ETV Bharat / state

ಸಿನಿಮಾ ಮಂದಿರಗಳಲ್ಲಿ ಎಲ್ಲಾ ಆಸನಗಳ ಭರ್ತಿಗೆ ಅವಕಾಶ ನೀಡಲು ಚಿಂತನೆ: ಸಿಎಂ

author img

By

Published : Jan 5, 2021, 4:41 PM IST

ಕೋವಿಡ್ ಹಿನ್ನೆಲೆಯಲ್ಲಿ ವಿಧಿಸಿದ್ದ ನಿರ್ಬಂಧ ಸಡಿಲಿಕೆ ಮಾಡಿ ಸಿನಿಮಾ ಮಂದಿರಗಳಲ್ಲಿ ಎಲ್ಲಾ ಆಸನಗಳ ಭರ್ತಿಗೆ ಅವಕಾಶ ನೀಡಿ ಎಂದು ಮಲೆನಾಡು ಭಾಗದ ಶಾಸಕರು ಮಾಡಿದ ಮನವಿಗೆ ಸಿಎಂ ಬಿಎಸ್​ವೈ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

CM thinking about provide 100% seating  in Cenema theator
ಸಿನಿಮಾ ಮಂದಿರದಲ್ಲಿ ಆಸನ ಭರ್ತಿಗೆ ಸಿಎಂ ಚಿಂತನೆ

ಬೆಂಗಳೂರು : ಸಾರಿಗೆ ಸೇವೆಯಲ್ಲಿ ಶೇ.100ರ ಆಸನ ಭರ್ತಿಗೆ ಅವಕಾಶ ನೀಡಿರುವಂತೆ ಸಿನಿಮಾ ಮಂದಿರಗಳಲ್ಲಿಯೂ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ ಕಲ್ಪಿಸುವ ಕುರಿತು ಚಿಂತನೆ ನಡೆಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ನಗರದ ಕ್ಯಾಪಿಟಲ್ ಹೋಟೆಲ್​ನಲ್ಲಿ ಚಿಕ್ಕಮಗಳೂರು, ದಾವಣಗೆರೆ, ಶಿವಮೊಗ್ಗ, ಉತ್ತರ ಕನ್ನಡ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ ಜಿಲ್ಲೆಗಳ ಶಾಸಕರ ಜೊತೆ ಸಮಾಲೋಚನೆ ವೇಳೆ ಸಿಎಂ ಈ ರೀತಿಯ ಭರವಸೆ ನೀಡಿದ್ದಾರೆ.

ಓದಿ : ಯತ್ನಾಳ್ ಎಲ್ಲೆ ಮೀರುತ್ತಿದ್ದರೂ ಮೌನವಾಗಿದ್ದೇಕೆ: ಸಚಿವರ ನಡೆಗೆ ರೇಣುಕಾಚಾರ್ಯ ಆಕ್ಷೇಪ

ಸಿನಿಮಾ ಥಿಯೇಟರ್, ಪಿವಿಆರ್​ಗಳಲ್ಲಿ ಶೇ.100ರಷ್ಟು ರಿಲ್ಯಾಕ್ಸೇಶನ್ ಕೊಡಬೇಕು. ತಮಿಳುನಾಡಿನ ಮಾದರಿಯಲ್ಲಿ ರಿಲ್ಯಾಕ್ಸೇಶನ್ ಕೊಡಿ, ಪ್ರೇಕ್ಷಕರ ಸಂಖ್ಯೆ ಶೇ.50 ಇರುವುದನ್ನು ಶೇ.100 ಕ್ಕೆ ಹೆಚ್ಚಳ ಮಾಡಿ ಎಂದು ಶಾಸಕರ ಸಭೆಯಲ್ಲಿ ಮಲೆನಾಡು ಭಾಗದ ಶಾಸಕರೊಬ್ಬರು ಮನವಿ ಮಾಡಿದರು. ಶಾಸಕರ ಮನವಿಗೆ ಸ್ಪಂದಿಸಿದ ಸಿಎಂ, ಶೀಘ್ರದಲ್ಲೇ ಆ ಬಗ್ಗೆ ನಿರ್ಧಾರ ಮಾಡುವುದಾಗಿ ಭರವಸೆ ನೀಡಿದರು.

