ETV Bharat / state

ಕನಕಪುರದಲ್ಲೇ ಕಲ್ಲೊ ಪಲ್ಲೊ ಒಡ್ಕೊಂಡಿರ್ತಿನಿ, ದೆಹಲಿ ರಾಜಕೀಯಕ್ಕೆ ಮಾತ್ರ ಹೋಗಲ್ಲ: ಡಿಕೆಶಿ - DKS Reaction about KPCC President Post

ಕನಕಪುರದಲ್ಲಿ ಕಲ್ಲು ಹೊಡೆಯುತ್ತೇನೆ. ರೇಷ್ಮೆ ಬೆಳೆಯುತ್ತೇನೆ, ದಿಲ್ಲಿ ರಾಜಕೀಯಕ್ಕೆ ಮಾತ್ರ ಹೋಗಲ್ಲ. ರಾಜ್ಯದಲ್ಲಷ್ಟೇ ರಾಜಕಾರಣ ಮಾಡುತ್ತೇನೆ ಎನ್ನುವ ಮೂಲಕ ಕೆಪಿಸಿಸಿ ಅಧ್ಯಕ್ಷ ಹುದ್ದೆ ಕೊಟ್ರೆ ನಿಭಾಯಿಸುವುದಾಗಿ ಮಾಜಿ ಸಚಿವ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

DKS Reaction about KPCC President Post
ಡಿ ಕೆ ಶಿವಕುಮಾರ್, ಮಾಜಿ ಸಚಿವ
author img

By

Published : Jan 9, 2020, 3:32 PM IST

ಬೆಂಗಳೂರು: ಕನಕಪುರದಲ್ಲಿ ಕಲ್ಲು ಪಲ್ಲೊ ಒಡ್ಕೊಂಡು ಇರ್ತಿನಿ. ಆದ್ರೆ ದಿಲ್ಲಿ ರಾಜಕೀಯಕ್ಕೆ ಮಾತ್ರ ಹೋಗಲ್ಲ ಎಂದು ಮಾಜಿ ಸಚಿವ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಡಿ ಕೆ ಶಿವಕುಮಾರ್, ಮಾಜಿ ಸಚಿವ

ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸದ್ಯ ಕನಕಪುರದಲ್ಲಿ ಕಲ್ಲು ಒಡೆಯುತ್ತೇನೆ. ರೇಷ್ಮೆ ಬೆಳೆಯುತ್ತೇನೆ. ರಾಜ್ಯದಲ್ಲಷ್ಟೇ ರಾಜಕಾರಣ ಮಾಡುತ್ತೇನೆ ಎನ್ನುವ ಮೂಲಕ ಕೆಪಿಸಿಸಿ ಅಧ್ಯಕ್ಷ ಹುದ್ದೆ ಕೊಟ್ರೆ ನಿಭಾಯಿಸುವುದಾಗಿ ಹೇಳಿದ್ರು.

ನೋಟಿಸ್ ಬಂದಿಲ್ಲ: ನನಗೆ ಇಡಿ ನೋಟಿಸ್ ಬಂದಿಲ್ಲ. ಈ ಬಗ್ಗೆ ಅಪಪ್ರಚಾರ ನಡೆಯುತ್ತಿದೆ ಅಷ್ಟೇ. ಡಿನೋಟಿಫಿಕೇಷನ್​ ಪ್ರಕರಣವನ್ನು ಸುಪ್ರೀಂಕೋರ್ಟ್ ಈಗಾಗಲೇ ವಜಾಗೊಳಿಸಿದೆ. ಇದಕ್ಕೆ ಸಂಬಂಧಿಸಿದಂತೆ ಸಿಬಿಐನಿಂದಲೂ ಯಾವುದೇ ನೋಟಿಸ್​ ಬಂದಿಲ್ಲ. ಒಂದು ಸಿಬಿಐ ತನಿಖೆಗೆ ಬಂದ್ರೆ ನನ್ನ ಮನೆ ಬಾಗಿಲು ತರೆದೇ ಇರುತ್ತೆ ಎಂದು ಮಾಜಿ ಸಚಿವ ಡಿ ಕೆ ಶಿವಕುಮಾರ್​ ಹೇಳಿದ್ರು.

