ETV Bharat / state

ಲಾಕ್​ಡೌನ್ ಕರಿನೆರಳು: ತರಕಾರಿ ಬೆಳೆಗಾರ ಕಷ್ಟ ಕೇಳುವವರಿಲ್ಲ

ಬೆಂಗಳೂರು ಸುತ್ತಮುತ್ತಲ ಮಾಗಡಿ, ಚನ್ನಪಟ್ಟಣ ನೆಲಮಂಗಲ ಹಾಗೂ ಇನ್ನಿತರ ತಾಲೂಕಿನಿಂದ ನಿತ್ಯ ಟನ್​ಗಟ್ಟಲೇ ತರಕಾರಿ ನಗರಕ್ಕೆ ಬರುತ್ತದೆ. ಮದುವೆ ಸಮಾರಂಭ ಸೇರಿದಂತೆ ಹೋಟೆಲ್ ಉದ್ಯಮದವರು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುವ ತರಕಾರಿಗೆ ಈಗ ಲಾಕ್​ಡೌನ್ ನಿರ್ಬಂಧ ಇರುವ ಕಾರಣ ಬೇಡಿಕೆ ನೆಲ ಕಚ್ಚಿದೆ.

author img

By

Published : Jun 2, 2021, 6:02 PM IST

Updated : Jun 2, 2021, 6:59 PM IST

vegetable market
vegetable market

ಬೆಂಗಳೂರು: ರಾಜಧಾನಿ ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ತರಕಾರಿ ಬೆಳೆಯುತ್ತಿದ್ದು, ಲಾಕ್​ಡೌನ್ ಹಿನ್ನೆಲೆ ನಗರದಲ್ಲಿ ತರಕಾರಿಗೆ ಬೇಡಿಕೆ ಇಲ್ಲದೆ ರೈತರು ಭಾರಿ ನಷ್ಟ ಅನುಭವಿಸುವಂತಾಗಿದೆ.

ನಗರದ ಸುತ್ತಮುತ್ತಲ ಮಾಗಡಿ, ಚನ್ನಪಟ್ಟಣ ನೆಲಮಂಗಲ ಹಾಗೂ ಇನ್ನಿತರ ತಾಲೂಕಿನಿಂದ ಪ್ರತಿನಿತ್ಯ ಟನ್​ಗಟ್ಟಲೇ ತರಕಾರಿ ನಗರಕ್ಕೆ ಬರುತ್ತದೆ. ಮದುವೆ ಸಮಾರಂಭ ಸೇರಿದಂತೆ ಹೋಟೆಲ್ ಉದ್ಯಮದವರು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುವ ತರಕಾರಿಗೆ ಈಗ ಲಾಕ್​ಡೌನ್ ನಿರ್ಬಂಧ ಇರುವ ಕಾರಣ ಬೇಡಿಕೆ ನೆಲ ಕಚ್ಚಿದೆ ಎಂದು ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಪ್ರತಾಪ್ ಚಂದ್ರ ಹೇಳಿದರು.

ಸದ್ಯಕ್ಕೆ ಕೆಲ ಬೀದಿಬದಿ ವ್ಯಾಪಾರಿಗಳು ತರಕಾರಿ-ಹಣ್ಣುಗಳನ್ನು ತಳ್ಳುವ ಗಾಡಿ ಮೂಲಕ ವ್ಯಾಪಾರ ನಡೆಸುತ್ತಿದ್ದಾರೆ. ಆದರೆ, ಇವರ ವಹಿವಾಟು ಅರ್ಧಕ್ಕೂ ಹೆಚ್ಚು ಇಳಿಕೆ ಆಗಿದೆ. ಇದಲ್ಲದೇ ದಿನನಿತ್ಯ ಖರೀದಿಗೆ ಸರ್ಕಾರ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಅವಕಾಶ ಕಲ್ಪಿಸಿದ್ದು, ಈ ಸಮಯದಲ್ಲಿ ಜನರು ಕಡಿಮೆ ಸಂಖ್ಯೆಯಲ್ಲಿ ಖರೀದಿ ಮಾಡುತ್ತಿದ್ದಾರೆ ಎಂದು ಬೀದಿ ಬದಿ ವ್ಯಾಪಾರಿ ಸಂಘದ ಅಧ್ಯಕ್ಷ ರಂಗಸ್ವಾಮಿ ಹೇಳಿದರು.

