ETV Bharat / state

ರಾಜ್ಯದಲ್ಲಿ ಹಾವುಗಳ ಕಾಟ: ಮಾದಕ ‘ನಶೆ’ಗೆ ಬಳಕೆಯಾಗುತ್ತೆ ಸರ್ಪಗಳ 'ವಿಷ'..!

author img

By

Published : Oct 27, 2020, 3:59 PM IST

ಹಾವಿನ ವಿಷವನ್ನು ಮದ್ಯದಲ್ಲಿ ಅಥವಾ ಇಂಜೆಕ್ಷನ್‍ನಲ್ಲಿ ಸೇರಿಸಿ, ಇನ್ನಷ್ಟು ನಶೆ ಏರಿಸುವ ವಸ್ತುವನ್ನಾಗಿ ಬಳಸುತ್ತಿರುವ ಜಾಲಗಳು ದೇಶದೆಲ್ಲೆಡೆ ಪತ್ತೆಯಾಗುತ್ತಿವೆ.

Is the pandemic going to cause shortage of anti-snake venom?
ರಾಜ್ಯದ ಹಲವೆಡೆ ವಿಷಪೂರಿತ ಹಾವುಗಳ ಕಾಟ

ಬೆಂಗಳೂರು: ನಮ್ಮ ದೇಶದಲ್ಲಿ ಹಾವುಗಳಿಗೆ ಉನ್ನತವಾದ ಸ್ಥಾನವಿದ್ದು, ದೇವರ ಸ್ಥಾನದಲ್ಲಿ ನಾವು ನಾಗರಹಾವುಗಳನ್ನು ನೋಡುತ್ತೇವೆ. ಹಾವಿಗೆ ಹಾಲೆರೆದು ಭಕ್ತಿಯಿಂದ ನಮಿಸುವ ಸಂಪ್ರದಾಯ ನಮ್ಮದಾಗಿದ್ದು, ಅದೇ ಕಾರಣಕ್ಕೆ ನಮ್ಮಲ್ಲಿ ನಾಗರಪಂಚಮಿ ಹಬ್ಬಕ್ಕೆ ಬಹಳ ಮಹತ್ವವಿದೆ. ಹಾವು ಎಂದರೆ ಎಲ್ಲರಿಗೂ ಭಯ ಇರುತ್ತೆ. ದೂರದಲ್ಲಿ ಹಾವು ಹೆಡೆ ಎತ್ತಿದರೂ, ನಮ್ಮ ಜಂಘಾಬಲವೇ ಕುಸಿದಂತಾಗುತ್ತದೆ.

ಕೆಲವರಿಗೆ ಹಾವಿನ ಕುರಿತು ಪೂಜನೀಯ ಭಾವನೆಯಿದ್ದರೆ, ಇನ್ನೂ ಕೆಲವರ ಮನಸಿನಲ್ಲಿ ಅದು ವಿಷಪೂರಿತ ಜೀವಿಯೆಂಬ ಭಾವನೆಯಿದೆ. ರಾಜ್ಯದಲ್ಲಿ ಅನೇಕ ಕಡೆಗಳಲ್ಲಿ ವಿಷಪೂರಿತ ಹಾವುಗಳ ಕಾಟವಿದ್ದು, ಜಮೀನು ಹಾಗೂ ಜನಬಿಡ ಪ್ರದೇಶದಲ್ಲಿ ಹಾವು ಕಡಿತದಿಂದ ಅನೇಕ ಜನರು ಸಾವನ್ನಪ್ಪುತ್ತಿರುವುದು ಇದಕ್ಕೆ ಸಾಕ್ಷಿ. ಆದರೆ ಇತ್ತೀಚಿನ ದಿನಗಳಲ್ಲಿ ಹಾವು ಕಂಡರೆ ಜನರು, ಉರಗ ಪ್ರೇಮಿಗಳನ್ನು ಕರೆಸುತ್ತಿದ್ದಾರೆ. ಹಾವುಗಳನ್ನ ಸೆರೆ ಹಿಡಿದು ರಕ್ಷಣೆ ಮಾಡಿ ಕಾಡಿಗೆ ಬಿಡಲಾಗುತ್ತಿದೆ.

