ETV Bharat / state

ಪುನೀತ್ ಸಮಾಧಿ ಸ್ಥಳದಲ್ಲೇ ಮದುವೆಗೆ ಪಟ್ಟು ಹಿಡಿದ ಬಳ್ಳಾರಿಯ ಜೋಡಿ

author img

By

Published : Nov 6, 2021, 3:43 PM IST

ಬಳ್ಳಾರಿ ಮೂಲದ ಪ್ರೇಮಿಗಳಿಬ್ಬರು ದಿವಂಗತ ನಟ ಪುನೀತ್​ ರಾಜ್​ಕುಮಾರ್​ ಸಮಾಧಿ ಬಳಿಯೇ ವಿವಾಹವಾಗಬೇಕೆಂದು ಪಟ್ಟು ಹಿಡಿದರು.

lovers wants to get marriage in front of puneeth rajkumar grave
ಪುನೀತ್ ಸಮಾಧಿ ಸ್ಥಳದಲ್ಲೇ ಮದುವೆಗೆ ಪಟ್ಟು ಹಿಡಿದ ಜೋಡಿಪುನೀತ್ ಸಮಾಧಿ ಸ್ಥಳದಲ್ಲೇ ಮದುವೆಗೆ ಪಟ್ಟು ಹಿಡಿದ ಜೋಡಿ

ಬೆಂಗಳೂರು: ಸ್ಯಾಂಡಲ್​ವುಡ್​ನ ಹೆಸರಾಂತ ನಟ ಪುನೀತ್ ರಾಜ್‌ಕುಮಾರ್ ಸಾವನ್ನಪ್ಪಿ 9 ದಿನ ಕಳೆದಿವೆ. ಕಂಠೀರವ ಸ್ಟುಡಿಯೋದಲ್ಲಿ ಹಾಲು,ತುಪ್ಪ ಕಾರ್ಯಕ್ರಮ ಮುಗಿದು 5 ದಿನವಾಯಿತು. ಆದರೆ ಜನಜಂಗುಳಿ ತಗ್ಗುವ ಸೂಚನೆ ಕಂಡುಬರುತ್ತಿಲ್ಲ. ಮಳೆ, ಚಳಿ ಲೆಕ್ಕಿಸದೆ ಅಭಿಮಾನಿಗಳು ಸಮಾಧಿ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ.

ಅಪ್ಪು ಸಮಾಧಿ ಬಳಿ ವಿವಾಹವಾಗಲು ಬಂದ ಪ್ರೇಮಿಗಳು

ಈ ನಡುವೆ ಶನಿವಾರ ಪುನೀತ್ ಸಮಾಧಿ ಸ್ಥಳದಲ್ಲೇ ಮದುವೆಯಾಗಬೇಕು ಬಳ್ಳಾರಿಯಿಂದ ಗಂಗಾ ಮತ್ತು ಗುರು ಪ್ರಸಾದ್ ಎಂಬ ಪ್ರೇಮಿಗಳು ಬಂದಿದ್ದರು. 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿರುವ ಈ ಜೋಡಿ, ಅಪ್ಪು ಸಮಾಧಿ ಸ್ಥಳದಲ್ಲೇ ಮದುವೆಯಾಗುವುದಾಗಿ ಪೊಲೀಸರೆದುರು ಪಟ್ಟು ಹಿಡಿದರು. ರಾಘಣ್ಣ, ಶಿವಣ್ಣ ಸಹ ಮದುವೆಗೆ ಒಪ್ಪಿಗೆ ಕೊಟ್ಟಿದ್ದಾರೆ ಎಂದು ಈ ಜೋಡಿ ಹೇಳಿದರು.

'ತಾಳಿ ಸಮೇತ ಸಮಾಧಿ ಬಳಿ ಬಂದಿದ್ದೇವೆ. ಅಪ್ಪು ಎನ್ನುವ ಮೇರು ವ್ಯಕ್ತಿಯ ಸಮಾಧಿ ಸ್ಥಳದಲ್ಲೇ ನವ ಜೀವನಕ್ಕೆ ಕಾಲಿಡಲಿಡುತ್ತೇವೆ. ಪುನೀತ್ ರಾಜ್​​ಕುಮಾರ್ ಎಂದರೆ ಇಬ್ಬರಿಗೂ ತುಂಬಾ ಇಷ್ಟ' ಎಂದು ಮಾಧ್ಯಮಗಳಿಗೆ ತಿಳಿಸಿದರು.

'ನಮ್ಮ ಕುಟಬಸ್ಥರಿಂದ ಯಾವುದೇ ಅಡ್ಡಿಯಿಲ್ಲ, ಇಬ್ಬರೂ ಕುಟುಂಬದವರ ಒಪ್ಪಿಗೆ ಪಡೆದಿದ್ದೇವೆ' ಎಂದರು. ಆದರೆ ಸ್ಥಳದಲ್ಲಿರುವ ಪೊಲೀಸರು ಮದುವೆಗೆ ಸ್ಪಷ್ಟವಾಗಿ ನಿರಾಕರಿಸಿದರು. ಕಾಡಿ, ಬೇಡಿದರೂ ಪೊಲೀಸರು ಒಪ್ಪಲಿಲ್ಲ. ಬೇಸತ್ತು ಕೊನೆಗೆ ಈ ಪ್ರೇಮಿಗಳು ತಮ್ಮ ಊರಿನ ದಾರಿ ಹಿಡಿದರು.

