ETV Bharat / state

ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಆಗಬಾರದಿತ್ತು: ವೈ.ಎಸ್.ವಿ.ದತ್ತಾ - YSV Datta news

ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡಿ ಸರ್ಕಾರ ಉತ್ತೇಜನ ಕೊಟ್ಟಿದೆ. ಇದಕ್ಕೆ ಕನ್ನಡಿಗರ ವಿರೋಧವಿದೆ‌ ಎಂದು ಜೆಡಿಎಸ್ ಮುಖಂಡ ವೈ.ಎಸ್.ವಿ.ದತ್ತಾ ಹೇಳಿದರು.

JDS leader YSV Datta
ವೈ.ಎಸ್.ವಿ.ದತ್ತ
author img

By

Published : Nov 17, 2020, 3:24 PM IST

ಬೆಂಗಳೂರು: ಸೂಕ್ಷ್ಮ ಪರಿಸ್ಥಿತಿಯಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಆಗಬಾರದಿತ್ತು ಎಂದು ಮಾಜಿ ಶಾಸಕ, ಜೆಡಿಎಸ್ ಮುಖಂಡ ವೈ.ಎಸ್.ವಿ.ದತ್ತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಾಜಿ ಶಾಸಕ, ಜೆಡಿಎಸ್ ಮುಖಂಡ ವೈ.ಎಸ್.ವಿ.ದತ್ತಾ

ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇವತ್ತಿಗೂ ಬೆಳಗಾವಿ ನಮ್ಮ ಭಾಗ ಎಂದು ಮಹಾರಾಷ್ಟ್ರ ಒತ್ತಾಯ ಮಾಡುತ್ತಿದೆ. ಚಳಿಗಾಲದ ಅಧಿವೇಶನದಲ್ಲಿ ಎಂಇಎಸ್ ಮಹಾಮೇಳ ಮಾಡುತ್ತದೆ. ಇಂತಹ ಸೂಕ್ಷ್ಮ ವಿಚಾರ ಗೊತ್ತಿದ್ದರೂ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ‌ ಎಂದು ಹೇಳಿದರು.

ಗಡಿ ಭಾಗ ಕಾಪಾಡುವುದು ಯಾವುದೇ ಸರ್ಕಾರದ ಕರ್ತವ್ಯ. ಅಂತಹ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡಿ ಉತ್ತೇಜನ ಕೊಟ್ಟಿದೆ. ಇದು ರಾಜಕೀಯ ವೇದಿಕೆಯಾಗುವ ಆತಂಕವಿದೆ. ಇದಕ್ಕಾಗಿ ಕನ್ನಡಿಗರ ವಿರೋಧವಿದೆ‌ ಎಂದರು.

ಬೆಂಗಳೂರು: ಸೂಕ್ಷ್ಮ ಪರಿಸ್ಥಿತಿಯಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಆಗಬಾರದಿತ್ತು ಎಂದು ಮಾಜಿ ಶಾಸಕ, ಜೆಡಿಎಸ್ ಮುಖಂಡ ವೈ.ಎಸ್.ವಿ.ದತ್ತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಾಜಿ ಶಾಸಕ, ಜೆಡಿಎಸ್ ಮುಖಂಡ ವೈ.ಎಸ್.ವಿ.ದತ್ತಾ

ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇವತ್ತಿಗೂ ಬೆಳಗಾವಿ ನಮ್ಮ ಭಾಗ ಎಂದು ಮಹಾರಾಷ್ಟ್ರ ಒತ್ತಾಯ ಮಾಡುತ್ತಿದೆ. ಚಳಿಗಾಲದ ಅಧಿವೇಶನದಲ್ಲಿ ಎಂಇಎಸ್ ಮಹಾಮೇಳ ಮಾಡುತ್ತದೆ. ಇಂತಹ ಸೂಕ್ಷ್ಮ ವಿಚಾರ ಗೊತ್ತಿದ್ದರೂ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ‌ ಎಂದು ಹೇಳಿದರು.

ಗಡಿ ಭಾಗ ಕಾಪಾಡುವುದು ಯಾವುದೇ ಸರ್ಕಾರದ ಕರ್ತವ್ಯ. ಅಂತಹ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡಿ ಉತ್ತೇಜನ ಕೊಟ್ಟಿದೆ. ಇದು ರಾಜಕೀಯ ವೇದಿಕೆಯಾಗುವ ಆತಂಕವಿದೆ. ಇದಕ್ಕಾಗಿ ಕನ್ನಡಿಗರ ವಿರೋಧವಿದೆ‌ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.