ETV Bharat / state

ಆರೋಗ್ಯ ಹಸ್ತ ಯೋಜನೆ ಜಾರಿಗೆ ಸಮನ್ವಯಕಾರರ ಜೊತೆ ಡಿಕೆ ಶಿವಕುಮಾರ್ ಸಂವಾದ

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಜಿಲ್ಲಾ ಸಮನ್ವಯಕಾರರ ಜೊತೆ ವಿಡಿಯೋ ಸಂವಾದ ನಡೆಸಿದ್ದಾರೆ. ಈ ವೇಳೆ ಸರ್ಕಾರದ ವೈಫಲ್ಯವನ್ನು ಜನರ ಗಮನಕ್ಕೆ ತರುವ ಕೆಲಸ ಮಾಡಿ. ಕಾಂಗ್ರೆಸ್​ ಜಾರಿಗೆ ತಂದಿರುವ ಆರೋಗ್ಯ ಹಸ್ತ ಯೋಜನೆ ವ್ಯವಸ್ಥಿತ ರೀತಿಯಲ್ಲಿ ಜಾರಿಗೆ ತರುವಂತೆ ಸೂಚಿಸಿದ್ದಾರೆ.

author img

By

Published : Aug 3, 2020, 7:24 PM IST

DK Sivakumar Discussion about Arogya hasta yojana implementation with coordinators
ಆರೋಗ್ಯ ಹಸ್ತ ಯೋಜನೆ ಜಾರಿಗೆ ಸಮನ್ವಯಕಾರರ ಜೊತೆ ಡಿಕೆ ಶಿವಕುಮಾರ್ ಸಂವಾದ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಪಕ್ಷದ ಕಚೇರಿಯಲ್ಲಿ ಆರೋಗ್ಯ ಹಸ್ತ ಯೋಜನೆ ಕುರಿತು ಎಲ್ಲ ಜಿಲ್ಲೆಗಳ ಸಮನ್ವಯಕಾರರ ಜತೆ ವಿಡಿಯೋ ಸಂವಾದ ನಡೆಸಿದರು. ರಾಜ್ಯದಲ್ಲೆಡೆ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಇದರ ನಿಯಂತ್ರಣಕ್ಕೆ ಕಾಂಗ್ರೆಸ್ ಪಕ್ಷ ಆರೋಗ್ಯ ಹಸ್ತ ಆರಂಭಿಸಿದ್ದು ಇದನ್ನು ವ್ಯವಸ್ಥಿತವಾಗಿ ಜಾರಿಗೆ ತರುವಂತೆ ಸೂಚನೆ ನೀಡಿದರು.

ಆರೋಗ್ಯ ಹಸ್ತ ಯೋಜನೆ ಜಾರಿಗೆ ಸಮನ್ವಯಕಾರರ ಜೊತೆ ಡಿಕೆ ಶಿವಕುಮಾರ್ ಸಂವಾದ

ಯಾವುದೇ ರೀತಿಯಲ್ಲೂ ಆರೋಗ್ಯ ಹಸ್ತ ಕಾರ್ಯನಿರ್ವಹಣೆಯಲ್ಲಿ ಲೋಪವಾಗದಂತೆ ನೋಡಿಕೊಳ್ಳಿ. ಅಲ್ಲದೆ ಸಾರ್ವಜನಿಕರಿಗೆ ಇದರ ಮಹತ್ವವನ್ನು ವಿವರಿಸುವ ಕಾರ್ಯ ಮಾಡಿ. ಜೊತೆಜೊತೆಗೆ ಸರ್ಕಾರದ ವೈಫಲ್ಯವನ್ನು ಕೂಡ ಜನರ ಗಮನಕ್ಕೆ ತರುವ ಕೆಲಸ ಮಾಡಿ ಎಂದು ಸಲಹೆ ನೀಡಿದರು. ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಯೋಜನೆ ಮುಖ್ಯಸ್ಥ, ಮಾಜಿ ಸಂಸದ ಧೃವನಾರಾಯಣ್ ಉಪಸ್ಥಿತರಿದ್ದರು.

ಈ ನಡುವೆ ಹಾಸಿಗೆ ಹೊಲಿಯುವ ವೃತ್ತಿ ಅವಲಂಭಿಸಿರುವ ನದಾಫ್, ಪಿಂಜಾರ, ಮನ್ಸೂರ್​, ದೂದೆಖುಲಾ ಸಮಾಜಗಳ ಒಕ್ಕೂಟದ ಆಲ್ ಇಂಡಿಯಾ (ರಿ) ಜಮಿಯತುಲ್ ಮನ್ಸೂರ್ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಕಚೇರಿಯಲ್ಲಿ ಭೇಟಿ ಮಾಡಿ, ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮನವಿ ಸಲ್ಲಿಸಿದರು.