ನಂತರ ಆಯಾ ಶಾಸಕರು ಸ್ಥಳೀಯ ಸಮಸ್ಯೆಗಳು, ಮಲೆನಾಡು ಭಾಗದ ಸಾಮಾನ್ಯ ಸಮಸ್ಯೆಗಳು, ಕಸ್ತೂರಿ ರಂಗನ್ ವರದಿಯಿಂದ ಆಗುವ ಸಮಸ್ಯೆಗಳ ಕುರಿತು ಪ್ರಸ್ತಾಪ ಮಾಡಿದರು.

ಬೆಂಗಳೂರು : ಸಾರಿಗೆ ಸೇವೆಯಲ್ಲಿ ಶೇ.100ರ ಆಸನ ಭರ್ತಿಗೆ ಅವಕಾಶ ನೀಡಿರುವಂತೆ ಸಿನಿಮಾ ಮಂದಿರಗಳಲ್ಲಿಯೂ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ ಕಲ್ಪಿಸುವ ಕುರಿತು ಚಿಂತನೆ ನಡೆಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ನಗರದ ಕ್ಯಾಪಿಟಲ್ ಹೋಟೆಲ್​ನಲ್ಲಿ ಚಿಕ್ಕಮಗಳೂರು, ದಾವಣಗೆರೆ, ಶಿವಮೊಗ್ಗ, ಉತ್ತರ ಕನ್ನಡ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ ಜಿಲ್ಲೆಗಳ ಶಾಸಕರ ಜೊತೆ ಸಮಾಲೋಚನೆ ವೇಳೆ ಸಿಎಂ ಈ ರೀತಿಯ ಭರವಸೆ ನೀಡಿದ್ದಾರೆ.

ಓದಿ : ಯತ್ನಾಳ್ ಎಲ್ಲೆ ಮೀರುತ್ತಿದ್ದರೂ ಮೌನವಾಗಿದ್ದೇಕೆ: ಸಚಿವರ ನಡೆಗೆ ರೇಣುಕಾಚಾರ್ಯ ಆಕ್ಷೇಪ

ಸಿನಿಮಾ ಥಿಯೇಟರ್, ಪಿವಿಆರ್​ಗಳಲ್ಲಿ ಶೇ.100ರಷ್ಟು ರಿಲ್ಯಾಕ್ಸೇಶನ್ ಕೊಡಬೇಕು. ತಮಿಳುನಾಡಿನ ಮಾದರಿಯಲ್ಲಿ ರಿಲ್ಯಾಕ್ಸೇಶನ್ ಕೊಡಿ, ಪ್ರೇಕ್ಷಕರ ಸಂಖ್ಯೆ ಶೇ.50 ಇರುವುದನ್ನು ಶೇ.100 ಕ್ಕೆ ಹೆಚ್ಚಳ ಮಾಡಿ ಎಂದು ಶಾಸಕರ ಸಭೆಯಲ್ಲಿ ಮಲೆನಾಡು ಭಾಗದ ಶಾಸಕರೊಬ್ಬರು ಮನವಿ ಮಾಡಿದರು. ಶಾಸಕರ ಮನವಿಗೆ ಸ್ಪಂದಿಸಿದ ಸಿಎಂ, ಶೀಘ್ರದಲ್ಲೇ ಆ ಬಗ್ಗೆ ನಿರ್ಧಾರ ಮಾಡುವುದಾಗಿ ಭರವಸೆ ನೀಡಿದರು.

ನಂತರ ಆಯಾ ಶಾಸಕರು ಸ್ಥಳೀಯ ಸಮಸ್ಯೆಗಳು, ಮಲೆನಾಡು ಭಾಗದ ಸಾಮಾನ್ಯ ಸಮಸ್ಯೆಗಳು, ಕಸ್ತೂರಿ ರಂಗನ್ ವರದಿಯಿಂದ ಆಗುವ ಸಮಸ್ಯೆಗಳ ಕುರಿತು ಪ್ರಸ್ತಾಪ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.