ETV Bharat / state

8 ವರ್ಷದಲ್ಲಿ 16 ಕೋಟಿ ಉದ್ಯೋಗ ಯಾಕೆ ಕೊಡಲಿಲ್ಲ.. ನಮ್ಮ ನಾಯಕರಿಗೇಕೆ ಇಷ್ಟೊಂದು ಕಿರುಕುಳ?: ಡಿಕೆಶಿ

ಮೇಕೆದಾಟು ಪಾದಯಾತ್ರೆ, ಕೃಷಿ ಕಾಯ್ದೆ ವಿರುದ್ಧ ಕಾಂಗ್ರೆಸ್ ನಡೆಸಿದ್ದ ಪ್ರತಿಭಟನೆ ಸಂಬಂಧದ ಪ್ರಕರಣದಲ್ಲಿ ಡಿ.ಕೆ ಶಿವಕುಮಾರ್ ಅವರು ಇಂದು ಕೋರ್ಟ್​ಗೆ ಹಾಜರಾಗಿದ್ದ ವೇಳೆ ಮಾತನಾಡಿ, ನಮ್ಮ ನಾಯಕರಿಗೇಕೆ ಇಷ್ಟೊಂದು ಕಿರುಕುಳ ಕೊಡುತ್ತಿದ್ದಾರೋ ಗೊತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ..

author img

By

Published : Jun 15, 2022, 4:16 PM IST

DK Shivakumar outrage on BJP Government
ಬಿಜೆಪಿ ವಿರುದ್ಧ ಡಿಕೆಶಿ ಆಕ್ರೋಶ

ಬೆಂಗಳೂರು : ನಮ್ಮ ನಾಯಕರಿಗೇಕೆ ಈ ರೀತಿ ಕಿರುಕುಳ ಕೊಡುತ್ತಿದ್ದಾರೋ ಗೊತ್ತಿಲ್ಲ. ಎಲ್ಲದರ ಬಗ್ಗೆ ಮಾತನಾಡಬೇಕಿದೆ, ಚರ್ಚೆ ಮಾಡಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು. ಮೇಕೆದಾಟು ಪಾದಯಾತ್ರೆ ಹಾಗೂ ಕೃಷಿ ಕಾಯ್ದೆ ವಿರುದ್ಧ ನಡೆಸಿದ್ದ ಪ್ರತಿಭಟನೆ ಸಂಬಂಧದ ಪ್ರಕರಣದಲ್ಲಿ ಡಿ.ಕೆ ಶಿವಕುಮಾರ್ ಅವರು ಇಂದು ಕೋರ್ಟ್​ಗೆ ಹಾಜರಾಗಿದ್ದರು.

ಬಿಜೆಪಿ ವಿರುದ್ಧ ಡಿಕೆಶಿ ಆಕ್ರೋಶ

ಈ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಈಗೇಕೆ 10 ಲಕ್ಷ ಉದ್ಯೋಗ ಕೊಡುತ್ತೇವೆಂದು ಹೇಳುತ್ತಿರೋದು, 8 ವರ್ಷದಿಂದ 16 ಕೋಟಿ ಉದ್ಯೋಗವನ್ನೇಕೆ ನೀಡಲಿಲ್ಲ?. 40% ಕಮಿಶನ್ ವಿಚಾರದ ಬಗ್ಗೆ ಪಿಎಂ ಮೋದಿ ಏಕೆ ಮಾತನಾಡುತ್ತಿಲ್ಲ. ಬಿಜೆಪಿ ನಿಲುವು ಜನರಿಗೆ ಅರ್ಥವಾಗುತ್ತಿದೆ. ದ್ವೇಷ ರಾಜಕಾರಣದಿಂದ ನಮ್ಮ ನಾಯಕರನ್ನು ಮುಗಿಸಲು ಹೊರಟಿದ್ದಾರೆಂದು ಕಿಡಿಕಾರಿದರು.

ಚಿಕ್ಕಮಗಳೂರಿನಲ್ಲಿ ಬುಲ್ಡೋಜರ್ ಮಾಡಲು ಮುಂದಾದರೆ ನಾವು ಹೋಗಿ ಅಲ್ಲೇ ಮಲಗುತ್ತೇವೆ. ಉತ್ತರಪ್ರದೇಶದಲ್ಲಿ ಮಾಡಿದರೆಂದು ಕರ್ನಾಟಕದಲ್ಲಿ ಮಾಡಲು ಆಗಲ್ಲ. ಇಲ್ಲಿ ಕಾನೂನು ಇದೆ. ಇವರು ಉದ್ದೇಶಪೂರ್ವಕವಾಗಿ ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡಿ ಈ ರೀತಿಯ ಕೆಲಸ ಮಾಡುತ್ತಿದ್ದಾರೆ‌ಂದು ಅಸಮಾಧಾನ ವ್ಯಕ್ತಪಡಿಸಿದರು.

