ETV Bharat / state

ಶಿಕ್ಷಣ ಸುಧಾರಣೆಗೆ ಒತ್ತು ನೀಡಿದ ಕೇಂದ್ರ ಬಜೆಟ್ : ಸಚಿವ ಸುರೇಶ್ ಕುಮಾರ್

author img

By

Published : Feb 1, 2021, 7:42 PM IST

ಕಳೆದ ನಾಲ್ಕು ದಶಕಗಳ ಶಿಕ್ಷಣ ವ್ಯವಸ್ಥೆಯ ಅಮೂಲಾಗ್ರ ಬದಲಾವಣೆ ಮೂಲಕ ಪ್ರಗತಿ ಧ್ಯೋತಕ ಶಿಕ್ಷಣಕ್ಕೆ ಒತ್ತು ನೀಡುವ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಒಂದು ಕ್ರಾಂತಿಕಾರಕ ಬದಲಾವಣೆಗೆ ನಾಂದಿ ಹಾಡಲಿದ್ದು, ಒಟ್ಟಾರೆ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಹೆಚ್ಚಿನ ಒತ್ತು ನೀಡಿದೆ ಎಂದಿದ್ದಾರೆ..

minister-suresh-kumar
ಸಚಿವ ಸುರೇಶ್ ಕುಮಾರ್

ಬೆಂಗಳೂರು : ಕೇಂದ್ರ ಬಜೆಟ್​​​ ಸ್ವಾಗತಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಈ ಆಯವ್ಯಯ ಶೈಕ್ಷಣಿಕ ಕ್ಷೇತ್ರದ ಸಮಗ್ರ ಸುಧಾರಣೆಯ ಹೆಚ್ಚಿನ ಒಲವುಳ್ಳದ್ದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನೂತನ ಶಿಕ್ಷಣ ನೀತಿ ಜಾರಿಗೊಳಿಸಿರುವ ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಆಯವ್ಯಯದಲ್ಲಿ ಅಳವಡಿಕೆ ಮಾಡಿರುವ ಅಂಶಗಳು 39 ವರ್ಷಗಳ ನಂತರ ಜಾರಿ ಮಾಡಲಾಗುತ್ತಿರುವ ನೂತನ ಶಿಕ್ಷಣ ನೀತಿಯ ಪರಿಣಾಮಕಾರಿ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಶೈಕ್ಷಣಿಕ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆಗೆ ಒಲವು ನೀಡಿದೆ ಎಂದಿದ್ದಾರೆ.

ಶಿಕ್ಷಣ ಇಲಾಖೆಗೆ 93,224.31 ಕೋಟಿ ರೂ.ಗಳ ಅನುದಾನ ಒದಗಿಸಿರುವ ಬಜೆಟ್​​ನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆಗೆ 54,873.66 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ನ್ಯಾಷನಲ್ ಪ್ರೊಫೆಷನಲ್ ಸ್ಟ್ಯಾಂಡರ್ಡ್ಸ್ ಫಾರ್ ಟೀಚರ್ಸ್-ಎನ್​​​​ಪಿಎಸ್​​ಟಿ ಅಡಿ ಶಿಕ್ಷಕರ ಗುಣಮಟ್ಟ ಹೆಚ್ಚಳಕ್ಕೆ ಒತ್ತು ನೀಡಲಾಗಿದ್ದು, ದೇಶದ 92 ಲಕ್ಷ ಸರ್ಕಾರಿ ಹಾಗೂ ಖಾಸಗಿ ಶಾಲಾ ಶಿಕ್ಷಕರು ಇದರ ಉಪಯೋಗ ಪಡೆಯಲಿರುವುದರಿಂದ ಪರೋಕ್ಷವಾಗಿ ಅದರ ಪ್ರಯೋಜನ ನಮ್ಮ ಮಕ್ಕಳಿಗೆ ದೊರೆಯಲಿದೆ.

