ETV Bharat / state

ಕೃಷ್ಣಭೈರೇಗೌಡ ನಿವಾಸದಲ್ಲಿ ಭೋಜನ್‌ ಪೇ ಚರ್ಚಾ: ಕೈ ನಾಯಕರು ಭಾಗಿ

author img

By

Published : Jul 30, 2019, 5:27 PM IST

ಮೈತ್ರಿ ಸರ್ಕಾರದ ಪತನದ ಹಿನ್ನೆಲೆಯಲ್ಲಿ ಸಭೆ ಮೇಲೆ ಸಭೆ ನಡೆಸುತ್ತಿರುವ ಕೈ ನಾಯಕರು ಇಂದು ಕೂಡಾ ಕೃಷ್ಣಭೈರೇಗೌಡ ನಿವಾಸದಲ್ಲಿ ಭೋಜನದ ಮೀಟಿಂಗ್ ನಡೆಸಿ ಪಕ್ಷದ ಮುಂದಿನ ಹೋರಾಟ ಮತ್ತು ನಿಲುವಿನ ಕುರಿತು ಚರ್ಚಿಸಿದರು.

ಕಾಂಗ್ರೇಸ್ ನಾಯಕರ ಸಭೆ

ಬೆಂಗಳೂರು : ರಾಜ್ಯ ಮೈತ್ರಿ ಸರ್ಕಾರ ಪತನ ನಂತರ ಮುಂದೇನು ಎನ್ನುವ ವಿಚಾರವಾಗಿ ಕೈ ನಾಯಕರು ನಿರಂತರವಾಗಿ ಸಭೆ ನಡೆಸುತ್ತಿದ್ದಾರೆ. ಇಂದು ಕೃಷ್ಣಭೈರೇಗೌಡ ನಿವಾಸದಲ್ಲಿ ಭೋಜನ ಕೂಟ ಏರ್ಪಡಿಸಿ ಮತ್ತೆ ಮೀಟಿಂಗ್‌ ನಡೆಸಲಾಗಿದೆ.

ಮಾಜಿ ಸಚಿವ ಕೃಷ್ಣಭೈರೇಗೌಡ ನಿವಾಸದಲ್ಲಿ ನಡೆದ ಊಟದ ಸಭೆಯಲ್ಲಿ, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ಜಮೀರ್ ಅಹಮ್ಮದ್, ವಿಧಾನ ಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು.

ಕೃಷ್ಣಭೈರೇಗೌಡ ನಿವಾಸದಲ್ಲಿ ಭೋಜನ ಕೂಟದ ಬಳಿಕ ತೆರಳುತ್ತಿರುವ ಕೈ ನಾಯಕರು

ಮೈತ್ರಿ ಸರ್ಕಾರದಲ್ಲಿ ಸಹಕಾರ ನೀಡಿದ ಪಕ್ಷದ ನಾಯಕರಿಗೆ ಕೃತಜ್ಞತೆ ಸಲ್ಲಿಸಲು ಭೋಜನಕೂಟವನ್ನು ಮಾಜಿ ಸಚಿವ ಕೃಷ್ಣಬೈರೇಗೌಡ ಹಮ್ಮಿಕೊಂಡಿದ್ದು, ಯಾವುದೇ ಸಭೆ ನಡೆಸಿಲ್ಲವೆಂದು ನಾಯಕರು ಹೇಳಿದ್ದಾರೆ.

ಜೆಡಿಎಸ್ ಜತೆ ಕೈ ಜೋಡಿಸಿ ಪಕ್ಷಕ್ಕೆ ಸಾಕಷ್ಟು ನಷ್ಟ ಆಗಿದೆ ಎಂಬ ಅಭಿಪ್ರಾಯ ಈ ವೇಳೆ ಕೇಳಿ ಬಂದಿದೆ. ಜೊತೆಗೆ ಹೈಕಮಾಂಡ್​ಗೆ ಈ ಬಗ್ಗೆ ಮಾಹಿತಿ ಒದಗಿಸಿ ಮೈತ್ರಿ ಮುರಿದುಕೊಳ್ಳುವ ಪ್ರಸ್ತಾಪ ಮತ್ತು ಅನರ್ಹಗೊಂಡ ಅತೃಪ್ತ ಶಾಸಕರ ನಡೆಯ ಬಗ್ಗೆಯೂ ಚರ್ಚಿಸಲಾಗಿದೆ. ಈ ಕುರಿತು ಪಕ್ಷದ ನಿಲುವು ಮತ್ತು ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಮಾತುಕತೆ ನಡೆದಿದೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.