ಸಕಲೇಶಪುರದಲ್ಲಿ ಕೊಲೆ : ತಾಲೂಕಿನ ಮಠಸಾಗರ ಗ್ರಾಮದ ಬಳಿ ಇರುವ ಕಾಫಿ ಬೋರ್ಡ್​​ನಲ್ಲಿ ನೌಕರನಾಗಿದ್ದ ವ್ಯಕ್ತಿ ಎ. ಸ್ವಾಮಿ (53) ಎಂಬುವರ ಕೊಲೆಯಾಗಿದೆ. ಕಳೆದ 25 ವರ್ಷಗಳಿಂದ ಕಾಫಿ ಮಂಡಳಿಯಲ್ಲಿ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದ ಸ್ವಾಮಿ ಅವರು ಕಳೆದ ರಾತ್ರಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಶವಸಂಸ್ಕಾರಕ್ಕೆ ತೆರಳಿದ್ದರು. ಆದರೆ, ಶವಸಂಸ್ಕಾರಕ್ಕೆ ಹೋದ ವ್ಯಕ್ತಿಯೀಗ ಮಠಸಾಗರದಿಂದ ಬಾಳ್ಳುಪೇಟೆ ಸಂಪರ್ಕಿಸುವ ರಸ್ತೆಯಲ್ಲಿ ಶವವಾಗಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಸಕಲೇಶಪುರದಲ್ಲಿ ಕೊಲೆ?-ಮೃತ ವ್ಯಕ್ತಿಯ ಪುತ್ರ ಮಾತನಾಡಿರುವುದು..

ಘಟನೆ ಬಗ್ಗೆ ಮೃತ ವ್ಯಕ್ತಿಯ ಪುತ್ರ ಪ್ರವೀಣ್ ಎಂಬುವರು ಮಾತನಾಡಿ, ನಮ್ಮ ತಂದೆ ಬಹಳ ಸೌಮ್ಯ ಸ್ವಭಾವದವರು. ಯಾರೋ ಇವರನ್ನು ಕೊಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಪಟ್ಟಣ ಠಾಣಾ ಪೊಲೀಸರು ಶ್ವಾನದಳದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

murder at sakaleshpura
ಮೃತ ವ್ಯಕ್ತಿ ಎ. ಸ್ವಾಮಿ

ಇದನ್ನೂ ಓದಿ: ಪಶ್ಚಿಮ ಶಿಕ್ಷಕರ ಚುನಾವಣೆ ಕುಲಗೆಟ್ಟ ಮತಗಳಲ್ಲಿ ಏರಿಕೆ

ಬೆಂಗಳೂರು : ನಮ್ಮ ನಾಯಕರಿಗೇಕೆ ಈ ರೀತಿ ಕಿರುಕುಳ ಕೊಡುತ್ತಿದ್ದಾರೋ ಗೊತ್ತಿಲ್ಲ. ಎಲ್ಲದರ ಬಗ್ಗೆ ಮಾತನಾಡಬೇಕಿದೆ, ಚರ್ಚೆ ಮಾಡಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು. ಮೇಕೆದಾಟು ಪಾದಯಾತ್ರೆ ಹಾಗೂ ಕೃಷಿ ಕಾಯ್ದೆ ವಿರುದ್ಧ ನಡೆಸಿದ್ದ ಪ್ರತಿಭಟನೆ ಸಂಬಂಧದ ಪ್ರಕರಣದಲ್ಲಿ ಡಿ.ಕೆ ಶಿವಕುಮಾರ್ ಅವರು ಇಂದು ಕೋರ್ಟ್​ಗೆ ಹಾಜರಾಗಿದ್ದರು.