ಇದನ್ನೂ ಓದಿ:ಸವದತ್ತಿಯ ರೇಣುಕಾದೇವಿ ದರ್ಶನ ಪಡೆದ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಸ್ಯಾಂಡಲ್​ವುಡ್​ನ ಹೆಸರಾಂತ ನಟ ಪುನೀತ್ ರಾಜ್‌ಕುಮಾರ್ ಸಾವನ್ನಪ್ಪಿ 9 ದಿನ ಕಳೆದಿವೆ. ಕಂಠೀರವ ಸ್ಟುಡಿಯೋದಲ್ಲಿ ಹಾಲು,ತುಪ್ಪ ಕಾರ್ಯಕ್ರಮ ಮುಗಿದು 5 ದಿನವಾಯಿತು. ಆದರೆ ಜನಜಂಗುಳಿ ತಗ್ಗುವ ಸೂಚನೆ ಕಂಡುಬರುತ್ತಿಲ್ಲ. ಮಳೆ, ಚಳಿ ಲೆಕ್ಕಿಸದೆ ಅಭಿಮಾನಿಗಳು ಸಮಾಧಿ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ.

ಅಪ್ಪು ಸಮಾಧಿ ಬಳಿ ವಿವಾಹವಾಗಲು ಬಂದ ಪ್ರೇಮಿಗಳು

ಈ ನಡುವೆ ಶನಿವಾರ ಪುನೀತ್ ಸಮಾಧಿ ಸ್ಥಳದಲ್ಲೇ ಮದುವೆಯಾಗಬೇಕು ಬಳ್ಳಾರಿಯಿಂದ ಗಂಗಾ ಮತ್ತು ಗುರು ಪ್ರಸಾದ್ ಎಂಬ ಪ್ರೇಮಿಗಳು ಬಂದಿದ್ದರು. 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿರುವ ಈ ಜೋಡಿ, ಅಪ್ಪು ಸಮಾಧಿ ಸ್ಥಳದಲ್ಲೇ ಮದುವೆಯಾಗುವುದಾಗಿ ಪೊಲೀಸರೆದುರು ಪಟ್ಟು ಹಿಡಿದರು. ರಾಘಣ್ಣ, ಶಿವಣ್ಣ ಸಹ ಮದುವೆಗೆ ಒಪ್ಪಿಗೆ ಕೊಟ್ಟಿದ್ದಾರೆ ಎಂದು ಈ ಜೋಡಿ ಹೇಳಿದರು.

'ತಾಳಿ ಸಮೇತ ಸಮಾಧಿ ಬಳಿ ಬಂದಿದ್ದೇವೆ. ಅಪ್ಪು ಎನ್ನುವ ಮೇರು ವ್ಯಕ್ತಿಯ ಸಮಾಧಿ ಸ್ಥಳದಲ್ಲೇ ನವ ಜೀವನಕ್ಕೆ ಕಾಲಿಡಲಿಡುತ್ತೇವೆ. ಪುನೀತ್ ರಾಜ್​​ಕುಮಾರ್ ಎಂದರೆ ಇಬ್ಬರಿಗೂ ತುಂಬಾ ಇಷ್ಟ' ಎಂದು ಮಾಧ್ಯಮಗಳಿಗೆ ತಿಳಿಸಿದರು.

'ನಮ್ಮ ಕುಟಬಸ್ಥರಿಂದ ಯಾವುದೇ ಅಡ್ಡಿಯಿಲ್ಲ, ಇಬ್ಬರೂ ಕುಟುಂಬದವರ ಒಪ್ಪಿಗೆ ಪಡೆದಿದ್ದೇವೆ' ಎಂದರು. ಆದರೆ ಸ್ಥಳದಲ್ಲಿರುವ ಪೊಲೀಸರು ಮದುವೆಗೆ ಸ್ಪಷ್ಟವಾಗಿ ನಿರಾಕರಿಸಿದರು. ಕಾಡಿ, ಬೇಡಿದರೂ ಪೊಲೀಸರು ಒಪ್ಪಲಿಲ್ಲ. ಬೇಸತ್ತು ಕೊನೆಗೆ ಈ ಪ್ರೇಮಿಗಳು ತಮ್ಮ ಊರಿನ ದಾರಿ ಹಿಡಿದರು.

ಇದನ್ನೂ ಓದಿ:ಸವದತ್ತಿಯ ರೇಣುಕಾದೇವಿ ದರ್ಶನ ಪಡೆದ ಸಿಎಂ ಬಸವರಾಜ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.