ಮಾದಕ ನಶೆಗೆ ಬಳಕೆಯಾಗುತ್ತಿದೆ ಹಾವುಗಳ ವಿಷ

ರಾಯಚೂರು ಜಿಲ್ಲೆಯ ಬಲ ಭಾಗದಲ್ಲಿ ಕೃಷ್ಣ ಹಾಗೂ ಎಡಭಾಗದಲ್ಲಿ ತುಂಗಭದ್ರಾ ನದಿಗಳು ಹರಿಯುತ್ತವೆ. ಆದ್ದರಿಂದ ಈ ನೀರಾವರಿ ಪ್ರದೇಶದಲ್ಲಿ ಅಧಿಕವಾಗಿ ಹಾವುಗಳು ಕಂಡು ಬರುತ್ತವೆ. ಹೊಲ-ಗದ್ದೆಗಳಿಗೆ ತೆರಳಿದ ಕೆಲ ರೈತರು ವಿಷಪೂರಿತ ಹಾವುಗಳ ಕಡಿತದಿಂದ ಮೃತಪಟ್ಟಿದ್ದು, ಜನವರಿಯಿಂದ ಇಲ್ಲಿಯವರೆಗೆ 20ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

ರಾಯಚೂರು ಜಿಲ್ಲೆಯಲ್ಲಿ 20 ಕ್ಕೂ ಹೆಚ್ಚು ಉರಗ ಪ್ರೇಮಿಗಳು ಇದ್ದಾರೆ. ಯಾರು ಕೂಡ ಹಾವು ಹಿಡಿದು ವಿಷ ತೆಗೆಯುವುದಿಲ್ಲ. ವಿಷ ತೆಗೆಯಬೇಕಾದರೆ ಸರ್ಕಾರದ ಪರವಾನಿಗೆ ಪಡೆಯಬೇಕಾಗುತ್ತದೆ. ಆದ್ದರಿಂದ ಇತ್ತೀಚಿನ ದಿನಗಳಲ್ಲಿ ಅಂತಹ ಯಾವುದೇ ಪ್ರಕರಣಗಳು ದಾಖಲಾಗಿಲ್ಲ.

ಇನ್ನು, ದೇಶದಲ್ಲಿ ವಿಷಪೂರಿತ ಜಂತುಗಳಾದ ನಾಗರಹಾವು, ಕೊಳಕು ಮಂಡಲ ಮತ್ತು ಕಾಳಿಂಗ ಸರ್ಪಗಳ ಕಾರ್ಕೋಟಕ ವಿಷವನ್ನು ತೆಗೆದು ಮಾರಾಟ ಮಾಡಲಾಗುತ್ತದೆ. ಹಾವಿನ ವಿಷವನ್ನು ಮದ್ಯದಲ್ಲಿ ಅಥವಾ ಇಂಜೆಕ್ಷನ್‍ನಲ್ಲಿ ಸೇರಿಸಿ ಇನ್ನಷ್ಟು ನಶೆ ಏರಿಸುವ ವಸ್ತುವನ್ನಾಗಿ ಬಳಸುತ್ತಿರುವ ವ್ಯವಸ್ಥಿತ ಕಳ್ಳಸಾಗಣೆ ಜಾಲಗಳು ಇರುವ ಆತಂಕಕಾರಿ ಸಂಗತಿ ಬೆಳಕಿಗೆ ಬರುತ್ತಿವೆ. ಆದರೆ ಕೊರೊನಾ ನಂತರದಲ್ಲಿ ಹೆಚ್ಚಾಗಿ ಎಲ್ಲಿಯೂ ಕೂಡ ಆ ರೀತಿಯ ವರದಿಗಳು ದಾಖಲಾಗಿಲ್ಲ.

