ETV Bharat / state

ಕೋಮು ಭಾವನೆ ಕೆರಳಿಸುವ ಈ ನಿಲುವು ಬಿಜೆಪಿಗೆ ತಿರುಗುಬಾಣವಾಗಲಿದೆ, ಕರ್ನಾಟಕದಿಂದ ಬಿಜೆಪಿ ಸರ್ವನಾಶ ಆಗಲಿದೆ : ಹೆಚ್​ಡಿಕೆ

author img

By

Published : Apr 4, 2022, 5:03 PM IST

Updated : Apr 4, 2022, 5:19 PM IST

ಮತಾಂತರ ನಿಷೇಧ ಕಾಯ್ದೆಯಲ್ಲಿ ಮುಖಕ್ಕೆ ಮಂಗಳಾರತಿ ಆಗಿದ್ದು ಕಾಂಗ್ರೆಸ್ ಪಕ್ಷಕ್ಕೆ. ಅವರ ಕಾಲದಲ್ಲಿ ಮತಾಂತರ ವಿಧೇಯಕ ಸಂಪುಟ ತರಲು ಸಹಿ ಹಾಕಿದ್ದವರು ಸಿದ್ದರಾಮಯ್ಯ. ಕಾನೂನು ಸಚಿವರ ಸದನದಲ್ಲಿ ಈ ಬಗ್ಗೆ ದಾಖಲೆ ಮುಂದಿಟ್ಟಿದ್ದರು. ಮತಾಂತರ ನಿಷೇಧ ಕಾಯ್ದೆ ಸಂಬಂಧ ವಿಧಾನಸಭೆ ಕಲಾಪದಲ್ಲಿ ಕದ್ದು ಓಡಿದ್ದು ಕಾಂಗ್ರೆಸ್ ಪಕ್ಷದವರು ಎಂದು ಹೆಚ್​ಡಿಕೆ ಆರೋಪಿಸಿದರು..

h-d-kumaraswamy
ಹೆಚ್​ಡಿಕೆ

ಬೆಂಗಳೂರು : ಕೋಮುಭಾವನೆ ಕೆರಳಿಸುವ ಈ ನಿಲುವು ನಿಮಗೆ ತಿರುಗು ಬಾಣವಾಗಲಿದೆ. ಕರ್ನಾಟಕದಿಂದ ಬಿಜೆಪಿ ಪಕ್ಷ ಸರ್ವನಾಶ ಆಗಲಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದರು. ಪಕ್ಷದ ಕಚೇರಿ ಜೆಪಿಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮುಕ್ತ ಭಾರತ ಮಾಡಲು ಮುಂದಾಗಿರುವ ನೀವು ಈ ರೀತಿ ಮಾಡಿದರೆ ಬಿಜೆಪಿ ಮುಕ್ತ ಕರ್ನಾಟಕ ಆಗಲಿದೆ. ನಾನು ನಿಮಗೆ ಎಚ್ಚರಿಕೆ ನೀಡುತ್ತಿದ್ದೇನೆ ಎಂದರು.

ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ

ರಾಜ್ಯದಲ್ಲಿ ಭಾವನಾತ್ಮಕ ವಿಷಯವನ್ನು ಕೆರಳಿಸಿ, ರಾಜ್ಯಕ್ಕೆ ಬೆಂಕಿ ಹಚ್ಚುತ್ತಿರುವ ಬಿಜೆಪಿ ವಿರುದ್ಧ ಮೃಧು ಧೋರಣೆ ತೋರಿದ್ದು ಕಾಂಗ್ರೆಸ್ಸೋ, ಜೆಡಿಎಸ್ ಪಕ್ಷವೋ?. ಅಧಿವೇಶನದಲ್ಲಿ ಯಾರು ಮಾತನಾಡಿದ್ದು?. ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನ ಆಗಬಾರದು ಅಂತಾ ರಾಷ್ಟ್ರಪತಿಗೆ ಮನವಿ ಸಲ್ಲಿಸಿದ್ದು ಜೆಡಿಎಸ್ ಪಕ್ಷ. ಕಾಂಗ್ರೆಸ್‌ನ ತಿಳಿಗೇಡಿತನದಿಂದ ಗೋಹತ್ಯೆ ನಿಷೇಧ ಬಿಲ್ ಸದನದಲ್ಲಿ ಪಾಸ್ ಆಗಿದೆ.

ಮತಾಂತರ ನಿಷೇಧ ಕಾಯ್ದೆಯಲ್ಲಿ ಮುಖಕ್ಕೆ ಮಂಗಳರಾತಿ ಆಗಿದ್ದು ಕಾಂಗ್ರೆಸ್ ಪಕ್ಷಕ್ಕೆ. ಅವರ ಕಾಲದಲ್ಲಿ ಮತಾಂತರ ವಿಧೇಯಕ ಸಂಪುಟ ಸಭೆಗೆ ತರಲು ಸಹಿ ಹಾಕಿದ್ದವರು ಸಿದ್ದರಾಮಯ್ಯ. ಕಾನೂನು ಸಚಿವರ ಸದನದಲ್ಲಿ ಈ ಬಗ್ಗೆ ದಾಖಲೆ ಮುಂದಿಟ್ಟಿದ್ದರು. ಮತಾಂತರ ನಿಷೇಧ ಕಾಯ್ದೆ ಸಂಬಂಧ ವಿಧಾನಸಭೆ ಕಲಾಪದಲ್ಲಿ ಕದ್ದು ಓಡಿದ್ದು ಕಾಂಗ್ರೆಸ್ ಪಕ್ಷದವರು ಎಂದು ಆರೋಪಿಸಿದರು.

