ETV Bharat / state

ಹಾಪ್‌ಕಾಮ್ಸ್ ಮಾದರಿಯಲ್ಲಿ ಜನತಾ ಬಜಾರ್ ಅಭಿವೃದ್ಧಿ.. ಸಚಿವ ಬಂಡೆಪ್ಪ ಕಾಶೆಂಪೂರ್ - undefined

ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ದೊರಕಿಸಿ ಕೊಡುವ ನಿಟ್ಟಿನಲ್ಲಿ ಹಾಪ್ ಕಾಮ್ಸ್ ಮಾದರಿಯಲ್ಲಿ ಜನತಾ ಬಜಾರ್ ಅಭಿವೃದ್ಧಿ ಪಡಿಸುವುದಾಗಿ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ಹೇಳಿದ್ದಾರೆ. ಈಗಾಗಲೇ ಬಜೆಟ್​ನಲ್ಲಿ ಜನತಾ ಬಜಾರ್ ಅಭಿವೃದ್ಧಿಗೆ ಅನುದಾನ ಮೀಸಲಿಡಲಾಗಿದ್ದು, ಅದನ್ನು ಬಳಸಿ ಅಭಿವೃದ್ಧಿ ಮಾಡುತ್ತೇವೆ ಎಂದಿದ್ದಾರೆ.

ಸಚಿವ ಬಂಡೆಪ್ಪ ಕಾಶೆಂಪೂರ್ ಸುದ್ದಿಗೋಷ್ಠಿ
author img

By

Published : Jun 7, 2019, 12:33 PM IST

ಬೆಂಗಳೂರು: ಹಾಪ್ ಕಾಮ್ಸ್ ಮಾದರಿಯಲ್ಲಿ ಜನತಾ ಬಜಾರ್ ಅಭಿವೃದ್ಧಿ ಪಡಿಸಿ ರೈತರು ಬೆಳೆದ ಬೆಳೆಗೆ ಉತ್ತಮ ಬೆಂಬಲ ಬೆಲೆ ಹಾಗೂ ಬೆಲೆ ಸಿಗುವ ಕಾರ್ಯ ಮಾಡಲಿದ್ದೇವೆ ಎಂದು ಸಚಿವ ಬಂಡೆಪ್ಪ ಕಾಶೆಂಪೂರ್ ಹೇಳಿದ್ದಾರೆ.

ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಬಜೆಟ್​ನಲ್ಲಿ ಜನತಾ ಬಜಾರ್ ಅಭಿವೃದ್ಧಿಗೆ ಅನುದಾನ ಮೀಸಲಿಡಲಾಗಿದೆ. ಅದನ್ನು ಬಳಸಿ ಅಭಿವೃದ್ಧಿ ಮಾಡುತ್ತೇವೆ. ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಈ ಕಾರ್ಯ ಫಲಪ್ರದವಾಗಲಿದ್ದು, ರೈತರಿಗೆ ನ್ಯಾಯಯುತ ಬೆಲೆ ಸಿಗಲಿದೆ. ಅಲ್ಲದೆ ಸರ್ಕಾರಕ್ಕೂ ಉತ್ತಮ‌ ಆದಾಯ ಸಿಗಲಿದೆ. ಈ ಮೂಲಕ ರಾಜ್ಯದ ಪ್ರಗತಿಗೆ ಕೊಡುಗೆ ಲಭಿಸಲಿದೆ ಎಂದು ವಿವರಿಸಿದರು.

ಸಚಿವ ಬಂಡೆಪ್ಪ ಕಾಶೆಂಪೂರ್ ಸುದ್ದಿಗೋಷ್ಠಿ

ಆವರ್ತ ನಿಧಿ ಸಂಗ್ರಹ...

