ETV Bharat / state

ಕೋರ್ಟ್‌ ಯಾವಾಗ ಹೇಳುತ್ತೋ ಆಗ ಯುವತಿ ಹೇಳಿಕೆ ನೀಡಲು ಬರ್ತಾರೆ.. ವಕೀಲ ಜಗದೀಶ್

author img

By

Published : Mar 29, 2021, 6:58 PM IST

ನ್ಯಾಯಾಲಯ ಯಾವಾಗ ಹೇಳಿದರೂ ಹಾಜರುಪಡಿಸಲು ಸಿದ್ಧ. ಯುವತಿಗೆ ಎಲ್ಲಿಂದ ಭದ್ರತೆ ಬೇಕು ಎಂಬುವುದು ಎಸ್​ಐಟಿಗೆ ಮಾಹಿತಿ ನೀಡಲಾಗುವುದು. ನ್ಯಾಯಧೀಶರ ಮನೆ ಮುಂದೆ ಹಾಜರುಪಡಿಸಿ ಎಂದರೂ ನಾವು ಸಿದ್ಧ..

ಯುವತಿ ಪರ ವಕೀಲ ಜಗದೀಶ್​
ಯುವತಿ ಪರ ವಕೀಲ ಜಗದೀಶ್​

ಬೆಂಗಳೂರು : ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಎನ್ನಲಾಗುವ ಯುವತಿ ಹೇಳಿಕೆ ನೀಡಲು ನ್ಯಾಯಾಲಯದಿಂದ ಅನುಮತಿ ದೊರೆತಿದೆ ಎಂದು ಯುವತಿ ಪರ ವಕೀಲರಾದ ಜಗದೀಶ್ ತಿಳಿಸಿದ್ದಾರೆ.

ಸಿಡಿ ಯುವತಿ ಪರ ವಕೀಲ ಜಗದೀಶ್​

ಇಂದು ಬೆಳಗ್ಗೆ ವಕೀಲರಾದ ಜಗದೀಶ್​ ಅವರು, ಮ್ಯಾಜಿಸ್ಟ್ರೇಟ್ ಕೋರ್ಟ್​ಗೆ ಹೋಗಿ ಡೆಪ್ಯೂಟಿ ರಿಜಿಸ್ಟ್ರಾರ್ ಭೇಟಿ ಮಾಡಿದ್ದರು. ಈ ವೇಳೆ ಯುವತಿ ಹೇಳಿಕೆ ನೀಡಲು ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಿದ್ದರು.‌ ಈ ಹಿನ್ನೆಲೆ ನ್ಯಾಯಾಲಯದಿಂದ ಯುವತಿ ಹೇಳಿಕೆ ನೀಡಲು ಅನುಮತಿ ದೊರೆತಿದೆ.

ಓದಿ:ಎಸ್‌ಐಟಿ ವಿಚಾರಣೆಗೆ ಹಾಜರಾದ ರಮೇಶ್ ಜಾರಕಿಹೊಳಿ ; ನಿರೀಕ್ಷಣಾ ಜಾಮೀನು ಅರ್ಜಿಗೆ ಚಿಂತನೆ?

ಅರ್ಜಿ ಸಲ್ಲಿಸಿದ ಬಳಿಕ ಮಾತನಾಡಿದ ವಕೀಲ ಜಗದೀಶ್​ ಅವರು, ಆದೇಶ ಪ್ರತಿ ನನ್ನ ಕೈ ಸೇರಿದೆ. ಯುವತಿಯನ್ನ ಯಾವಾಗ ಹಾಜರುಪಡಿಸಬೇಕು ಎಂಬುದು ಇನ್ನಷ್ಟೇ ಮಾಹಿತಿ ಸಿಗಬೇಕಿದೆ. ಇಮೇಲ್ ಮೂಲಕ ನನಗೆ ಮಾಹಿತಿ ನೀಡಲಿದ್ದಾರೆ. ಭದ್ರತೆ ವಿಚಾರನೂ ಆದೇಶದ ಪ್ರತಿಯಲ್ಲಿ ಉಲ್ಲೇಖವಾಗಿದೆ. ವಾಟ್ಸ್‌ಆ್ಯಪ್ ಮೂಲಕ ಎಸ್​​ಐಟಿ ಅಧಿಕಾರಿಗಳು ಮಾಹಿತಿ ನೀಡುತ್ತಿದ್ದಾರೆ‌.

