ETV Bharat / state

ಹುಳಿಮಾವು ಕೆರೆ ಒತ್ತುವರಿ ಜಾಗ ತೆರವು: ಮನೆ,ಶೆಡ್‌ಗಳ ತೆರವಿಗೆ ಸ್ಥಳೀಯರ ವಿರೋಧ

ಹುಳಿಮಾವು ಕೆರೆಯ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ದಾಖಲೆಗಳನ್ನು ಕಲೆ ಹಾಕಿ ಒತ್ತುವರಿಯಾಗಿದ್ದ ಜಾಗವನ್ನು ತೆರವುಗೊಳಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

author img

By

Published : Jan 3, 2020, 10:25 AM IST

Updated : Jan 3, 2020, 12:25 PM IST

hulimavu lake encrochment land demolition
ಹುಳಿಮಾವು ಕೆರೆ ಒತ್ತುವರಿ ಜಾಗ ತೆರವು

ಬೆಂಗಳೂರು: ಹುಳಿಮಾವು ಕೆರೆಯ ಕಟ್ಟೆ ಒಡೆದು, ಸುತ್ತಲಿನ ಪ್ರದೇಶಕ್ಕೆ ನೀರು ನುಗ್ಗಿ ದೊಡ್ಡ ಅವಾಂತರ ಸೃಷ್ಟಿಯಾಗಿತ್ತು. ಇದಕ್ಕೆ ಕಾರಣ ಏನಿರಬಹುದು ಎಂದು ವಿಚಾರಿಸಿದಾಗ, ಖಾಸಗಿಯವರ ಲಾಭಕ್ಕಾಗಿ ಕೆರೆ ಏರಿ ಒಡೆದಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಕೆರೆಯ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ದಾಖಲೆಗಳನ್ನು ಕಲೆ ಹಾಕಿ, ಒತ್ತುವರಿಯಾಗಿದ್ದ ಜಾಗವನ್ನು ತೆರವುಗೊಳಿಸಲು ಮುಂದಾಗಿದ್ದಾರೆ.

ದಾಖಲೆಗಳ ಪ್ರಕಾರ, ಹುಳಿಮಾವು ಕೆರೆ 140 ಎಕರೆ ವಿಸ್ತೀರ್ಣವಿದೆ. ‌ಅದರಲ್ಲಿ ಹುಳಿಮಾವು ಸರ್ವೆ ನಂಬರ್​​ನಲ್ಲಿ‌ 125 ಎಕರೆ ಹಾಗೂ ಕಮ್ಮನಹಳ್ಳಿ ಸರ್ವೆ ನಂಬರ್​​ನಲ್ಲಿ 15 ಎಕರೆ ಜಾಗವಿದೆ. ಹುಳಿಮಾವು ಸರ್ವೆ ನಂಬರ್​​ನಲ್ಲಿ 18 ಎಕರೆ ಬಿಡಿಎ ಜಾಗ ಹಾಗೂ ರಸ್ತೆಯ ಜಾಗವಿದ್ದು, ಉಳಿದ ಜಾಗವನ್ನು ಒತ್ತುವರಿ ಮಾಡಲಾಗಿದೆ. ಕಮ್ಮನಹಳ್ಳಿ ಸರ್ವೆ ನಂಬರ್​ನಲ್ಲಿ 1 ಎಕರೆ 34 ಗುಂಟೆ ಜಾಗವು ಒತ್ತುವರಿಯಾಗಿದೆ. ಈ ಬಗ್ಗೆ ದಾಖಲೆಗಳನ್ನು ಕಲೆ ಹಾಕಲಾಗುತ್ತಿದೆ.

