ETV Bharat / state

ಬಟ್ಟೆ ವ್ಯಾಪಾರಿ ಕೊಲೆಗೆ ಮತ್ತಷ್ಟು ಟ್ವಿಸ್ಟ್​...  ಜೋಡಿ ಹಕ್ಕಿಗಳಿಂದ ಬಯಲಾಗುತ್ತಲೇ ಇವೆ ರೋಚಕ ಕಹಾನಿಗಳು! - ಬಟ್ಟೆ ವ್ಯಾಪಾರಿ ಜೈಕುಮಾರ್

ಮಗಳ ಶೋಕಿ ಜೀವನದ ಹಿಂದಿನ ಕಾರಣ ತಿಳಿದ ಅಪ್ಪ, ಮಗಳಿಗೆ ಬುದ್ಧಿವಾದ ಹೇಳಿದರೆ, ಮಗಳು ಪ್ರಿಯಕರನ ಜೊತೆಗೂಡಿ ಅಪ್ಪನನ್ನೇ ಕೊಲೆ ಮಾಡಿದ್ದಾಳೆ.

ಜೈಕುಮಾರ್ ಹಾಗೂ ಅವರ ಪತ್ನಿ
author img

By

Published : Aug 21, 2019, 11:31 AM IST

Updated : Aug 21, 2019, 1:04 PM IST

ಬೆಂಗಳೂರು: ಬಟ್ಟೆ ವ್ಯಾಪಾರಿ ಕೊಲೆ ಪ್ರಕರಣ ಸಂಬಂಧಿಸಿದಂತೆ ಉತ್ತರ ವಿಭಾಗದ ರಾಜಾಜಿನಗರ ಪೊಲೀಸರು ಆರೋಪಿಯಿಂದ ಕೆಲ ರೋಚಕ ಮಾಹಿತಿಗಳನ್ನು ಪಡೆದಿದ್ದಾರೆ.

ಬಟ್ಟೆ ವ್ಯಾಪಾರಿಯ ಕೊಲೆಗೆ ಪ್ರಕರಣದಲ್ಲಿ ಆರೋಪಿಯಾದ ಪ್ರವೀಣ್​ ಹಾಗೂ ವ್ಯಾಪಾರಿಯ ಮಗಳು ಇಬ್ಬರು ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಜೈಕುಮಾರ್​ ಅವರ ವ್ಯಾಪಾರ ಚೆನ್ನಾಗಿದ್ದ ಕಾರಣ ಕುಟುಂಬದವರನ್ನು ಜನರು ರಾಯಲ್​ ಆಗೇ ನೋಡುತ್ತಿದ್ದರು.

ಮಧ್ಯಮವರ್ಗದ ಕುಟುಂಬಕ್ಕೆ ಸೇರಿದ ಪ್ರವೀಣ್​ ಹಾಗೂ ಜೈಕುಮಾರ್​ ಅವರ ಮಗಳು ಮೋಜು ಮಸ್ತಿಯಲ್ಲೇ ಕಾಲಕಳೆಯುತ್ತಿದ್ದರು. ಅಪ್ಪನ ಜೇಬಿನಿಂದ ಹಣ ಕದ್ದು ಅದರಲ್ಲಿ ಪ್ರಿಯಕರನೊಂದಿಗೆ ಶೋಕಿ ಜೀವನ ನಡೆಸುತ್ತಿದ್ದ ಅಪ್ರಾಪ್ತೆ, ಪ್ರವೀಣ್​ನೊಂದಿಗೆ ಮಡಿಕೇರಿ, ಮುಂಬೈನ ಲಾಡ್ಜ್​ಗಳಲ್ಲಿ ಇಬ್ಬರೂ ತಂಗುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ. ಈ ವಿಚಾರ ಜೈಕುಮಾರ್ ಅವರಿಗೆ ತಿಳಿದು ಮಗಳಿಗೆ ಹಲವು ಬಾರಿ ಬುದ್ಧಿ ಹೇಳಿದ್ದರು ಎನ್ನಲಾಗಿದೆ.

