ETV Bharat / state

ಶಿವಮೊಗ್ಗ ಲೋಕಸಭೆ ಕ್ಷೇತ್ರಕ್ಕೆ ನಾನು ಅಭ್ಯರ್ಥಿ ಆಗಲು ನಿರ್ಧರಿಸಿದ್ದೇನೆ: ಬೇಳೂರು ಗೋಪಾಲಕೃಷ್ಣ

author img

By ETV Bharat Karnataka Team

Published : Oct 28, 2023, 6:10 PM IST

Updated : Oct 28, 2023, 6:43 PM IST

''ಶಿವಮೊಗ್ಗ ಲೋಕಸಭೆ ಕ್ಷೇತ್ರಕ್ಕೆ ನಾನು ಅಭ್ಯರ್ಥಿ ಆಗಲು ನಿರ್ಧರಿಸಿದ್ದೇನೆ. ಇದರ ಬಗ್ಗೆ ನಮ್ಮ ನಾಯಕರ ಜೊತೆ ಇನ್ನಷ್ಟೇ ಚರ್ಚಿಸಬೇಕಿದೆ'' ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

ಶಾಸಕ ಬೇಳೂರು ಗೋಪಾಲಕೃಷ್ಣ
ಶಿವಮೊಗ್ಗ ಲೋಕಸಭೆ ಕ್ಷೇತ್ರಕ್ಕೆ ನಾನು ಅಭ್ಯರ್ಥಿ ಆಗಲು ನಿರ್ಧರಿಸಿದ್ದೇನೆ: ಬೇಳೂರು ಗೋಪಾಲಕೃಷ್ಣ
ಶಾಸಕ ಬೇಳೂರು ಗೋಪಾಲಕೃಷ್ಣ ಪ್ರತಿಕ್ರಿಯೆ

ಬೆಂಗಳೂರು: ''ಶಿವಮೊಗ್ಗ ಲೋಕಸಭೆ ಕ್ಷೇತ್ರಕ್ಕೆ ನಾನು ಅಭ್ಯರ್ಥಿ ಆಗಲು ನಿರ್ಧರಿಸಿದ್ದೇನೆ'' ಎಂದು ಸಾಗರದ ಕಾಂಗ್ರೆಸ್​ ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಶಿವಮೊಗ್ಗ‌ ಕ್ಷೇತ್ರಕ್ಕೆ ನಾನು ಕಾಂಗ್ರೆಸ್​ನಿಂದ ಪ್ರಬಲ ಅಭ್ಯರ್ಥಿ ಆಗಬಲ್ಲೆ. ನನಗೆ ಟಿಕೆಟ್ ಕೊಟ್ಟರೆ ಗೆಲ್ತೇನೆ. ಇದರ ಬಗ್ಗೆ ನಮ್ಮ ನಾಯಕರ ಜೊತೆ ಇನ್ನಷ್ಟೇ ಚರ್ಚಿಸಬೇಕಿದೆ. ಬಿಜೆಪಿಯವರ ದುರಾಡಳಿತ ಕೊನೆ ಮಾಡಲು ನಾನೇ ಸಮರ್ಥ ಅಭ್ಯರ್ಥಿ'' ಎಂದರು.