ಮುಂಗಾರು ಹಂಗಾಮಿನಲ್ಲಿ ಗ್ರಾಮೀಣ ಸಮುದಾಯ, ಹಾವು ಕಡಿತಕ್ಕೆ ಬಲಿಯಾಗುವ ಸಂಭವ ಬಹಳ ಹೆಚ್ಚಿದೆ. ಹಾಗಾಗಿ ಗ್ರಾಮೀಣ ಭಾರತದಲ್ಲಿ ಹಾವುಗಳಿಂದ-ಸುರಕ್ಷೆ ಪಡೆಯುವ ವಿಧಾನಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕಿದೆ.

ಬೆಂಗಳೂರು: ನಮ್ಮ ದೇಶದಲ್ಲಿ ಹಾವುಗಳಿಗೆ ಉನ್ನತವಾದ ಸ್ಥಾನವಿದ್ದು, ದೇವರ ಸ್ಥಾನದಲ್ಲಿ ನಾವು ನಾಗರಹಾವುಗಳನ್ನು ನೋಡುತ್ತೇವೆ. ಹಾವಿಗೆ ಹಾಲೆರೆದು ಭಕ್ತಿಯಿಂದ ನಮಿಸುವ ಸಂಪ್ರದಾಯ ನಮ್ಮದಾಗಿದ್ದು, ಅದೇ ಕಾರಣಕ್ಕೆ ನಮ್ಮಲ್ಲಿ ನಾಗರಪಂಚಮಿ ಹಬ್ಬಕ್ಕೆ ಬಹಳ ಮಹತ್ವವಿದೆ. ಹಾವು ಎಂದರೆ ಎಲ್ಲರಿಗೂ ಭಯ ಇರುತ್ತೆ. ದೂರದಲ್ಲಿ ಹಾವು ಹೆಡೆ ಎತ್ತಿದರೂ, ನಮ್ಮ ಜಂಘಾಬಲವೇ ಕುಸಿದಂತಾಗುತ್ತದೆ.

ಕೆಲವರಿಗೆ ಹಾವಿನ ಕುರಿತು ಪೂಜನೀಯ ಭಾವನೆಯಿದ್ದರೆ, ಇನ್ನೂ ಕೆಲವರ ಮನಸಿನಲ್ಲಿ ಅದು ವಿಷಪೂರಿತ ಜೀವಿಯೆಂಬ ಭಾವನೆಯಿದೆ. ರಾಜ್ಯದಲ್ಲಿ ಅನೇಕ ಕಡೆಗಳಲ್ಲಿ ವಿಷಪೂರಿತ ಹಾವುಗಳ ಕಾಟವಿದ್ದು, ಜಮೀನು ಹಾಗೂ ಜನಬಿಡ ಪ್ರದೇಶದಲ್ಲಿ ಹಾವು ಕಡಿತದಿಂದ ಅನೇಕ ಜನರು ಸಾವನ್ನಪ್ಪುತ್ತಿರುವುದು ಇದಕ್ಕೆ ಸಾಕ್ಷಿ. ಆದರೆ ಇತ್ತೀಚಿನ ದಿನಗಳಲ್ಲಿ ಹಾವು ಕಂಡರೆ ಜನರು, ಉರಗ ಪ್ರೇಮಿಗಳನ್ನು ಕರೆಸುತ್ತಿದ್ದಾರೆ. ಹಾವುಗಳನ್ನ ಸೆರೆ ಹಿಡಿದು ರಕ್ಷಣೆ ಮಾಡಿ ಕಾಡಿಗೆ ಬಿಡಲಾಗುತ್ತಿದೆ.