ಕೊನೆಗೆ ಬಟ್ಟೆ ವ್ಯಾಪಾರಿ ಜೈಕುಮಾರ್​ ಅವರನ್ನು ಅಪ್ರಾಪ್ತೆ ಮಗಳು ಹಾಗೂ ಪ್ರಿಯಕರ ಸೇರಿ ಕೊಲೆ ಮಾಡಿದ್ದಾರೆ.

ಅಪ್ರಾಪ್ತೆಗೆ ಕೌನ್ಸೆಲಿಂಗ್​: ಮಾದಕ ದ್ರವ್ಯಗಳಿಗೆ ವ್ಯಸನಿಯಾಗಿರುವ ಅಪ್ರಾಪ್ತೆಗೆ ಮಕ್ಕಳ ಪುನರ್ವಸತಿ ಕೇಂದ್ರದಲ್ಲಿ ಕೌನ್ಸೆಲಿಂಗ್​ ಮಾಡಲಾಗುತ್ತಿದೆ.

ಆರೋಪಿ ತಂದೆ, ಅಪ್ರಾಪ್ತೆ ತಾಯಿ ಕಂಗಾಲು: ಇನ್ನು ಆರೋಪಿ ಪ್ರವೀಣ್ ಮಧ್ಯಮ ವರ್ಗದ ಕುಟುಂಬದವನಾಗಿದ್ದು, ಪ್ರಕಾಶ್ ಒಬ್ಬನೇ ಮಗ. ಒಬ್ಬನೇ ಮಗನಾಗಿದ್ದರೂ ಕೂಡ ತಂದೆ ತಾಯಿ‌ ಕಷ್ಟ ಪಟ್ಟು ‌ಮಗನಿಗೆ ಬಿಕಾಂ ಓದಿಸಿದ್ದರು. ಆದರೆ ಮಗ ಇದೀಗ ಈ ರೀತಿಯಾಗಿ ಯಡವಟ್ಟು ಮಾಡಿಕೊಂಡಿದ್ದು, ಒಂದು ಜೀವವನ್ನೇ ಬಲಿ ಪಡೆದಿರುವ ಕಾರಣ ಪೋಷಕರು ಕಂಗಾಲಾಗಿದ್ದಾರೆ.

ಹಾಗೆ ಅಪ್ರಾಪ್ತ ಬಾಲಕಿಯ ತಾಯಿ ಕೂಡ ಮಗಳ ಈ ಕೃತ್ಯದಿಂದ ಕುಗ್ಗಿಹೋಗಿದ್ದಾರೆ ಎಂದು ತಿಳಿದುಬಂದಿದೆ. ರಾಜಾಜಿನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಆರೋಪಿಗಳನ್ನು ಬಂಧಿಸಲಾಗಿದೆ.

ಬೆಂಗಳೂರು: ಬಟ್ಟೆ ವ್ಯಾಪಾರಿ ಕೊಲೆ ಪ್ರಕರಣ ಸಂಬಂಧಿಸಿದಂತೆ ಉತ್ತರ ವಿಭಾಗದ ರಾಜಾಜಿನಗರ ಪೊಲೀಸರು ಆರೋಪಿಯಿಂದ ಕೆಲ ರೋಚಕ ಮಾಹಿತಿಗಳನ್ನು ಪಡೆದಿದ್ದಾರೆ.

ಬಟ್ಟೆ ವ್ಯಾಪಾರಿಯ ಕೊಲೆಗೆ ಪ್ರಕರಣದಲ್ಲಿ ಆರೋಪಿಯಾದ ಪ್ರವೀಣ್​ ಹಾಗೂ ವ್ಯಾಪಾರಿಯ ಮಗಳು ಇಬ್ಬರು ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಜೈಕುಮಾರ್​ ಅವರ ವ್ಯಾಪಾರ ಚೆನ್ನಾಗಿದ್ದ ಕಾರಣ ಕುಟುಂಬದವರನ್ನು ಜನರು ರಾಯಲ್​ ಆಗೇ ನೋಡುತ್ತಿದ್ದರು.

