ETV Bharat / state

ಕೆಲಸದಿಂದ ಕಿತ್ತು ಹಾಕಿದ ರೆಸ್ಟೋರೆಂಟ್​ನಲ್ಲೇ ಕಳ್ಳತನ.. ಸಿಸಿಟಿವಿಯಲ್ಲಿ ಖದೀಮ ಸೆರೆ

author img

By

Published : Sep 3, 2021, 3:13 PM IST

ಕೈಯಲ್ಲಿ ಚಾಕು ಹಿಡಿದು ಬಂದು ಕ್ಯಾಶ್ ಬಾಕ್ಸ್​ನಲ್ಲಿದ್ದ 50 ಸಾವಿರ ನಗದು ಎಗರಿಸಿದ್ದಾನೆ. ಆರೋಪಿಯ ಸಂಪೂರ್ಣ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ರೆಸ್ಟೋರೆಂಟ್ ಮಾಲೀಕರು ಪುಟ್ಟೆನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ..

employee-who-robbed-the-restaurant-which-he-used-to-work
ಕೆಲಸದಿಂದ ಕಿತ್ತುಹಾಕಿದ ರೆಸ್ಟೋರೆಂಟ್​ನಲ್ಲೇ ಕಳ್ಳತನ

ಬೆಂಗಳೂರು : ಕೆಲಸದಿಂದ ವಜಾ ಮಾಡಿದಕ್ಕೆ ಅಸಮಾಧಾನಗೊಂಡು ಸಿಬ್ಬಂದಿ ಅದೇ ರೆಸ್ಟೋರೆಂಟ್​​ನಲ್ಲಿ ಕಳ್ಳತನ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ನಾಗಲ್ಯಾಂಡ್ ಮೂಲದ ಆಟೋನಾಲ ಎಂಬಾತ ಜರಗನಹಳ್ಳಿಯಲ್ಲಿರುವ ಕೆಫೆರೋಶ್ ರೆಸ್ಟೋರೆಂಟ್​​ನಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ.

ಮದ್ಯ ಸೇವಿಸುತ್ತಿದ್ದ ಈತ ರೆಸ್ಟೋರೆಂಟ್​​​ಗೆ ಬರುವ ಗ್ರಾಹಕರ ಜೊತೆ ಅನುಚಿತ ವರ್ತನೆ ತೋರುತ್ತಿದ್ದ. ಈತನ ದುರ್ವತನೆ ಕಂಡು ಕೆಲಸದಿಂದ ತೆಗೆದುಹಾಕಲಾಗಿತ್ತು. ಕಳೆದ ಆಗಸ್ಟ್ 27ರಂದು ಕೆಲಸದಿಂದ ತೆಗೆದು ಬಾಕಿ ವೇತನ ಕೊಟ್ಟು ಕಳುಹಿಸಲಾಗಿತ್ತು.

ಕೆಲಸದಿಂದ ಕಿತ್ತು ಹಾಕಿದ ರೆಸ್ಟೋರೆಂಟ್​ನಲ್ಲೇ ಕಳ್ಳತನ

ಆದರೆ, ಇದರಿಂದ ಕೋಪಗೊಂಡಿದ್ದ ಆಟೋನಾಲ ಎರಡು ದಿನಗಳ ನಂತರ ಕಳೆದ ಆಗಸ್ಟ್ 30ರ ರಾತ್ರಿ ಕೆಫೆರೋಶ್​ಗೆ ಎಂಟ್ರಿಕೊಟ್ಟಿದ್ದ. ಕೆಫೆಯ ಹಿಂಬದಿ ಪ್ಯಾಸೇಜ್​​ನಿಂದ ಒಳ ನುಗ್ಗಿದ್ದಾನೆ‌.

