ETV Bharat / state

ನಗರದ ವಿವಿಧ ಭಾಗಗಳಲ್ಲಿ  ದಿನಸಿ ಕಿಟ್​ ವಿತರಿಸಿದ ಕಾಂಗ್ರೆಸ್ ನಾಯಕರು - ಕಾಂಗ್ರೆಸ್​ ನಾಯಕರಿಂದ ದಿನಸಿ ವಿತರಣೆ

ಬೆಂಗಳೂರಿನ ವಿವಿಧೆಡೆ ಇಂದು ಕಾಂಗ್ರೆಸ್​ ನಾಯಕರಾದ ಡಿಕೆಶಿ, ರಾಮಲಿಂಗಾರೆಡ್ಡಿ ನಿರ್ಗತಿಕರಿಗೆ, ಬಡವರಿಗೆ ದಿನಸಿ, ತರಕಾರಿ ವಿತರಿಸಿದರು.

Food kit distributed by kpcc president DKS
ಕಾಂಗ್ರೆಸ್ ನಾಯಕರಿಂದ ದಿನಸಿ ಕಿಟ್​ ವಿತರಣೆ
author img

By

Published : Apr 28, 2020, 11:47 PM IST

ಬೆಂಗಳೂರು: ನಗರದ ಪ್ರತ್ಯೇಕ ಕಡೆಗಳಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹಾಗೂ ಶಾಸಕ ರಾಮಲಿಂಗಾರೆಡ್ಡಿ ಅವರು ಆಹಾರ ಸಾಮಗ್ರಿ ಹಾಗೂ ಅಗತ್ಯ ವಸ್ತುಗಳನ್ನು ವಿತರಿಸಿದರು.

Food kit distributed by kpcc president
ಕಾಂಗ್ರೆಸ್ ನಾಯಕರಿಂದ ದಿನಸಿ ಕಿಟ್​ ವಿತರಣೆ

ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ವಿಕಲಚೇತನ ವ್ಯಕ್ತಿಗೆ ಹಣ ಸಹಾಯ ಮಾಡಿದರು.

ನಗರದ ಜೆ.ಸಿ ರಸ್ತೆ, ಜಯನಗರದ ಗುರಪ್ಪನಪಾಳ್ಯದ ಬಡ ಜನರ ಪ್ರದೇಶಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಭೇಟಿ ನೀಡಿದರು. ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಆಸಿಫ್ ಹಾಗೂ ಬೆಂಗಳೂರು ದಕ್ಷಿಣ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೃಷ್ಣಪ್ಪ ಅವರು ಬಡವರಿಗೆ ಆಹಾರ ಪದಾರ್ಥ ವಿತರಣಾ ಕಾರ್ಯದಲ್ಲಿ ಭಾಗಿಯಾದರು.

Food kit distributed by kpcc president
ಕಾಂಗ್ರೆಸ್ ನಾಯಕರಿಂದ ದಿನಸಿ ಕಿಟ್​ ವಿತರಣೆ

ರಾಮಲಿಂಗಾರೆಡ್ಡಿ ವಿತರಣೆ: ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ಅಡುಗೋಡಿ 147ನೇ ವಾರ್ಡ್​ನ 5 ಸಾವಿರಕ್ಕೂ ಹೆಚ್ಚು ಜನರಿಗೆ ಆಹಾರದ ಕಿಟ್​ಗಳನ್ನು ಶಾಸಕ ರಾಮಲಿಂಗಾರೆಡ್ಡಿ ಇಂದು ವಿತರಿಸಿದರು.

ನಿತ್ಯ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಸಾವಿರಾರು ಜನರಿಗೆ ಬೆಳಗ್ಗೆ ಮತ್ತು ಸಂಜೆ ಉಪಹಾರ ವಿತರಿಸುತ್ತಿರುವ ರಾಮಲಿಂಗ ರೆಡ್ಡಿ ಇಂದು ದೊಡ್ಡ ಮಟ್ಟದಲ್ಲಿ ದಿನಸಿಗಳನ್ನು ನೀಡಿದರು.

ಬೆಂಗಳೂರು: ನಗರದ ಪ್ರತ್ಯೇಕ ಕಡೆಗಳಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹಾಗೂ ಶಾಸಕ ರಾಮಲಿಂಗಾರೆಡ್ಡಿ ಅವರು ಆಹಾರ ಸಾಮಗ್ರಿ ಹಾಗೂ ಅಗತ್ಯ ವಸ್ತುಗಳನ್ನು ವಿತರಿಸಿದರು.

Food kit distributed by kpcc president
ಕಾಂಗ್ರೆಸ್ ನಾಯಕರಿಂದ ದಿನಸಿ ಕಿಟ್​ ವಿತರಣೆ

ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ವಿಕಲಚೇತನ ವ್ಯಕ್ತಿಗೆ ಹಣ ಸಹಾಯ ಮಾಡಿದರು.

ನಗರದ ಜೆ.ಸಿ ರಸ್ತೆ, ಜಯನಗರದ ಗುರಪ್ಪನಪಾಳ್ಯದ ಬಡ ಜನರ ಪ್ರದೇಶಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಭೇಟಿ ನೀಡಿದರು. ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಆಸಿಫ್ ಹಾಗೂ ಬೆಂಗಳೂರು ದಕ್ಷಿಣ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೃಷ್ಣಪ್ಪ ಅವರು ಬಡವರಿಗೆ ಆಹಾರ ಪದಾರ್ಥ ವಿತರಣಾ ಕಾರ್ಯದಲ್ಲಿ ಭಾಗಿಯಾದರು.

Food kit distributed by kpcc president
ಕಾಂಗ್ರೆಸ್ ನಾಯಕರಿಂದ ದಿನಸಿ ಕಿಟ್​ ವಿತರಣೆ

ರಾಮಲಿಂಗಾರೆಡ್ಡಿ ವಿತರಣೆ: ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ಅಡುಗೋಡಿ 147ನೇ ವಾರ್ಡ್​ನ 5 ಸಾವಿರಕ್ಕೂ ಹೆಚ್ಚು ಜನರಿಗೆ ಆಹಾರದ ಕಿಟ್​ಗಳನ್ನು ಶಾಸಕ ರಾಮಲಿಂಗಾರೆಡ್ಡಿ ಇಂದು ವಿತರಿಸಿದರು.

ನಿತ್ಯ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಸಾವಿರಾರು ಜನರಿಗೆ ಬೆಳಗ್ಗೆ ಮತ್ತು ಸಂಜೆ ಉಪಹಾರ ವಿತರಿಸುತ್ತಿರುವ ರಾಮಲಿಂಗ ರೆಡ್ಡಿ ಇಂದು ದೊಡ್ಡ ಮಟ್ಟದಲ್ಲಿ ದಿನಸಿಗಳನ್ನು ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.