ಮಧ್ಯಮವರ್ಗದ ಕುಟುಂಬಕ್ಕೆ ಸೇರಿದ ಪ್ರವೀಣ್​ ಹಾಗೂ ಜೈಕುಮಾರ್​ ಅವರ ಮಗಳು ಮೋಜು ಮಸ್ತಿಯಲ್ಲೇ ಕಾಲಕಳೆಯುತ್ತಿದ್ದರು. ಅಪ್ಪನ ಜೇಬಿನಿಂದ ಹಣ ಕದ್ದು ಅದರಲ್ಲಿ ಪ್ರಿಯಕರನೊಂದಿಗೆ ಶೋಕಿ ಜೀವನ ನಡೆಸುತ್ತಿದ್ದ ಅಪ್ರಾಪ್ತೆ, ಪ್ರವೀಣ್​ನೊಂದಿಗೆ ಮಡಿಕೇರಿ, ಮುಂಬೈನ ಲಾಡ್ಜ್​ಗಳಲ್ಲಿ ಇಬ್ಬರೂ ತಂಗುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ. ಈ ವಿಚಾರ ಜೈಕುಮಾರ್ ಅವರಿಗೆ ತಿಳಿದು ಮಗಳಿಗೆ ಹಲವು ಬಾರಿ ಬುದ್ಧಿ ಹೇಳಿದ್ದರು ಎನ್ನಲಾಗಿದೆ.

ಕೊನೆಗೆ ಬಟ್ಟೆ ವ್ಯಾಪಾರಿ ಜೈಕುಮಾರ್​ ಅವರನ್ನು ಅಪ್ರಾಪ್ತೆ ಮಗಳು ಹಾಗೂ ಪ್ರಿಯಕರ ಸೇರಿ ಕೊಲೆ ಮಾಡಿದ್ದಾರೆ.

ಅಪ್ರಾಪ್ತೆಗೆ ಕೌನ್ಸೆಲಿಂಗ್​: ಮಾದಕ ದ್ರವ್ಯಗಳಿಗೆ ವ್ಯಸನಿಯಾಗಿರುವ ಅಪ್ರಾಪ್ತೆಗೆ ಮಕ್ಕಳ ಪುನರ್ವಸತಿ ಕೇಂದ್ರದಲ್ಲಿ ಕೌನ್ಸೆಲಿಂಗ್​ ಮಾಡಲಾಗುತ್ತಿದೆ.

ಆರೋಪಿ ತಂದೆ, ಅಪ್ರಾಪ್ತೆ ತಾಯಿ ಕಂಗಾಲು: ಇನ್ನು ಆರೋಪಿ ಪ್ರವೀಣ್ ಮಧ್ಯಮ ವರ್ಗದ ಕುಟುಂಬದವನಾಗಿದ್ದು, ಪ್ರಕಾಶ್ ಒಬ್ಬನೇ ಮಗ. ಒಬ್ಬನೇ ಮಗನಾಗಿದ್ದರೂ ಕೂಡ ತಂದೆ ತಾಯಿ‌ ಕಷ್ಟ ಪಟ್ಟು ‌ಮಗನಿಗೆ ಬಿಕಾಂ ಓದಿಸಿದ್ದರು. ಆದರೆ ಮಗ ಇದೀಗ ಈ ರೀತಿಯಾಗಿ ಯಡವಟ್ಟು ಮಾಡಿಕೊಂಡಿದ್ದು, ಒಂದು ಜೀವವನ್ನೇ ಬಲಿ ಪಡೆದಿರುವ ಕಾರಣ ಪೋಷಕರು ಕಂಗಾಲಾಗಿದ್ದಾರೆ.