ಈ ವರ್ಷ ಒಟ್ಟು 3 ಸಾವಿರ ಕೋಟಿ ಆವರ್ತ ನಿಧಿ ಸಂಗ್ರಹಿಸುವ ಗುರಿ ಹೊಂದಿದ್ದೇವೆ. ಇಂದಿನ ಉಪಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದ್ದೇವೆ. ಇನ್ನೆರಡು ತಿಂಗಳಲ್ಲಿ ಕೇಂದ್ರ ಸರ್ಕಾರದಿಂದ 400-500 ಕೋಟಿ ರೂ. ಅನುದಾನ ಸಿಗುವ ನಿರೀಕ್ಷೆ ಇದೆ. ಸಿಎಂಗೆ ಹೆಚ್ಚಿನ ಅನುದಾನ ಕೇಳಿದ್ದೇವೆ. ಒಟ್ಟಾರೆ ನಮ್ಮ ಗುರಿ ಸಾಧನೆಗೆ ಅಗತ್ಯವಿರುವ ಕ್ರಮ ಕೈಗೊಳ್ಳುತ್ತೇವೆ. ಇಂದಿನ ಉಪ ಸಮಿತಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಿದ್ದು, 3 ಸಾವಿರ ಕೋಟಿ ಸಂಗ್ರಹ ಗುರಿ ಸಾಧಿಸುತ್ತೇವೆ ಎಂಬ ವಿಶ್ವಾಸ ಇದೆ ಎಂದರು.

ಖರೀದಿಯಲ್ಲಿ ಸಾಧನೆ...

ಭತ್ತ ಖರೀದಿ ಚೆನ್ನಾಗಿ ಆಗಿದೆ. ಬಾಕಿ ಉಳಿಸಿಲ್ಲ. 87912 ಮೆಟ್ರಿಕ್ ಟನ್ ಭತ್ತ, 1129 ಮೆಟ್ರಿಕ್ ಟನ್ ಬಿಳಿ ಜೋಳ ಖರೀದಿ ಆಗಿದೆ. ಕಳೆದ ವರ್ಷ ಎಮ್ಎಸ್​ಪಿ ಆಪರೇಷನ್ ಮಾಡಿದ್ದೇವೆ. ಅದಕ್ಕಿಂತ ಮುಂಚಿತವಾಗಿ ಖರೀದಿಸಿ ಎಲ್ಲಾ ಪಾವತಿ ಬಹುತೇಕ ಮುಗಿಸಿದ್ದೇವೆ. ಎಲ್ಲಾ ಒಟ್ಟು ಸೇರಿಸಿ 1402 ಕೋಟಿ ಮೊತ್ತ ನೀಡಿದ್ದೇವೆ. 27 ಕೋಟಿ ರೈತರು ಫಲಾನುಭವಿಗಳು. ಭತ್ತದ ಬಾಕಿ 27 ಕೋಟಿ ರೂ. ಇತ್ತು. ಎಂದು ಉಪ ಸಮಿತಿ ಸಭೆಯಲ್ಲಿ ಚರ್ಚಿಸಿದ್ದೇವೆ ಎಂದರು.

900 ಕೋಟಿ ರೂ. ಕೇಂದ್ರ ಸರ್ಕಾರದಿಂದ ಬರಬೇಕು. ತುಂಬಾ ಒತ್ತಡ ಹೇರಿದ್ದರಿಂದ 400-500 ಕೋಟಿ ರೂ. ಬಂದಿದೆ. ಉಳಿದ 900 ಕೋಟಿ ರೂ. ಬರಬೇಕಿದೆ. ಎಲ್ಲಿಯೂ ರೈತರಿಗೆ ಸಮಸ್ಯೆ ಆಗುವ ರೀತಿ ಪ್ರತಿಭಟನೆ ಆಗದ ರೀತಿ ಸಮರ್ಪಕವಾಗಿ ಹಂಚಿಕೆ ಮಾಡಿದ್ದೇವೆ. ರಾಜ್ಯ ಸರಕಾರದ ಯೋಜನೆಗಳಲ್ಲಿ ನಾವು ಮಧ್ಯಪ್ರವೇಶಿಸಿ ಅನುಕೂಲ ಮಾಡಿಕೊಟ್ಟಿದ್ದೇವೆ. ಪ್ರಸಕ್ತ ಬಜೆಟ್​ನಲ್ಲಿ ಹೆಚ್ಚು ಅನುದಾನ ಮೀಸಲಿಟ್ಟಿದ್ದಾರೆ ಎಂದರು.

