ETV Bharat / state

ಭಿಕ್ಷೆ ಬೇಡುವ ಚಿಣ್ಣರ ಕೈಗಳಿಂದ ಮೂಡಿದ ಬಣ್ಣಬಣ್ಣದ ಕಲಾಕೃತಿಗಳು - Childerns day special news,

ಮೆಟ್ರೋ ಆರ್ಟ್​ ಕೇಂದ್ರದಲ್ಲಿ 'ಬಣ್ಣದ ಕೈಗಳು' ಎಂಬ ಶೀರ್ಷಿಕೆಯಡಿ ಮಕ್ಕಳ ದಿನಾಚರಣೆ ಪ್ರಯುಕ್ತ ಸ್ಪರ್ಶ ಟ್ರಸ್ಟ್ ಮತ್ತು ಮಕ್ಕಳ ರಕ್ಷಣಾ ಆಯೋಗ ಜಂಟಿಯಾಗಿ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಿದವು. ಕಾರ್ಯಕ್ರಮದಲ್ಲಿ ಸುಮಾರು 50ಕ್ಕೂ ಹೆಚ್ಚು ಮಕ್ಕಳು ಬಿಡಿಸಿದ್ದ ಕಲಾಕೃತಿಗಳ‌ನ್ನು ಪ್ರದರ್ಶನಕ್ಕೆ ಇರಿಸಲಾಗಿದೆ.

ಬೇಡುವ ಕೈಗಳಿಗೆ‌ ಬಣ್ಣದ ಚಿತ್ತಾರ
author img

By

Published : Nov 15, 2019, 3:02 AM IST

ಬೆಂಗಳೂರು: ಮಕ್ಕಳ ದಿನಾಚರಣೆಯ ಪ್ರಯುಕ್ತ ಬೆಂಗಳೂರಿನ ರಂಗೋಲಿ ಮೆಟ್ರೋ ಆರ್ಟ್​ ಕೇಂದ್ರದ ಬಳಿ ಭಿಕ್ಷಾಟನೆ ಮಾಡುತ್ತಿದ ಮಕ್ಕಳಿಗೆ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆ ಏರ್ಪಡಿಸಲಾಯಿತು.


ಸ್ಪರ್ಶ ಟ್ರಸ್ಟ್ ಮತ್ತು ಮಕ್ಕಳ ರಕ್ಷಣಾ ಆಯೋಗ ಆಯೋಜಿಸಿದ ಸ್ಥಳದಲ್ಲೇ ಚಿತ್ರ ಬಿಡಿಸಿ ಕಾರ್ಯಕ್ರಮ

'ಬಣ್ಣದ ಕೈಗಳು' ಎಂಬ ಶೀರ್ಷಿಕೆಯಡಿ ಸ್ಪರ್ಶ ಟ್ರಸ್ಟ್ ಮತ್ತು ಮಕ್ಕಳ ರಕ್ಷಣಾ ಆಯೋಗ ಜಂಟಿಯಾಗಿ ಈ ಸ್ಪರ್ಧೆ ಆಯೋಜಿಸಿದವು. ಸ್ಥಳದಲ್ಲೇ ಚಿತ್ರ ಬಿಡಿಸುವ ಕಾರ್ಯಕ್ರಮದಲ್ಲಿ ಸುಮಾರು 50ಕ್ಕೂ ಹೆಚ್ಚು ಮಕ್ಕಳು ಬಿಡಿಸಿದ್ದ ಕಲಾಕೃತಿಗಳ‌ನ್ನು ಪ್ರದರ್ಶನಕ್ಕೆ ಇರಿಸಲಾಯಿತು.

ಸ್ಪರ್ಶ ಟ್ರಸ್ಟ್, ಬೀದಿಯಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ಮಕ್ಕಳನ್ನು ಕರೆತಂದು ಶೈಕ್ಷಣಿಕ ಕಲಿಕೆಗೆ ನೆರವಾಗುತ್ತಿದೆ. ಮಕ್ಕಳೇ ಬಿಡಿಸಿರುವ ಕಲಾಕೃತಿಗಳು ಭಾನುವಾರದವರೆಗೂ ಪ್ರದರ್ಶನಕ್ಕೆ ಇರಿಸಲಾಗುತ್ತಿದೆ. ಈ ಕಲಾಕೃತಿಗಳು ಮಾರಾಟಕ್ಕಿದ್ದು, ಇದರಿಂದ ಬಂದ ಹಣವನ್ನ ಮಕ್ಕಳ ಶೈಕ್ಷಣಿಕ ವೆಚ್ಚಗಳಿಗೆ ಭರಿಸಲಾಗುತ್ತದೆ.