ಸ್ಥಳೀಯವಾಗಿ ಲಭ್ಯವಾಗಬಹುದಾದ ಆಟಿಕೆಗಳ ಮೂಲಕ ಬೋಧನೆಯನ್ನು ಎಲ್ಲ ಮಟ್ಟದ ಶಾಲಾ ಶಿಕ್ಷಣದಲ್ಲಿ ಅಳವಡಿಸಿಕೊಳ್ಳಲು ಅನುವಾಗುವಂತೆ ಶಿಕ್ಷಣದ ರೂಪುರೇಷೆ ಅಭಿವೃದ್ಧಿಗೆ ಒತ್ತು ನೀಡಲಾಗಿರುವುದು ಬಜೆಟ್ ವಿಶೇಷವಾಗಿದೆ ಎಂದು ಸುರೇಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿಜಿಟಲ್ ಮೂಲಸೌಲಭ್ಯ ಒದಗಿಸುವ ಸಲುವಾಗಿ ನ್ಯಾಷನಲ್ ಡಿಜಿಟಲ್ ಎಜುಕೇಷನಲ್ ಆರ್ಕಿಟೆಕ್ಚರ್- ಎನ್​​​ಡಿಇಎಆರ್ ಸೌಲಭ್ಯದ ಮೂಲಕ ಶಿಕ್ಷಣ ನಿರೂಪಣೆ, ಪಾಠ ಪ್ರವಚನ ಮತ್ತು ಮಕ್ಕಳ ಕಲಿಕೆಗೆ ಹೆಚ್ಚು ಒತ್ತು ನೀಡಲಾಗಿದೆ. ಶ್ರವಣ ದೋಷವುಳ್ಳ ಮಕ್ಕಳ ಅನುಕೂಲಕ್ಕಾಗಿ ಇಂಡಿಯನ್ ಸೈನ್ ಲಾಂಗ್ವೇಜ್ ಅನ್ನು ದೇಶದಾದ್ಯಂತ ಏಕರೂಪದಲ್ಲಿ ಪ್ರಾಮಾಣೀಕರಗೊಳಿಸಲು ಒಲವು ನೀಡಲಾಗಿದೆ.

ಹಾಗೆಯೇ ಶಾಲಾ ಶಿಕ್ಷಣದಲ್ಲಿ ವಿಷಯಗಳ ಕುರಿತು ನಿರಂತರ ಆಫ್ ಲೈನ್/ಆನ್ ಲೈನ್ ವ್ಯವಸ್ಥೆಯಲ್ಲಿ ಹಿರಿಯ ಹಾಗೂ ನಿವೃತ್ತ ಶಿಕ್ಷಕರನ್ನು ಮಾರ್ಗದರ್ಶಕರನ್ನಾಗಿ ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ.

2021-22ನೇ ಸಾಲಿನಲ್ಲಿ 56 ಲಕ್ಷ ಶಾಲಾ ಶಿಕ್ಷಕರಿಗೆ ನ್ಯಾಷನಲ್ ಇನಿಷಿಯೇಟಿವ್ ಫಾರ್ ಸ್ಕೂಲ್ ಹೆಡ್ಸ್ ಅಂಡ್ ಟೀಚರ್ಸ್ ಫಾರ್ ಹೊಲಿಸ್ಟಿಕ್ ಅಡ್ವಾನ್ಸ್ಮೆಂಟ್ –ಎನ್​​​​​ಐಎಸ್​​​ಟಿಹೆಚ್​​ಎ ತರಬೇತಿ ನೀಡುವುದು, ಪರೀಕ್ಷಾ ಸುಧಾರಣೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಪ್ರಸ್ತುತ ಜಾರಿಯಲ್ಲಿದ್ದ ಸಂಖ್ಯೆ ಬಿಂಬಿಸುವ ಅಂಕಪಟ್ಟಿಯನ್ನು ಬದಲಾಯಿಸಿ ಪ್ರತಿ ವಿದ್ಯಾರ್ಥಿಯ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಪ್ರತಿಬಿಂಬಿಸುವ ಸಮಗ್ರ ಪ್ರಗತಿಪತ್ರ ನೀಡಲು ಅವಕಾಶ ಕಲ್ಪಿಸಿರುವುದು ಈ ಬಾರಿಯ ಬಜೆಟ್‌ನ ವಿಶೇಷವಾಗಿದೆ ಎಂದು ಸಚಿವರು ಹೇಳಿದ್ದಾರೆ.

ಕಳೆದ ನಾಲ್ಕು ದಶಕಗಳ ಶಿಕ್ಷಣ ವ್ಯವಸ್ಥೆಯ ಅಮೂಲಾಗ್ರ ಬದಲಾವಣೆ ಮೂಲಕ ಪ್ರಗತಿ ಧ್ಯೋತಕ ಶಿಕ್ಷಣಕ್ಕೆ ಒತ್ತು ನೀಡುವ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಒಂದು ಕ್ರಾಂತಿಕಾರಕ ಬದಲಾವಣೆಗೆ ನಾಂದಿ ಹಾಡಲಿದ್ದು, ಒಟ್ಟಾರೆ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಹೆಚ್ಚಿನ ಒತ್ತು ನೀಡಿದೆ ಎಂದಿದ್ದಾರೆ.

