ETV Bharat / state

ಸಾರಿಗೆ ನೌಕರರು ಮಲತಾಯಿ ಮಕ್ಕಳಾ? ಸರ್ಕಾರದ ವಿರುದ್ಧ ಗುಡುಗಿದ ಕೋಡಿಹಳ್ಳಿ ಚಂದ್ರಶೇಖರ್ - ಕೋಡಿಹಳ್ಳಿ ಚಂದ್ರಶೇಖರ್ ಲೇಟೆಸ್ಟ್ ನ್ಯೂಸ್

ರಾಜ್ಯಾದ್ಯಂತ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಈ ವಿಚಾರವಾಗಿ ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಪ್ರತಿಕ್ರಿಯೆ ನೀಡಿದ್ದಾರೆ. 72 ನಿಗಮ ಮಂಡಳಿಗಳಲ್ಲಿ ನೌಕರರಿಗೆ ಸರಿಯಾದ ವೇತನ ಆಗುತ್ತಿದೆ. ಸಾರಿಗೆ ಇಲಾಖೆ ನೌಕರರಿಗೆ ಸರ್ಕಾರ ಯಾಕೆ ಈ ಧೋರಣೆ ಅನುಸರಿಸುತ್ತಿದೆ. ಅವರೇನು ಮಲತಾಯಿ ಮಕ್ಕಳಾ ಎಂದು ಪ್ರಶ್ನಿಸಿದ್ದಾರೆ.

ಕೋಡಿಹಳ್ಳಿ ಚಂದ್ರಶೇಖರ್
Kodihalli Chandrashekar
author img

By

Published : Apr 8, 2021, 12:31 PM IST

Updated : Apr 8, 2021, 2:27 PM IST

ಬೆಂಗಳೂರು: ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರದ ಈ ಬಗ್ಗೆ ತೆಗೆದುಕೊಳ್ಳುವ ನಿರ್ಧಾರ, ಪ್ರತಿಕ್ರಿಯೆಗಳನ್ನು ನೋಡಿಕೊಂಡು ನಾಳೆಯ ಮುಷ್ಕರದ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿಕೆ

ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 72 ನಿಗಮ ಮಂಡಳಿಗಳಲ್ಲಿ ನೌಕರರಿಗೆ ಸರಿಯಾದ ವೇತನ ಆಗುತ್ತಿದೆ. ಕೆಲವು ಕಡೆ ಇನ್ನೂ ಹೆಚ್ಚಿನ ವೇತನ ನೀಡಲಾಗುತ್ತಿದೆ. ಆದರೆ ಯಾಕೆ ಸಾರಿಗೆ ನೌಕರರಿಗೆ ಸರ್ಕಾರ ಈ ಧೋರಣೆ ಅನುಸರಿಸುತ್ತಿದೆ. ಸಾರಿಗೆ ನೌಕರರು ಮಲತಾಯಿ ಮಕ್ಕಳೇ ಎಂದು ಪ್ರಶ್ನಿಸಿದರು.

ಹೋರಾಟಕ್ಕೆ ಇಳಿಯುವ ಮುನ್ನವೇ ಸರ್ಕಾರಕ್ಕೆ ಸಾಕಷ್ಟು ಸಲ ಮನವಿ ನೀಡಲಾಗಿತ್ತು. ಇದೀಗ ಮುಷ್ಕರ ನಡೆಸಬಾರದಿತ್ತು ಅಂತಾರೆ. ಜಲಮಂಡಳಿ ನೌಕಕರಿಗೆ ಯುಗಾದಿ ಹಬ್ಬಕ್ಕಾಗಿ ವಿಶೇಷ ಬೋನಸ್ ಕೊಡುತ್ತಿದೆ. ಸಾರಿಗೆಯು ಒಂದು ನಿಗಮವಾಗಿದ್ದು, ಕೆಲಸ ಮಾಡಿರುವ ಸಿಬ್ಬಂದಿಗೆ ಮಾರ್ಚ್ ತಿಂಗಳ ಸಂಬಳ ತಡೆ ಹಿಡಿಯಲಾಗುತ್ತಿದೆ. ಇದು ಸರಿನಾ ಎಂದು ಸರ್ಕಾರಕ್ಕೆ ಕೇಳಿದರು.

ಓದಿ: 'ರೈತರ ದಾರಿ ತಪ್ಪಿಸಿದ ಮುಖಂಡ ಈಗ KSRTC ನೌಕರರ ದಾರಿ ತಪ್ಪಿಸುತ್ತಿದ್ದಾರೆ'

ಇದು ಯೋಗ್ಯವಾದಂತಹ ನೀತಿ ಅಲ್ಲ. ತಾರತಮ್ಯ ಮಾಡುವುದು ಸರಿಯಲ್ಲ. ಸರ್ಕಾರ ತಮ್ಮ ತಪ್ಪನ್ನು ಪರಿಶೀಲಿಸಿ ಸರಿ ಪಡಿಸಬೇಕು. ಇಂತಹ ಬೇಜವಾಬ್ದಾರಿ ಹೇಳಿಕೆ ಸರಿಯಲ್ಲ ಎಂದು ಕೋಡಿಹಳ್ಳಿ ಹೇಳಿದ್ರು.