ಬೆಂಕಿ ಹಚ್ಚಿರುವುದೇ ಕಾಂಗ್ರೆಸ್ : ಹಿಜಾಬ್ ಸಂಬಂಧ ಕಾಂಗ್ರೆಸ್ ಮೌನವಾಗಿರುವ ಬಗ್ಗೆ ಕಾಂಗ್ರೆಸ್ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದ್ದರು. ನಮಗೆ ನೀವು ಮೃಧು ಧೋರಣೆ ಅಂತಾ ಹೇಳುತ್ತೀರಾ?. ಬೆಂಕಿ ಹಚ್ಚಿರುವುದೇ ಕಾಂಗ್ರೆಸ್ ಪಕ್ಷದವರು. ಬಿಜೆಪಿ ಸರ್ಕಾರ ಬರಲು ಕಾರಣವಾಗಿದ್ದು ಕಾಂಗ್ರೆಸ್ ಪಕ್ಷದವರಿಂದ. ಧೈರ್ಯವಾಗಿ ಮಾತನಾಡಿ, ಏನೂ ಆಗಲ್ಲ. ನಾನು ಯಾರನ್ನು ಮೆಚ್ಚಿಸಲು ಮಾತನಾಡುತ್ತಿಲ್ಲ. ಸರ್ಕಾರ ಜಾಣ ಕಿವುಡು, ಜಾಣ ಮೌನ ತೋರುತ್ತಿದೆ. ಕೇಸರಿ ಶಾಲು ಹಾಕುವ ಗೂಂಡಾಗಳ ವಿರುದ್ಧ ಸರ್ಕಾರ ಏನೂ ಮಾಡಿಲ್ಲ. ನಿಮ್ಮ ತಾಕತ್ತು ಎಲ್ಲಿ ಹೋಗಿದೆ? ಎಂದು ವಾಗ್ದಾಳಿ ನಡೆಸಿದರು.

ನಾನು ದಾರ್ಶನಿಕ ಎಂದು ಬಿಜೆಪಿಯವರು ಬೋರ್ಡ್ ಹಾಕಿ ಓಡಾಡುತ್ತಿದ್ದಾರೆ. ನಾನು ಬೋರ್ಡ್ ಹಾಕಿ ಓಡಾಡುತ್ತಿಲ್ಲ. ಸ್ವಾರ್ಥಕ್ಕಾಗಿ ಮತಬ್ಯಾಂಕ್‌ಗಾಗಿ ನಾನು ಮಾತನಾಡುತ್ತಿಲ್ಲ. ನಾವು ಧೈರ್ಯವಾಗಿ ಮಾತನಾಡುತ್ತೇವೆ. ಕನಕದಾಸರನ್ನು ಏನು ಮಾಡಿಸಿದಿರಿ?. ಬಿಜೆಪಿಯವರು ಶ್ರೀಮಂತರಿಗೆ ಒಂದು ಟ್ರೀಟ್​ಮೆಂಟ್, ಬಡವರಿಗೆ ಒಂದು ಟ್ರೀಟ್​ಮೆಂಟ್, ಗತಿ ಇಲ್ಲದವನಿಗೆ ಒಂದು ಟ್ರೀಟ್​ಮೆಂಟ್​ ಕೊಡ್ತೀರಾ? ಎಂದು ವಾಗ್ದಾಳಿ ನಡೆಸಿದರು.

ಕಾಶ್ಮೀರಿ ಫೈಲ್ಸ್‌ಗಲ್ಲ, ಮಂತ್ರಿಗಳ ಕಚೇರಿಯಲ್ಲಿರುವ ಫೈಲ್ಸ್‌ಗೆ ವಿನಾಯಿತಿ ನೀಡಿ : ಕಾಶ್ಮೀರಿ ಫೈಲ್ಸ್ 100% ತೆರಿಗೆ ವಿನಾಯಿತಿ ನೀಡುವುದಕ್ಕಿಂತ, ನಿಮ್ಮ ಮಂತ್ರಿಗಳ ಕಚೇರಿಯಲ್ಲಿರುವ ಫೈಲ್ಸ್‌ಗಳಿಗೆ 100% ವಿನಾಯಿತಿ ನೀಡಿ. ಇದರಿಂದ ಜನರಿಗೆ ಉಪಯೋಗ ಆಗುತ್ತದೆ. ಸಿಎಂಗೆ ಈ ಬಗ್ಗೆ ವಿನಂತಿ ಮಾಡುತ್ತೇನೆ ಎಂದರು. ನಾನು ಧೈರ್ಯವಾಗಿ ಮಾತನಾಡುತ್ತೇನೆ. ಕಾಂಗ್ರೆಸ್ ತರ ಅಂಜುವವನಲ್ಲ. ನಾನು ರಾಜ್ಯದ 6.50 ಕೋಟಿ ಜನರ ಪರವಾಗಿ ಮಾತನಾಡುವವನು.