ಬೆಂಗಳೂರು: ಹಾಪ್ ಕಾಮ್ಸ್ ಮಾದರಿಯಲ್ಲಿ ಜನತಾ ಬಜಾರ್ ಅಭಿವೃದ್ಧಿ ಪಡಿಸಿ ರೈತರು ಬೆಳೆದ ಬೆಳೆಗೆ ಉತ್ತಮ ಬೆಂಬಲ ಬೆಲೆ ಹಾಗೂ ಬೆಲೆ ಸಿಗುವ ಕಾರ್ಯ ಮಾಡಲಿದ್ದೇವೆ ಎಂದು ಸಚಿವ ಬಂಡೆಪ್ಪ ಕಾಶೆಂಪೂರ್ ಹೇಳಿದ್ದಾರೆ.

ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಬಜೆಟ್​ನಲ್ಲಿ ಜನತಾ ಬಜಾರ್ ಅಭಿವೃದ್ಧಿಗೆ ಅನುದಾನ ಮೀಸಲಿಡಲಾಗಿದೆ. ಅದನ್ನು ಬಳಸಿ ಅಭಿವೃದ್ಧಿ ಮಾಡುತ್ತೇವೆ. ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಈ ಕಾರ್ಯ ಫಲಪ್ರದವಾಗಲಿದ್ದು, ರೈತರಿಗೆ ನ್ಯಾಯಯುತ ಬೆಲೆ ಸಿಗಲಿದೆ. ಅಲ್ಲದೆ ಸರ್ಕಾರಕ್ಕೂ ಉತ್ತಮ‌ ಆದಾಯ ಸಿಗಲಿದೆ. ಈ ಮೂಲಕ ರಾಜ್ಯದ ಪ್ರಗತಿಗೆ ಕೊಡುಗೆ ಲಭಿಸಲಿದೆ ಎಂದು ವಿವರಿಸಿದರು.

ಸಚಿವ ಬಂಡೆಪ್ಪ ಕಾಶೆಂಪೂರ್ ಸುದ್ದಿಗೋಷ್ಠಿ

ಆವರ್ತ ನಿಧಿ ಸಂಗ್ರಹ...

ಈ ವರ್ಷ ಒಟ್ಟು 3 ಸಾವಿರ ಕೋಟಿ ಆವರ್ತ ನಿಧಿ ಸಂಗ್ರಹಿಸುವ ಗುರಿ ಹೊಂದಿದ್ದೇವೆ. ಇಂದಿನ ಉಪಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದ್ದೇವೆ. ಇನ್ನೆರಡು ತಿಂಗಳಲ್ಲಿ ಕೇಂದ್ರ ಸರ್ಕಾರದಿಂದ 400-500 ಕೋಟಿ ರೂ. ಅನುದಾನ ಸಿಗುವ ನಿರೀಕ್ಷೆ ಇದೆ. ಸಿಎಂಗೆ ಹೆಚ್ಚಿನ ಅನುದಾನ ಕೇಳಿದ್ದೇವೆ. ಒಟ್ಟಾರೆ ನಮ್ಮ ಗುರಿ ಸಾಧನೆಗೆ ಅಗತ್ಯವಿರುವ ಕ್ರಮ ಕೈಗೊಳ್ಳುತ್ತೇವೆ. ಇಂದಿನ ಉಪ ಸಮಿತಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಿದ್ದು, 3 ಸಾವಿರ ಕೋಟಿ ಸಂಗ್ರಹ ಗುರಿ ಸಾಧಿಸುತ್ತೇವೆ ಎಂಬ ವಿಶ್ವಾಸ ಇದೆ ಎಂದರು.

