ETV Bharat / state

ಬೆಂಗಳೂರಲ್ಲಿ ಲಿಫ್ಟ್​ನಲ್ಲೇ ಪತ್ನಿಗೆ ತಲಾಕ್ ನೀಡಿ ಮನೆಯಿಂದ ಹೊರಹಾಕಿದ ಪತಿರಾಯ!

author img

By

Published : Jul 29, 2022, 11:22 AM IST

Updated : Jul 29, 2022, 3:59 PM IST

ವರದಕ್ಷಿಣೆಗಾಗಿ ಪೀಡಿಸುತ್ತಿದ್ದ ಪತಿಯೊಬ್ಬ ಅಪಾರ್ಟ್​ಮೆಂಟ್​​ನ ಲಿಫ್ಟ್​​ನಲ್ಲೇ ತಲಾಕ್ ಹೇಳಿರುವ ಬಗ್ಗೆ ಬೆಂಗಳೂರಿನಲ್ಲಿ ಪ್ರಕರಣ ದಾಖಲಾಗಿದೆ.

husband-give-talaq-in-apartment-lift-in-bengaluru
ಲಿಫ್ಟ್​ನಲ್ಲೇ ಪತ್ನಿಗೆ ತಲಾಕ್ ನೀಡಿ ಮನೆಯಿಂದ ಹೊರಹಾಕಿದ ಪತಿರಾಯ!

ಬೆಂಗಳೂರು: ವಿವಾಹದ ಬಳಿಕ ವರದಕ್ಷಿಣೆಗಾಗಿ ಪೀಡಿಸುತ್ತಿದ್ದ ಪತಿ ಲಿಫ್ಟ್​​ನಲ್ಲೇ ತಲಾಕ್ ಹೇಳಿ ಮನೆಯಿಂದ ಹೊರದಬ್ಬಿರುವುದಾಗಿ ಆರೋಪಿಸಿದ ಮಹಿಳೆಯೊಬ್ಬರು ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪತಿ ಮಹಮ್ಮದ್ ಅಕ್ರಂ ಎಂಬಾತನ ವಿರುದ್ಧ ಮಹಿಳೆ ದೂರು ನೀಡಿದ್ದಾರೆ.

30 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವರದಕ್ಷಿಣೆಯಾಗಿ ಪಡೆದು ವಿವಾಹವಾಗಿದ್ದ ಮಹಮ್ಮದ್ ಅಕ್ರಂ, ನಂತರ ಹಣಕ್ಕಾಗಿ ಕಿರುಕುಳ ನೀಡಲು ಶುರು ಮಾಡಿದ್ದಾನೆ. ಧನದಾಹಿಯಾಗಿದ್ದ ಪತಿ ರಂಜಾನ್ ಹಬ್ಬಕ್ಕೆಂದು ತವರಿಗೆ ತೆರಳಿದ್ದಾಗ 10 ಲಕ್ಷ ರೂ. ಹಣ ತರುವಂತೆ ಹೇಳಿದ್ದನಂತೆ.