ವಿಹೆಚ್​ಪಿ, ಬಜರಂಗ ದಳದವರೇ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಆಗಿದೆ. ದೇಶಕ್ಕೆ ಅನ್ನ‌ ಕೊಡುವವರು ನೀವಲ್ಲ. ದೇಶವನ್ನು ಉದ್ಧಾರ ಮಾಡುವವರು ನೀವಲ್ಲ. ಬಿಸಿಲಿನಲ್ಲಿ ಬೆಂದು ಬೆಳೆ ಬೆಳೆಯುವ ರೈತ ದೇಶಕ್ಕೆ ಅನ್ನ ಕೊಡ್ತಾನೆ. ನೀವಲ್ಲ. ಮುಂದಿನ ದಿನಗಳಲ್ಲಿ ಶ್ರೀಲಂಕಾ ಗತಿ‌ ನಮ್ಮ ರಾಜ್ಯಕ್ಕೂ ಬರಲಿದೆ. ಆ ರೀತಿ ಸಾಲ ಮಾಡಲಾಗುತ್ತಿದೆ. ಬಂಡವಾಳ ವೆಚ್ಚಕ್ಕೆ ಹಣ ಇಲ್ಲ. ಸಾಲದ ಮೇಲೆ ಸಾಲ ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಜೊತೆ ಚಕ್ಕಂದ ಮಾಡಲು ಹೊಂದಾಣಿಕೆ ಮಾಡಿಲ್ಲ: ಸರ್ಕಾರಕ್ಕೆ ಮಾನಸಿಕವಾಗಿ ಧೈರ್ಯ ಕೊಡದೇ ಇದ್ದರೆ, ಜನಕ್ಕೆ ಪೆಟ್ಟು ಬೀಳುತ್ತದೆ ಎಂದು ಇಷ್ಟು ದಿನ ನಾನು ಮೌನವಾಗಿದ್ದೆ. ಬಿಜೆಪಿ ಜೊತೆ ಚಕ್ಕಂದ ಮಾಡಲು ಹೊಂದಾಣಿಕೆ ಮಾಡಿಲ್ಲ ಎಂದರು. ಕಾಂಗ್ರೆಸ್‌ನವರು ಒಬ್ಬರೇ ಹೋರಾಟ ಮಾಡುವವರಾ?. ಬಿಜೆಪಿಯ ಸರ್ಕಾರದ ಪಾಪದ ಕೊಡ ತುಂಬಿದ ಕಾರಣ ನಾನು ಹೋರಾಟ ಮಾಡಲು ಮುಂದಾಗಿದ್ದೇನೆ.

ಬಿಜೆಪಿಯಿಂದ ಒಂದು ಹೆಜ್ಜೆ ಮುಂದೆ ಹೋಗಿ ನಿಷ್ಠೆಯಿಂದ ನಮ್ಮ‌‌ ಕುಟುಂಬ ಧರ್ಮ ಆಚರಣೆ ಮಾಡುತ್ತದೆ. ಬಡವರನ್ನು ಉಳಿಸಲು ಬಜರಂಗದಳ, ವಿಹೆಚ್​ಪಿ ಫೀಲ್ಡ್‌ಗೆ ಇಳಿಯಿರಿ. ನಾನು ನಿಮ್ಮ ಜೊತೆ ಬರುತ್ತೇನೆ. ಬೆಲೆ ಏರಿಕೆ ಆಗುತ್ತಿದೆ‌. ಅದರ ವಿರುದ್ಧ ಹೋರಾಟ ನಡೆಸಿ. ನಾನೂ ನಿಮಗೆ ಸಾಥ್ ಕೊಡುತ್ತೇನೆ. ಈ ರಾಷ್ಟ್ರ ಈ ಮಟ್ಟಕ್ಕೆ ಬರಲು ನಿಮ್ಮ ಬಳುವಳಿ ಕಾರಣವಾಗಿದೆ. ಅದಕ್ಕೆ ಪ್ರಾದೇಶಿಕ ಪಕ್ಷ ಹುಟ್ಟುಕೊಂಡಿದೆ.

ಹಿಜಾಬ್ ಗಲಾಟೆ ಬಂದಾಗ ವೋಟ್ ಬರಲ್ಲ‌ ಎಂದು ಮನೆಯಲ್ಲಿ ಕೂತಿರಿ. ಜೆಡಿಎಸ್ ಪಕ್ಷ ಬಿಜೆಪಿ ಬಿ ಟೀಂ ಎಂದು ಹೋದಲ್ಲೆಲ್ಲಾ ಹೇಳುತ್ತಿದ್ದಿರಿ ಸಿದ್ದರಾಮಯ್ಯನವರೇ. ಈಗ ಏಕೆ ಸುಮ್ಮನಿದ್ದೀರಿ. ಇದು ನಿಮ್ಮ ವೋಟ್ ಬ್ಯಾಂಕ್. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ಟೀಕಿಸಿದರು.