ಬೆಂಗಳೂರು : ರಾಜ್ಯ ಮೈತ್ರಿ ಸರ್ಕಾರ ಪತನ ನಂತರ ಮುಂದೇನು ಎನ್ನುವ ವಿಚಾರವಾಗಿ ಕೈ ನಾಯಕರು ನಿರಂತರವಾಗಿ ಸಭೆ ನಡೆಸುತ್ತಿದ್ದಾರೆ. ಇಂದು ಕೃಷ್ಣಭೈರೇಗೌಡ ನಿವಾಸದಲ್ಲಿ ಭೋಜನ ಕೂಟ ಏರ್ಪಡಿಸಿ ಮತ್ತೆ ಮೀಟಿಂಗ್‌ ನಡೆಸಲಾಗಿದೆ.

ಮಾಜಿ ಸಚಿವ ಕೃಷ್ಣಭೈರೇಗೌಡ ನಿವಾಸದಲ್ಲಿ ನಡೆದ ಊಟದ ಸಭೆಯಲ್ಲಿ, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ಜಮೀರ್ ಅಹಮ್ಮದ್, ವಿಧಾನ ಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು.

ಕೃಷ್ಣಭೈರೇಗೌಡ ನಿವಾಸದಲ್ಲಿ ಭೋಜನ ಕೂಟದ ಬಳಿಕ ತೆರಳುತ್ತಿರುವ ಕೈ ನಾಯಕರು

ಮೈತ್ರಿ ಸರ್ಕಾರದಲ್ಲಿ ಸಹಕಾರ ನೀಡಿದ ಪಕ್ಷದ ನಾಯಕರಿಗೆ ಕೃತಜ್ಞತೆ ಸಲ್ಲಿಸಲು ಭೋಜನಕೂಟವನ್ನು ಮಾಜಿ ಸಚಿವ ಕೃಷ್ಣಬೈರೇಗೌಡ ಹಮ್ಮಿಕೊಂಡಿದ್ದು, ಯಾವುದೇ ಸಭೆ ನಡೆಸಿಲ್ಲವೆಂದು ನಾಯಕರು ಹೇಳಿದ್ದಾರೆ.

ಜೆಡಿಎಸ್ ಜತೆ ಕೈ ಜೋಡಿಸಿ ಪಕ್ಷಕ್ಕೆ ಸಾಕಷ್ಟು ನಷ್ಟ ಆಗಿದೆ ಎಂಬ ಅಭಿಪ್ರಾಯ ಈ ವೇಳೆ ಕೇಳಿ ಬಂದಿದೆ. ಜೊತೆಗೆ ಹೈಕಮಾಂಡ್​ಗೆ ಈ ಬಗ್ಗೆ ಮಾಹಿತಿ ಒದಗಿಸಿ ಮೈತ್ರಿ ಮುರಿದುಕೊಳ್ಳುವ ಪ್ರಸ್ತಾಪ ಮತ್ತು ಅನರ್ಹಗೊಂಡ ಅತೃಪ್ತ ಶಾಸಕರ ನಡೆಯ ಬಗ್ಗೆಯೂ ಚರ್ಚಿಸಲಾಗಿದೆ. ಈ ಕುರಿತು ಪಕ್ಷದ ನಿಲುವು ಮತ್ತು ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಮಾತುಕತೆ ನಡೆದಿದೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.

