ETV Bharat / state

ಹಿಟ್​ ಆ್ಯಂಡ್​​ ರನ್​... ರಸ್ತೆ ಮಧ್ಯೆದಲ್ಲೇ ಅನಾಥ ಶವವಾಗಿ ಬಿದ್ದ ಪಾದಚಾರಿ!

ಇಂದು ಬೆಳ್ಳಂಬೆಳಗ್ಗೆ ಕಾರ್​ವೊಂದು ವ್ಯಕ್ತಿಯ ಮೇಲೆ ಹರಿದು ನಿಲ್ಲಿಸದೇ ಹೋಗಿರುವ ಘಟನೆ ಬೆಂಗಳೂರಿನ ಹೊರವಲಯದಲ್ಲಿ ನಡೆದಿದೆ.

author img

By

Published : Aug 19, 2020, 4:59 PM IST

man died in Bangalore, man died in accident, hit and run, Bangalore hit and run, Bangalore hit and run news, ಬೆಂಗಳೂರಿನಲ್ಲಿ ವ್ಯಕ್ತಿ ಸಾವು, ಅಪಘಾತದಲ್ಲಿ ವ್ಯಕ್ತಿ ಸಾವು, ಹಿಟ್​ ಅಂಡ್​ ರನ್​, ಬೆಂಗಳೂರಿನಲ್ಲಿ ಹಿಟ್​ ಅಂಡ್​ ರನ್​, ಬೆಂಗಳೂರು ಹಿಟ್​ ಅಂಡ್​ ರನ್​ ಸುದ್ದಿ,
ರಸ್ತೆ ಮಧ್ಯೆದಲ್ಲೇ ಪಾದಚಾರಿ ಸಾವು

ಆನೇಕಲ್: ಸೇವಾ ರಸ್ತೆಯಲ್ಲಿ ಇಂದು ಬೆಳಗಿನ ಜಾವ ಹಿಟ್​ ಆ್ಯಂಡ್​ ರನ್​ ಪ್ರಕರಣ ನಡೆದಿದ್ದು, ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ರಸ್ತೆ ಮಧ್ಯೆದಲ್ಲೇ ಪಾದಚಾರಿ ಸಾವು

ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಬೊಮ್ಮಸಂದ್ರದ ಹೆದ್ದಾರಿ ಪಕ್ಕದ ಸೇವಾ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಬೆಂಗಳೂರಿನ ಕಡೆಯಿಂದ ಹೊಸೂರು ಹೋಗುವ ಮಾರ್ಗದಲ್ಲಿ ಬೆಳಗಿನ ಜಾವ ಸುಮಾರು 5 ಗಂಟೆಗೆ ಘಟನೆ ಸಂಭವಿಸಿದ್ದು, ಅಪರಿಚಿತ ವ್ಯಕ್ತಿಯ ಪ್ರಾಣಪಕ್ಷಿ ಹಾರಿಹೋಗಿದೆ.

ಅಪಘಾತದಲ್ಲಿ ವ್ಯಕ್ತಿಯ ತಲೆ ಹಾಗು ಕೈ ಜಜ್ಜಿ ಹೋಗಿದ್ದು, ರಸ್ತೆಯಲ್ಲಿಯೇ ವ್ಯಕ್ತಿ ಅನಾಥ ಶವವಾಗಿ ಬಿದ್ದಿದ್ದಾನೆ. ಯಾವ ವಾಹನ?, ವ್ಯಕ್ತಿ ಯಾರು? ಎಂಬ ಬಗ್ಗೆ ಹೆಬ್ಬಗೋಡಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ಕೈಗೊಂಡಿದ್ದಾರೆ.

ಈ ಘಟನೆ ಕುರಿತು ಹೆಬ್ಬಗೋಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಆನೇಕಲ್: ಸೇವಾ ರಸ್ತೆಯಲ್ಲಿ ಇಂದು ಬೆಳಗಿನ ಜಾವ ಹಿಟ್​ ಆ್ಯಂಡ್​ ರನ್​ ಪ್ರಕರಣ ನಡೆದಿದ್ದು, ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ರಸ್ತೆ ಮಧ್ಯೆದಲ್ಲೇ ಪಾದಚಾರಿ ಸಾವು

ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಬೊಮ್ಮಸಂದ್ರದ ಹೆದ್ದಾರಿ ಪಕ್ಕದ ಸೇವಾ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಬೆಂಗಳೂರಿನ ಕಡೆಯಿಂದ ಹೊಸೂರು ಹೋಗುವ ಮಾರ್ಗದಲ್ಲಿ ಬೆಳಗಿನ ಜಾವ ಸುಮಾರು 5 ಗಂಟೆಗೆ ಘಟನೆ ಸಂಭವಿಸಿದ್ದು, ಅಪರಿಚಿತ ವ್ಯಕ್ತಿಯ ಪ್ರಾಣಪಕ್ಷಿ ಹಾರಿಹೋಗಿದೆ.

ಅಪಘಾತದಲ್ಲಿ ವ್ಯಕ್ತಿಯ ತಲೆ ಹಾಗು ಕೈ ಜಜ್ಜಿ ಹೋಗಿದ್ದು, ರಸ್ತೆಯಲ್ಲಿಯೇ ವ್ಯಕ್ತಿ ಅನಾಥ ಶವವಾಗಿ ಬಿದ್ದಿದ್ದಾನೆ. ಯಾವ ವಾಹನ?, ವ್ಯಕ್ತಿ ಯಾರು? ಎಂಬ ಬಗ್ಗೆ ಹೆಬ್ಬಗೋಡಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ಕೈಗೊಂಡಿದ್ದಾರೆ.

ಈ ಘಟನೆ ಕುರಿತು ಹೆಬ್ಬಗೋಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.