ಕೆರೆಯ ಸುತ್ತಮುತ್ತಲಿನ ಜಾಗ ಒತ್ತುವರಿಯಾಗಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಜಿಲ್ಲಾಡಳಿತ ಹಾಗೂ ಬಿಬಿಎಂಪಿ ವತಿಯಿಂದ ಹುಳಿಮಾವು ಕೆರೆಯ ಪಕ್ಕದಲ್ಲಿರುವ ತೇಜಸ್ವಿನಿ ನಗರದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು. ಯಾವುದೇ ಮಾಹಿತಿ ನೀಡದೇ ಏಕಾಏಕಿ ಮನೆ ಹಾಗೂ ಶೆಡ್​ಗಳನ್ನು ತೆರವುಗೊಳಿಸ್ತಿದ್ದಾರೆ ಎಂದು ಅಲ್ಲಿನ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಹುಳಿಮಾವು ಕೆರೆ ಒತ್ತುವರಿ ಜಾಗ ತೆರವು

ಕೂಲಿ ಮಾಡಿ ಜೀವನ ಸಾಗಿಸುವ ಜನರಿಲ್ಲಿದ್ದು, ಏಕಾಏಕಿ ತೆರವುಗೊಳಿಸಿದರೆ ನಾವು ಎಲ್ಲಿಗೆ ಹೋಗಬೇಕು ಎಂದು ಇಲ್ಲಿ ಮನೆ ಮಾಡ್ಕೊಂಡು ವಾಸಿಸುತ್ತಿರುವ ಮಂದಿ ಪ್ರಶ್ನಿಸುತ್ತಿದ್ದಾರೆ. ಹಸುಗಳಿಗೆ ಶೆಡ್ ಹಾಕಿಕೊಂಡಿದ್ದ ಜಾಗವನ್ನು ತೆರವುಗೊಳಿಸಿ, ಬಡವರ ಮನೆಗಳನ್ನು ಮಾತ್ರ ಒಡೆದು ಶ್ರೀಮಂತರ ಮನೆಗಳನ್ನು ಹಾಗೆಯೇ ಬಿಟ್ಟಿದ್ದಾರೆ ಎಂದು ಅವರು ಆರೋಪಿಸಿದರು. ಸಂಜೆಯವರೆಗೆ ಸಮಯಾವಕಾಶ ಕೊಡಿ ಎಂದು ಮನವಿ ಮಾಡಿದ್ರೂ ಅಧಿಕಾರಿಗಳು ಮನೆಗಳನ್ನು ಒಡೆದು ಹಾಕಿದ್ರು ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.

ಕಮ್ಮನಹಳ್ಳಿ ಸರ್ವೇ ನಂಬರ್​ನ ಒತ್ತುವರಿ ಜಾಗದಲ್ಲಿ ಒಂದೆರೆಡು ಮನೆಗಳನ್ನು ತೆರವುಗೊಳಿಸಲಾಯಿತು. ಬಳಿಕ ಉಳಿದ ಮನೆಗಳಿಗೆ ತೆರವುಗೊಳಿಸಲು ಮುಂದಾದಾಗ ಅಲ್ಲಿ ವಾಸವಾಗಿದ್ದವರು ಕೋರ್ಟ್‌ನಿಂದ ಸ್ಟೇಆರ್ಡರ್ ತೋರಿಸಿದ್ದಾರೆ. ಈ ಕುರಿತು ಪರಿಶೀಲನೆ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು: ಹುಳಿಮಾವು ಕೆರೆಯ ಕಟ್ಟೆ ಒಡೆದು, ಸುತ್ತಲಿನ ಪ್ರದೇಶಕ್ಕೆ ನೀರು ನುಗ್ಗಿ ದೊಡ್ಡ ಅವಾಂತರ ಸೃಷ್ಟಿಯಾಗಿತ್ತು. ಇದಕ್ಕೆ ಕಾರಣ ಏನಿರಬಹುದು ಎಂದು ವಿಚಾರಿಸಿದಾಗ, ಖಾಸಗಿಯವರ ಲಾಭಕ್ಕಾಗಿ ಕೆರೆ ಏರಿ ಒಡೆದಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಕೆರೆಯ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ದಾಖಲೆಗಳನ್ನು ಕಲೆ ಹಾಕಿ, ಒತ್ತುವರಿಯಾಗಿದ್ದ ಜಾಗವನ್ನು ತೆರವುಗೊಳಿಸಲು ಮುಂದಾಗಿದ್ದಾರೆ.

