ETV Bharat / state

ಕೊರೊನಾ ಭೀಕರತೆ:  ಜಿಲ್ಲಾಧ್ಯಕ್ಷರ ಜತೆ ಡಿಕೆಶಿ ವಿಡಿಯೋ ಮೂಲಕ ಸಮಾಲೋಚನೆ

ಕೊರೊನಾ ಪರಿಸ್ಥಿತಿ, ಮತ್ತಿತರ ವಿಚಾರಗಳು ಸೇರಿ ಮತ್ತಿತರ ವಿಚಾರಗಳ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಎಲ್ಲ ಜಿಲ್ಲೆಗಳ ಕಾಂಗ್ರೆಸ್ ಅಧ್ಯಕ್ಷರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಾಲೋಚನೆ ನಡೆಸಿದ್ದಾರೆ.

author img

By

Published : Apr 9, 2020, 11:26 PM IST

corona: meeting with congress districts head on video conference
ಕೊರೊನಾ: ಭೀಕರತೆ ಕುರಿತು ಜಿಲ್ಲಾಧ್ಯಕ್ಷರ ಜೊತೆ ಡಿಕೆಶಿ ವಿಡಿಯೋ ಮೂಲಕ ಚರ್ಚೆ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಎಲ್ಲ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕೊರೊನಾ ಪರಿಸ್ಥಿತಿ, ಮತ್ತಿತರ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.

ವಿವಿಧ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಜೊತೆ ಏಕಕಾಲದಲ್ಲಿ ನೇರವಾಗಿ ಸಮಾಲೋಚಿಸಿದ ಡಿಕೆಶಿ ಆಯಾ ಭಾಗದಿಂದ ರಾಜ್ಯ ಸರ್ಕಾರಕ್ಕೆ ನೀಡಬಹುದಾದ ಸಲಹೆಗಳು ಏನಾದರೂ ಇದ್ದರೆ ವಿವರಿಸಿ ಎಂದು ಕೇಳಿ ಮಾಹಿತಿ ಪಡೆದರು. ರಾಜ್ಯದ 12 ಜಿಲ್ಲೆಗಳಲ್ಲಿ ಇದುವರೆಗೂ ಕೊರೊನಾ ಸೋಂಕು ಹರಡಿಲ್ಲ. ಉಳಿದ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಸೋಂಕು ಕಾಣದ ಜಿಲ್ಲೆಯ ಮುಖಂಡರಿಂದ ಕೈಗೊಳ್ಳಲಾದ ಕ್ರಮಗಳ ಸಂಬಂಧ ಮಾಹಿತಿ ಪಡೆದವರು ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಯಾವ ರೀತಿಯ ನಿಯಂತ್ರಣ ಸಾಧಿಸಬಹುದು ಎಂಬ ಕುರಿತು ಆ ಭಾಗದ ಅಧ್ಯಕ್ಷರ ಜೊತೆ ಸಮಾಲೋಚಿಸಿದರು.

ಈಗಾಗಲೇ ಕಾಂಗ್ರೆಸ್ ಪಕ್ಷ ವಿಶೇಷ ಕಾರ್ಯಪಡೆಯನ್ನು ರಚಿಸಿ ಕೊರೊನಾ ನಿಯಂತ್ರಣಕ್ಕೆ ಹೋರಾಟ ನಡೆಸಿದ್ದು, ಇಂದಿನಿಂದ ಕಾಂಗ್ರೆಸ್ ವೈದ್ಯರ ತಂಡ ಕೂಡ ತನ್ನ ಕೆಲಸ ಆರಂಭಿಸಿದೆ. ಇದೇ ವೇಳೆ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಂಸದ ಎಂ.ರಾಜಗೋಪಾಲ್ ಬೆಂಗಳೂರಿನ ನಂದಿನಿ ಲೇಔಟ್ ನಿವಾಸಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭೇಟಿ ನೀಡಿ ಆಶೀರ್ವಾದ ಪಡೆದರು.

