ETV Bharat / state

ಹೆಣ್ಣೂರು ಇನ್ಸ್​​ಪೆಕ್ಟರ್​​ ವಿರುದ್ಧ ಮತ್ತೊಂದು ಆರೋಪ: ಪೊಲೀಸ್ ಠಾಣೆ ಮುತ್ತಿಗೆ ಹಾಕಿದ ದಲಿತಪರ ಸಂಘಟನೆಗಳು

author img

By

Published : Feb 7, 2022, 4:30 PM IST

Updated : Feb 7, 2022, 4:40 PM IST

ಸ್ಥಳಕ್ಕೆ ಡಿಸಿಪಿ ಬರುವಂತೆ ಆಗ್ರಹಿಸಿದರು. ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಸ್ಥಳಕ್ಕೆ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಆಗಮಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿ ಪ್ರತಿಭಟನೆ ತಿಳಿಗೊಳಿಸಿದರು..

dalit-organizations-attacked-on-police-station-in-bengaluru
ಪೊಲೀಸ್ ಠಾಣೆ ಮುತ್ತಿಗೆ ಹಾಕಿದ ದಲಿತಪರ ಸಂಘಟನೆಗಳು

ಬೆಂಗಳೂರು : ಕೆಲ ದಿನಗಳ ಹಿಂದಷ್ಟೇ ಮಹಿಳೆ ಮೇಲೆ ಸುಳ್ಳು ಕೇಸ್ ದಾಖಲಿಸಿ ಧಮ್ಕಿ ನಡೆಸಿದ್ದ ಆರೋಪ ಮಾಸುವ ಮುನ್ನವೇ ಹೆಣ್ಣೂರು ಪೊಲೀಸ್ ಠಾಣೆಯ ಇನ್​​ಸ್ಪೆಕ್ಟರ್ ವಸಂತ ಕುಮಾರ್ ಮೇಲೆ ಮತ್ತೊಂದು ಆರೋಪ ಕೇಳಿ ಬಂದಿದೆ.

ಗೆದ್ದಲಹಳ್ಳಿ ‌ನಿವಾಸಿಯಾಗಿರುವ ಸಾವಿತ್ರಮ್ಮ ಜಾಗದ ವಿಚಾರವಾಗಿ ವಿಜಯ್ ಕುಮಾರ್ ಎಂಬಾತನ ವಿರುದ್ಧ ಕೆಲ ದಿನಗಳ ಹಿಂದೆ ಪೊಲೀಸರಿಗೆ ದೂರು ನೀಡಿದ್ದರು. ದೂರನ್ನ ಸ್ವೀಕರಿಸಿದ ಇನ್​ಸ್ಪೆಕ್ಟರ್​​ ವಸಂತ್, ಎಫ್ಐಆರ್ ಮಾಡದೇ ಆರೋಪಿ ಜೊತೆಗೆ ದೂರುದಾರರ ಮನೆಗೆ ಹೋಗಿ ದೂರು ವಾಪಸ್ ಪಡೆಯುವಂತೆ ಧಮ್ಕಿ ಹಾಕಿದ್ದಾರೆ ಎಂದು ಮಹಿಳೆ ಅರೋಪಿಸಿದ್ದಾಳೆ.

ಈ ಸಂಬಂಧ ದೂರುದಾರರಿಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿ ದಲಿತಪರ ಸಂಘಟನೆ ಕಾರ್ಯಕರ್ತರು ಇಂದು ಹೆಣ್ಣೂರು ಪೊಲೀಸ್ ಠಾಣೆ ಮುಂದೆ‌ ಮುತ್ತಿಗೆ ಹಾಕಿದ್ರು. ಇನ್ಸ್​ಪೆಕ್ಟರ್​ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟಿಸಿದ್ರು.

ಸ್ಥಳಕ್ಕೆ ಡಿಸಿಪಿ ಬರುವಂತೆ ಆಗ್ರಹಿಸಿದರು. ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಸ್ಥಳಕ್ಕೆ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಆಗಮಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿ ಪ್ರತಿಭಟನೆ ತಿಳಿಗೊಳಿಸಿದರು.