ಬೆಂಗಳೂರು: ಕನಕಪುರದಲ್ಲಿ ಕಲ್ಲು ಪಲ್ಲೊ ಒಡ್ಕೊಂಡು ಇರ್ತಿನಿ. ಆದ್ರೆ ದಿಲ್ಲಿ ರಾಜಕೀಯಕ್ಕೆ ಮಾತ್ರ ಹೋಗಲ್ಲ ಎಂದು ಮಾಜಿ ಸಚಿವ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಡಿ ಕೆ ಶಿವಕುಮಾರ್, ಮಾಜಿ ಸಚಿವ

ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸದ್ಯ ಕನಕಪುರದಲ್ಲಿ ಕಲ್ಲು ಒಡೆಯುತ್ತೇನೆ. ರೇಷ್ಮೆ ಬೆಳೆಯುತ್ತೇನೆ. ರಾಜ್ಯದಲ್ಲಷ್ಟೇ ರಾಜಕಾರಣ ಮಾಡುತ್ತೇನೆ ಎನ್ನುವ ಮೂಲಕ ಕೆಪಿಸಿಸಿ ಅಧ್ಯಕ್ಷ ಹುದ್ದೆ ಕೊಟ್ರೆ ನಿಭಾಯಿಸುವುದಾಗಿ ಹೇಳಿದ್ರು.

ನೋಟಿಸ್ ಬಂದಿಲ್ಲ: ನನಗೆ ಇಡಿ ನೋಟಿಸ್ ಬಂದಿಲ್ಲ. ಈ ಬಗ್ಗೆ ಅಪಪ್ರಚಾರ ನಡೆಯುತ್ತಿದೆ ಅಷ್ಟೇ. ಡಿನೋಟಿಫಿಕೇಷನ್​ ಪ್ರಕರಣವನ್ನು ಸುಪ್ರೀಂಕೋರ್ಟ್ ಈಗಾಗಲೇ ವಜಾಗೊಳಿಸಿದೆ. ಇದಕ್ಕೆ ಸಂಬಂಧಿಸಿದಂತೆ ಸಿಬಿಐನಿಂದಲೂ ಯಾವುದೇ ನೋಟಿಸ್​ ಬಂದಿಲ್ಲ. ಒಂದು ಸಿಬಿಐ ತನಿಖೆಗೆ ಬಂದ್ರೆ ನನ್ನ ಮನೆ ಬಾಗಿಲು ತರೆದೇ ಇರುತ್ತೆ ಎಂದು ಮಾಜಿ ಸಚಿವ ಡಿ ಕೆ ಶಿವಕುಮಾರ್​ ಹೇಳಿದ್ರು.