ಟ್ವೀಟ್ ಮೂಲಕ ಮನವಿ: ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಟ್ವೀಟ್ ಮೂಲಕ ಮನವಿ ಮಾಡಿರುವ ಅವರು, ಕರ್ನಾಟಕದ ಜನರ ಪ್ರಾಣ ಉಳಿಸಲು ನಮ್ಮ ಕೈಲಾದಷ್ಟು ಸಹಾಯ ಮಾಡುವ ಸಮಯ ಬಂದಿದೆ ಎಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ವಿನಮ್ರ ಮನವಿ. ಕರ್ನಾಟಕದಾದ್ಯಂತದ ಆಸ್ಪತ್ರೆಗಳು ರಕ್ತದ ಕೊರತೆಯನ್ನು ಎದುರಿಸುತ್ತಿವೆ. ಸ್ವಯಂ ಸೇವಕರು ಮತ್ತು ರಕ್ತದಾನ ಮಾಡಲು ಶಕ್ತರಿಗೆ ಇದು ಕರೆ. ಅಗತ್ಯವಿರುವ ಜನರೊಂದಿಗೆ ಒಗ್ಗಟ್ಟು ತೋರಿಸೋಣ ಎಂದಿದ್ದಾರೆ.

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಎಲ್ಲ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕೊರೊನಾ ಪರಿಸ್ಥಿತಿ, ಮತ್ತಿತರ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.

ವಿವಿಧ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಜೊತೆ ಏಕಕಾಲದಲ್ಲಿ ನೇರವಾಗಿ ಸಮಾಲೋಚಿಸಿದ ಡಿಕೆಶಿ ಆಯಾ ಭಾಗದಿಂದ ರಾಜ್ಯ ಸರ್ಕಾರಕ್ಕೆ ನೀಡಬಹುದಾದ ಸಲಹೆಗಳು ಏನಾದರೂ ಇದ್ದರೆ ವಿವರಿಸಿ ಎಂದು ಕೇಳಿ ಮಾಹಿತಿ ಪಡೆದರು. ರಾಜ್ಯದ 12 ಜಿಲ್ಲೆಗಳಲ್ಲಿ ಇದುವರೆಗೂ ಕೊರೊನಾ ಸೋಂಕು ಹರಡಿಲ್ಲ. ಉಳಿದ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಸೋಂಕು ಕಾಣದ ಜಿಲ್ಲೆಯ ಮುಖಂಡರಿಂದ ಕೈಗೊಳ್ಳಲಾದ ಕ್ರಮಗಳ ಸಂಬಂಧ ಮಾಹಿತಿ ಪಡೆದವರು ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಯಾವ ರೀತಿಯ ನಿಯಂತ್ರಣ ಸಾಧಿಸಬಹುದು ಎಂಬ ಕುರಿತು ಆ ಭಾಗದ ಅಧ್ಯಕ್ಷರ ಜೊತೆ ಸಮಾಲೋಚಿಸಿದರು.

ಈಗಾಗಲೇ ಕಾಂಗ್ರೆಸ್ ಪಕ್ಷ ವಿಶೇಷ ಕಾರ್ಯಪಡೆಯನ್ನು ರಚಿಸಿ ಕೊರೊನಾ ನಿಯಂತ್ರಣಕ್ಕೆ ಹೋರಾಟ ನಡೆಸಿದ್ದು, ಇಂದಿನಿಂದ ಕಾಂಗ್ರೆಸ್ ವೈದ್ಯರ ತಂಡ ಕೂಡ ತನ್ನ ಕೆಲಸ ಆರಂಭಿಸಿದೆ. ಇದೇ ವೇಳೆ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಂಸದ ಎಂ.ರಾಜಗೋಪಾಲ್ ಬೆಂಗಳೂರಿನ ನಂದಿನಿ ಲೇಔಟ್ ನಿವಾಸಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭೇಟಿ ನೀಡಿ ಆಶೀರ್ವಾದ ಪಡೆದರು.

ಟ್ವೀಟ್ ಮೂಲಕ ಮನವಿ: ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಟ್ವೀಟ್ ಮೂಲಕ ಮನವಿ ಮಾಡಿರುವ ಅವರು, ಕರ್ನಾಟಕದ ಜನರ ಪ್ರಾಣ ಉಳಿಸಲು ನಮ್ಮ ಕೈಲಾದಷ್ಟು ಸಹಾಯ ಮಾಡುವ ಸಮಯ ಬಂದಿದೆ ಎಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ವಿನಮ್ರ ಮನವಿ. ಕರ್ನಾಟಕದಾದ್ಯಂತದ ಆಸ್ಪತ್ರೆಗಳು ರಕ್ತದ ಕೊರತೆಯನ್ನು ಎದುರಿಸುತ್ತಿವೆ. ಸ್ವಯಂ ಸೇವಕರು ಮತ್ತು ರಕ್ತದಾನ ಮಾಡಲು ಶಕ್ತರಿಗೆ ಇದು ಕರೆ. ಅಗತ್ಯವಿರುವ ಜನರೊಂದಿಗೆ ಒಗ್ಗಟ್ಟು ತೋರಿಸೋಣ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.