ETV Bharat / state

ಕ್ವಾರಂಟೈನ್​ ಸ್ಟ್ಯಾಂಪ್​ ಇರುವವರು ಹೊರಗಡೆ ಕಂಡರೆ 100 ಕ್ಕೆ ಕರೆ ಮಾಡಿ: ನಗರ ಆಯುಕ್ತ

ಸಾರ್ವಜನಿಕರ ಹಿತದೃಷ್ಟಿಯಿಂದ ನಗರದಲ್ಲಿ 5000 ಮಂದಿಗೆ ಮನೆಯಲ್ಲೇ ಪ್ರತ್ಯೇಕವಾಗಿ ಇರುವಂತೆ ಕೈ ಮೇಲೆ ಸ್ಟಾಂಪ್​ ಹಾಕಲಾಗಿದೆ. ಆದರೆ, ಅಂತಹ ವ್ಯಕ್ತಿಗಳು ಮುಲಾಜಿಲ್ಲದೆ ಬಿಎಂಟಿಸಿ, ಕೆಎಸ್ಆರ್​ಟಿಸಿ, ಹೋಟೆಲ್​ಗಳಲ್ಲಿ ಓಡಾಡ್ತಿದ್ದಾರೆಂದು ತಮಗೆ ಕರೆಗಳು ಬರುತ್ತಿವೆ ಎಂದು ಸ್ವತಃ ನಗರ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.

author img

By

Published : Mar 23, 2020, 1:16 PM IST

If Corona suspects are seen, call 100: City Commissioner Bhaskar Rao
ಕೊರೊನಾ ಶಂಕಿತರು ಕಂಡರೆ 100 ಕ್ಕೆ ಕರೆ ಮಾಡಿ: ನಗರ ಆಯುಕ್ತ ಭಾಸ್ಕರ್ ರಾವ್

ಬೆಂಗಳೂರು: ಹೋಂ ಕ್ವಾರಂಟೈನ್​ ಅನುಸರಿಸುವಂತೆ ಕೈ ಮೇಲೆ ಸ್ಟಾಂಪ್​ ಹಾಕಿದ್ದರೂ ಕೆಲ ತಿಳಿಗೇಡಿಗಳು ನಿಯಮ ಪಾಲಿಸದೆ ಎಲ್ಲೆಂದರಲ್ಲಿ ಸುತ್ತಾಡಿ ಬೇಜವಾಬ್ದಾರಿ ಮೆರೆಯುತ್ತಿರುವುದು ಬೆಳಕಿಗೆ ಬಂದಿದೆ.

If Corona suspects are seen, call 100: City Commissioner Bhaskar Rao
ಬೆಂಗಳೂರು ನಗರ ಆಯುಕ್ತ ಭಾಸ್ಕರ್ ರಾವ್ ಟ್ವೀಟ್​

ಸಾರ್ವಜನಿಕರ ಹಿತದೃಷ್ಟಿಯಿಂದ ನಗರದಲ್ಲಿ 5000 ಮಂದಿಗೆ ಮನೆಯಲ್ಲೇ ಪ್ರತ್ಯೇಕವಾಗಿ ಇರುವಂತೆ ಕೈ ಮೇಲೆ ಸ್ಟಾಂಪ್​ ಹಾಕಲಾಗಿದೆ. ಆದರೆ, ‌ಸ್ಟ್ಯಾಂಪ್ ಹಾಕಿಸಿಕೊಂಡಿರುವ ವ್ಯಕ್ತಿಗಳು ಮುಲಾಜಿಲ್ಲದೆ ಬಿಎಂಟಿಸಿ, ಕೆಎಸ್ಆರ್​ಟಿಸಿ, ಹೋಟೆಲ್​ಗಳಲ್ಲಿ ಓಡಾಡುತ್ತಿದ್ದಾರೆಂದು ತಮಗೆ ಕರೆಗಳು ಬರುತ್ತವೆ ಎಂದು ಸ್ವತಃ ನಗರ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.