Intro:newsBody:ಕನಕಪುರದಲ್ಲಿ ಕಲ್ಲು ಒಡೆಯುತ್ತೇನೆ. ದೆಹಲಿ ಪಾಲಿಟಿಕ್ಸ್ ಗೆ ಹೋಗಲ್ಲ: ಡಿಕೆಶಿ

ಬೆಂಗಳೂರು: ಕನಕಪುರದಲ್ಲಿ ಕಲ್ಲು ಬೇಕಾದರೂ ಒಡೆಯುತ್ತೇನೆ ದಿಲ್ಲಿ ರಾಜಕೀಯಕ್ಕೆ ಹೋಗಲ್ಲ ಮಾಜಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ತಮ್ಮ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ನಾನು ಸದ್ಯ ಕನಕಪುರದಲ್ಲಿ ಕಲ್ಲು ಒಡೆಯುತ್ತೇನೆ. ರೇಷ್ಮೆ ಬೆಳೆಯುತ್ತೇನೆ. ರಾಜ್ಯದಲ್ಲಿ ರಾಜಕಾರಣ ಮಾಡುತ್ತೇನೆ ಅಂತ ಕೆಪಿಸಿಸಿ ಅಧ್ಯಕ್ಷ ಹುದ್ದೆ ಕೊಟ್ರೆ ಮಾತ್ರ ನಿಭಾಯಿಸುತ್ತೇನೆಂದ ಡಿಕೆಶಿ ಕೆಪಿಸಿಸಿ ಅಧ್ಯಕ್ಷರ ನೇಮಕದ ಬಗ್ಗೆ ಸಂಬಂಧಪಟ್ಟವರನ್ನ ಕೇಳಿ. ಎಐಸಿಸಿ ಅಧ್ಯಕ್ಷರು ಅಂಗಡಿಯಲ್ಲಿ ಸಿಗುವ ವಸ್ತು ಅಲ್ಲ. ನಾನು ಅಧ್ಯಕ್ಷರನ್ನ ಭೇಟಿ ಮಾಡಿಲ್ಲ. ಕೆಪಿಸಿಸಿ ಅಧ್ಯಕ್ಷ ವಿಚಾರ ಮಾತನಾಡಲ್ಲ. ನನಗೇನು ಅತುರ ಇಲ್ಲ ಎಂದು ಹೇಳಿದರು.
ನೋಟಿಸ್ ಬಂದಿಲ್ಲ
ನನಗೆ ಇಡಿ ನೋಟೀಸ್ ಬಂದಿಲ್ಲ. ಸುಳ್ಳು ಸುದ್ದಿ ಮಾಡಿದ್ದೀರಾ. ನೀವೇ ಪ್ರಶ್ನೆ ಮಾಡಿಕೊಳ್ಳಿ. ಇಡಿ ಅವರು ನಾವು ನೋಟೀಸ್ ಕೊಟ್ಟಿಲ್ಲ ಅಂತ ನನ್ನನ್ನ ಕೇಳಿದ್ದಾರೆ. ತಪ್ಪು ಸುದ್ದಿ ಹಾಕಬೇಡಿ. ಚೆಕ್ ಮಾಡಿ ಸುದ್ದಿ ಕೊಡಿ. ಸಿಬಿಐ ಮೇಲೆ ನನಗೆ ನಂಬಿಕೆ ಇದೆ. ಸಿಬಿಐ ತನ್ನ ಗೌರವ ಉಳಿಸಿಕೊಂಡಿದೆ. ಯಾವುದೇ ನೋಟೀಸ್ ನನಗೆ ಕೊಟ್ಟಿಲ್ಲ. ಕೇಂದ್ರ ಮತ್ತು ಯಡಿಯೂರಪ್ಪ ಸಿಬಿಐ ಅವರಿಗೆ ನನ್ನ ಮನೆ ಸುತ್ತಲೂ ಇರುವಂತೆ ಹೇಳಿದ್ದಾರೆ. ರಾಜ್ಯದಲ್ಲಿ ಲೋಕಾಯುಕ್ತ ಎಸಿಬಿ ಇದ್ರೂ ಸಿಎಂ ಸಿಬಿಐಗೆ ಪತ್ರ ಬರೆದಿದ್ದಾರೆ. ಎಲ್ಲವನ್ನೂ ಆರ್ ಟಿಐ ಅಡಿ ದಾಖಲೆ ತೆಗೆದುಕೊಂಡಿದ್ದೇನೆ. ಮಾಧ್ಯಮಗಳ ಮುಂದೆ ಏನು ಹೇಳಲ್ಲ. ದಾಖಲೆಗೆ ಹೋಗುವ ಕಡೆ ಎಲ್ಲವನ್ನೂ ಬಹಿರಂಗ ಮಾಡ್ತೀನಿ ಎಂದರು.
ಡಿಕೆಶಿ ಗೆ ಸಂಕಷ್ಟ ಅಂತ ಸುದ್ದಿ ಹಾಕ್ತೀರಾ. ನಾನು ಯಾವುದೇ ಸರ್ಕಾರದ ಜಮೀನು ಡಿನೋಟಿಫಿಕೇಷನ್ ಮಾಡಿಲ್ಲ. ಬೆನ್ನಿಗಾನಹಳ್ಳಿ ಡಿನೋಟಿಫಿಕೇಷನ್ ಕೇಸ್ ಈಗಾಗಲೇ ವಾಪಸ್ ಪಡೆದಿದ್ದಾರೆ. ಯಾರು ಎಷ್ಟು ಸರ್ಕಾರ ಭೂಮಿ ಡಿನೋಟಿಫಿಕೇಷನ್ ಮಾಡಿದ್ದಾರೆ ಅನ್ನೋ ಮಾಹಿತಿ ದಾಖಲೆ ಸಮೇತ ನನ್ನ ಬಳಿ ಇದೆ ಎಂದಾಗ, ಹೆಸರು ಹೇಳಿ ಅಂತ ಮಾಧ್ಯಮಗಳ ಪ್ರಶ್ನೆ ಗೆ, ನಾನೇಕೆ ಹೆಸರು ಹೇಳಲಿ..ಕಾಲ ಬಂದಾಗ ಎಲ್ಲವನ್ನೂ ದಾಖಲೆ ಸಮೇತ ಬಿಚ್ಚಿಡ್ತೀನಿ ಎಂದರು.
Conclusion:news

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.