ಇದನ್ನೂ ಓದಿ: ಸುರತ್ಕಲ್ ಯುವಕನ ಹತ್ಯೆ ಪ್ರಕರಣ: ಹುಟ್ಟೂರು ಮಂಗಳಪೇಟೆಗೆ ಮೃತದೇಹ ಸ್ಥಳಾಂತರ

ಹಬ್ಬ ಮುಗಿದ ಕೆಲ ದಿನಗಳ ನಂತರ ತನ್ನನ್ನು ಆತನ ಅಪಾರ್ಟ್​ಮೆಂಟ್​​ಗೆ ಕರೆಸಿಕೊಂಡಿದ್ದು, ಹಣ ನೀಡಲು ಸಾಧ್ಯವಿಲ್ಲ ಎಂದಿದ್ದಕ್ಕೆ ಲಿಫ್ಟ್​​ನಲ್ಲೇ ತಲಾಕ್ ಹೇಳಿ, ಅಪಾರ್ಟ್​ಮೆಂಟ್​ನಿಂದ ಹೊರದಬ್ಬಿದ್ದಾನೆ ಎಂದು ಮಹಿಳೆ ದೂರಿದ್ದಾರೆ‌. ಮಹಿಳೆ ತನ್ನ ಪತಿ ವಿರುದ್ಧ ನೀಡಿದ ದೂರಿನಂತೆ ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಳಗ್ಗೆ ತಲಾಕ್ ಕೊಟ್ಟು ಸಂಜೆ ಕತ್ತು ಕೊಯ್ದ ಪತ್ನಿ ಹಂತಕ ಅರೆಸ್ಟ್

ಬೆಂಗಳೂರು: ವಿವಾಹದ ಬಳಿಕ ವರದಕ್ಷಿಣೆಗಾಗಿ ಪೀಡಿಸುತ್ತಿದ್ದ ಪತಿ ಲಿಫ್ಟ್​​ನಲ್ಲೇ ತಲಾಕ್ ಹೇಳಿ ಮನೆಯಿಂದ ಹೊರದಬ್ಬಿರುವುದಾಗಿ ಆರೋಪಿಸಿದ ಮಹಿಳೆಯೊಬ್ಬರು ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪತಿ ಮಹಮ್ಮದ್ ಅಕ್ರಂ ಎಂಬಾತನ ವಿರುದ್ಧ ಮಹಿಳೆ ದೂರು ನೀಡಿದ್ದಾರೆ.

30 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವರದಕ್ಷಿಣೆಯಾಗಿ ಪಡೆದು ವಿವಾಹವಾಗಿದ್ದ ಮಹಮ್ಮದ್ ಅಕ್ರಂ, ನಂತರ ಹಣಕ್ಕಾಗಿ ಕಿರುಕುಳ ನೀಡಲು ಶುರು ಮಾಡಿದ್ದಾನೆ. ಧನದಾಹಿಯಾಗಿದ್ದ ಪತಿ ರಂಜಾನ್ ಹಬ್ಬಕ್ಕೆಂದು ತವರಿಗೆ ತೆರಳಿದ್ದಾಗ 10 ಲಕ್ಷ ರೂ. ಹಣ ತರುವಂತೆ ಹೇಳಿದ್ದನಂತೆ.

ಇದನ್ನೂ ಓದಿ: ಸುರತ್ಕಲ್ ಯುವಕನ ಹತ್ಯೆ ಪ್ರಕರಣ: ಹುಟ್ಟೂರು ಮಂಗಳಪೇಟೆಗೆ ಮೃತದೇಹ ಸ್ಥಳಾಂತರ

ಹಬ್ಬ ಮುಗಿದ ಕೆಲ ದಿನಗಳ ನಂತರ ತನ್ನನ್ನು ಆತನ ಅಪಾರ್ಟ್​ಮೆಂಟ್​​ಗೆ ಕರೆಸಿಕೊಂಡಿದ್ದು, ಹಣ ನೀಡಲು ಸಾಧ್ಯವಿಲ್ಲ ಎಂದಿದ್ದಕ್ಕೆ ಲಿಫ್ಟ್​​ನಲ್ಲೇ ತಲಾಕ್ ಹೇಳಿ, ಅಪಾರ್ಟ್​ಮೆಂಟ್​ನಿಂದ ಹೊರದಬ್ಬಿದ್ದಾನೆ ಎಂದು ಮಹಿಳೆ ದೂರಿದ್ದಾರೆ‌. ಮಹಿಳೆ ತನ್ನ ಪತಿ ವಿರುದ್ಧ ನೀಡಿದ ದೂರಿನಂತೆ ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಳಗ್ಗೆ ತಲಾಕ್ ಕೊಟ್ಟು ಸಂಜೆ ಕತ್ತು ಕೊಯ್ದ ಪತ್ನಿ ಹಂತಕ ಅರೆಸ್ಟ್

Last Updated : Jul 29, 2022, 3:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.