ಮಾದಕ ನಶೆಗೆ ಬಳಕೆಯಾಗುತ್ತಿದೆ ಹಾವುಗಳ ವಿಷ

ರಾಯಚೂರು ಜಿಲ್ಲೆಯ ಬಲ ಭಾಗದಲ್ಲಿ ಕೃಷ್ಣ ಹಾಗೂ ಎಡಭಾಗದಲ್ಲಿ ತುಂಗಭದ್ರಾ ನದಿಗಳು ಹರಿಯುತ್ತವೆ. ಆದ್ದರಿಂದ ಈ ನೀರಾವರಿ ಪ್ರದೇಶದಲ್ಲಿ ಅಧಿಕವಾಗಿ ಹಾವುಗಳು ಕಂಡು ಬರುತ್ತವೆ. ಹೊಲ-ಗದ್ದೆಗಳಿಗೆ ತೆರಳಿದ ಕೆಲ ರೈತರು ವಿಷಪೂರಿತ ಹಾವುಗಳ ಕಡಿತದಿಂದ ಮೃತಪಟ್ಟಿದ್ದು, ಜನವರಿಯಿಂದ ಇಲ್ಲಿಯವರೆಗೆ 20ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

ರಾಯಚೂರು ಜಿಲ್ಲೆಯಲ್ಲಿ 20 ಕ್ಕೂ ಹೆಚ್ಚು ಉರಗ ಪ್ರೇಮಿಗಳು ಇದ್ದಾರೆ. ಯಾರು ಕೂಡ ಹಾವು ಹಿಡಿದು ವಿಷ ತೆಗೆಯುವುದಿಲ್ಲ. ವಿಷ ತೆಗೆಯಬೇಕಾದರೆ ಸರ್ಕಾರದ ಪರವಾನಿಗೆ ಪಡೆಯಬೇಕಾಗುತ್ತದೆ. ಆದ್ದರಿಂದ ಇತ್ತೀಚಿನ ದಿನಗಳಲ್ಲಿ ಅಂತಹ ಯಾವುದೇ ಪ್ರಕರಣಗಳು ದಾಖಲಾಗಿಲ್ಲ.

ಇನ್ನು, ದೇಶದಲ್ಲಿ ವಿಷಪೂರಿತ ಜಂತುಗಳಾದ ನಾಗರಹಾವು, ಕೊಳಕು ಮಂಡಲ ಮತ್ತು ಕಾಳಿಂಗ ಸರ್ಪಗಳ ಕಾರ್ಕೋಟಕ ವಿಷವನ್ನು ತೆಗೆದು ಮಾರಾಟ ಮಾಡಲಾಗುತ್ತದೆ. ಹಾವಿನ ವಿಷವನ್ನು ಮದ್ಯದಲ್ಲಿ ಅಥವಾ ಇಂಜೆಕ್ಷನ್‍ನಲ್ಲಿ ಸೇರಿಸಿ ಇನ್ನಷ್ಟು ನಶೆ ಏರಿಸುವ ವಸ್ತುವನ್ನಾಗಿ ಬಳಸುತ್ತಿರುವ ವ್ಯವಸ್ಥಿತ ಕಳ್ಳಸಾಗಣೆ ಜಾಲಗಳು ಇರುವ ಆತಂಕಕಾರಿ ಸಂಗತಿ ಬೆಳಕಿಗೆ ಬರುತ್ತಿವೆ. ಆದರೆ ಕೊರೊನಾ ನಂತರದಲ್ಲಿ ಹೆಚ್ಚಾಗಿ ಎಲ್ಲಿಯೂ ಕೂಡ ಆ ರೀತಿಯ ವರದಿಗಳು ದಾಖಲಾಗಿಲ್ಲ.

ಮುಂಗಾರು ಹಂಗಾಮಿನಲ್ಲಿ ಗ್ರಾಮೀಣ ಸಮುದಾಯ, ಹಾವು ಕಡಿತಕ್ಕೆ ಬಲಿಯಾಗುವ ಸಂಭವ ಬಹಳ ಹೆಚ್ಚಿದೆ. ಹಾಗಾಗಿ ಗ್ರಾಮೀಣ ಭಾರತದಲ್ಲಿ ಹಾವುಗಳಿಂದ-ಸುರಕ್ಷೆ ಪಡೆಯುವ ವಿಧಾನಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.