ಕೋವಿಡ್-19 ಲಾಕ್​ಡೌನ್​ನಿಂದ ಸಂತೆಗಳು ಹಾಗೂ ಮಾರುಕಟ್ಟೆ ಸಂಪೂರ್ಣ ತೆರವು ಮಾಡಿದ್ದು, ಹಣ್ಣು ತರಕಾರಿ ಬೆಳೆಯುವ ರೈತರಿಗೆ ಭಾರಿ ನಷ್ಟ ಉಂಟಾಗುತ್ತಿದೆ.

ಬೆಂಗಳೂರು: ರಾಜಧಾನಿ ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ತರಕಾರಿ ಬೆಳೆಯುತ್ತಿದ್ದು, ಲಾಕ್​ಡೌನ್ ಹಿನ್ನೆಲೆ ನಗರದಲ್ಲಿ ತರಕಾರಿಗೆ ಬೇಡಿಕೆ ಇಲ್ಲದೆ ರೈತರು ಭಾರಿ ನಷ್ಟ ಅನುಭವಿಸುವಂತಾಗಿದೆ.

ನಗರದ ಸುತ್ತಮುತ್ತಲ ಮಾಗಡಿ, ಚನ್ನಪಟ್ಟಣ ನೆಲಮಂಗಲ ಹಾಗೂ ಇನ್ನಿತರ ತಾಲೂಕಿನಿಂದ ಪ್ರತಿನಿತ್ಯ ಟನ್​ಗಟ್ಟಲೇ ತರಕಾರಿ ನಗರಕ್ಕೆ ಬರುತ್ತದೆ. ಮದುವೆ ಸಮಾರಂಭ ಸೇರಿದಂತೆ ಹೋಟೆಲ್ ಉದ್ಯಮದವರು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುವ ತರಕಾರಿಗೆ ಈಗ ಲಾಕ್​ಡೌನ್ ನಿರ್ಬಂಧ ಇರುವ ಕಾರಣ ಬೇಡಿಕೆ ನೆಲ ಕಚ್ಚಿದೆ ಎಂದು ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಪ್ರತಾಪ್ ಚಂದ್ರ ಹೇಳಿದರು.

ಸದ್ಯಕ್ಕೆ ಕೆಲ ಬೀದಿಬದಿ ವ್ಯಾಪಾರಿಗಳು ತರಕಾರಿ-ಹಣ್ಣುಗಳನ್ನು ತಳ್ಳುವ ಗಾಡಿ ಮೂಲಕ ವ್ಯಾಪಾರ ನಡೆಸುತ್ತಿದ್ದಾರೆ. ಆದರೆ, ಇವರ ವಹಿವಾಟು ಅರ್ಧಕ್ಕೂ ಹೆಚ್ಚು ಇಳಿಕೆ ಆಗಿದೆ. ಇದಲ್ಲದೇ ದಿನನಿತ್ಯ ಖರೀದಿಗೆ ಸರ್ಕಾರ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಅವಕಾಶ ಕಲ್ಪಿಸಿದ್ದು, ಈ ಸಮಯದಲ್ಲಿ ಜನರು ಕಡಿಮೆ ಸಂಖ್ಯೆಯಲ್ಲಿ ಖರೀದಿ ಮಾಡುತ್ತಿದ್ದಾರೆ ಎಂದು ಬೀದಿ ಬದಿ ವ್ಯಾಪಾರಿ ಸಂಘದ ಅಧ್ಯಕ್ಷ ರಂಗಸ್ವಾಮಿ ಹೇಳಿದರು.

ಕೋವಿಡ್-19 ಲಾಕ್​ಡೌನ್​ನಿಂದ ಸಂತೆಗಳು ಹಾಗೂ ಮಾರುಕಟ್ಟೆ ಸಂಪೂರ್ಣ ತೆರವು ಮಾಡಿದ್ದು, ಹಣ್ಣು ತರಕಾರಿ ಬೆಳೆಯುವ ರೈತರಿಗೆ ಭಾರಿ ನಷ್ಟ ಉಂಟಾಗುತ್ತಿದೆ.

Last Updated : Jun 2, 2021, 6:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.