ಖರೀದಿಯಲ್ಲಿ ಸಾಧನೆ...

ಭತ್ತ ಖರೀದಿ ಚೆನ್ನಾಗಿ ಆಗಿದೆ. ಬಾಕಿ ಉಳಿಸಿಲ್ಲ. 87912 ಮೆಟ್ರಿಕ್ ಟನ್ ಭತ್ತ, 1129 ಮೆಟ್ರಿಕ್ ಟನ್ ಬಿಳಿ ಜೋಳ ಖರೀದಿ ಆಗಿದೆ. ಕಳೆದ ವರ್ಷ ಎಮ್ಎಸ್​ಪಿ ಆಪರೇಷನ್ ಮಾಡಿದ್ದೇವೆ. ಅದಕ್ಕಿಂತ ಮುಂಚಿತವಾಗಿ ಖರೀದಿಸಿ ಎಲ್ಲಾ ಪಾವತಿ ಬಹುತೇಕ ಮುಗಿಸಿದ್ದೇವೆ. ಎಲ್ಲಾ ಒಟ್ಟು ಸೇರಿಸಿ 1402 ಕೋಟಿ ಮೊತ್ತ ನೀಡಿದ್ದೇವೆ. 27 ಕೋಟಿ ರೈತರು ಫಲಾನುಭವಿಗಳು. ಭತ್ತದ ಬಾಕಿ 27 ಕೋಟಿ ರೂ. ಇತ್ತು. ಎಂದು ಉಪ ಸಮಿತಿ ಸಭೆಯಲ್ಲಿ ಚರ್ಚಿಸಿದ್ದೇವೆ ಎಂದರು.

900 ಕೋಟಿ ರೂ. ಕೇಂದ್ರ ಸರ್ಕಾರದಿಂದ ಬರಬೇಕು. ತುಂಬಾ ಒತ್ತಡ ಹೇರಿದ್ದರಿಂದ 400-500 ಕೋಟಿ ರೂ. ಬಂದಿದೆ. ಉಳಿದ 900 ಕೋಟಿ ರೂ. ಬರಬೇಕಿದೆ. ಎಲ್ಲಿಯೂ ರೈತರಿಗೆ ಸಮಸ್ಯೆ ಆಗುವ ರೀತಿ ಪ್ರತಿಭಟನೆ ಆಗದ ರೀತಿ ಸಮರ್ಪಕವಾಗಿ ಹಂಚಿಕೆ ಮಾಡಿದ್ದೇವೆ. ರಾಜ್ಯ ಸರಕಾರದ ಯೋಜನೆಗಳಲ್ಲಿ ನಾವು ಮಧ್ಯಪ್ರವೇಶಿಸಿ ಅನುಕೂಲ ಮಾಡಿಕೊಟ್ಟಿದ್ದೇವೆ. ಪ್ರಸಕ್ತ ಬಜೆಟ್​ನಲ್ಲಿ ಹೆಚ್ಚು ಅನುದಾನ ಮೀಸಲಿಟ್ಟಿದ್ದಾರೆ ಎಂದರು.