ನಾವು ರಾಜಕೀಯ ಕಲ್ಲು ಹೊಡೆಯುತ್ತೇವೆ : ದೇಶದ ಜನರ ಜೀವನ ಗಾಳಿಪಟ ಮಾಡಬೇಡಿ. ಅಧಿಕಾರ ಹಿಡಿಯಲು ಮಾಡಬಾರದ ಹೇಸಿಗೆ ಕೆಲಸ ಮಾಡಿರುವುದು ಎಲ್ಲರಿಗೂ ಗೊತ್ತು. ನೀವು ಗಾಜಿನ‌ ಮನೆಯಲ್ಲಿರುವವರು, ನಾವು ರಸ್ತೆಯಲ್ಲಿರುವವರು. ನಾವು ರಾಜಕೀಯ ಕಲ್ಲು ಎಸೆಯುತ್ತೇವೆ. ನಮ್ಮ ರೈತರ ಬದುಕನ್ನು ಹಾಳು ಮಾಡಬೇಡಿ ಎಂದರು. ಮಸೀದಿಯಲ್ಲಿ ಆಜಾನ್‌ಗೆ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಇಷ್ಟು ವರ್ಷದಿಂದ ಅಜಾನ್ ಬರುತ್ತಿದೆಯಲ್ಲ. 75 ವರ್ಷದಿಂದ ಮಸೀದಿಯಲ್ಲಿ ಆಜಾನ್ ಮಾಡಲಾಗುತ್ತದೆ. ಇಷ್ಟು ದಿನ ಏಕೆ ಸುಮ್ಮನಿದ್ದೀರಿ? ಎಂದು ಪ್ರಶ್ನಿಸಿದರು.

ಆರ್​ಎಸ್​​ಎಸ್​ ರಿಮೋಟ್ ಕಂಟ್ರೋಲ್ ಸರ್ಕಾರ : ಸಿಎಂ ಬೊಮ್ಮಾಯಿ ಯಾವುದಕ್ಕೂ ಮಾತನಾಡುತ್ತಿಲ್ಲ. ಮೌನವಾಗಿದ್ದಾರೆ. ಸ್ವತಂತ್ರವಾಗಿ ಈ ಸರ್ಕಾರ ನಡೆಯುತ್ತಲೇ ಇಲ್ಲ. ಆರ್​ಎಸ್​ಎಸ್​ ರಿಮೋಟ್ ಅಲ್ಲಾಂದ್ರೆ ಬೇರೆ ಏನಿದೆ?. ಸಂಘ ಪರಿವಾರವನ್ನು ಮೆಚ್ಚಿಸಲು ನಡೆಸುತ್ತಿರುವ ಸರ್ಕಾರ ಇದು ಎಂದು ಕಿಡಿಕಾರಿದರು.

ಕಾಂಗ್ರೆಸ್ ಪಕ್ಷದವರು ಮುಸ್ಲಿಂ ಪರವಾಗಿದ್ದೇವೆ ಎಂದು ಹೇಳಿ, ಸ್ಲೋ ಪಾಯಿಸನ್ ಹಾಕುವ ಕೆಲಸ ಮಾಡುತ್ತಿದೆ. ಕುವೆಂಪು ಅವರ ಶಾಂತಿಯ ತೋಟ ಉಳಿಯಬೇಕು. ನಮ್ಮ ಪಕ್ಷಕ್ಕೆ ಕಾರ್ಯಕರ್ತರ ಶಕ್ತಿ ಇದೆ. 2023ರಲ್ಲಿ ಅಚ್ಚರಿಯ ರೀತಿಯಲ್ಲಿ ಜೆಡಿಎಸ್ ಸಾಧನೆ ಮಾಡಲಿದೆ. ಈ‌ ಬಾರಿ ಜೆಡಿಎಸ್ 123 ರೋಡ್ ಮ್ಯಾಪ್ ಹಾಕಿದ್ದೇವೆ. ಜೆಡಿಎಸ್ ಪಕ್ಷಕ್ಕೆ 2023ರಲ್ಲಿ ಬಹುಮತ ಬರಲಿದೆ ಎಂದರು.

ಇನ್ನೊಬ್ಬ ಹೊರಟ್ಟಿ ಬರುತ್ತಾರೆ ಬಿಡಿ : ಹೊರಟ್ಟಿ ಬಿಜೆಪಿ ಸೇರ್ಪಡೆಯಾಗುವ ವಿಚಾರವಾಗಿ ‌ಪ್ರತಿಕ್ರಿಯಿಸಿದ ಅವರು, ಅವರು ಹೋಗ್ತೀವಿ ಅಂದಾಗ ನಾವೇಕೆ ಅವರನ್ನು ತಡೆಯುವುದು?. ಕೋನರೆಡ್ಡಿ, ಹೊರಟ್ಟಿ ಇದ್ದಾಗ ಮುಂಬೈ ಕರ್ನಾಟಕದಲ್ಲಿ ಏನಾಗಿತ್ತು?. ಇನ್ನೊಬ್ಬ ಹೊರಟ್ಟಿ ಬರುತ್ತಾರೆ ಎಂದು ಟಾಂಗ್ ನೀಡಿದರು.