ದಾಖಲೆಗಳ ಪ್ರಕಾರ, ಹುಳಿಮಾವು ಕೆರೆ 140 ಎಕರೆ ವಿಸ್ತೀರ್ಣವಿದೆ. ‌ಅದರಲ್ಲಿ ಹುಳಿಮಾವು ಸರ್ವೆ ನಂಬರ್​​ನಲ್ಲಿ‌ 125 ಎಕರೆ ಹಾಗೂ ಕಮ್ಮನಹಳ್ಳಿ ಸರ್ವೆ ನಂಬರ್​​ನಲ್ಲಿ 15 ಎಕರೆ ಜಾಗವಿದೆ. ಹುಳಿಮಾವು ಸರ್ವೆ ನಂಬರ್​​ನಲ್ಲಿ 18 ಎಕರೆ ಬಿಡಿಎ ಜಾಗ ಹಾಗೂ ರಸ್ತೆಯ ಜಾಗವಿದ್ದು, ಉಳಿದ ಜಾಗವನ್ನು ಒತ್ತುವರಿ ಮಾಡಲಾಗಿದೆ. ಕಮ್ಮನಹಳ್ಳಿ ಸರ್ವೆ ನಂಬರ್​ನಲ್ಲಿ 1 ಎಕರೆ 34 ಗುಂಟೆ ಜಾಗವು ಒತ್ತುವರಿಯಾಗಿದೆ. ಈ ಬಗ್ಗೆ ದಾಖಲೆಗಳನ್ನು ಕಲೆ ಹಾಕಲಾಗುತ್ತಿದೆ.

ಕೆರೆಯ ಸುತ್ತಮುತ್ತಲಿನ ಜಾಗ ಒತ್ತುವರಿಯಾಗಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಜಿಲ್ಲಾಡಳಿತ ಹಾಗೂ ಬಿಬಿಎಂಪಿ ವತಿಯಿಂದ ಹುಳಿಮಾವು ಕೆರೆಯ ಪಕ್ಕದಲ್ಲಿರುವ ತೇಜಸ್ವಿನಿ ನಗರದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು. ಯಾವುದೇ ಮಾಹಿತಿ ನೀಡದೇ ಏಕಾಏಕಿ ಮನೆ ಹಾಗೂ ಶೆಡ್​ಗಳನ್ನು ತೆರವುಗೊಳಿಸ್ತಿದ್ದಾರೆ ಎಂದು ಅಲ್ಲಿನ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಹುಳಿಮಾವು ಕೆರೆ ಒತ್ತುವರಿ ಜಾಗ ತೆರವು

ಕೂಲಿ ಮಾಡಿ ಜೀವನ ಸಾಗಿಸುವ ಜನರಿಲ್ಲಿದ್ದು, ಏಕಾಏಕಿ ತೆರವುಗೊಳಿಸಿದರೆ ನಾವು ಎಲ್ಲಿಗೆ ಹೋಗಬೇಕು ಎಂದು ಇಲ್ಲಿ ಮನೆ ಮಾಡ್ಕೊಂಡು ವಾಸಿಸುತ್ತಿರುವ ಮಂದಿ ಪ್ರಶ್ನಿಸುತ್ತಿದ್ದಾರೆ. ಹಸುಗಳಿಗೆ ಶೆಡ್ ಹಾಕಿಕೊಂಡಿದ್ದ ಜಾಗವನ್ನು ತೆರವುಗೊಳಿಸಿ, ಬಡವರ ಮನೆಗಳನ್ನು ಮಾತ್ರ ಒಡೆದು ಶ್ರೀಮಂತರ ಮನೆಗಳನ್ನು ಹಾಗೆಯೇ ಬಿಟ್ಟಿದ್ದಾರೆ ಎಂದು ಅವರು ಆರೋಪಿಸಿದರು. ಸಂಜೆಯವರೆಗೆ ಸಮಯಾವಕಾಶ ಕೊಡಿ ಎಂದು ಮನವಿ ಮಾಡಿದ್ರೂ ಅಧಿಕಾರಿಗಳು ಮನೆಗಳನ್ನು ಒಡೆದು ಹಾಕಿದ್ರು ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.