Intro:newsBody:ಹಾಪ್ ಕಾಮ್ಸ್ ಮಾದರಿಯಲ್ಲಿ ಜನತಾ ಬಜಾರ್ ಅಭಿವೃದ್ಧಿ: ಬಂಡೆಪ್ಪ ಕಾಶೆಂಪೂರ್

ಬೆಂಗಳೂರು: ಹಾಪ್ ಕಾಮ್ಸ್ ಮಾದರಿಯಲ್ಲಿ ಜನತಾ ಬಜಾರ್ ಅಭಿವೃದ್ಧಿ ಪಡಿಸಿ, ರೈತರು ಬೆಳೆದ ಬೆಳೆಗೆ ಉತ್ತಮ ಬೆಂಬಲ ಹಾಗೂ ಬೆಲೆ ಸಿಗುವ ಕಾರ್ಯ ಮಾಡಲಿದ್ದೇವೆ ಎಂದು ಸಚಿವ ಬಂಡೆಪ್ಪ‌ ಕಾಶೆಂಪೂರ್ ಅಭಿಪ್ರಾಯ ಪಟ್ಟಿದ್ದಾರೆ.
ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಈಗಾಗಲೇ ಬಜೆಟ್ ನಲ್ಲಿ ಜನತಾ ಬಜಾರ್ ಅಭಿವೃದ್ಧಿ ಗೆ ಅನುದಾನ ಮೀಸಲಿಡಲಾಗಿದೆ. ಅದನ್ನು ಬಳಸಿ ಅಭಿವೃದ್ಧಿ ಮಾಡುತ್ತೇವೆ. ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಈ ಕಾರ್ಯ ಫಲಪ್ರದವಾಗಲಿದ್ದು, ರೈತರ ಬೆಲೆಗೆ ಬೆಂಬಲ ಸಿಗಲಿದೆ. ಸರ್ಕಾರಕ್ಕೂ ಉತ್ತಮ‌ಆದಾಯ ಸಿಗಲಿದೆ. ರಾಜ್ಯದ ಪ್ರಗತಿಗೆ ಕೊಡುಗೆ ಲಭಿಸಲಿದೆ ಎಂದು ವಿವರಿಸಿದರು.
ಆವರ್ತ ನಿಧಿ ಸಂಗ್ರಹ
ಈ ವರ್ಷ ಒಟ್ಟು 3 ಸಾವಿರ ಕೋಟಿ ಆವರ್ತ ನಿಧಿ ಸಂಗ್ರಹಿಸುವ ಗುರಿ ಹೊಂದಿದ್ದೇವೆ. ಇಂದಿನ ಉಪ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದ್ದೇವೆ. ಇನ್ನೆರಡು ತಿಂಗಳಲ್ಲಿ ಕೇಂದ್ರ ಸರ್ಕಾರದಿಂದ 400-500 ಕೋಟಿ ರೂ. ಅನುದಾನ ಸಿಗುವ ನಿರೀಕ್ಷೆ ಇದೆ. ಸಿಎಂಗೆ ಹೆಚ್ಚಿನ ಅನುದಾನ ಕೇಳಿದ್ದೇವೆ. ಒಟ್ಟಾರೆ ನಮ್ಮ ಗುರಿ ಸಾಧನೆಗೆ ಅಗತ್ಯವಿರುವ ಕ್ರಮ ಕೈಗೊಳ್ಳುತ್ತೇವೆ. ಇಂದಿನ ಉಪ ಸಮಿತಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಿದ್ದು, 3 ಸಾವಿರ ಕೋಟಿ ಸಂಗ್ರಹ ಗುರಿ ಸಾಧಿಸುತ್ತೇವೆ ಎಂಬ ವಿಶ್ವಾಸ ಇದೆ ಎಂದರು.