ಕೈಯಲ್ಲಿ ಚಾಕು ಹಿಡಿದು ಬಂದು ಕ್ಯಾಶ್ ಬಾಕ್ಸ್​ನಲ್ಲಿದ್ದ 50 ಸಾವಿರ ನಗದು ಎಗರಿಸಿದ್ದಾನೆ. ಆರೋಪಿಯ ಸಂಪೂರ್ಣ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ರೆಸ್ಟೋರೆಂಟ್ ಮಾಲೀಕರು ಪುಟ್ಟೆನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಓದಿ: VIDEO; ಹಾಡಹಗಲೇ ಬಸ್ ನಿಲ್ದಾಣದಲ್ಲಿ ಚಿನ್ನದ ಸರ ಎಗರಿಸಿದ ಖದೀಮ

ಬೆಂಗಳೂರು : ಕೆಲಸದಿಂದ ವಜಾ ಮಾಡಿದಕ್ಕೆ ಅಸಮಾಧಾನಗೊಂಡು ಸಿಬ್ಬಂದಿ ಅದೇ ರೆಸ್ಟೋರೆಂಟ್​​ನಲ್ಲಿ ಕಳ್ಳತನ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ನಾಗಲ್ಯಾಂಡ್ ಮೂಲದ ಆಟೋನಾಲ ಎಂಬಾತ ಜರಗನಹಳ್ಳಿಯಲ್ಲಿರುವ ಕೆಫೆರೋಶ್ ರೆಸ್ಟೋರೆಂಟ್​​ನಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ.

ಮದ್ಯ ಸೇವಿಸುತ್ತಿದ್ದ ಈತ ರೆಸ್ಟೋರೆಂಟ್​​​ಗೆ ಬರುವ ಗ್ರಾಹಕರ ಜೊತೆ ಅನುಚಿತ ವರ್ತನೆ ತೋರುತ್ತಿದ್ದ. ಈತನ ದುರ್ವತನೆ ಕಂಡು ಕೆಲಸದಿಂದ ತೆಗೆದುಹಾಕಲಾಗಿತ್ತು. ಕಳೆದ ಆಗಸ್ಟ್ 27ರಂದು ಕೆಲಸದಿಂದ ತೆಗೆದು ಬಾಕಿ ವೇತನ ಕೊಟ್ಟು ಕಳುಹಿಸಲಾಗಿತ್ತು.

ಕೆಲಸದಿಂದ ಕಿತ್ತು ಹಾಕಿದ ರೆಸ್ಟೋರೆಂಟ್​ನಲ್ಲೇ ಕಳ್ಳತನ

ಆದರೆ, ಇದರಿಂದ ಕೋಪಗೊಂಡಿದ್ದ ಆಟೋನಾಲ ಎರಡು ದಿನಗಳ ನಂತರ ಕಳೆದ ಆಗಸ್ಟ್ 30ರ ರಾತ್ರಿ ಕೆಫೆರೋಶ್​ಗೆ ಎಂಟ್ರಿಕೊಟ್ಟಿದ್ದ. ಕೆಫೆಯ ಹಿಂಬದಿ ಪ್ಯಾಸೇಜ್​​ನಿಂದ ಒಳ ನುಗ್ಗಿದ್ದಾನೆ‌.

ಕೈಯಲ್ಲಿ ಚಾಕು ಹಿಡಿದು ಬಂದು ಕ್ಯಾಶ್ ಬಾಕ್ಸ್​ನಲ್ಲಿದ್ದ 50 ಸಾವಿರ ನಗದು ಎಗರಿಸಿದ್ದಾನೆ. ಆರೋಪಿಯ ಸಂಪೂರ್ಣ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ರೆಸ್ಟೋರೆಂಟ್ ಮಾಲೀಕರು ಪುಟ್ಟೆನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಓದಿ: VIDEO; ಹಾಡಹಗಲೇ ಬಸ್ ನಿಲ್ದಾಣದಲ್ಲಿ ಚಿನ್ನದ ಸರ ಎಗರಿಸಿದ ಖದೀಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.