''ಕುಮಾರ್ ಬಂಗಾರಪ್ಪ ಅವರನ್ನು ಕರೆ ತಂದು ಟಿಕೆಟ್ ಕೊಡುವ ಚರ್ಚೆ ಪಕ್ಷದಲ್ಲಿ ನಡೆದಿಲ್ಲ. ಶಿವಮೊಗ್ಗ ಕ್ಷೇತ್ರಕ್ಕೆ ಬೇರೆಯವರಿಗೆ ಟಿಕೆಟ್ ಕೊಟ್ಟರೆ ಸಮಸ್ಯೆ ಇಲ್ಲ. ಆದ್ರೆ ನಾನು ಪ್ರಬಲ, ಸಮರ್ಥ ಅಭ್ಯರ್ಥಿ ಆಗಬಲ್ಲೆ'' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಣ ರಾಜಕಾರಣ ಇಲ್ಲ- ಬೇಳೂರು ಗೋಪಾಲಕೃಷ್ಣ: ಗೃಹ ಸಚಿವ ಜಿ ಪರಮೇಶ್ವರ್​ ನಿವಾಸದಲ್ಲಿ ಡಿನ್ನರ್ ಮೀಟಿಂಗ್ ವಿಚಾರವಾಗಿ ಪ್ರತಿಕ್ರಿಯಿಸಿ, ''ಊಟಕ್ಕೆ ಕರೆದರೆ ಅದು ಬಣ ರಾಜಕಾರಣ ಆಗಲ್ಲ. ಸಿಎಂ, ಡಿಕೆಶಿ ಇಬ್ಬರ ನಾಯಕತ್ವದಲ್ಲಿ ಸರ್ಕಾರ ನಡೀತಿದೆ. ಬಣ ರಾಜಕಾರಣ ಇಲ್ಲ. ಈ ಹೆಚ್ ಡಿ ಕುಮಾರಸ್ವಾಮಿ ಮಧ್ಯದಲ್ಲಿ ಸ್ವಲ್ಪ ಕೈ ಆಡಿಸ್ತಿದ್ದಾರೆ. ಕುಮಾರಸ್ವಾಮಿ ಈಗ ಸ್ವಲ್ಪ ಚಿಗುರಿಕೊಂಡಿದ್ದಾರೆ'' ಎಂದು ಬೇಳೂರು ವಾಗ್ದಾಳಿ ನಡೆಸಿದರು.

''ಮೋದಿ ಅವರನ್ನು ಭೇಟಿ ಮಾಡಿ ಬಂದ ನಂತರ ಕುಮಾರಸ್ವಾಮಿ ಚಿಗುರಿಕೊಂಡಿದ್ದಾರೆ. ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದು ಕಾಂಗ್ರೆಸ್. ಡಿಕೆಶಿ ಅವರಿಂದ ಕುಮಾರಸ್ವಾಮಿ ಸಿಎಂ ಆಗಿದ್ರು. ಡಿಕೆಶಿ ಏನು ಅನ್ಯಾಯ ಮಾಡಿದ್ದಾರೆ ಅವರಿಗೆ? ಅವರ ತಾಲ್ಲೂಕನ್ನು ಬೆಂಗಳೂರಿಗೆ ಸೇರಿಸಿದರೆ ಹೆಚ್​ಡಿಕೆಗೆ ಏನು ಸಮಸ್ಯೆ? ಅವರ ತಾಲ್ಲೂಕನ್ನು ಅಭಿವೃದ್ಧಿ ಮಾಡ್ತಿದ್ದಾರೆ ಡಿಕೆಶಿ. ಕನಕಪುರ ಜಿಲ್ಲೆ ಮಾಡಲಿ ಬಿಡಿ'' ಎಂದು ಹೇಳಿದರು.

''ಯಾಕೆ ಹೆಚ್​ಡಿಕೆ ರಾಮನಗರದ ಮೇಲೆ ಆಸಕ್ತಿ ಇಲ್ವಾ, ಹಾಗೇ ತಾನೇ ಇದೂನು. ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಯಾಕೆ ಏರ್‌ಪೋರ್ಟ್ ಮಾಡಿದ್ರು? ಶಿವಮೊಗ್ಗದಲ್ಲಿ ಯಡಿಯೂರಪ್ಪ ಜಮೀನು ಇದೆ, ಅದಕ್ಕಾಗಿ ಏರ್‌ಪೋರ್ಟ್ ಮಾಡಿದರು. ಕನಕಪುರದಲ್ಲೂ ಡಿಕೆಶಿ ಸೇರಿ ಹಲವರ ಜಮೀನು ಇದೆ. ಈ ಭಾಗದಲ್ಲಿ ಜನರ ಜಮೀನೂ ಇದೆ. ಕನಕಪುರ ಅಭಿವೃದ್ಧಿ ಮಾಡಿದರೆ, ಇವರಿಗೇನು ಸಮಸ್ಯೆ'' ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಸಿಎಂ ಬದಲಾವಣೆ ಬಗ್ಗೆ ಚರ್ಚೆ ಆಗಿಲ್ಲ, ಕೇವಲ ಮಾಧ್ಯಮಗಳಲ್ಲಿ ವದಂತಿ ಅಷ್ಟೇ: ಸಚಿವ ಆರ್ ಬಿ ತಿಮ್ಮಾಪೂರ

