿದ್ದ ಕಾಂಗ್ರೆಸ್​ ನಾಯಕ ಹ್ಯಾರೀಸ್ ಪುತ್ರ ನಲಪಾಡ್ ಮೆಕ್ಕಾಗೆ ತೆರಳಲು ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್​ ಪುರಸ್ಕರಿಸಿದೆ.

ಈಗಾಗ್ಲೇ ಇದ್ದ ಜಾಮೀನು ಷರತ್ತು ಸಡಿಲಿಕೆ ಮಾಡಿ ರಂಜಾನ್ ಹಿನ್ನೆಲೆಯಲ್ಲಿ ಮೇ 15ರಿಂದ ಜೂ. 6ರ ವರೆಗೆ ಮೆಕ್ಕಾ ಯಾತ್ರೆ ಕೈಗೊಳ್ಳಲು ಮೊಹಮದ್ ನಲಪಾಡ್​​​ಗೆ ಕೋರ್ಟ್ ಅನುಮತಿ ನೀಡಿದೆ.

ಈ ಪ್ರಕರಣದಲ್ಲಿ ಷರತ್ತು ಬದ್ಧ ಜಾಮೀನು ನೀಡಿದ್ದ ಕೋರ್ಟ್, ವಿಚಾರಣಾ ಕೋರ್ಟ್ ವ್ಯಾಪ್ತಿ ಬಿಟ್ಟು ತೆರಳಬಾರದು, ತನಿಖೆಗೆ ಸಹಕಾರ ನೀಡಬೇಕೆಂದು ಷರತ್ತು ವಿಧಿಸಿತ್ತು. ಈ ಹಿನ್ನೆಲೆ ಷರತ್ತನ್ನು ಸಡಿಲಿಸಿ ಮೆಕ್ಕಾಗೆ ತೆರಳಲು ಅನುಮತಿ ನೀಡುವಂತೆ ಮನವಿ ಮಾಡಿದ್ದ ನಲಪಾಡ್​​ಗೆ ಇದೀಗ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.

Intro:ವಿದ್ವತ್ ಮೇಲೆ ಹ್ಯಾರೀಸ್ ಪುತ್ರ ನಲಪಾಡ್ ಹಲ್ಲೆ ಪ್ರಕರಣ
ಮೆಕ್ಕಾಗೆ ತೆರಳಲು ಹೈಕೊರ್ಟ್ ನಿಂದ ನಲಪಾಡ್ಗೆ ಗ್ರೀನ್ ಸಿಗ್ನಲ್

ಭವ್ಯ


ವಿದ್ವತ್ ಮೇಲೆ ಹ್ಯಾರೀಸ್ ಪುತ್ರ ನಲಪಾಡ್ ಯುಬಿಸಿಟಿಯ ಫರ್ಜಿಕೆಫೆಯಲ್ಲಿ ವಿದ್ವತ್ ಮೇಲೆ ಹಲ್ಲೆ ಮಾಡಿ ದೊಡ್ಡ ಸುದ್ದಿಯಾಗಿದ್ದ. ನಂತ್ರ ತಿಂಗಳ ಗಟ್ಟಲೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು ಷರತ್ತು ಬದ್ದ ಜಾಮೀನು ಪಡೆದು ಹೊರಬಂದಿದ್ದ .

ಇತ್ತಿಚ್ಚೆಗೆ ಮೆಕ್ಕಾಕ್ಕೆ ತೆರಳಲು ಅನುಮತಿ ಕೋರಿ ಹೈಕೋರ್ಟ್ ಮೊರೆ ಹೋಗಿದ್ದ ವಿಚಾರಣೆ ನಡೆಸಿದ ನ್ಯಾಯಲಯ ವಿಚಾರಣೆ ಮುಂದೂಡಿಕೆ ಮಾಡಿ ಸರ್ಕಾರಿ ವಕೀಲರಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿತ್ತು. ನಂತ್ರ ಇವತ್ತು ಹೈಕೋರ್ಟಲ್ಲಿ ಮತ್ತೆ ಅರ್ಜಿ ವಿಚಾರಣೆ ಬಂದಿದ್ದು ಈಗಾಗ್ಲೇ ಇದ್ದ ಜಾಮೀನು ಷರತ್ತು ಸಡಿಲಿಕೆ ಮಾಡಿ ಹೈಕೋರ್ಟ್ ರಂಜಾನ್ ಹಿನ್ನೆಲೆಯಲ್ಲಿ ಮೇ 15ರಿಂದ ಜೂ. 6ರ ವರೆಗೆ ಮೆಕ್ಕಾ ಯಾತ್ರೆ ಕೈಗೊಳ್ಳಲು ಮೊಹಮದ್ ನಲಪಾಡ್ ಗೆ ಹೈಕೋರ್ಟ್ ಅನುಮತಿ ನೀಡಿದೆ.


ಏನೆಲ್ಲಾ ಷರತ್ತು ಇತ್ತು

ವಿದ್ವತ್ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಷರತ್ತು ಬದ್ದ ಜಾಮೀನು ನೀಡಿದ್ದ ಹೈಕೋರ್ಟ್ ವಿಚಾರಣಾ ಕೋರ್ಟ್ ವ್ಯಾಪ್ತಿ ಬಿಟ್ಟು ತೆರಳ ಬಾರದು ತನಿಖೆಗೆ ಸಹಕಾರ ನೀಡಬೇಕೆಂದಿತ್ತು. ಈ ಹಿನ್ನೆಲೆ ಈ ಷರತ್ತು ಸಡಿಲಿಸಿ ಮೆಕ್ಕಾಗೆ ತೆರಳಲು ಅನುಮತಿ ನೀಡುವಂತೆ ಮನವಿ ಮಾಡಿದ್ದ ನಲಪಾಡ್ ಇದೀಗ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆBody:KN_BNG_08-14-19-NAlPAD_7204498-BHAVYAConclusion:KN_BNG_08-14-19-NAlPAD_7204498-BHAVYA
Last Updated : May 14, 2019, 7:00 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.