ETV Bharat / state

ನಾಳೆ ತುರ್ತು ಸಚಿವ ಸಂಪುಟ ಸಭೆ: ಲಾಕ್​​ಡೌನ್ ವಿಸ್ತರಣೆ ಕುರಿತು ನಿರ್ಧಾರ?

author img

By

Published : Apr 8, 2020, 5:30 PM IST

Updated : Apr 8, 2020, 6:56 PM IST

ಕೊರೊನಾ ಹರಡುವ ಭೀತಿ ಹಿನ್ನೆಲೆ ರಾಜ್ಯದಲ್ಲಿ ಲಾಕ್​ಡೌನ್ ಜಾರಿಯಾದಾಗಿನಿಂದ ಕೊರೊನಾ ಹರಡುವಿಕೆಗೆ ತಕ್ಕಮಟ್ಟಿನ ಕಡಿವಾಣ ಬಿದ್ದಂತಾಗಿದೆ. ಈ ಹಿನ್ನೆಲೆ ಲಾಕ್​ಡೌನ್ ಆದೇಶ ಮುಂದೂಡಬೇಕಾ ಅಥವಾ ಕೊನೆಗಾಣಿಸಬೇಕಾ ಎಂಬ ನಿರ್ಧಾರ ನಾಳೆ ಹೊರಬೀಳುವ ಸಾಧ್ಯತೆ ಇದೆ.

Cabinet meeting called tomorrow: Significant decision on lockdown extension?
ನಾಳೆ ತುರ್ತು ಸಚಿವ ಸಂಪುಟ ಸಭೆ: ಲಾಕ್​​ಡೌನ್ ವಿಸ್ತರಣೆ ಕುರಿತು ಮಹತ್ವದ ನಿರ್ಧಾರ?

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಳೆ ತುರ್ತು ಸಚಿವ ಸಂಪುಟ ಸಭೆ ಕರೆದಿದ್ದಾರೆ.

ಕೊರೊನಾ ಬಳಿಕ ಮೂರನೇ ತುರ್ತು ಕ್ಯಾಬಿನೆಟ್ ಸಭೆ ಇದಾಗಿದ್ದು, ಲಾಕ್​ಡೌನ್ ಮುಂದುವರಿಕೆ, ಟಾಸ್ಕ್ ಪೋರ್ಸ್ ಸಭೆಯ ತೀರ್ಮಾನ, ತಜ್ಞರ ಅಭಿಪ್ರಾಯ ಹಾಗೂ ಚಿಕಿತ್ಸೆ ಸೇರಿದಂತೆ ಎಲ್ಲಾ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.

ವಿಧಾನಸೌಧದಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ಸಚಿವ ಸಂಪುಟ‌ ಸಭೆ ನಡೆಯಲಿದ್ದು, ಜಿಲ್ಲೆಗಳಲ್ಲಿ ಯಾವ ರೀತಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ, ಲಾಕ್​ಡೌನ್ ಹಿನ್ನೆಲೆ ಸಾರ್ವಜನಿಕರ ಸ್ಪಂದನೆ, ಲಾಕ್​ಡೌನ್ ಮುಂದೂಡಿಕೆ, ಸೋಂಕು ಹೆಚ್ಚು ಇರುವ ಜಿಲ್ಲೆಗಳಲ್ಲಿ ಹೆಚ್ಚಿನ ಜಾಗೃತೆ ವಹಿಸುವ ಕುರಿತು, ಪ್ರತಿ ಜಿಲ್ಲೆಯಲ್ಲಿ ಕೈಗೊಂಡಿರುವ ಕ್ರಮಗಳು, ಹಳ್ಳಿಗಳ ಪರಿಸ್ಥಿತಿ, ನಿತ್ಯದ ಅವಶ್ಯ ವಸ್ತುಗಳ ಖರೀದಿಗೆ ಮುಗಿಬೀಳುವ ಜನರನ್ನು ಕಂಟ್ರೋಲ್ ಮಾಡುವ ವಿಚಾರ, ಸೋಂಕು ಮತ್ತಷ್ಟು ಹೆಚ್ಚಿದಂತೆ ಇನ್ನು ಯಾವ ರೀತಿಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬೆಲ್ಲಾ ವಿಚಾರಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.