ಬಿಜೆಪಿ ವಿರುದ್ಧ ಡಿಕೆಶಿ ಆಕ್ರೋಶ

ಈ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಈಗೇಕೆ 10 ಲಕ್ಷ ಉದ್ಯೋಗ ಕೊಡುತ್ತೇವೆಂದು ಹೇಳುತ್ತಿರೋದು, 8 ವರ್ಷದಿಂದ 16 ಕೋಟಿ ಉದ್ಯೋಗವನ್ನೇಕೆ ನೀಡಲಿಲ್ಲ?. 40% ಕಮಿಶನ್ ವಿಚಾರದ ಬಗ್ಗೆ ಪಿಎಂ ಮೋದಿ ಏಕೆ ಮಾತನಾಡುತ್ತಿಲ್ಲ. ಬಿಜೆಪಿ ನಿಲುವು ಜನರಿಗೆ ಅರ್ಥವಾಗುತ್ತಿದೆ. ದ್ವೇಷ ರಾಜಕಾರಣದಿಂದ ನಮ್ಮ ನಾಯಕರನ್ನು ಮುಗಿಸಲು ಹೊರಟಿದ್ದಾರೆಂದು ಕಿಡಿಕಾರಿದರು.

ಚಿಕ್ಕಮಗಳೂರಿನಲ್ಲಿ ಬುಲ್ಡೋಜರ್ ಮಾಡಲು ಮುಂದಾದರೆ ನಾವು ಹೋಗಿ ಅಲ್ಲೇ ಮಲಗುತ್ತೇವೆ. ಉತ್ತರಪ್ರದೇಶದಲ್ಲಿ ಮಾಡಿದರೆಂದು ಕರ್ನಾಟಕದಲ್ಲಿ ಮಾಡಲು ಆಗಲ್ಲ. ಇಲ್ಲಿ ಕಾನೂನು ಇದೆ. ಇವರು ಉದ್ದೇಶಪೂರ್ವಕವಾಗಿ ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡಿ ಈ ರೀತಿಯ ಕೆಲಸ ಮಾಡುತ್ತಿದ್ದಾರೆ‌ಂದು ಅಸಮಾಧಾನ ವ್ಯಕ್ತಪಡಿಸಿದರು.

ಸಕಲೇಶಪುರದಲ್ಲಿ ಕೊಲೆ : ತಾಲೂಕಿನ ಮಠಸಾಗರ ಗ್ರಾಮದ ಬಳಿ ಇರುವ ಕಾಫಿ ಬೋರ್ಡ್​​ನಲ್ಲಿ ನೌಕರನಾಗಿದ್ದ ವ್ಯಕ್ತಿ ಎ. ಸ್ವಾಮಿ (53) ಎಂಬುವರ ಕೊಲೆಯಾಗಿದೆ. ಕಳೆದ 25 ವರ್ಷಗಳಿಂದ ಕಾಫಿ ಮಂಡಳಿಯಲ್ಲಿ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದ ಸ್ವಾಮಿ ಅವರು ಕಳೆದ ರಾತ್ರಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಶವಸಂಸ್ಕಾರಕ್ಕೆ ತೆರಳಿದ್ದರು. ಆದರೆ, ಶವಸಂಸ್ಕಾರಕ್ಕೆ ಹೋದ ವ್ಯಕ್ತಿಯೀಗ ಮಠಸಾಗರದಿಂದ ಬಾಳ್ಳುಪೇಟೆ ಸಂಪರ್ಕಿಸುವ ರಸ್ತೆಯಲ್ಲಿ ಶವವಾಗಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಸಕಲೇಶಪುರದಲ್ಲಿ ಕೊಲೆ?-ಮೃತ ವ್ಯಕ್ತಿಯ ಪುತ್ರ ಮಾತನಾಡಿರುವುದು..

ಘಟನೆ ಬಗ್ಗೆ ಮೃತ ವ್ಯಕ್ತಿಯ ಪುತ್ರ ಪ್ರವೀಣ್ ಎಂಬುವರು ಮಾತನಾಡಿ, ನಮ್ಮ ತಂದೆ ಬಹಳ ಸೌಮ್ಯ ಸ್ವಭಾವದವರು. ಯಾರೋ ಇವರನ್ನು ಕೊಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಪಟ್ಟಣ ಠಾಣಾ ಪೊಲೀಸರು ಶ್ವಾನದಳದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

murder at sakaleshpura
ಮೃತ ವ್ಯಕ್ತಿ ಎ. ಸ್ವಾಮಿ

ಇದನ್ನೂ ಓದಿ: ಪಶ್ಚಿಮ ಶಿಕ್ಷಕರ ಚುನಾವಣೆ ಕುಲಗೆಟ್ಟ ಮತಗಳಲ್ಲಿ ಏರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.