ಇದನ್ನೂ ಓದಿ: ಯಾವ್ಯಾವ ಕ್ಷೇತ್ರಕ್ಕೆ ಹೊರೆ, ಯಾವ್ಯಾವ ಕ್ಷೇತ್ರಕ್ಕೆ ರಿಲೀಫ್?.. ಬಜೆಟ್​​ನ ಸಮಗ್ರ ಮಾಹಿತಿ..

ಬೆಂಗಳೂರು : ಕೇಂದ್ರ ಬಜೆಟ್​​​ ಸ್ವಾಗತಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಈ ಆಯವ್ಯಯ ಶೈಕ್ಷಣಿಕ ಕ್ಷೇತ್ರದ ಸಮಗ್ರ ಸುಧಾರಣೆಯ ಹೆಚ್ಚಿನ ಒಲವುಳ್ಳದ್ದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನೂತನ ಶಿಕ್ಷಣ ನೀತಿ ಜಾರಿಗೊಳಿಸಿರುವ ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಆಯವ್ಯಯದಲ್ಲಿ ಅಳವಡಿಕೆ ಮಾಡಿರುವ ಅಂಶಗಳು 39 ವರ್ಷಗಳ ನಂತರ ಜಾರಿ ಮಾಡಲಾಗುತ್ತಿರುವ ನೂತನ ಶಿಕ್ಷಣ ನೀತಿಯ ಪರಿಣಾಮಕಾರಿ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಶೈಕ್ಷಣಿಕ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆಗೆ ಒಲವು ನೀಡಿದೆ ಎಂದಿದ್ದಾರೆ.

ಶಿಕ್ಷಣ ಇಲಾಖೆಗೆ 93,224.31 ಕೋಟಿ ರೂ.ಗಳ ಅನುದಾನ ಒದಗಿಸಿರುವ ಬಜೆಟ್​​ನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆಗೆ 54,873.66 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ನ್ಯಾಷನಲ್ ಪ್ರೊಫೆಷನಲ್ ಸ್ಟ್ಯಾಂಡರ್ಡ್ಸ್ ಫಾರ್ ಟೀಚರ್ಸ್-ಎನ್​​​​ಪಿಎಸ್​​ಟಿ ಅಡಿ ಶಿಕ್ಷಕರ ಗುಣಮಟ್ಟ ಹೆಚ್ಚಳಕ್ಕೆ ಒತ್ತು ನೀಡಲಾಗಿದ್ದು, ದೇಶದ 92 ಲಕ್ಷ ಸರ್ಕಾರಿ ಹಾಗೂ ಖಾಸಗಿ ಶಾಲಾ ಶಿಕ್ಷಕರು ಇದರ ಉಪಯೋಗ ಪಡೆಯಲಿರುವುದರಿಂದ ಪರೋಕ್ಷವಾಗಿ ಅದರ ಪ್ರಯೋಜನ ನಮ್ಮ ಮಕ್ಕಳಿಗೆ ದೊರೆಯಲಿದೆ.

ಸ್ಥಳೀಯವಾಗಿ ಲಭ್ಯವಾಗಬಹುದಾದ ಆಟಿಕೆಗಳ ಮೂಲಕ ಬೋಧನೆಯನ್ನು ಎಲ್ಲ ಮಟ್ಟದ ಶಾಲಾ ಶಿಕ್ಷಣದಲ್ಲಿ ಅಳವಡಿಸಿಕೊಳ್ಳಲು ಅನುವಾಗುವಂತೆ ಶಿಕ್ಷಣದ ರೂಪುರೇಷೆ ಅಭಿವೃದ್ಧಿಗೆ ಒತ್ತು ನೀಡಲಾಗಿರುವುದು ಬಜೆಟ್ ವಿಶೇಷವಾಗಿದೆ ಎಂದು ಸುರೇಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿಜಿಟಲ್ ಮೂಲಸೌಲಭ್ಯ ಒದಗಿಸುವ ಸಲುವಾಗಿ ನ್ಯಾಷನಲ್ ಡಿಜಿಟಲ್ ಎಜುಕೇಷನಲ್ ಆರ್ಕಿಟೆಕ್ಚರ್- ಎನ್​​​ಡಿಇಎಆರ್ ಸೌಲಭ್ಯದ ಮೂಲಕ ಶಿಕ್ಷಣ ನಿರೂಪಣೆ, ಪಾಠ ಪ್ರವಚನ ಮತ್ತು ಮಕ್ಕಳ ಕಲಿಕೆಗೆ ಹೆಚ್ಚು ಒತ್ತು ನೀಡಲಾಗಿದೆ. ಶ್ರವಣ ದೋಷವುಳ್ಳ ಮಕ್ಕಳ ಅನುಕೂಲಕ್ಕಾಗಿ ಇಂಡಿಯನ್ ಸೈನ್ ಲಾಂಗ್ವೇಜ್ ಅನ್ನು ದೇಶದಾದ್ಯಂತ ಏಕರೂಪದಲ್ಲಿ ಪ್ರಾಮಾಣೀಕರಗೊಳಿಸಲು ಒಲವು ನೀಡಲಾಗಿದೆ.