ಓದಿ: ರಾಷ್ಟ್ರದ್ರೋಹಿಗಳಿಗೆ ಸಿದ್ದರಾಮಯ್ಯ-ಡಿಕೆಶಿ-ಹೆಚ್‌ಡಿಕೆ ಬೆಂಬಲ.. ಇದು ಸಂವಿಧಾನ, ಸಮಾಜಕ್ಕೆ ದ್ರೋಹ ಬಗೆದಂತೆ: ಈಶ್ವರಪ್ಪ

ಬೆಂಗಳೂರು : ಕೋಮುಭಾವನೆ ಕೆರಳಿಸುವ ಈ ನಿಲುವು ನಿಮಗೆ ತಿರುಗು ಬಾಣವಾಗಲಿದೆ. ಕರ್ನಾಟಕದಿಂದ ಬಿಜೆಪಿ ಪಕ್ಷ ಸರ್ವನಾಶ ಆಗಲಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದರು. ಪಕ್ಷದ ಕಚೇರಿ ಜೆಪಿಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮುಕ್ತ ಭಾರತ ಮಾಡಲು ಮುಂದಾಗಿರುವ ನೀವು ಈ ರೀತಿ ಮಾಡಿದರೆ ಬಿಜೆಪಿ ಮುಕ್ತ ಕರ್ನಾಟಕ ಆಗಲಿದೆ. ನಾನು ನಿಮಗೆ ಎಚ್ಚರಿಕೆ ನೀಡುತ್ತಿದ್ದೇನೆ ಎಂದರು.

ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ

ರಾಜ್ಯದಲ್ಲಿ ಭಾವನಾತ್ಮಕ ವಿಷಯವನ್ನು ಕೆರಳಿಸಿ, ರಾಜ್ಯಕ್ಕೆ ಬೆಂಕಿ ಹಚ್ಚುತ್ತಿರುವ ಬಿಜೆಪಿ ವಿರುದ್ಧ ಮೃಧು ಧೋರಣೆ ತೋರಿದ್ದು ಕಾಂಗ್ರೆಸ್ಸೋ, ಜೆಡಿಎಸ್ ಪಕ್ಷವೋ?. ಅಧಿವೇಶನದಲ್ಲಿ ಯಾರು ಮಾತನಾಡಿದ್ದು?. ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನ ಆಗಬಾರದು ಅಂತಾ ರಾಷ್ಟ್ರಪತಿಗೆ ಮನವಿ ಸಲ್ಲಿಸಿದ್ದು ಜೆಡಿಎಸ್ ಪಕ್ಷ. ಕಾಂಗ್ರೆಸ್‌ನ ತಿಳಿಗೇಡಿತನದಿಂದ ಗೋಹತ್ಯೆ ನಿಷೇಧ ಬಿಲ್ ಸದನದಲ್ಲಿ ಪಾಸ್ ಆಗಿದೆ.

ಮತಾಂತರ ನಿಷೇಧ ಕಾಯ್ದೆಯಲ್ಲಿ ಮುಖಕ್ಕೆ ಮಂಗಳರಾತಿ ಆಗಿದ್ದು ಕಾಂಗ್ರೆಸ್ ಪಕ್ಷಕ್ಕೆ. ಅವರ ಕಾಲದಲ್ಲಿ ಮತಾಂತರ ವಿಧೇಯಕ ಸಂಪುಟ ಸಭೆಗೆ ತರಲು ಸಹಿ ಹಾಕಿದ್ದವರು ಸಿದ್ದರಾಮಯ್ಯ. ಕಾನೂನು ಸಚಿವರ ಸದನದಲ್ಲಿ ಈ ಬಗ್ಗೆ ದಾಖಲೆ ಮುಂದಿಟ್ಟಿದ್ದರು. ಮತಾಂತರ ನಿಷೇಧ ಕಾಯ್ದೆ ಸಂಬಂಧ ವಿಧಾನಸಭೆ ಕಲಾಪದಲ್ಲಿ ಕದ್ದು ಓಡಿದ್ದು ಕಾಂಗ್ರೆಸ್ ಪಕ್ಷದವರು ಎಂದು ಆರೋಪಿಸಿದರು.