ಕಮ್ಮನಹಳ್ಳಿ ಸರ್ವೇ ನಂಬರ್​ನ ಒತ್ತುವರಿ ಜಾಗದಲ್ಲಿ ಒಂದೆರೆಡು ಮನೆಗಳನ್ನು ತೆರವುಗೊಳಿಸಲಾಯಿತು. ಬಳಿಕ ಉಳಿದ ಮನೆಗಳಿಗೆ ತೆರವುಗೊಳಿಸಲು ಮುಂದಾದಾಗ ಅಲ್ಲಿ ವಾಸವಾಗಿದ್ದವರು ಕೋರ್ಟ್‌ನಿಂದ ಸ್ಟೇಆರ್ಡರ್ ತೋರಿಸಿದ್ದಾರೆ. ಈ ಕುರಿತು ಪರಿಶೀಲನೆ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Intro:HulimavuBody:Package

ಆ್ಯಂಕರ್: ಒಂದು ತಿಂಗಳ‌ ಹಿಂದೆ ಹುಳಿಮಾವು ಕೆರೆ ಕಟ್ಟೆ ಒಡೆದು ಪರಿಣಾಮ ಸುತ್ತಮುತ್ತಲಿನ ಕೆಲ ಏರಿಯಾಗಳಿಗೆ ಕೆರೆ ನೀರು ನುಗ್ಗಿ ದೊಡ್ಡ ಅವಾಂತರ ಸೃಷ್ಟಿಯಾಗಿ ಜನರ ಬದುಕನ್ನ ಮೂರಾಬಟ್ಟೆಯಾನ್ನಗಿಸಿತ್ತು,ಬಳಿಕ ಘಟನೆಗೆ ಕಾರಣ ಹುಡುಕುತ್ತಾ ಹೊರಟಾಗ ಇದು ಖಾಸಗಿಯವರ ಲಾಭಕ್ಕಾಗಿ ಕೆರೆ ಏರಿ ಒಡೆದಿದ್ದಾರೆ ಎನ್ನುವಂತಹ ಮಾತುಗಳು ಕೇಳಿಬಂದವು,ಸಂಭವಿಸಿದ್ದ ಅನಾಹುತದಿಂದ ಎಚ್ಚೆತ್ತ ಅಧಿಕಾರಿಗಳು ಕೆರೆಯ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ದಾಖಲೆಗಳನ್ನು ಕಲೆಹಾಕಿ ಇಂದು ಜೆಸಿಬಿಗಳ ಮೂಲಕ ಒತ್ತುವರಿಯಾಗಿದ್ದ ಜಾಗವನ್ನು ತೆರವು ಗೊಳಿಸಲು ಮುಂದಾಗಿದ್ದಾರೆ...ಬನ್ನಿ ಹಾಗಾದ್ರೆ ತೆರವು ಕಾರ್ಯಚರಣೆ ಹೇಗಿತ್ತು ನೋಡೋಣ ಈ ಸ್ಟೋರಿಯಲ್ಲಿ.