ಬೆಂಗಳೂರು: ಮಕ್ಕಳ ದಿನಾಚರಣೆಯ ಪ್ರಯುಕ್ತ ಬೆಂಗಳೂರಿನ ರಂಗೋಲಿ ಮೆಟ್ರೋ ಆರ್ಟ್​ ಕೇಂದ್ರದ ಬಳಿ ಭಿಕ್ಷಾಟನೆ ಮಾಡುತ್ತಿದ ಮಕ್ಕಳಿಗೆ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆ ಏರ್ಪಡಿಸಲಾಯಿತು.


ಸ್ಪರ್ಶ ಟ್ರಸ್ಟ್ ಮತ್ತು ಮಕ್ಕಳ ರಕ್ಷಣಾ ಆಯೋಗ ಆಯೋಜಿಸಿದ ಸ್ಥಳದಲ್ಲೇ ಚಿತ್ರ ಬಿಡಿಸಿ ಕಾರ್ಯಕ್ರಮ

'ಬಣ್ಣದ ಕೈಗಳು' ಎಂಬ ಶೀರ್ಷಿಕೆಯಡಿ ಸ್ಪರ್ಶ ಟ್ರಸ್ಟ್ ಮತ್ತು ಮಕ್ಕಳ ರಕ್ಷಣಾ ಆಯೋಗ ಜಂಟಿಯಾಗಿ ಈ ಸ್ಪರ್ಧೆ ಆಯೋಜಿಸಿದವು. ಸ್ಥಳದಲ್ಲೇ ಚಿತ್ರ ಬಿಡಿಸುವ ಕಾರ್ಯಕ್ರಮದಲ್ಲಿ ಸುಮಾರು 50ಕ್ಕೂ ಹೆಚ್ಚು ಮಕ್ಕಳು ಬಿಡಿಸಿದ್ದ ಕಲಾಕೃತಿಗಳ‌ನ್ನು ಪ್ರದರ್ಶನಕ್ಕೆ ಇರಿಸಲಾಯಿತು.

ಸ್ಪರ್ಶ ಟ್ರಸ್ಟ್, ಬೀದಿಯಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ಮಕ್ಕಳನ್ನು ಕರೆತಂದು ಶೈಕ್ಷಣಿಕ ಕಲಿಕೆಗೆ ನೆರವಾಗುತ್ತಿದೆ. ಮಕ್ಕಳೇ ಬಿಡಿಸಿರುವ ಕಲಾಕೃತಿಗಳು ಭಾನುವಾರದವರೆಗೂ ಪ್ರದರ್ಶನಕ್ಕೆ ಇರಿಸಲಾಗುತ್ತಿದೆ. ಈ ಕಲಾಕೃತಿಗಳು ಮಾರಾಟಕ್ಕಿದ್ದು, ಇದರಿಂದ ಬಂದ ಹಣವನ್ನ ಮಕ್ಕಳ ಶೈಕ್ಷಣಿಕ ವೆಚ್ಚಗಳಿಗೆ ಭರಿಸಲಾಗುತ್ತದೆ.

Intro:ಬೇಡುವ ಕೈಗಳಿಗೆ‌ ಬಣ್ಣದ ಚಿತ್ತಾರ; ಮನೆ ಮಾಡಿದ‌ ಮಕ್ಕಳ ದಿನ...

ಬೆಂಗಳೂರು: ಜಗತ್ತಿನೊಂದಿಗೇ ಇದ್ದರೂ, ಇವರಿಗೆ ಜಗದ ಅರಿವಿಲ್ಲ.. ಹಾಗಂತ ಇವರ ಬದುಕು ಕತ್ತಲಲ್ಲೂ ಇಲ್ಲ.. ಇವರಿಗೆ ಇರುವ ಪ್ರತಿಭೆಯೇ ಬಂಡವಾಳ.. ಆತ್ಮವಿಶ್ವಾಸನೇ ಎಲ್ಲವನ್ನೂ ಗೆಲ್ಲೋದಿಕ್ಕೆ ಇವರಿಗಿರೋ ಅಸ್ತ್ರ.. ತಮ್ಮದೇ ಪುಟ್ಟ ಪ್ರಪಂಚದಲ್ಲಿ ಸಾವಿರಾರು ಕನಸು ಕಾಣ್ತಿರೋ ಈ ಮಕ್ಕಳು, ಇಂದು ಕೈಗಳನ್ನ ಬಣ್ಣ ಮಾಡಿಕೊಂಡು ಮಕ್ಕಳ ದಿನವನ್ನ ಆಚರಿಸಿದರು.. ‌