Intro:newsBody:ಕೃಷ್ಣ ಬೈರೇಗೌಡ ನಿವಾಸದಲ್ಲಿ ಕೈ ನಾಯಕರಿಂದ ಊಟದ ಮೀಟಿಂಗ್

ಬೆಂಗಳೂರು: ರಾಜ್ಯ ಮೈತ್ರಿ ಸರ್ಕಾರ ಪತನ ನಂತರ ಮುಂದೆ ಏನು ಮಾಡುವುದು ಎನ್ನುವ ವಿಚಾರವಾಗಿ ಅಲ್ಲಲ್ಲಿ ಸಭೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರು ಇಂದು ಕೂಡ ಊಟದ ಸಭೆ ನಡೆಸಿದರು.
ಬೆಂಗಳೂರಿನ ಮೂರು ಸಚಿವರ ಕ್ವಾರ್ಟರ್ಸ್ ನಲ್ಲಿರುವ ಮಾಜಿ ಸಚಿವ ಕೃಷ್ಣಬೈರೇಗೌಡರ ನಿವಾಸದಲ್ಲಿ ಇಂದು ಊಟದ ಸಭೆ ನಡೆಯಿತು. ಮಾಜಿ ಸಿಎಂ ಸಿದ್ದರಾಮಯ್ಯ, ನಿರ್ಗಮಿತ ಸ್ಪೀಕರ್ ರಮೇಶ್ ಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ಜಮೀರ್ ಅಹಮದ್, ವಿಧಾನ ಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.
ಸಚಿವರಾಗಿ ಈ ನಿವಾಸ ಬಳಸುತ್ತಿದ್ದ ಕೃಷ್ಣ ಬೈರೇಗೌಡ ಸದ್ಯವೇ ನಿವಾಸ ಖಾಲಿ ಮಾಡಬೇಕಿದೆ. ಅಲ್ಲದೇ ಕಳೆದ ಒಂದು ವರ್ಷ ರಮೇಶ್ ಕುಮಾರ್ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೇ ಇತರೆ ನಾಯಕರು ಉತ್ತಮ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಲು ಈ ಊಟದ ಕಾರ್ಯಕ್ರಮವನ್ನು ಕೃಷ್ಣಬೈರೇಗೌಡ ಹಮ್ಮಿಕೊಂಡಿದ್ದರು. ಎಲ್ಲಾ ನಾಯಕರು ಆಗಮಿಸಿ, ಊಟ ಸವಿದು ತೆರಳಿದ್ದು, ಯಾವ ನಾಯಕರೂ ಮಾತನಾಡಿಲ್ಲ. ಮಾಧ್ಯಮದವರಿಗೆ ಯಾವುದೇ ಪ್ರತಿಕ್ರಿಯೆ ನೀಡದೇ, ಕೇವಲ ಊಟ ಮಾಡಿ ತೆರಳಿದ್ದೇವೆ. ಯಾವುದೇ ಸಭೆ ನಡೆಸಿಲ್ಲ, ನಡೆಸಲು ಸೇರಿರಲಿಲ್ಲ ಎಂದು ಹೇಳಿದ್ದಾರೆ.
ಮೈತ್ರಿ ಸರ್ಕಾರ ಪತನವಾಗಿದೆ. ಈ ಸಂದರ್ಭ ಸಮರ್ಥ ಪ್ರತಿಪಕ್ಷವಾಗಿ ಕಾಂಗ್ರೆಸ್ ಕಾರ್ಯನಿರ್ವಹಿಸಬೇಕಿದೆ. ಅದಾಗಲೇ ಜೆಡಿಎಸ್ ಜತೆ ಕೈಜೋಡಿಸಿ ಸಾಕಷ್ಟು ನಷ್ಟ ಆಗಿದೆ. ಹೈಕಮಾಂಡ್ಗೆ ಈ ಬಗ್ಗೆ ಮಾಹಿತಿ ಒದಗಿಸಿ, ಹೇಗಾದರೂ ಮೈತ್ರಿ ಮುರಿದುಕೊಳ್ಳುವ ಮಾತು ಆಡುವ ಸಂಬಂಧ ಯಾವ ರೀತಿ ಪ್ರಸ್ತಾಪ ಮಂಡಿಸಬೇಕು ಎಂಬ ಬಗ್ಗೆ ಸುದೀರ್ಘ ಚರ್ಚೆ ನಡೆಸುತ್ತಿರುವ ನಾಯಕರು ಇಂದು ಕೂಡ ಈ ನಿಟ್ಟಿನಲ್ಲೇ ಮಾತನಾಡಿದ್ದಾರೆ.
ಎಲ್ಲೆಡೆ ಸಭೆ ನಡೆಯುತ್ತಿದ್ದು, ಇಂದು ಅತೃಪ್ತರು ಕೂಡ ನಗರದಲ್ಲಿ ಸಭೆ ನಡೆಸಲಿದ್ದಾರೆ. ಇವರು ಸುಪ್ರಿಂ ಕೋರ್ಟ್ ಮೆಟ್ಟಿಲೇರಲಿದ್ದು, ಈ ಸಂಬಂಧ ಪಕ್ಷದ ನಿಲುವು, ಮುಂದಿನ ಹೋರಾಟ ಕೈಗೊಳ‍್ಳಬಹುದಾದ ವಿಚಾರ ಕುರಿತು ಇಂದು ಊಟದ ಸಭೆಯಲ್ಲಿ ಚರ್ಚಿಸಲಾಗಿದೆ ಎಂಬ ಮಾಹಿತಿ ಇದೆ.


Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.