ಬೆಂಕಿ ಹಚ್ಚಿರುವುದೇ ಕಾಂಗ್ರೆಸ್ : ಹಿಜಾಬ್ ಸಂಬಂಧ ಕಾಂಗ್ರೆಸ್ ಮೌನವಾಗಿರುವ ಬಗ್ಗೆ ಕಾಂಗ್ರೆಸ್ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದ್ದರು. ನಮಗೆ ನೀವು ಮೃಧು ಧೋರಣೆ ಅಂತಾ ಹೇಳುತ್ತೀರಾ?. ಬೆಂಕಿ ಹಚ್ಚಿರುವುದೇ ಕಾಂಗ್ರೆಸ್ ಪಕ್ಷದವರು. ಬಿಜೆಪಿ ಸರ್ಕಾರ ಬರಲು ಕಾರಣವಾಗಿದ್ದು ಕಾಂಗ್ರೆಸ್ ಪಕ್ಷದವರಿಂದ. ಧೈರ್ಯವಾಗಿ ಮಾತನಾಡಿ, ಏನೂ ಆಗಲ್ಲ. ನಾನು ಯಾರನ್ನು ಮೆಚ್ಚಿಸಲು ಮಾತನಾಡುತ್ತಿಲ್ಲ. ಸರ್ಕಾರ ಜಾಣ ಕಿವುಡು, ಜಾಣ ಮೌನ ತೋರುತ್ತಿದೆ. ಕೇಸರಿ ಶಾಲು ಹಾಕುವ ಗೂಂಡಾಗಳ ವಿರುದ್ಧ ಸರ್ಕಾರ ಏನೂ ಮಾಡಿಲ್ಲ. ನಿಮ್ಮ ತಾಕತ್ತು ಎಲ್ಲಿ ಹೋಗಿದೆ? ಎಂದು ವಾಗ್ದಾಳಿ ನಡೆಸಿದರು.

ನಾನು ದಾರ್ಶನಿಕ ಎಂದು ಬಿಜೆಪಿಯವರು ಬೋರ್ಡ್ ಹಾಕಿ ಓಡಾಡುತ್ತಿದ್ದಾರೆ. ನಾನು ಬೋರ್ಡ್ ಹಾಕಿ ಓಡಾಡುತ್ತಿಲ್ಲ. ಸ್ವಾರ್ಥಕ್ಕಾಗಿ ಮತಬ್ಯಾಂಕ್‌ಗಾಗಿ ನಾನು ಮಾತನಾಡುತ್ತಿಲ್ಲ. ನಾವು ಧೈರ್ಯವಾಗಿ ಮಾತನಾಡುತ್ತೇವೆ. ಕನಕದಾಸರನ್ನು ಏನು ಮಾಡಿಸಿದಿರಿ?. ಬಿಜೆಪಿಯವರು ಶ್ರೀಮಂತರಿಗೆ ಒಂದು ಟ್ರೀಟ್​ಮೆಂಟ್, ಬಡವರಿಗೆ ಒಂದು ಟ್ರೀಟ್​ಮೆಂಟ್, ಗತಿ ಇಲ್ಲದವನಿಗೆ ಒಂದು ಟ್ರೀಟ್​ಮೆಂಟ್​ ಕೊಡ್ತೀರಾ? ಎಂದು ವಾಗ್ದಾಳಿ ನಡೆಸಿದರು.

ಕಾಶ್ಮೀರಿ ಫೈಲ್ಸ್‌ಗಲ್ಲ, ಮಂತ್ರಿಗಳ ಕಚೇರಿಯಲ್ಲಿರುವ ಫೈಲ್ಸ್‌ಗೆ ವಿನಾಯಿತಿ ನೀಡಿ : ಕಾಶ್ಮೀರಿ ಫೈಲ್ಸ್ 100% ತೆರಿಗೆ ವಿನಾಯಿತಿ ನೀಡುವುದಕ್ಕಿಂತ, ನಿಮ್ಮ ಮಂತ್ರಿಗಳ ಕಚೇರಿಯಲ್ಲಿರುವ ಫೈಲ್ಸ್‌ಗಳಿಗೆ 100% ವಿನಾಯಿತಿ ನೀಡಿ. ಇದರಿಂದ ಜನರಿಗೆ ಉಪಯೋಗ ಆಗುತ್ತದೆ. ಸಿಎಂಗೆ ಈ ಬಗ್ಗೆ ವಿನಂತಿ ಮಾಡುತ್ತೇನೆ ಎಂದರು. ನಾನು ಧೈರ್ಯವಾಗಿ ಮಾತನಾಡುತ್ತೇನೆ. ಕಾಂಗ್ರೆಸ್ ತರ ಅಂಜುವವನಲ್ಲ. ನಾನು ರಾಜ್ಯದ 6.50 ಕೋಟಿ ಜನರ ಪರವಾಗಿ ಮಾತನಾಡುವವನು.