ಲಾಕ್​ಡೌನ್ ಮತ್ತಷ್ಟು ದಿನಗಳ ಕಾಲ ವಿಸ್ತರಿಸುವ ಅಗತ್ಯತೆ ಇರುವ ಕಾರಣ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಗುತ್ತದೆ. ಒಂದು ವೇಳೆ ವಿಸ್ತರಣೆ ಅನಿವಾರ್ಯವಾದರೆ ಯಾವ ರೀತಿ ಲಾಕ್​ಡೌನ್ ಮಾಡಬೇಕು? ಯಾವ ಜಿಲ್ಲೆಗಳಲ್ಲಿ ಯಾವ ರೀತಿ ಲಾಕ್​ಡೌನ್ ವಿಸ್ತರಿಸಬೇಕು? ಎನ್ನುವ ಕುರಿತು ಮಹತ್ವದ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಳೆ ತುರ್ತು ಸಚಿವ ಸಂಪುಟ ಸಭೆ ಕರೆದಿದ್ದಾರೆ.

ಕೊರೊನಾ ಬಳಿಕ ಮೂರನೇ ತುರ್ತು ಕ್ಯಾಬಿನೆಟ್ ಸಭೆ ಇದಾಗಿದ್ದು, ಲಾಕ್​ಡೌನ್ ಮುಂದುವರಿಕೆ, ಟಾಸ್ಕ್ ಪೋರ್ಸ್ ಸಭೆಯ ತೀರ್ಮಾನ, ತಜ್ಞರ ಅಭಿಪ್ರಾಯ ಹಾಗೂ ಚಿಕಿತ್ಸೆ ಸೇರಿದಂತೆ ಎಲ್ಲಾ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.

ವಿಧಾನಸೌಧದಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ಸಚಿವ ಸಂಪುಟ‌ ಸಭೆ ನಡೆಯಲಿದ್ದು, ಜಿಲ್ಲೆಗಳಲ್ಲಿ ಯಾವ ರೀತಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ, ಲಾಕ್​ಡೌನ್ ಹಿನ್ನೆಲೆ ಸಾರ್ವಜನಿಕರ ಸ್ಪಂದನೆ, ಲಾಕ್​ಡೌನ್ ಮುಂದೂಡಿಕೆ, ಸೋಂಕು ಹೆಚ್ಚು ಇರುವ ಜಿಲ್ಲೆಗಳಲ್ಲಿ ಹೆಚ್ಚಿನ ಜಾಗೃತೆ ವಹಿಸುವ ಕುರಿತು, ಪ್ರತಿ ಜಿಲ್ಲೆಯಲ್ಲಿ ಕೈಗೊಂಡಿರುವ ಕ್ರಮಗಳು, ಹಳ್ಳಿಗಳ ಪರಿಸ್ಥಿತಿ, ನಿತ್ಯದ ಅವಶ್ಯ ವಸ್ತುಗಳ ಖರೀದಿಗೆ ಮುಗಿಬೀಳುವ ಜನರನ್ನು ಕಂಟ್ರೋಲ್ ಮಾಡುವ ವಿಚಾರ, ಸೋಂಕು ಮತ್ತಷ್ಟು ಹೆಚ್ಚಿದಂತೆ ಇನ್ನು ಯಾವ ರೀತಿಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬೆಲ್ಲಾ ವಿಚಾರಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.

ಲಾಕ್​ಡೌನ್ ಮತ್ತಷ್ಟು ದಿನಗಳ ಕಾಲ ವಿಸ್ತರಿಸುವ ಅಗತ್ಯತೆ ಇರುವ ಕಾರಣ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಗುತ್ತದೆ. ಒಂದು ವೇಳೆ ವಿಸ್ತರಣೆ ಅನಿವಾರ್ಯವಾದರೆ ಯಾವ ರೀತಿ ಲಾಕ್​ಡೌನ್ ಮಾಡಬೇಕು? ಯಾವ ಜಿಲ್ಲೆಗಳಲ್ಲಿ ಯಾವ ರೀತಿ ಲಾಕ್​ಡೌನ್ ವಿಸ್ತರಿಸಬೇಕು? ಎನ್ನುವ ಕುರಿತು ಮಹತ್ವದ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.

Last Updated : Apr 8, 2020, 6:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.