ವಾ ಓ: ಈಗೆ ಜೆಸಿಬಿಗಳ ಮೂಲಕ ಮನೆಗಳು ಹಾಗು ಶೇಡ್ ಗಳನ್ನು ತೆರವು ಗೊಳಿಸುತ್ತಿರುವ ಅಧಿಕಾರಿಗಳು...ಇನ್ನೊಂದೆಡೆ ಅಧಿಕಾರಿಗಳ ಬಳಿ ಕಾಲಾವಕಾಶ ಕೇಳುತ್ತಿರುವ ನಿವಾಸಿಗಳು ಈ ದೃಶ್ಯ ಕಂಡು ಬಂದಿದ್ದು ಬೆಂಗಳೂರಿನ ಹುಳಿಮಾವು ಕೆರೆಯ ಪಕ್ಕದಲ್ಲಿಯೇ ಇರುವ ತೇಜಸ್ವಿನಿ ನಗರದಲ್ಲಿ.ಹೌದು ಹುಳಿಮಾವು ಕೆರೆಯ ಕಟ್ಟೆ ಒಡೆದು ಅವಾಂತರ ಸೃಷ್ಟಿಯಾದ ಬಳಿಕ ಕೆರೆಯ ಸುತ್ತಮುತ್ತಲಿನ ಕಡೆಗಳಲ್ಲಿ ಕೆರೆ ಜಾಗ ಒತ್ತುವರಿಯಾಗಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಮಾಹಿತಿ ಕಲೆಹಾಕಿದ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಇಂದು ಜಿಲ್ಲಾಡಳಿತ ಹಾಗು ಬಿಬಿಎಂಪಿ ವತಿಯಿಂದ 6 ಜೆಸಿಬಿ ಗಳ ಹಾಗು ಪೋಲಿಸರ ಭದ್ರತೆಯೊಂದಗೆ ತೆರವು ಕಾರ್ಯಚರಣೆ ನಡೆಸಿದರು.ಈ ವೇಳೆ ಅಲ್ಲಿನ ನಿವಾಸಿಗಳು ಸಹ ಆಕ್ರೋಶ ಗೊಂಡರು ನಮಗೆ ಯಾವುದೇ ಮಾಹಿತಿ ನೀಡದೆ ನೋಟಿಸ್ ಕೊಡದೆ ಏಕಾಏಕಿ ಹೀಗೆ ಬಂದು ಮನೆಗಳನ್ನು ಹಾಗು ಶೇಡ್ ಗಳನ್ನು ತೆರವು ಗೊಳಿಸುತ್ತಿದ್ದಾರೆ..ಕುರಿ ಮೇಯಿಸಿಕೊಂಡು 2,000 ರೂಪಾಯಿ ಬರುತ್ತದೆ ಅದರಲ್ಲಿ ಕೂಲಿನಾಲಿ ಮಾಡಿಕೊಂಡು ಜೀವನ ನಡೆಸುವಂತವರು ಮನೆಯಲ್ಲಿ ಅಂಗವಿಕಲ ಮಗನನ್ನು ಕರೆದುಕೊಂಡು ಬೇರೆಡೆ ಹೋಗಿ ಅಂದ್ರೆ ಎಲ್ಲಿಗೆ ಅಂತ ಹೋಗುವುದು.ಇನ್ನು ಹಸುಗಳಿಗೆ ಶೇಡ್ ಹಾಕಿಕೊಂಡಿದ್ದ ಜಾಗವನ್ನು ತೆರವು ಗೊಳಿಸಿದ್ದಾರೆ ನಮ್ಮಂತಹ ಬಡವರ ಮನೆಗಳನ್ನು ಮಾತ್ರ ಒಡೆದು ಶ್ರೀಮಂತರ ಮನೆಗಳನ್ನು ಹಾಗೆ ಬಿಟ್ಟಿದ್ದಾರೆ ಸಂಜೆ ವರೆಗೆ ಸಮಯಕೊಡಿ ಎಂದ್ರು ಅಧಿಕಾರಿಗಳು ನಮ್ಮಂತವರ ಮನೆಗಳನ್ನು ಒಡೆದು ಶ್ರೀಮಂತರ ಮನೆಯನ್ನು ಬಿಟ್ಟು ಹೋಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು....

ಬೈಟ್: ಕೃಷ್ಣಮ್ಮ.ಮನೆ ಕಳೆದುಕೊಂಡವರು.

ಬೈಟ್: ನಾಗರಾಜ್. ಮನೆ ಕಳೆದುಕೊಂಡವರು.