ಶಾಸಕ ಬೇಳೂರು ಗೋಪಾಲಕೃಷ್ಣ ಪ್ರತಿಕ್ರಿಯೆ

ಬೆಂಗಳೂರು: ''ಶಿವಮೊಗ್ಗ ಲೋಕಸಭೆ ಕ್ಷೇತ್ರಕ್ಕೆ ನಾನು ಅಭ್ಯರ್ಥಿ ಆಗಲು ನಿರ್ಧರಿಸಿದ್ದೇನೆ'' ಎಂದು ಸಾಗರದ ಕಾಂಗ್ರೆಸ್​ ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಶಿವಮೊಗ್ಗ‌ ಕ್ಷೇತ್ರಕ್ಕೆ ನಾನು ಕಾಂಗ್ರೆಸ್​ನಿಂದ ಪ್ರಬಲ ಅಭ್ಯರ್ಥಿ ಆಗಬಲ್ಲೆ. ನನಗೆ ಟಿಕೆಟ್ ಕೊಟ್ಟರೆ ಗೆಲ್ತೇನೆ. ಇದರ ಬಗ್ಗೆ ನಮ್ಮ ನಾಯಕರ ಜೊತೆ ಇನ್ನಷ್ಟೇ ಚರ್ಚಿಸಬೇಕಿದೆ. ಬಿಜೆಪಿಯವರ ದುರಾಡಳಿತ ಕೊನೆ ಮಾಡಲು ನಾನೇ ಸಮರ್ಥ ಅಭ್ಯರ್ಥಿ'' ಎಂದರು.

''ಕುಮಾರ್ ಬಂಗಾರಪ್ಪ ಅವರನ್ನು ಕರೆ ತಂದು ಟಿಕೆಟ್ ಕೊಡುವ ಚರ್ಚೆ ಪಕ್ಷದಲ್ಲಿ ನಡೆದಿಲ್ಲ. ಶಿವಮೊಗ್ಗ ಕ್ಷೇತ್ರಕ್ಕೆ ಬೇರೆಯವರಿಗೆ ಟಿಕೆಟ್ ಕೊಟ್ಟರೆ ಸಮಸ್ಯೆ ಇಲ್ಲ. ಆದ್ರೆ ನಾನು ಪ್ರಬಲ, ಸಮರ್ಥ ಅಭ್ಯರ್ಥಿ ಆಗಬಲ್ಲೆ'' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಣ ರಾಜಕಾರಣ ಇಲ್ಲ- ಬೇಳೂರು ಗೋಪಾಲಕೃಷ್ಣ: ಗೃಹ ಸಚಿವ ಜಿ ಪರಮೇಶ್ವರ್​ ನಿವಾಸದಲ್ಲಿ ಡಿನ್ನರ್ ಮೀಟಿಂಗ್ ವಿಚಾರವಾಗಿ ಪ್ರತಿಕ್ರಿಯಿಸಿ, ''ಊಟಕ್ಕೆ ಕರೆದರೆ ಅದು ಬಣ ರಾಜಕಾರಣ ಆಗಲ್ಲ. ಸಿಎಂ, ಡಿಕೆಶಿ ಇಬ್ಬರ ನಾಯಕತ್ವದಲ್ಲಿ ಸರ್ಕಾರ ನಡೀತಿದೆ. ಬಣ ರಾಜಕಾರಣ ಇಲ್ಲ. ಈ ಹೆಚ್ ಡಿ ಕುಮಾರಸ್ವಾಮಿ ಮಧ್ಯದಲ್ಲಿ ಸ್ವಲ್ಪ ಕೈ ಆಡಿಸ್ತಿದ್ದಾರೆ. ಕುಮಾರಸ್ವಾಮಿ ಈಗ ಸ್ವಲ್ಪ ಚಿಗುರಿಕೊಂಡಿದ್ದಾರೆ'' ಎಂದು ಬೇಳೂರು ವಾಗ್ದಾಳಿ ನಡೆಸಿದರು.