ಹಾಗೆ ಅಪ್ರಾಪ್ತ ಬಾಲಕಿಯ ತಾಯಿ ಕೂಡ ಮಗಳ ಈ ಕೃತ್ಯದಿಂದ ಕುಗ್ಗಿಹೋಗಿದ್ದಾರೆ ಎಂದು ತಿಳಿದುಬಂದಿದೆ. ರಾಜಾಜಿನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಆರೋಪಿಗಳನ್ನು ಬಂಧಿಸಲಾಗಿದೆ.

Intro:ಬಟ್ಟೆ ವ್ಯಾಪಾರಿ ಕೊಲೆ ಪ್ರಕರಣ
ಅಪ್ಪನ ಜೇಬಿನ ಹಣದಿಂದ ಪ್ರೀಯಕರನ ಜೊತೆ ಶೋಕಿ ಜೀವನ
ತನಿಖೆಯಲ್ಲಿ ಬಯಾಲಾಯ್ತು ರೋಚಕ ಕಹಾನಿ

ಬಟ್ಟೆ ವ್ಯಾಪಾರಿ ಕೊಲೆ ಪ್ರಕರಣ ಸಂಬಂದ ಉತ್ತರ ವಿಭಾಗದ ರಾಜಾಜಿನಗರ ಪೊಲೀಸರು ಆರೋಪಿಯಿಂದ ಕೆಲ ರೋಚಕ ಕಹಾನಿಗಳನ್ನ ಪಡೆದಿದ್ದಾರೆ.

ಅಪ್ರಾಪ್ತೆ ಹಾಗೂ ಅಪ್ರಾಪ್ತೆ ಪ್ರಿಯಕರ ಪ್ರವೀಣ್ ಇಬ್ಬರು ಕಳೆದ ಕೆಲ ವರ್ಷಗಳಿಂದ ಪ್ರೀತಿ ಮಾಡುತ್ತಿದ್ದು ಇಬ್ಬರು ಶೋಕಿ ಜೀವನ ನಡೆಸುತ್ತಿದ್ದರು.. ಕೊಲೆಯಾದ ಜೈಕುಮಾರು ಬಟ್ಟೆ ವ್ಯಾಪರ ಮಾಡುತ್ತಿದ್ದ ಕಾರಣ ಕುಟುಂಬಸ್ಥರನ್ನ ರಾಯಲ್ ರೀತಿ ನೋಡ್ತಿದ್ರು..

ಇದನ್ನೆ ಮೀಸ್ ಯುಜ್ ಮಾಡಿದ ಅಪ್ರಾಪ್ತೆ ತನ್ನಪ್ರಿಯಕರ ಮಧ್ಯಮವರ್ಗದ ಕುಟುಂಬದವಾನಾಗಿರುವ ಕಾರಣ ಅಪ್ಪನ ಜೇಬಿನ ಹಣವನ್ನ ಪ್ರವೀಣ್ಗೆ ನೀಡ್ತಿದ್ಲು ಇಬ್ಬರು ಪಬ್, ಪ್ಯಾಷನ್ ಶೋ ,ಶೋಕಿಲಾಲ ಜೀವನ ನಡೆಸ್ತಿದ್ರು..

ಅಷ್ಟು ಮಾತ್ರವಲ್ಲದೇ ಅಪ್ಪನ ಜೇಬಿನ ಹಣದಿಂದ ಅಪ್ರಾಪ್ತೆ ಪ್ರಿಯಕರನ ಜೊತೆ ಮಡಿಕೇರಿ ಮುಂಬೈ ಹೀಗೆ ಬೇರೆ ಬೇರೆ ಕಡೆ ಅಪ್ಪ ಅಮ್ಮನಿಗೆ ಸುಳ್ಳು ಹೇಳಿ ತೆರಳಿ ಅಲ್ಲಿ ಲಾಡ್ಜ್ ನಲ್ಲಿ ಇಬ್ಬರುತಂಗುತ್ತಿದ್ದರು. ಈ ವಿಚಾರ ಜೈಕುಮಾರ್ ಅವ್ರಿಗೆ ತಿಳಿದು ಅಪ್ರಾಪ್ತೆ ಮಗಳಿಗೆ ಬಹಳಷ್ಟು ಬುದ್ದಿವಾದ ಹೇಳಿದ್ದರು..