ವಿಹೆಚ್​ಪಿ, ಬಜರಂಗ ದಳದವರೇ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಆಗಿದೆ. ದೇಶಕ್ಕೆ ಅನ್ನ‌ ಕೊಡುವವರು ನೀವಲ್ಲ. ದೇಶವನ್ನು ಉದ್ಧಾರ ಮಾಡುವವರು ನೀವಲ್ಲ. ಬಿಸಿಲಿನಲ್ಲಿ ಬೆಂದು ಬೆಳೆ ಬೆಳೆಯುವ ರೈತ ದೇಶಕ್ಕೆ ಅನ್ನ ಕೊಡ್ತಾನೆ. ನೀವಲ್ಲ. ಮುಂದಿನ ದಿನಗಳಲ್ಲಿ ಶ್ರೀಲಂಕಾ ಗತಿ‌ ನಮ್ಮ ರಾಜ್ಯಕ್ಕೂ ಬರಲಿದೆ. ಆ ರೀತಿ ಸಾಲ ಮಾಡಲಾಗುತ್ತಿದೆ. ಬಂಡವಾಳ ವೆಚ್ಚಕ್ಕೆ ಹಣ ಇಲ್ಲ. ಸಾಲದ ಮೇಲೆ ಸಾಲ ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಜೊತೆ ಚಕ್ಕಂದ ಮಾಡಲು ಹೊಂದಾಣಿಕೆ ಮಾಡಿಲ್ಲ: ಸರ್ಕಾರಕ್ಕೆ ಮಾನಸಿಕವಾಗಿ ಧೈರ್ಯ ಕೊಡದೇ ಇದ್ದರೆ, ಜನಕ್ಕೆ ಪೆಟ್ಟು ಬೀಳುತ್ತದೆ ಎಂದು ಇಷ್ಟು ದಿನ ನಾನು ಮೌನವಾಗಿದ್ದೆ. ಬಿಜೆಪಿ ಜೊತೆ ಚಕ್ಕಂದ ಮಾಡಲು ಹೊಂದಾಣಿಕೆ ಮಾಡಿಲ್ಲ ಎಂದರು. ಕಾಂಗ್ರೆಸ್‌ನವರು ಒಬ್ಬರೇ ಹೋರಾಟ ಮಾಡುವವರಾ?. ಬಿಜೆಪಿಯ ಸರ್ಕಾರದ ಪಾಪದ ಕೊಡ ತುಂಬಿದ ಕಾರಣ ನಾನು ಹೋರಾಟ ಮಾಡಲು ಮುಂದಾಗಿದ್ದೇನೆ.

ಬಿಜೆಪಿಯಿಂದ ಒಂದು ಹೆಜ್ಜೆ ಮುಂದೆ ಹೋಗಿ ನಿಷ್ಠೆಯಿಂದ ನಮ್ಮ‌‌ ಕುಟುಂಬ ಧರ್ಮ ಆಚರಣೆ ಮಾಡುತ್ತದೆ. ಬಡವರನ್ನು ಉಳಿಸಲು ಬಜರಂಗದಳ, ವಿಹೆಚ್​ಪಿ ಫೀಲ್ಡ್‌ಗೆ ಇಳಿಯಿರಿ. ನಾನು ನಿಮ್ಮ ಜೊತೆ ಬರುತ್ತೇನೆ. ಬೆಲೆ ಏರಿಕೆ ಆಗುತ್ತಿದೆ‌. ಅದರ ವಿರುದ್ಧ ಹೋರಾಟ ನಡೆಸಿ. ನಾನೂ ನಿಮಗೆ ಸಾಥ್ ಕೊಡುತ್ತೇನೆ. ಈ ರಾಷ್ಟ್ರ ಈ ಮಟ್ಟಕ್ಕೆ ಬರಲು ನಿಮ್ಮ ಬಳುವಳಿ ಕಾರಣವಾಗಿದೆ. ಅದಕ್ಕೆ ಪ್ರಾದೇಶಿಕ ಪಕ್ಷ ಹುಟ್ಟುಕೊಂಡಿದೆ.

ಹಿಜಾಬ್ ಗಲಾಟೆ ಬಂದಾಗ ವೋಟ್ ಬರಲ್ಲ‌ ಎಂದು ಮನೆಯಲ್ಲಿ ಕೂತಿರಿ. ಜೆಡಿಎಸ್ ಪಕ್ಷ ಬಿಜೆಪಿ ಬಿ ಟೀಂ ಎಂದು ಹೋದಲ್ಲೆಲ್ಲಾ ಹೇಳುತ್ತಿದ್ದಿರಿ ಸಿದ್ದರಾಮಯ್ಯನವರೇ. ಈಗ ಏಕೆ ಸುಮ್ಮನಿದ್ದೀರಿ. ಇದು ನಿಮ್ಮ ವೋಟ್ ಬ್ಯಾಂಕ್. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ಟೀಕಿಸಿದರು.

