ETV Bharat / state

ನೈಟ್ ಕರ್ಫ್ಯೂ ಎಫೆಕ್ಟ್ : ರೈಲ್ವೆ ಮುಂಗಡ ಟಿಕೆಟ್​ ಬುಕಿಂಗ್​ ಸಮಯದಲ್ಲಿ ಬದಲಾವಣೆ - railway advance ticket booking timing news

ಬೆಂಗಳೂರಿನಲ್ಲಿ ಟಿಕೆಟ್ ಕಾಯ್ದಿರಿಸುವ ಕೇಂದ್ರವು ಭಾನುವಾರ ಬೆಳಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ತೆರೆದಿರುತ್ತದೆ. ಬೆಂಗಳೂರಿನಲ್ಲಿ ರಾತ್ರಿ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಕೆಎಸ್ಆರ್ ಬೆಂಗಳೂರು ಮತ್ತು ಯಶವಂತಪುರಗಳಲ್ಲಿ ಇರುವ ಪಾರ್ಸೆಲ್ ಕಾರ್ಯಾಲಯಗಳು ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆವರೆಗೆ ಕಾರ್ಯ ನಿರ್ವಹಿಸುತ್ತವೆ.

ರೈಲ್ವೆ ಮುಂಗಡ ಟಿಕೆಟ್​ ಬುಕಿಂಗ್​ ಸಮಯದಲ್ಲಿ ಬದಲಾವಣೆ
ರೈಲ್ವೆ ಮುಂಗಡ ಟಿಕೆಟ್​ ಬುಕಿಂಗ್​ ಸಮಯದಲ್ಲಿ ಬದಲಾವಣೆ
author img

By

Published : Jun 29, 2020, 11:11 PM IST

ಬೆಂಗಳೂರು: ಕೊರೊನಾ ದಿನೆ ದಿನೇ ಹೆಚ್ಚುತ್ತಿದ್ದು ಇದನ್ನು ನಿಯಂತ್ರಿಸುವ ಸಲುವಾಗಿ ಮತ್ತೆ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಈ ನಿಟ್ಟಿನಲ್ಲಿ ನೈರುತ್ಯ ರೈಲ್ವೆ ಇಲಾಖೆಯ ಟಿಕೆಟ್ ಕಾಯ್ದಿರಿಸುವ ಕೇಂದ್ರಗಳ ಕೆಲಸದ ಸಮಯ ಬದಲಾವಣೆ ಮಾಡಲಾಗಿದೆ. ಈ ಬದಲಾವಣೆ ಇಂದಿನಿಂದಲೇ ಜಾರಿಯಲಿದ್ದು, ಬೆಳಗ್ಗೆ 8 ರಿಂದ ಸಂಜೆ 6 ಗಂಟೆ ವರೆಗೆ ಕಾರ್ಯ ನಿರ್ವಹಿಸುತ್ತವೆ.

ಭಾನುವಾರ ಕೆಎಸ್​ಆರ್ ಬೆಂಗಳೂರು ಹೊರತು ಪಡಿಸಿ ಇತರ ಕಡೆ ಕಾಯ್ದಿರಿಸುವ ಕೇಂದ್ರಗಳಿಗೆ ರಜೆ ಇರಲಿದೆ. ಬೆಂಗಳೂರಿನಲ್ಲಿ ಟಿಕೆಟ್ ಕಾಯ್ದಿರಿಸುವ ಕೇಂದ್ರವು ಭಾನುವಾರ ಬೆಳಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ತೆರೆದಿರುತ್ತದೆ. ಬೆಂಗಳೂರಿನಲ್ಲಿ ರಾತ್ರಿ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಕೆಎಸ್ಆರ್ ಬೆಂಗಳೂರು ಮತ್ತು ಯಶವಂತಪುರಗಳಲ್ಲಿ ಇರುವ ಪಾರ್ಸೆಲ್ ಕಾರ್ಯಾಲಯಗಳು ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆವರೆಗೆ ಕಾರ್ಯ ನಿರ್ವಹಿಸುತ್ತವೆ.

ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆವರೆಗೆ ಯಾವ್ಯಾವ ಕೇಂದ್ರಗಳಲ್ಲಿ ಟಿಕೆಟ್ ಕಾಯ್ದಿರಿಸಬಹುದು?