ವಾ ಓ:ಇನ್ನು ಹುಳಿಮಾವು ಕೆರೆ ದಾಖಲೆಗಳ ಪ್ರಕಾರ 140 ಎಕರೆ ವಿಸ್ತೀರ್ಣವಿದ್ದು ‌ಅದರಲ್ಲಿ ಹುಳಿಮಾವು ಸರ್ವೆ ನಂಬರ್ ನಲ್ಲಿ‌125 ಎಕರೆ ಹಾಗು ಕಮ್ಮನಹಳ್ಳಿ ಸರ್ವೆ ನಂಬರ್ ನಲ್ಲಿ 15 ಎಕರೆ ಜಾಗವಿದೆ.ಅದರಲ್ಲಿ ಹುಳಿಮಾವು ಸರ್ವೆ ನಂಬರ್ ನಲ್ಲಿ 18 ಎಕರೆ ಬಿಡಿಎ ಜಾಗ ಹಾಗು ರಸ್ತೆ ಜಾಗವಿದ್ದು ಉಳಿದಂತೆ ಜಾಗವನ್ನು ಒತ್ತುವರಿ ಮಾಡಲಾಗಿದೆ ಅದರ ಬಗ್ಗೆ ದಾಖಲೆಗಳನ್ನು ಕಲೆ ಹಾಕಲಾಗುತ್ತಿದೆ.ಮೊದಲಿಗೆ ಇಂದು ಕಮ್ಮನಹಳ್ಳಿ ಸರ್ವೆ ನಂಬರ್ ನ 15 ಎಕರೆ ಜಾಗದಲ್ಲಿ ಒತ್ತುವರಿಯಾಗಿದ್ದ 1 ಎಕರೆ 34 ಗುಂಟೆ ಜಾಗವನ್ನು ತೆರವು ಗೊಳಿಸಲು ಮುಂದಾದಾಗ ಒಂದೆರೆಡು ಮನೆಗಳನ್ನು ತೆರವು ಗೊಳಿಸಿದ ಬಳಿಕ ಉಳಿದ ಮನೆಗಳಿಗೆ 2016 ರಲ್ಲಿ ತೆರವು ಗೊಳಿಸಲು ನೋಟಿಸ್ ಕಳುಹಿಸಿರುವ ಬಗ್ಗೆ ಕೋರ್ಟ್ ನಲ್ಲಿ ಸ್ಟೇ ತಂದಿದ್ದೇವೆಂದು ಹೇಳುತ್ತಿದ್ದಾರೆ.ಇನ್ನು ಮನೆಗಳಲ್ಲಿ ಜನರು ವಾಸ ಇರುವ ಕಾರಣ ಅವರಿಗೆ ಇಂತಿಷ್ಟು ಸಮಯವನ್ನು ನೀಡಿ ಮುಂದಿನ ದಿನಗಳಲ್ಲಿ ಕೆರೆಯ ಜಾಗವನ್ನು ತೆರವುಗೊಳಿಸಲಾಗುತ್ತದೆ.ಸ್ಟೇ ತಂದಿರುವ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದರು.

ಬೈಟ್: ಮೋಹನ್ ಕೃಷ್ಣ , ಕೆರೆ ಅಭಿವೃದ್ಧಿ ಪ್ರಾಧಿಕಾರ.

ಬೈಟ್:ಶಿವಪ್ಪ ಲಮಾಣಿ,ತಹಶೀಲ್ದಾರ್.

ವಾ ಓ: ಒಟ್ಟಿನಲ್ಲಿ ಕೆರೆ ಕಟ್ಟೆ ಒಡೆದು ಬಳಿಕ ಸುತ್ತಮುತ್ತಲಿನ ಕೆರೆಯ ಜಾಗವನ್ನು ಒತ್ತುವರಿಯಾಗಿರುವ ಕಡೆ ತೆರವು ಗೊಳಿಸಲು ಮುಂದಾದ ಅಧಿಕಾರಿಗಳು ಒಂದೆರೆಡು ಬಡವರ ಮನೆಗಳನ್ನು ಮಾತ್ರ ತೆರವು ಗೊಳಿಸಿ ಉಳಿದ ಶ್ರೀಮಂತರ ಹಾಗು ಬಿಲ್ಡರ್ ಗಳ ಮನೆಗಳನ್ನು ತೆರವು ಗೊಳಿಸದೆ ಇರುವುದು ಬಡವರಿಗೆ ಒಂದು ನ್ಯಾಯ ಶ್ರೀಮಂತ ಬಲಾಡ್ಯರಿಗೆ ಒಂದು ನ್ಯಾಯ ಎಂಬಂತಗಿದೆ...ಇನ್ನಾದ್ರು ಬಡವರ ಮನೆ ಹಾಗು ಶೇಡ್ ಗಳ ತೆರವು ಮಾಡುವ ಮುನ್ನ ಅಪಾರ್ಟ್ಮೆಂಟ್ ಹಾಗು ಭೂಗಳ್ಳರು ಕಬಳಿಸಿರುವ ಕೆರೆಯ ಜಾಗವನ್ನು ವಶಕ್ಕೆ ಪಡೆದು ಕೆರೆಯ ಜಾಗವನ್ನು ಉಳಿಸಲು ಮುಂದಾಗುತ್ತಾರ ಎಂದು ಕಾದು ನೋಡ ಬೇಕಿದೆ

ಆಕಾಶ್.ಎ ಈಟಿವಿ ಭಾರತ ಬೆಂಗಳೂರುConclusion:Visuals attached

Bytes from mojo
Last Updated : Jan 3, 2020, 12:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.