''ಮೋದಿ ಅವರನ್ನು ಭೇಟಿ ಮಾಡಿ ಬಂದ ನಂತರ ಕುಮಾರಸ್ವಾಮಿ ಚಿಗುರಿಕೊಂಡಿದ್ದಾರೆ. ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದು ಕಾಂಗ್ರೆಸ್. ಡಿಕೆಶಿ ಅವರಿಂದ ಕುಮಾರಸ್ವಾಮಿ ಸಿಎಂ ಆಗಿದ್ರು. ಡಿಕೆಶಿ ಏನು ಅನ್ಯಾಯ ಮಾಡಿದ್ದಾರೆ ಅವರಿಗೆ? ಅವರ ತಾಲ್ಲೂಕನ್ನು ಬೆಂಗಳೂರಿಗೆ ಸೇರಿಸಿದರೆ ಹೆಚ್​ಡಿಕೆಗೆ ಏನು ಸಮಸ್ಯೆ? ಅವರ ತಾಲ್ಲೂಕನ್ನು ಅಭಿವೃದ್ಧಿ ಮಾಡ್ತಿದ್ದಾರೆ ಡಿಕೆಶಿ. ಕನಕಪುರ ಜಿಲ್ಲೆ ಮಾಡಲಿ ಬಿಡಿ'' ಎಂದು ಹೇಳಿದರು.

''ಯಾಕೆ ಹೆಚ್​ಡಿಕೆ ರಾಮನಗರದ ಮೇಲೆ ಆಸಕ್ತಿ ಇಲ್ವಾ, ಹಾಗೇ ತಾನೇ ಇದೂನು. ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಯಾಕೆ ಏರ್‌ಪೋರ್ಟ್ ಮಾಡಿದ್ರು? ಶಿವಮೊಗ್ಗದಲ್ಲಿ ಯಡಿಯೂರಪ್ಪ ಜಮೀನು ಇದೆ, ಅದಕ್ಕಾಗಿ ಏರ್‌ಪೋರ್ಟ್ ಮಾಡಿದರು. ಕನಕಪುರದಲ್ಲೂ ಡಿಕೆಶಿ ಸೇರಿ ಹಲವರ ಜಮೀನು ಇದೆ. ಈ ಭಾಗದಲ್ಲಿ ಜನರ ಜಮೀನೂ ಇದೆ. ಕನಕಪುರ ಅಭಿವೃದ್ಧಿ ಮಾಡಿದರೆ, ಇವರಿಗೇನು ಸಮಸ್ಯೆ'' ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಸಿಎಂ ಬದಲಾವಣೆ ಬಗ್ಗೆ ಚರ್ಚೆ ಆಗಿಲ್ಲ, ಕೇವಲ ಮಾಧ್ಯಮಗಳಲ್ಲಿ ವದಂತಿ ಅಷ್ಟೇ: ಸಚಿವ ಆರ್ ಬಿ ತಿಮ್ಮಾಪೂರ

Last Updated : Oct 28, 2023, 6:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.