  • ಕೆಎಸ್ ಆರ್ - ಬೆಂಗಳೂರು
  • ಬೆಂಗಳೂರು ದಂಡು
  • ಯಶವಂತಪುರ
  • ಕೃಷ್ಣರಾಜಪುರ
  • ಹೊಸೂರು
  • ತುಮಕೂರು
  • ಮಂಡ್ಯ
  • ಯಲಹಂಕ
  • ಕೆಂಗೇರಿ

ಧರ್ಮಪುರಿ, ಸತ್ಯಸಾಯಿ, ಪ್ರಶಾಂತಿ ನಿಲಯಂ ಹಿಂದೂಪುರ ಮತ್ತು ಬಂಗಾರಪೇಟೆಗಳಲ್ಲಿರುವ ಟಿಕೆಟ್ ಕಾಯ್ದಿರಿಸುವ ಕೇಂದ್ರಗಳು ವಾರದ ದಿನಗಳಲ್ಲಿ 8 ರಿಂದ ಮಧ್ಯಾಹ್ನ 2 ಗಂಟೆವರೆಗೆ ಕಾರ್ಯ ನಿರ್ವಹಿಸಲಿದ್ದು, ಅವುಗಳ ಕೆಲಸ ಅವಧಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಬೆಂಗಳೂರು: ಕೊರೊನಾ ದಿನೆ ದಿನೇ ಹೆಚ್ಚುತ್ತಿದ್ದು ಇದನ್ನು ನಿಯಂತ್ರಿಸುವ ಸಲುವಾಗಿ ಮತ್ತೆ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಈ ನಿಟ್ಟಿನಲ್ಲಿ ನೈರುತ್ಯ ರೈಲ್ವೆ ಇಲಾಖೆಯ ಟಿಕೆಟ್ ಕಾಯ್ದಿರಿಸುವ ಕೇಂದ್ರಗಳ ಕೆಲಸದ ಸಮಯ ಬದಲಾವಣೆ ಮಾಡಲಾಗಿದೆ. ಈ ಬದಲಾವಣೆ ಇಂದಿನಿಂದಲೇ ಜಾರಿಯಲಿದ್ದು, ಬೆಳಗ್ಗೆ 8 ರಿಂದ ಸಂಜೆ 6 ಗಂಟೆ ವರೆಗೆ ಕಾರ್ಯ ನಿರ್ವಹಿಸುತ್ತವೆ.

ಭಾನುವಾರ ಕೆಎಸ್​ಆರ್ ಬೆಂಗಳೂರು ಹೊರತು ಪಡಿಸಿ ಇತರ ಕಡೆ ಕಾಯ್ದಿರಿಸುವ ಕೇಂದ್ರಗಳಿಗೆ ರಜೆ ಇರಲಿದೆ. ಬೆಂಗಳೂರಿನಲ್ಲಿ ಟಿಕೆಟ್ ಕಾಯ್ದಿರಿಸುವ ಕೇಂದ್ರವು ಭಾನುವಾರ ಬೆಳಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ತೆರೆದಿರುತ್ತದೆ. ಬೆಂಗಳೂರಿನಲ್ಲಿ ರಾತ್ರಿ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಕೆಎಸ್ಆರ್ ಬೆಂಗಳೂರು ಮತ್ತು ಯಶವಂತಪುರಗಳಲ್ಲಿ ಇರುವ ಪಾರ್ಸೆಲ್ ಕಾರ್ಯಾಲಯಗಳು ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆವರೆಗೆ ಕಾರ್ಯ ನಿರ್ವಹಿಸುತ್ತವೆ.

ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆವರೆಗೆ ಯಾವ್ಯಾವ ಕೇಂದ್ರಗಳಲ್ಲಿ ಟಿಕೆಟ್ ಕಾಯ್ದಿರಿಸಬಹುದು?

  • ಕೆಎಸ್ ಆರ್ - ಬೆಂಗಳೂರು
  • ಬೆಂಗಳೂರು ದಂಡು
  • ಯಶವಂತಪುರ
  • ಕೃಷ್ಣರಾಜಪುರ
  • ಹೊಸೂರು
  • ತುಮಕೂರು
  • ಮಂಡ್ಯ
  • ಯಲಹಂಕ
  • ಕೆಂಗೇರಿ

ಧರ್ಮಪುರಿ, ಸತ್ಯಸಾಯಿ, ಪ್ರಶಾಂತಿ ನಿಲಯಂ ಹಿಂದೂಪುರ ಮತ್ತು ಬಂಗಾರಪೇಟೆಗಳಲ್ಲಿರುವ ಟಿಕೆಟ್ ಕಾಯ್ದಿರಿಸುವ ಕೇಂದ್ರಗಳು ವಾರದ ದಿನಗಳಲ್ಲಿ 8 ರಿಂದ ಮಧ್ಯಾಹ್ನ 2 ಗಂಟೆವರೆಗೆ ಕಾರ್ಯ ನಿರ್ವಹಿಸಲಿದ್ದು, ಅವುಗಳ ಕೆಲಸ ಅವಧಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.