ನಾವು ರಾಜಕೀಯ ಕಲ್ಲು ಹೊಡೆಯುತ್ತೇವೆ : ದೇಶದ ಜನರ ಜೀವನ ಗಾಳಿಪಟ ಮಾಡಬೇಡಿ. ಅಧಿಕಾರ ಹಿಡಿಯಲು ಮಾಡಬಾರದ ಹೇಸಿಗೆ ಕೆಲಸ ಮಾಡಿರುವುದು ಎಲ್ಲರಿಗೂ ಗೊತ್ತು. ನೀವು ಗಾಜಿನ‌ ಮನೆಯಲ್ಲಿರುವವರು, ನಾವು ರಸ್ತೆಯಲ್ಲಿರುವವರು. ನಾವು ರಾಜಕೀಯ ಕಲ್ಲು ಎಸೆಯುತ್ತೇವೆ. ನಮ್ಮ ರೈತರ ಬದುಕನ್ನು ಹಾಳು ಮಾಡಬೇಡಿ ಎಂದರು. ಮಸೀದಿಯಲ್ಲಿ ಆಜಾನ್‌ಗೆ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಇಷ್ಟು ವರ್ಷದಿಂದ ಅಜಾನ್ ಬರುತ್ತಿದೆಯಲ್ಲ. 75 ವರ್ಷದಿಂದ ಮಸೀದಿಯಲ್ಲಿ ಆಜಾನ್ ಮಾಡಲಾಗುತ್ತದೆ. ಇಷ್ಟು ದಿನ ಏಕೆ ಸುಮ್ಮನಿದ್ದೀರಿ? ಎಂದು ಪ್ರಶ್ನಿಸಿದರು.

ಆರ್​ಎಸ್​​ಎಸ್​ ರಿಮೋಟ್ ಕಂಟ್ರೋಲ್ ಸರ್ಕಾರ : ಸಿಎಂ ಬೊಮ್ಮಾಯಿ ಯಾವುದಕ್ಕೂ ಮಾತನಾಡುತ್ತಿಲ್ಲ. ಮೌನವಾಗಿದ್ದಾರೆ. ಸ್ವತಂತ್ರವಾಗಿ ಈ ಸರ್ಕಾರ ನಡೆಯುತ್ತಲೇ ಇಲ್ಲ. ಆರ್​ಎಸ್​ಎಸ್​ ರಿಮೋಟ್ ಅಲ್ಲಾಂದ್ರೆ ಬೇರೆ ಏನಿದೆ?. ಸಂಘ ಪರಿವಾರವನ್ನು ಮೆಚ್ಚಿಸಲು ನಡೆಸುತ್ತಿರುವ ಸರ್ಕಾರ ಇದು ಎಂದು ಕಿಡಿಕಾರಿದರು.

ಕಾಂಗ್ರೆಸ್ ಪಕ್ಷದವರು ಮುಸ್ಲಿಂ ಪರವಾಗಿದ್ದೇವೆ ಎಂದು ಹೇಳಿ, ಸ್ಲೋ ಪಾಯಿಸನ್ ಹಾಕುವ ಕೆಲಸ ಮಾಡುತ್ತಿದೆ. ಕುವೆಂಪು ಅವರ ಶಾಂತಿಯ ತೋಟ ಉಳಿಯಬೇಕು. ನಮ್ಮ ಪಕ್ಷಕ್ಕೆ ಕಾರ್ಯಕರ್ತರ ಶಕ್ತಿ ಇದೆ. 2023ರಲ್ಲಿ ಅಚ್ಚರಿಯ ರೀತಿಯಲ್ಲಿ ಜೆಡಿಎಸ್ ಸಾಧನೆ ಮಾಡಲಿದೆ. ಈ‌ ಬಾರಿ ಜೆಡಿಎಸ್ 123 ರೋಡ್ ಮ್ಯಾಪ್ ಹಾಕಿದ್ದೇವೆ. ಜೆಡಿಎಸ್ ಪಕ್ಷಕ್ಕೆ 2023ರಲ್ಲಿ ಬಹುಮತ ಬರಲಿದೆ ಎಂದರು.

ಇನ್ನೊಬ್ಬ ಹೊರಟ್ಟಿ ಬರುತ್ತಾರೆ ಬಿಡಿ : ಹೊರಟ್ಟಿ ಬಿಜೆಪಿ ಸೇರ್ಪಡೆಯಾಗುವ ವಿಚಾರವಾಗಿ ‌ಪ್ರತಿಕ್ರಿಯಿಸಿದ ಅವರು, ಅವರು ಹೋಗ್ತೀವಿ ಅಂದಾಗ ನಾವೇಕೆ ಅವರನ್ನು ತಡೆಯುವುದು?. ಕೋನರೆಡ್ಡಿ, ಹೊರಟ್ಟಿ ಇದ್ದಾಗ ಮುಂಬೈ ಕರ್ನಾಟಕದಲ್ಲಿ ಏನಾಗಿತ್ತು?. ಇನ್ನೊಬ್ಬ ಹೊರಟ್ಟಿ ಬರುತ್ತಾರೆ ಎಂದು ಟಾಂಗ್ ನೀಡಿದರು.

ಓದಿ: ರಾಷ್ಟ್ರದ್ರೋಹಿಗಳಿಗೆ ಸಿದ್ದರಾಮಯ್ಯ-ಡಿಕೆಶಿ-ಹೆಚ್‌ಡಿಕೆ ಬೆಂಬಲ.. ಇದು ಸಂವಿಧಾನ, ಸಮಾಜಕ್ಕೆ ದ್ರೋಹ ಬಗೆದಂತೆ: ಈಶ್ವರಪ್ಪ

Last Updated : Apr 4, 2022, 5:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.