ಅಪ್ರಾಪ್ತೆಗೆ ಕೌನ್ಸಿಲಿಂಗ್ ನಡೆಸುತ್ತಿರುವ ಪುನರ್ವಸತಿ ಕೇಂದ್ರ..

ಸದ್ಯ ಅಪ್ರಾಪ್ತೆ ಆರೋಪಿ ಮಕ್ಕಳ ಪುನರ್ವಸತಿ ಕೇಂದ್ರದಲ್ಲಿ ದ್ದು ಆಕೆಗೆ ಅಲ್ಲಿನ ಸಮಾಲೋಚಕಿಯರು ಕೌನ್ಸಿಲಿಂಗ್ ಮಾಡ್ತಿದ್ದಾರೆ. ಯಾಕಂದ್ರೆ ಅಪ್ರಾಪ್ತೆಯಾಗಿರುವ ಕಾರಣ ಬಾಲಕಿ ಈಗಾಗ್ಲೇ ಮಾದಕ ವಸ್ತುಗಳಿಗೆ ಎಡಿಟ್ ಆಗಿದ್ದಾಳೆ.

ಆರೋಪಿ ತಂದೆ ಅಪ್ರಾಪ್ತೆ ತಾಯಿ ಕಂಗಾಲು..

ಇನ್ನು ಆರೋಪಿ ಪ್ರವೀಣ್ ಮಧ್ಯಮ ವರ್ಗದ ಕುಟುಂಬಸ್ಥರಾಗಿದ್ದು ಪ್ರಕಾಶ್ ಒಬ್ಬನೇ ಮಗನಾಗಿದ್ದ. ಒಬ್ಬನೇ ಮಗನಾಗಿದ್ದರು ತಂದೆ ತಾಯಿ‌ ಕಷ್ಟ ಪಟ್ಟು‌ಮಗನಿಗೆ ಬಿಕಾಂ ವಿಧ್ಯಾಭ್ಯಾಸ ನೀಡಿದ್ದರು ಆದರೆ ಮಗ ಇದೀಗ ಈ ರೀತಿಯಾದ ಕಾರಣ ಪೋಷಕರು ಕಂಗಾಲಾಗಿದ್ದಾರೆ. ಹಾಗೆ ಅಪ್ರಾಪ್ತೆ ತಾಯಿ ಕೂಡ ಮಗಳ ಈ ಕೃತ್ಯ ನೋಡಿ ಕುಗ್ಗಿಹೋಗಿದ್ದಾರೆ ಎಂದು ತಿಳಿದುಬಂದಿದೆ

ಏನಿದು ಪ್ರಕರಣ
ಕಳೆದ ಭಾನುವಾರ ರಾಜಾಜಿನಗರ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ಬಟ್ಟೆ ವ್ಯಾಪಾರಿ ಜೈನ್ ಕುಮಾರ್ ಅವರನ್ನ ಅಪ್ರಾಪ್ತೆ ಮಗಳು ಹಾಗೂ ಪ್ರಿಯಕರ ಸೇರಿ ಕೊಲೆ ಮಾಡಿದ್ದರು ನಂತ್ರ ರಾಜಾಜಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರೆದು ಆರೋಪಿಗಳನ್ನ ಬಂಧಿಸಿದ್ದರು.
Body:KN_BNG_01_MURDER_7204498Conclusion:KN_BNG_01_MURDER_7204498
Last Updated : Aug 21, 2019, 1:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.