ಹಾಗೆಯೇ ಶಾಲಾ ಶಿಕ್ಷಣದಲ್ಲಿ ವಿಷಯಗಳ ಕುರಿತು ನಿರಂತರ ಆಫ್ ಲೈನ್/ಆನ್ ಲೈನ್ ವ್ಯವಸ್ಥೆಯಲ್ಲಿ ಹಿರಿಯ ಹಾಗೂ ನಿವೃತ್ತ ಶಿಕ್ಷಕರನ್ನು ಮಾರ್ಗದರ್ಶಕರನ್ನಾಗಿ ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ.

2021-22ನೇ ಸಾಲಿನಲ್ಲಿ 56 ಲಕ್ಷ ಶಾಲಾ ಶಿಕ್ಷಕರಿಗೆ ನ್ಯಾಷನಲ್ ಇನಿಷಿಯೇಟಿವ್ ಫಾರ್ ಸ್ಕೂಲ್ ಹೆಡ್ಸ್ ಅಂಡ್ ಟೀಚರ್ಸ್ ಫಾರ್ ಹೊಲಿಸ್ಟಿಕ್ ಅಡ್ವಾನ್ಸ್ಮೆಂಟ್ –ಎನ್​​​​​ಐಎಸ್​​​ಟಿಹೆಚ್​​ಎ ತರಬೇತಿ ನೀಡುವುದು, ಪರೀಕ್ಷಾ ಸುಧಾರಣೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಪ್ರಸ್ತುತ ಜಾರಿಯಲ್ಲಿದ್ದ ಸಂಖ್ಯೆ ಬಿಂಬಿಸುವ ಅಂಕಪಟ್ಟಿಯನ್ನು ಬದಲಾಯಿಸಿ ಪ್ರತಿ ವಿದ್ಯಾರ್ಥಿಯ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಪ್ರತಿಬಿಂಬಿಸುವ ಸಮಗ್ರ ಪ್ರಗತಿಪತ್ರ ನೀಡಲು ಅವಕಾಶ ಕಲ್ಪಿಸಿರುವುದು ಈ ಬಾರಿಯ ಬಜೆಟ್‌ನ ವಿಶೇಷವಾಗಿದೆ ಎಂದು ಸಚಿವರು ಹೇಳಿದ್ದಾರೆ.

ಕಳೆದ ನಾಲ್ಕು ದಶಕಗಳ ಶಿಕ್ಷಣ ವ್ಯವಸ್ಥೆಯ ಅಮೂಲಾಗ್ರ ಬದಲಾವಣೆ ಮೂಲಕ ಪ್ರಗತಿ ಧ್ಯೋತಕ ಶಿಕ್ಷಣಕ್ಕೆ ಒತ್ತು ನೀಡುವ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಒಂದು ಕ್ರಾಂತಿಕಾರಕ ಬದಲಾವಣೆಗೆ ನಾಂದಿ ಹಾಡಲಿದ್ದು, ಒಟ್ಟಾರೆ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಹೆಚ್ಚಿನ ಒತ್ತು ನೀಡಿದೆ ಎಂದಿದ್ದಾರೆ.

ಇದನ್ನೂ ಓದಿ: ಯಾವ್ಯಾವ ಕ್ಷೇತ್ರಕ್ಕೆ ಹೊರೆ, ಯಾವ್ಯಾವ ಕ್ಷೇತ್ರಕ್ಕೆ ರಿಲೀಫ್?.. ಬಜೆಟ್​​ನ ಸಮಗ್ರ ಮಾಹಿತಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.