ಸದ್ಯ ಇನ್ಸ್​ಪೆಕ್ಟರ್​​ ವಿರುದ್ಧ ಕೇಳಿ ಬಂದ ಆರೋಪ ಸಂಬಂಧ ತನಿಖೆ ನಡೆಸಿ ವರದಿ ನೀಡುವಂತೆ ಡಿಸಿಪಿ ಭೀಮಾಶಂಕರ್ ಅವರು, ಬಾಣಸವಾಡಿ ವಿಭಾಗದ ಎಸಿಪಿಗೆ ತಾಕೀತು ಮಾಡಿದ್ದಾರೆ.

ಓದಿ: ಖನೀಜಾ ಫಾತಿಮಾ ವಿರುದ್ಧ ಆಂದೋಲ ಮಠದ ಶ್ರೀ ವಾಗ್ದಾಳಿ

ಬೆಂಗಳೂರು : ಕೆಲ ದಿನಗಳ ಹಿಂದಷ್ಟೇ ಮಹಿಳೆ ಮೇಲೆ ಸುಳ್ಳು ಕೇಸ್ ದಾಖಲಿಸಿ ಧಮ್ಕಿ ನಡೆಸಿದ್ದ ಆರೋಪ ಮಾಸುವ ಮುನ್ನವೇ ಹೆಣ್ಣೂರು ಪೊಲೀಸ್ ಠಾಣೆಯ ಇನ್​​ಸ್ಪೆಕ್ಟರ್ ವಸಂತ ಕುಮಾರ್ ಮೇಲೆ ಮತ್ತೊಂದು ಆರೋಪ ಕೇಳಿ ಬಂದಿದೆ.

ಗೆದ್ದಲಹಳ್ಳಿ ‌ನಿವಾಸಿಯಾಗಿರುವ ಸಾವಿತ್ರಮ್ಮ ಜಾಗದ ವಿಚಾರವಾಗಿ ವಿಜಯ್ ಕುಮಾರ್ ಎಂಬಾತನ ವಿರುದ್ಧ ಕೆಲ ದಿನಗಳ ಹಿಂದೆ ಪೊಲೀಸರಿಗೆ ದೂರು ನೀಡಿದ್ದರು. ದೂರನ್ನ ಸ್ವೀಕರಿಸಿದ ಇನ್​ಸ್ಪೆಕ್ಟರ್​​ ವಸಂತ್, ಎಫ್ಐಆರ್ ಮಾಡದೇ ಆರೋಪಿ ಜೊತೆಗೆ ದೂರುದಾರರ ಮನೆಗೆ ಹೋಗಿ ದೂರು ವಾಪಸ್ ಪಡೆಯುವಂತೆ ಧಮ್ಕಿ ಹಾಕಿದ್ದಾರೆ ಎಂದು ಮಹಿಳೆ ಅರೋಪಿಸಿದ್ದಾಳೆ.

ಈ ಸಂಬಂಧ ದೂರುದಾರರಿಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿ ದಲಿತಪರ ಸಂಘಟನೆ ಕಾರ್ಯಕರ್ತರು ಇಂದು ಹೆಣ್ಣೂರು ಪೊಲೀಸ್ ಠಾಣೆ ಮುಂದೆ‌ ಮುತ್ತಿಗೆ ಹಾಕಿದ್ರು. ಇನ್ಸ್​ಪೆಕ್ಟರ್​ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟಿಸಿದ್ರು.

ಸ್ಥಳಕ್ಕೆ ಡಿಸಿಪಿ ಬರುವಂತೆ ಆಗ್ರಹಿಸಿದರು. ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಸ್ಥಳಕ್ಕೆ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಆಗಮಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿ ಪ್ರತಿಭಟನೆ ತಿಳಿಗೊಳಿಸಿದರು.

ಸದ್ಯ ಇನ್ಸ್​ಪೆಕ್ಟರ್​​ ವಿರುದ್ಧ ಕೇಳಿ ಬಂದ ಆರೋಪ ಸಂಬಂಧ ತನಿಖೆ ನಡೆಸಿ ವರದಿ ನೀಡುವಂತೆ ಡಿಸಿಪಿ ಭೀಮಾಶಂಕರ್ ಅವರು, ಬಾಣಸವಾಡಿ ವಿಭಾಗದ ಎಸಿಪಿಗೆ ತಾಕೀತು ಮಾಡಿದ್ದಾರೆ.

ಓದಿ: ಖನೀಜಾ ಫಾತಿಮಾ ವಿರುದ್ಧ ಆಂದೋಲ ಮಠದ ಶ್ರೀ ವಾಗ್ದಾಳಿ

Last Updated : Feb 7, 2022, 4:40 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.