ಕರೀದಿಯಲ್ಲಿ ಸಾಧನೆ
ಭತ್ತ ಕರೀದಿ ಚೆನ್ನಾಗಿ ಆಗಿದೆ. ಬಾಕಿ ಉಳಿಸಿಲ್ಲ. ಬತ್ತ 87912 ಮೆಟ್ರಿಕ್ ಟನ್, 94391 ಮೆಟ್ರಿಕ್ ಟನ್, ಬಿಳಿ ಜೋಳ 1129 ಮೆಟ್ರಿಕ್ ಟನ್ ಕರೀದಿ ಆಗಿದೆ. ಕಳೆದ ವರ್ಷ ಎಮ್ಎಸ್ಪಿ ಆಪರೇಷನ್ ಮಾಡಿದ್ದೆವೋ ಅದಕ್ಕಿಂತ ಮುಂಚಿತವಾಗಿ ಕರೀದಿಸಿ ಎಲ್ಲಾ ಪಾವತಿ ಬಹುತೇಕ ಮುಗಿಸಿದ್ದೇವೆ. ಒಟ್ಟು ಎಲ್ಲಾ ಸೇರಿ1402 ಕೋಟಿ ಮೊತ್ತ ನೀಡಿದ್ದೇವೆ. 27 ಕೋಟಿ ರೈತರು ಫಲಾನುಭವಿಗಳು. ಬತ್ತದ ಬಾಕಿ 27 ಕೋಟಿ ರೂ ಇತ್ತು ಇಂದು ಉಪ ಸಮಿತಿ ಸಭೆಯಲ್ಲಿ ಚರ್ಚಿಸಿದ್ದೇವೆ ಎಂದರು.
900 ಕೋಟಿ ರೂ ಕೇಂದ್ರ ಸರ್ಕಾರದಿಂದ ಬರಬೇಕು. ತುಂಬಾ ಒತ್ತಡ ಹೇರಿದ್ದರಿಂದ 400-500 ಕೋಟಿ ರೂ ಬಂದಿದೆ. ಉಳಿದ 900 ಕೋಟಿ ಬರಬೇಕಿದೆ.
ಎಲ್ಲಿಯೂ ರೈತರಿಗೆ ಸಮಸ್ಯೆ ಆಗುವ ರೀತಿ, ಪ್ರತಿಭಟನೆ ಆಗದ ರೀತಿ ಸಮರ್ಪಕವಾಗಿ ಹಂಚಿಕೆ ಮಾಡಿದ್ದೇವೆ. ರಾಜ್ಯ ಸರಗಕಾರದ ಯೋಜನೆಗಳಲ್ಲಿ ನಾವು ಮಧ್ಯಪ್ರವೇಶಿಸಿ ಅನುಕೂಲ ಮಾಡಿಕೊಟ್ಟಿದ್ದೇವೆ. ಪ್ರಸಕ್ತ ಬಜೆಟ್ ನಲ್ಲಿ ಹೆಚ್ಚು ಅನುದಾನ ಮೀಸಲಿಟ್ಟಿದ್ದಾರೆ. ಮುಂಗಾರು ಬೆಳೆ ಆರಂಭದ ಎಲ್ಲಾ ಬೆಳೆಗೆ ಉಚಿತ ಸಾಗಾಣಿಕೆ, ಸಂಗ್ರಹಣೆಗೆ ಗೋದಾಮು, ರೈತರ ಸಾಲದ ಬಡ್ಡಿಗೆ ರಿಯಾಯಿತಿ ಪಡೆಯಬಹುದು. ಇದಕ್ಕಾಗಿ ಸಿಎಂ 200 ಕೋಟಿ ರೂ. ಮೀಸಲಿಟ್ಟಿದ್ದಾರೆ. ಬೆಂಬಲ ಬೆಲೆ ಘೋಷಿಸುವುದಕ್ಕೆ ಕೇಂದ್ರ ಸರ್ಕಾರ ಇಲ್ಲವೇ ಇತರೆ ಇಲಾಖೆಯ ಅನುದಾನ ಬರುವುದಕ್ಕೆ ಕಾಯಬಾರದು.
