ETV Bharat / state

2ನೇ ದಿನಕ್ಕೆ ಕಾಲಿಟ್ಟ ರೈತರ ಧರಣಿ: ಫ್ರೀಡಂ ಪಾರ್ಕ್​​​ನಲ್ಲಿ ರಾತ್ರಿ ಕಳೆದ ಅನ್ನದಾತರು

author img

By

Published : Sep 22, 2020, 12:11 PM IST

ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿರುವ ಕಾಯ್ದೆಗಳ ವಿರುದ್ಧ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದು, ರಾಜ್ಯದಲ್ಲಿ ರೈತರ ಹೋರಾಟ ಉಗ್ರ ಸ್ವರೂಪ ತಳೆಯುವ ಸೂಚನೆ ದೊರಕಿದೆ. ಈ ನಡುವೆ ನಿನ್ನೆಯಿಂದ ಪ್ರೀಡಂ ಪಾರ್ಕ್​​​​​ನಲ್ಲಿ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದು, ರಾತ್ರಿಯೆಲ್ಲಾ ಅಲ್ಲಿಯೇ ಕಳೆದಿದ್ದಾರೆ.

farmers spends their night in   Freedom park
ಫ್ರೀಡಂಪಾರ್ಕ್​​​ನಲ್ಲಿ ರಾತ್ರಿ ಕಳೆದ ಅನ್ನದಾತರು

ಬೆಂಗಳೂರು: ನಿನ್ನೆಯಿಂದ ಪ್ರಾರಂಭವಾದ ರೈತರ ಹೋರಾಟ ಇಂದೂ ಕೂಡ ಮುಂದುವರೆದಿದೆ. ಭೂಸುಧಾರಣಾ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ವಿದ್ಯುತ್ ಕಾಯ್ದೆ ತಿದ್ದುಪಡಿಯ ವಿರುದ್ಧ ರೈತರು ಬೀದಿಗಿಳಿದು ಹೋರಾಟ ಆರಂಭಿಸಿದ್ದಾರೆ.

‘ಐಕ್ಯ ಹೋರಾಟ’ ಹೆಸರಿನ ಪ್ರತಿಭಟನೆಯನ್ನು ಸೆ. 30ರ ವರೆಗೂ ಮುಂದುವರೆಸಲು ತೀರ್ಮಾನಿಸಲಾಗಿದ್ದು, ನಿನ್ನೆ ಹೋರಾಟಕ್ಕೆ ಆಗಮಿಸಿದ್ದ ರೈತರು ಫ್ರೀಡಂ ಪಾರ್ಕ್​​​ನಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದಾರೆ.

ಈ ಪ್ರತಿಭಟನೆಗೆ ರಾಷ್ಟ್ರೀಯ ನಾಯಕರ ಬೆಂಬಲ ಸಿಕ್ಕಿದ್ದು, ನಿನ್ನೆ ಆಮ್ ಆದ್ಮಿ ಪಕ್ಷದ ಮಾಜಿ ಸದಸ್ಯ ಯೋಗೇಂದ್ರ ಯಾದವ್ ಸೇರಿದಂತೆ ಹಲವು ಗಣ್ಯರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಇದಲ್ಲದೆ ಸೆ.25ಕ್ಕೆ ವಿವಿಧ ರೈತ ಸಂಘಗಳು ಭಾರತ್​​​​​ ಬಂದ್​​ಗೆ ಕರೆ ಕೊಟ್ಟಿದ್ದು, ಇಂದು ರಾಜ್ಯದಲ್ಲಿ ಸಾಂಕೇತಿಕವಾಗಿ ಜಿಲ್ಲಾ ಕೇಂದ್ರಗಳ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ಬೆಂಗಳೂರು: ನಿನ್ನೆಯಿಂದ ಪ್ರಾರಂಭವಾದ ರೈತರ ಹೋರಾಟ ಇಂದೂ ಕೂಡ ಮುಂದುವರೆದಿದೆ. ಭೂಸುಧಾರಣಾ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ವಿದ್ಯುತ್ ಕಾಯ್ದೆ ತಿದ್ದುಪಡಿಯ ವಿರುದ್ಧ ರೈತರು ಬೀದಿಗಿಳಿದು ಹೋರಾಟ ಆರಂಭಿಸಿದ್ದಾರೆ.

‘ಐಕ್ಯ ಹೋರಾಟ’ ಹೆಸರಿನ ಪ್ರತಿಭಟನೆಯನ್ನು ಸೆ. 30ರ ವರೆಗೂ ಮುಂದುವರೆಸಲು ತೀರ್ಮಾನಿಸಲಾಗಿದ್ದು, ನಿನ್ನೆ ಹೋರಾಟಕ್ಕೆ ಆಗಮಿಸಿದ್ದ ರೈತರು ಫ್ರೀಡಂ ಪಾರ್ಕ್​​​ನಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದಾರೆ.

ಈ ಪ್ರತಿಭಟನೆಗೆ ರಾಷ್ಟ್ರೀಯ ನಾಯಕರ ಬೆಂಬಲ ಸಿಕ್ಕಿದ್ದು, ನಿನ್ನೆ ಆಮ್ ಆದ್ಮಿ ಪಕ್ಷದ ಮಾಜಿ ಸದಸ್ಯ ಯೋಗೇಂದ್ರ ಯಾದವ್ ಸೇರಿದಂತೆ ಹಲವು ಗಣ್ಯರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಇದಲ್ಲದೆ ಸೆ.25ಕ್ಕೆ ವಿವಿಧ ರೈತ ಸಂಘಗಳು ಭಾರತ್​​​​​ ಬಂದ್​​ಗೆ ಕರೆ ಕೊಟ್ಟಿದ್ದು, ಇಂದು ರಾಜ್ಯದಲ್ಲಿ ಸಾಂಕೇತಿಕವಾಗಿ ಜಿಲ್ಲಾ ಕೇಂದ್ರಗಳ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.