ಅಂದಹಾಗೇ, ಮಕ್ಕಳು ಅವರಿಗೊಂದು ದಿನ ಅಂದು ಕೂಡಲೇ ಕುಣಿದು ಕುಪ್ಪಳಿಸಿದೋದು ಸಹಜ.. ಇಂದು ಮಕ್ಕಳ ದಿನಾಚರಣೆ ಈ ನಿಟ್ಟಿನಲ್ಲಿ ಬೆಂಗಳೂರಿನ ರಂಗೋಲಿ ಮೆಟ್ರೋ ಸ್ಟೇಷನ್ ಬಳಿ ಮಕ್ಕಳು ಕೈನಲ್ಲಿ ಕುಂಚಗಳನ್ನ ಹಿಡಿದು ಕಲಾವಿದರಾಗಿದರು..

ಬಣ್ಣದ ಕೈಗಳು ಎಂಬ ಶೀರ್ಷಿಕೆಯಡಿ ಸ್ಪರ್ಶ ಟ್ರಸ್ಟ್ ಮತ್ತು ಮಕ್ಕಳ ರಕ್ಷಣಾ ಆಯೋಗದೊಂದಿಗೆ ಜೊತೆಯಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಸುಮಾರು 50ಕ್ಕೂ ಹೆಚ್ಚು ಮಕ್ಕಳೇ ಬಿಡಿಸಿದ್ದ ಕಲಾಕೃತಿಗಳ‌ನ್ನು ಪ್ರದರ್ಶನಕ್ಕೆ ಇಡಲಾಗಿತ್ತು..‌ ಸ್ಪರ್ಶ ಟ್ರಸ್ಟ್ ನವರು ಬೀದಿಯಲ್ಲಿ
ಭಿಕ್ಷಾಟನೆ ಮಾಡುತ್ತಿದ್ದ ಮಕ್ಕಳನ್ನ ರಕ್ಷಿಸಿ ಆ ಮಕ್ಕಳ ಬಾಳಿಗೆ ಬೆಳಕಾಗಿದ್ದಾರೆ.‌ ಅಷ್ಟೇಲ್ಲದೇ ಆ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಸಹಾಯ ಮಾಡುತ್ತಿದ್ದಾರೆ.‌‌ ಆ ಟ್ರಸ್ಟ್ ನ ಮಕ್ಕಳೆಲ್ಲ ಇಂದು ತಮ್ಮಗೆ ತೋಚಿದ ಕಲಾಕೃತಿಗಳನ್ನು ಬಿಡಿಸಿ, ಅದನ್ನ ಪ್ರದರ್ಶನ ಮಾಡಿದರು..‌

ಭಾನುವಾರದ ವರೆಗೂ ಮಕ್ಕಳ ಬಣ್ಣದ ಕೈಗಳ ಚಿತ್ರಕಲಾ ಪ್ರದರ್ಶನ ಇರಲಿದೆ.‌ ಮಕ್ಕಳ ಕಲಾಕೃತಿಗಳು ಮಾರಾಟಕ್ಕಿದ್ದು, ಅದರಿಂದ ಬಂದ ಹಣವನ್ನ ಮಕ್ಕಳ ಶಿಕ್ಷಣಕ್ಕೆ ಕಲ್ಯಾಣಕ್ಕೆ ಇಡಲಾಗುತ್ತೆ..

ಒಟ್ಟಾರೆ, ಮಕ್ಕಳ ದಿನಾಚರಣೆಯಂದು ಮಕ್ಕಳ ಒಳಗಿರುವ ಅವರ ಕಲೆಯನ್ನ ಹೊರಗೆಳೆದು, ಅವರ ಪ್ರತಿಭೆಗೆ ಬೆಳಕಾಗಿದ್ದು ನಿಜಕ್ಕೂ ಸಂತಸ ವಿಷಯ..


KN_BNG_3_CHILDRENS_DAY_SCRIPT_7201801

BYTE- ಶಿವಪ್ರಸಾದ್- ಆಯೋಜಕರು
BaYte- ಕಶಿಶ್ ಮರೇಷಾ- ವಿದ್ಯಾರ್ಥಿನಿ




Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.