ಇನ್ನೂ ಇದನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಆಯುಕ್ತ ಸದ್ಯ ಟ್ವೀಟ್ ಮಾಡಿದ್ದು, "ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಅವಶ್ಯಕತೆ ಇರುವ ಕೆಲವರ ಕೈಗೆ ಸ್ಟಾಂಪ್​ ಹಾಕಲಾಗಿದೆ. ಆದರೆ, ಅದನ್ನು ಪಾಲಿಸದೆ ಅಂತಹ ವ್ಯಕ್ತಿಗಳು ಎಲ್ಲೆಡೆ ಓಡಾಡುತ್ತಿದ್ದಾರೆ. ಇನ್ನು ಮುಂದೆ ಈ ರೀತಿ ಸ್ಟಾಂಪ್​ ಉಳ್ಳವರು ಯಾರಾದರೂ ಹೊರಗಡೆ ಓಡಾಡುವುದು ಕಂಡು ಬಂದರೆ 100ಗೆ ಕರೆ ಮಾಡಿ ಮಾಹಿತಿ ತಿಳಿಸಿ. ಅಂತವರನ್ನು ಬಂಧಿಸಿ ಸರ್ಕಾರದ ಕ್ವಾರಂಟೈನ್​ ಕಳುಹಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು,'' ಎಂದು ಎಚ್ಚರಿಕೆ ನಿಡಿದ್ದಾರೆ.

ಬೆಂಗಳೂರು: ಹೋಂ ಕ್ವಾರಂಟೈನ್​ ಅನುಸರಿಸುವಂತೆ ಕೈ ಮೇಲೆ ಸ್ಟಾಂಪ್​ ಹಾಕಿದ್ದರೂ ಕೆಲ ತಿಳಿಗೇಡಿಗಳು ನಿಯಮ ಪಾಲಿಸದೆ ಎಲ್ಲೆಂದರಲ್ಲಿ ಸುತ್ತಾಡಿ ಬೇಜವಾಬ್ದಾರಿ ಮೆರೆಯುತ್ತಿರುವುದು ಬೆಳಕಿಗೆ ಬಂದಿದೆ.

If Corona suspects are seen, call 100: City Commissioner Bhaskar Rao
ಬೆಂಗಳೂರು ನಗರ ಆಯುಕ್ತ ಭಾಸ್ಕರ್ ರಾವ್ ಟ್ವೀಟ್​

ಸಾರ್ವಜನಿಕರ ಹಿತದೃಷ್ಟಿಯಿಂದ ನಗರದಲ್ಲಿ 5000 ಮಂದಿಗೆ ಮನೆಯಲ್ಲೇ ಪ್ರತ್ಯೇಕವಾಗಿ ಇರುವಂತೆ ಕೈ ಮೇಲೆ ಸ್ಟಾಂಪ್​ ಹಾಕಲಾಗಿದೆ. ಆದರೆ, ‌ಸ್ಟ್ಯಾಂಪ್ ಹಾಕಿಸಿಕೊಂಡಿರುವ ವ್ಯಕ್ತಿಗಳು ಮುಲಾಜಿಲ್ಲದೆ ಬಿಎಂಟಿಸಿ, ಕೆಎಸ್ಆರ್​ಟಿಸಿ, ಹೋಟೆಲ್​ಗಳಲ್ಲಿ ಓಡಾಡುತ್ತಿದ್ದಾರೆಂದು ತಮಗೆ ಕರೆಗಳು ಬರುತ್ತವೆ ಎಂದು ಸ್ವತಃ ನಗರ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.

ಇನ್ನೂ ಇದನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಆಯುಕ್ತ ಸದ್ಯ ಟ್ವೀಟ್ ಮಾಡಿದ್ದು, "ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಅವಶ್ಯಕತೆ ಇರುವ ಕೆಲವರ ಕೈಗೆ ಸ್ಟಾಂಪ್​ ಹಾಕಲಾಗಿದೆ. ಆದರೆ, ಅದನ್ನು ಪಾಲಿಸದೆ ಅಂತಹ ವ್ಯಕ್ತಿಗಳು ಎಲ್ಲೆಡೆ ಓಡಾಡುತ್ತಿದ್ದಾರೆ. ಇನ್ನು ಮುಂದೆ ಈ ರೀತಿ ಸ್ಟಾಂಪ್​ ಉಳ್ಳವರು ಯಾರಾದರೂ ಹೊರಗಡೆ ಓಡಾಡುವುದು ಕಂಡು ಬಂದರೆ 100ಗೆ ಕರೆ ಮಾಡಿ ಮಾಹಿತಿ ತಿಳಿಸಿ. ಅಂತವರನ್ನು ಬಂಧಿಸಿ ಸರ್ಕಾರದ ಕ್ವಾರಂಟೈನ್​ ಕಳುಹಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು,'' ಎಂದು ಎಚ್ಚರಿಕೆ ನಿಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.