ETV Bharat / state

ದಿನಸಿ ಕಿಟ್​ ವಿತರಣೆ ವೇಳೆ ಸಾಮಾಜಿಕ ಅಂತರ ಮರೆತ ಸಚಿವರು: ಸ್ಥಳೀಯರ ಆಕ್ರೋಶ

ಸಚಿವ ಭೈರತಿ ಬಸರಾಜ್, ದಿನಸಿ ಕಿಟ್ ವಿತರಣೆ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಹಿನ್ನೆಲೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

author img

By

Published : May 10, 2020, 11:47 PM IST

ದಿನಸಿ ಕಿಟ್​ ವಿತರಣೆ ವೇಳೆ ಸಾಮಾಜಿಕ ಅಂತರ ಮರೆತ ಸಚಿವರು
ದಿನಸಿ ಕಿಟ್​ ವಿತರಣೆ ವೇಳೆ ಸಾಮಾಜಿಕ ಅಂತರ ಮರೆತ ಸಚಿವರು

ಬೆಂಗಳೂರು: ಸಚಿವ ಭೈರತಿ ಬಸರಾಜ್ ದಿನಸಿ ಕಿಟ್ ವಿತರಣೆ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನರು ಮುಗಿಬಿದ್ದಿದ್ದರು. ಅಲ್ಲದೆ ಕಿಟ್​ಗಳನ್ನು ಹಂಚುವ ವೇಳೆ ಬಿಜೆಪಿ ನಾಯಕರು ಸಹ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಲಾಕ್​ಡೌನ್​ ಆದೇಶವನ್ನು ಉಲ್ಲಂಘಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಸಾಮಾಜಿಕ ಅಂತರ ಮರೆತ ಸಚಿವರು

ರಾಮಮೂರ್ತಿನಗರದ ಕುವೆಂಪು ಕ್ರೀಡಾಂಗಣದಲ್ಲಿ ಸಚಿವ ಭೈರತಿ ಬಸವರಾಜ್, ಬಿಜೆಪಿ ಸ್ಥಳೀಯ ಮುಖಂಡ ಬಾಕ್ಸರ್ ನಾಗರಾಜ್​ರಿಂದ ದಿನಸಿ ಕಿಟ್ ವಿತರಣೆ ಮಾಡುವ ವೇಳೆ ಜನರು ಮುಗಿಬಿದ್ದರು. ಕಿಟ್​ ವಿತರಣೆ ವೇಳೆ ಸಾಮಾಜಿಕ ಅಂತರ ಮರೆತ ನಾಯಕರು, ಜನಸಂದಣಿಯಲ್ಲೇ ಕಿಟ್​ ಹಂಚಿದ್ದಾರೆ. ಸಾವಿರಾರು ಜನರಿಗೆ ಕಿಟ್​ ಹಂಚಿದ್ದು, ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಬೆಂಗಳೂರು: ಸಚಿವ ಭೈರತಿ ಬಸರಾಜ್ ದಿನಸಿ ಕಿಟ್ ವಿತರಣೆ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನರು ಮುಗಿಬಿದ್ದಿದ್ದರು. ಅಲ್ಲದೆ ಕಿಟ್​ಗಳನ್ನು ಹಂಚುವ ವೇಳೆ ಬಿಜೆಪಿ ನಾಯಕರು ಸಹ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಲಾಕ್​ಡೌನ್​ ಆದೇಶವನ್ನು ಉಲ್ಲಂಘಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಸಾಮಾಜಿಕ ಅಂತರ ಮರೆತ ಸಚಿವರು

ರಾಮಮೂರ್ತಿನಗರದ ಕುವೆಂಪು ಕ್ರೀಡಾಂಗಣದಲ್ಲಿ ಸಚಿವ ಭೈರತಿ ಬಸವರಾಜ್, ಬಿಜೆಪಿ ಸ್ಥಳೀಯ ಮುಖಂಡ ಬಾಕ್ಸರ್ ನಾಗರಾಜ್​ರಿಂದ ದಿನಸಿ ಕಿಟ್ ವಿತರಣೆ ಮಾಡುವ ವೇಳೆ ಜನರು ಮುಗಿಬಿದ್ದರು. ಕಿಟ್​ ವಿತರಣೆ ವೇಳೆ ಸಾಮಾಜಿಕ ಅಂತರ ಮರೆತ ನಾಯಕರು, ಜನಸಂದಣಿಯಲ್ಲೇ ಕಿಟ್​ ಹಂಚಿದ್ದಾರೆ. ಸಾವಿರಾರು ಜನರಿಗೆ ಕಿಟ್​ ಹಂಚಿದ್ದು, ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.