ಸಂಘಟನೆಯ ರಾಜ್ಯಾಧ್ಯಕ್ಷ ಅಮಾನ್ ಕೂಡಗಲಿ, ಪ್ರಧಾನ ಕಾರ್ಯದರ್ಶಿ ಗೌಸ್ ಪಾಷಾ ಮತ್ತಿತರರು ಹಾಜರಿದ್ದರು. ಮನವಿ ಸ್ವೀಕರಿಸಿದ ಶಿವಕುಮಾರ್ ಒಕ್ಕೂಟದ ಸದಸ್ಯರಿಗೆ ಭರವಸೆ ನೀಡಿದ್ದು, ಎಲ್ಲಾ ವಿಚಾರವನ್ನು ಸರ್ಕಾರದ ಮುಂದಿಟ್ಟು, ಆದಷ್ಟು ಬೇಗ ಸಮಸ್ಯೆ ನಿವಾರಿಸುವಂತೆ ಮನವಿ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಪಕ್ಷದ ಕಚೇರಿಯಲ್ಲಿ ಆರೋಗ್ಯ ಹಸ್ತ ಯೋಜನೆ ಕುರಿತು ಎಲ್ಲ ಜಿಲ್ಲೆಗಳ ಸಮನ್ವಯಕಾರರ ಜತೆ ವಿಡಿಯೋ ಸಂವಾದ ನಡೆಸಿದರು. ರಾಜ್ಯದಲ್ಲೆಡೆ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಇದರ ನಿಯಂತ್ರಣಕ್ಕೆ ಕಾಂಗ್ರೆಸ್ ಪಕ್ಷ ಆರೋಗ್ಯ ಹಸ್ತ ಆರಂಭಿಸಿದ್ದು ಇದನ್ನು ವ್ಯವಸ್ಥಿತವಾಗಿ ಜಾರಿಗೆ ತರುವಂತೆ ಸೂಚನೆ ನೀಡಿದರು.

ಆರೋಗ್ಯ ಹಸ್ತ ಯೋಜನೆ ಜಾರಿಗೆ ಸಮನ್ವಯಕಾರರ ಜೊತೆ ಡಿಕೆ ಶಿವಕುಮಾರ್ ಸಂವಾದ

ಯಾವುದೇ ರೀತಿಯಲ್ಲೂ ಆರೋಗ್ಯ ಹಸ್ತ ಕಾರ್ಯನಿರ್ವಹಣೆಯಲ್ಲಿ ಲೋಪವಾಗದಂತೆ ನೋಡಿಕೊಳ್ಳಿ. ಅಲ್ಲದೆ ಸಾರ್ವಜನಿಕರಿಗೆ ಇದರ ಮಹತ್ವವನ್ನು ವಿವರಿಸುವ ಕಾರ್ಯ ಮಾಡಿ. ಜೊತೆಜೊತೆಗೆ ಸರ್ಕಾರದ ವೈಫಲ್ಯವನ್ನು ಕೂಡ ಜನರ ಗಮನಕ್ಕೆ ತರುವ ಕೆಲಸ ಮಾಡಿ ಎಂದು ಸಲಹೆ ನೀಡಿದರು. ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಯೋಜನೆ ಮುಖ್ಯಸ್ಥ, ಮಾಜಿ ಸಂಸದ ಧೃವನಾರಾಯಣ್ ಉಪಸ್ಥಿತರಿದ್ದರು.

ಈ ನಡುವೆ ಹಾಸಿಗೆ ಹೊಲಿಯುವ ವೃತ್ತಿ ಅವಲಂಭಿಸಿರುವ ನದಾಫ್, ಪಿಂಜಾರ, ಮನ್ಸೂರ್​, ದೂದೆಖುಲಾ ಸಮಾಜಗಳ ಒಕ್ಕೂಟದ ಆಲ್ ಇಂಡಿಯಾ (ರಿ) ಜಮಿಯತುಲ್ ಮನ್ಸೂರ್ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಕಚೇರಿಯಲ್ಲಿ ಭೇಟಿ ಮಾಡಿ, ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮನವಿ ಸಲ್ಲಿಸಿದರು.

ಸಂಘಟನೆಯ ರಾಜ್ಯಾಧ್ಯಕ್ಷ ಅಮಾನ್ ಕೂಡಗಲಿ, ಪ್ರಧಾನ ಕಾರ್ಯದರ್ಶಿ ಗೌಸ್ ಪಾಷಾ ಮತ್ತಿತರರು ಹಾಜರಿದ್ದರು. ಮನವಿ ಸ್ವೀಕರಿಸಿದ ಶಿವಕುಮಾರ್ ಒಕ್ಕೂಟದ ಸದಸ್ಯರಿಗೆ ಭರವಸೆ ನೀಡಿದ್ದು, ಎಲ್ಲಾ ವಿಚಾರವನ್ನು ಸರ್ಕಾರದ ಮುಂದಿಟ್ಟು, ಆದಷ್ಟು ಬೇಗ ಸಮಸ್ಯೆ ನಿವಾರಿಸುವಂತೆ ಮನವಿ ಮಾಡುತ್ತೇನೆ ಎಂದು ಭರವಸೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.