ಬೆಂಗಳೂರು : ಕತ್ತು ಕೊಯ್ದ ಸ್ಥಿತಿಯಲ್ಲಿ ಓಲಾ ಕ್ಯಾಬ್ ಡ್ರೈವರ್ ಶವ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.
ಬಿಡಿಎ ಲೇಔಟ್ನ ಮಾರುತಿ ನಗರದ ಕಾರೊಂದರಲ್ಲಿ ಚಾಲಕನ ಮೃತದೇಹ ಸಿಕ್ಕಿದೆ. ನಾಗರಭಾವಿಯ ದೀಪಾ ಕಾಂಪ್ಲೆಕ್ಸ್ ಬಳಿ ಮಂಜುನಾಥ್ ಎಂಬ ಓಲಾ ಕ್ಯಾಬ್ ಚಾಲಕ ವಾಸವಾಗಿದ್ದರು. ನಿನ್ನೆ ರಾತ್ರಿ ಮನೆಯಿಂದ ಹೋದ ಮಂಜುನಾಥ್, ಇಂದು ಕಾರಿನ ಒಳಗಡೆ ಶವವಾಗಿ ದೊರೆತಿದ್ದಾರೆ.
ಸ್ಥಳಕ್ಕೆ ಜ್ಞಾನಭಾರತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಕಾರಿನ ಕೀ ಒಳಗೆ ಇತ್ತು. ಮಂಜುನಾಥ್ ಸಾವಿನ ಸುತ್ತ ಹಲವಾರು ಅನುಮಾನಗಳು ಹುಟ್ಟಿಕೊಂಡಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.