ನ್ಯಾಯಾಲಯ ಯಾವಾಗ ಹೇಳಿದರೂ ಹಾಜರುಪಡಿಸಲು ಸಿದ್ಧ. ಯುವತಿಗೆ ಎಲ್ಲಿಂದ ಭದ್ರತೆ ಬೇಕು ಎಂಬುವುದು ಎಸ್​ಐಟಿಗೆ ಮಾಹಿತಿ ನೀಡಲಾಗುವುದು. ನ್ಯಾಯಧೀಶರ ಮನೆ ಮುಂದೆ ಹಾಜರುಪಡಿಸಿ ಎಂದರೂ ನಾವು ಸಿದ್ಧ ಎಂದು ಹೇಳಿದ್ದಾರೆ.

ಬೆಂಗಳೂರು : ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಎನ್ನಲಾಗುವ ಯುವತಿ ಹೇಳಿಕೆ ನೀಡಲು ನ್ಯಾಯಾಲಯದಿಂದ ಅನುಮತಿ ದೊರೆತಿದೆ ಎಂದು ಯುವತಿ ಪರ ವಕೀಲರಾದ ಜಗದೀಶ್ ತಿಳಿಸಿದ್ದಾರೆ.

ಸಿಡಿ ಯುವತಿ ಪರ ವಕೀಲ ಜಗದೀಶ್​

ಇಂದು ಬೆಳಗ್ಗೆ ವಕೀಲರಾದ ಜಗದೀಶ್​ ಅವರು, ಮ್ಯಾಜಿಸ್ಟ್ರೇಟ್ ಕೋರ್ಟ್​ಗೆ ಹೋಗಿ ಡೆಪ್ಯೂಟಿ ರಿಜಿಸ್ಟ್ರಾರ್ ಭೇಟಿ ಮಾಡಿದ್ದರು. ಈ ವೇಳೆ ಯುವತಿ ಹೇಳಿಕೆ ನೀಡಲು ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಿದ್ದರು.‌ ಈ ಹಿನ್ನೆಲೆ ನ್ಯಾಯಾಲಯದಿಂದ ಯುವತಿ ಹೇಳಿಕೆ ನೀಡಲು ಅನುಮತಿ ದೊರೆತಿದೆ.

ಓದಿ:ಎಸ್‌ಐಟಿ ವಿಚಾರಣೆಗೆ ಹಾಜರಾದ ರಮೇಶ್ ಜಾರಕಿಹೊಳಿ ; ನಿರೀಕ್ಷಣಾ ಜಾಮೀನು ಅರ್ಜಿಗೆ ಚಿಂತನೆ?

ಅರ್ಜಿ ಸಲ್ಲಿಸಿದ ಬಳಿಕ ಮಾತನಾಡಿದ ವಕೀಲ ಜಗದೀಶ್​ ಅವರು, ಆದೇಶ ಪ್ರತಿ ನನ್ನ ಕೈ ಸೇರಿದೆ. ಯುವತಿಯನ್ನ ಯಾವಾಗ ಹಾಜರುಪಡಿಸಬೇಕು ಎಂಬುದು ಇನ್ನಷ್ಟೇ ಮಾಹಿತಿ ಸಿಗಬೇಕಿದೆ. ಇಮೇಲ್ ಮೂಲಕ ನನಗೆ ಮಾಹಿತಿ ನೀಡಲಿದ್ದಾರೆ. ಭದ್ರತೆ ವಿಚಾರನೂ ಆದೇಶದ ಪ್ರತಿಯಲ್ಲಿ ಉಲ್ಲೇಖವಾಗಿದೆ. ವಾಟ್ಸ್‌ಆ್ಯಪ್ ಮೂಲಕ ಎಸ್​​ಐಟಿ ಅಧಿಕಾರಿಗಳು ಮಾಹಿತಿ ನೀಡುತ್ತಿದ್ದಾರೆ‌.

ನ್ಯಾಯಾಲಯ ಯಾವಾಗ ಹೇಳಿದರೂ ಹಾಜರುಪಡಿಸಲು ಸಿದ್ಧ. ಯುವತಿಗೆ ಎಲ್ಲಿಂದ ಭದ್ರತೆ ಬೇಕು ಎಂಬುವುದು ಎಸ್​ಐಟಿಗೆ ಮಾಹಿತಿ ನೀಡಲಾಗುವುದು. ನ್ಯಾಯಧೀಶರ ಮನೆ ಮುಂದೆ ಹಾಜರುಪಡಿಸಿ ಎಂದರೂ ನಾವು ಸಿದ್ಧ ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.