ವಾಹನಕ್ಕೆ ಕಾಲ್ ಸೆಂಟರ್ ಮಾಡುತ್ತೇವೆ. ಸ್ಥಳೀಯ ವಾಗಿ ಸಿಗುವ ವಾಹನವನ್ನು ರೈತರ ಬೆಳೆ ಸಾಗಾಣಿಕೆಗೆ ಬಳಸಿಕೊಳ್ಳುತ್ತೇವೆ. ರಾಜ್ಯದೆಲ್ಲೆಡೆ ಏಕಕಾಲಕ್ಕೆ ಈ ಸೇವೆ ಆರಂಭವಾಗಲಿದೆ. 37 ಲಕ್ಷ ಟನ್ ಆಹಾರ ಧಾನ್ಯವನ್ನು ಸಂಗ್ರಹಿಸಿಡಬಲ್ಲ ಸಾಮರ್ಥ್ಯದ ಗೋದಾಮು ಇದೆ. ಇದರ ಜತೆ ಸ್ಥಳೀಯ ವಾಗಿ ಗೋದಾಮು ಕೊರತೆ ಇದ್ದಲ್ಲಿ ಅಲ್ಲಿ ಪಿಪಿಪಿ ಮಾದರಿಯಲ್ಲಿ ಗೋದಾಮು ಪಡೆಯುತ್ತೇವೆ. ಎಪಿಎಂಸಿ ಸೇರಿದಂತೆ ವಿವಿಧ ಗೋದಾಮುಗಳನ್ನು ಧಾನ್ಯ ಸಂಗ್ರಹ ಕ್ಕೆ ಒದಗಿಸುತ್ತೇವೆ ಎಂದರು.
1400 ಕೋಟಿ ನಮಗೆ ಬರಬೇಕಾದ ಹಣ ಇದೆ. ಆದರೂ ನಾವು ಈ ವರ್ಷ ಬಜೆಟ್ ನಲ್ಲಿ 210 ಕೋಟಿ ರಿವಾಲ್ವಿಂಗ್ ಅನುದಾನ ನೀಡಿದ್ದಾರೆ. ಸಿಎಂ ಕಾಳಜಿಯಿಂದ ಹಲವು ಕಾರ್ಯಕ್ರಮ ಮೂಲಕ ರೈತರಿಗೆ ಅನುಕೂಲ ಆಗುತ್ತಿದೆ. ಕೇವಲ ಆಹಾರ ಧಾನ್ಯ ಸಂಗ್ರಹಕ್ಕೆ ಕ್ರಮ ಕೈಗೊಳ್ಳುತ್ತಿದ್ದೇವೆ. ಬೇಗ ಕೆಡುವ ತರಕಾರಿ ಇತ್ಯಾದಿ ರೈತರ ಬೆಳೆಗೆ ಶೀತಲ ಘಟಕದ ವಿಚಾರ ಮಾಡಿಲ್ಲ. ಸರ್ಕಾರ ಜನರಿಗೆ ಒಳ್ಳೆಯದಾಗಲಿ ಎಂದು ಕ್ರಮ ಕೈಗೊಳ್ಳುತ್ತಿದ್ದೇವೆ, ಭದ್ರತೆ ಕೂಡ ನಮ್ಮದೇ ಆಗಲಿದೆ. ರೈತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ವಿವರಿಸಿದರು.
ಸಚಿವರಾದ ಶಿವಶಂಕರ ರೆಡ್ಡಿ ಮಾತನಾಡಿ, ಶೇ. 8 ಪ್ರತಿಶತ ಬಿತ್ತನೆ ಆಗಿದೆ. ಮಳೆಯಾಶ್ರಿತ, ನೀರಾವರಿ ಆಶ್ರಿತ ಭೂಮಿಯಲ್ಲಿ ಮಳೆಗಾಲದ ಬಿತ್ತನೆ ಆರಂಭವಾಗಿದೆ. ಮಾನ್ಸೂನ್ ಮಳೆ ಆರಂಭವಾಗಿದೆ. 5.67 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆದಿದೆ. ಇದರಲ್ಲಿ ಮಳೆಯಾಶ್ರಿತ 2.74 ನೀರಾವರಿ 3.8 ಲಕ್ಷ ಹೆಕ್ಟೇರ್ ಎಂದರು. Conclusion:news

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.