ಮುಂದಿನ ಹೋರಾಟದ ಬಗ್ಗೆ ಒಕ್ಕೂಟದ ಸದಸ್ಯರೊಂದಿಗೆ ಚರ್ಚಿಸಲಾಗುವುದು. ಸರ್ಕಾರದ ಧೋರಣೆ ಬದಲಾಗಬೇಕು ಎಂದು ಮನವಿ ಮಾಡಿದರು.‌

ಬೆಂಗಳೂರು: ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರದ ಈ ಬಗ್ಗೆ ತೆಗೆದುಕೊಳ್ಳುವ ನಿರ್ಧಾರ, ಪ್ರತಿಕ್ರಿಯೆಗಳನ್ನು ನೋಡಿಕೊಂಡು ನಾಳೆಯ ಮುಷ್ಕರದ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿಕೆ

ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 72 ನಿಗಮ ಮಂಡಳಿಗಳಲ್ಲಿ ನೌಕರರಿಗೆ ಸರಿಯಾದ ವೇತನ ಆಗುತ್ತಿದೆ. ಕೆಲವು ಕಡೆ ಇನ್ನೂ ಹೆಚ್ಚಿನ ವೇತನ ನೀಡಲಾಗುತ್ತಿದೆ. ಆದರೆ ಯಾಕೆ ಸಾರಿಗೆ ನೌಕರರಿಗೆ ಸರ್ಕಾರ ಈ ಧೋರಣೆ ಅನುಸರಿಸುತ್ತಿದೆ. ಸಾರಿಗೆ ನೌಕರರು ಮಲತಾಯಿ ಮಕ್ಕಳೇ ಎಂದು ಪ್ರಶ್ನಿಸಿದರು.

ಹೋರಾಟಕ್ಕೆ ಇಳಿಯುವ ಮುನ್ನವೇ ಸರ್ಕಾರಕ್ಕೆ ಸಾಕಷ್ಟು ಸಲ ಮನವಿ ನೀಡಲಾಗಿತ್ತು. ಇದೀಗ ಮುಷ್ಕರ ನಡೆಸಬಾರದಿತ್ತು ಅಂತಾರೆ. ಜಲಮಂಡಳಿ ನೌಕಕರಿಗೆ ಯುಗಾದಿ ಹಬ್ಬಕ್ಕಾಗಿ ವಿಶೇಷ ಬೋನಸ್ ಕೊಡುತ್ತಿದೆ. ಸಾರಿಗೆಯು ಒಂದು ನಿಗಮವಾಗಿದ್ದು, ಕೆಲಸ ಮಾಡಿರುವ ಸಿಬ್ಬಂದಿಗೆ ಮಾರ್ಚ್ ತಿಂಗಳ ಸಂಬಳ ತಡೆ ಹಿಡಿಯಲಾಗುತ್ತಿದೆ. ಇದು ಸರಿನಾ ಎಂದು ಸರ್ಕಾರಕ್ಕೆ ಕೇಳಿದರು.

ಓದಿ: 'ರೈತರ ದಾರಿ ತಪ್ಪಿಸಿದ ಮುಖಂಡ ಈಗ KSRTC ನೌಕರರ ದಾರಿ ತಪ್ಪಿಸುತ್ತಿದ್ದಾರೆ'

ಇದು ಯೋಗ್ಯವಾದಂತಹ ನೀತಿ ಅಲ್ಲ. ತಾರತಮ್ಯ ಮಾಡುವುದು ಸರಿಯಲ್ಲ. ಸರ್ಕಾರ ತಮ್ಮ ತಪ್ಪನ್ನು ಪರಿಶೀಲಿಸಿ ಸರಿ ಪಡಿಸಬೇಕು. ಇಂತಹ ಬೇಜವಾಬ್ದಾರಿ ಹೇಳಿಕೆ ಸರಿಯಲ್ಲ ಎಂದು ಕೋಡಿಹಳ್ಳಿ ಹೇಳಿದ್ರು.

ಮುಂದಿನ ಹೋರಾಟದ ಬಗ್ಗೆ ಒಕ್ಕೂಟದ ಸದಸ್ಯರೊಂದಿಗೆ ಚರ್ಚಿಸಲಾಗುವುದು. ಸರ್ಕಾರದ ಧೋರಣೆ ಬದಲಾಗಬೇಕು ಎಂದು ಮನವಿ ಮಾಡಿದರು.‌

Last Updated : Apr 8, 2021, 2:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.