ಬೆಂಗಳೂರು: ಬುರೆವಿ ಚಂಡಮಾರುತದ ಪರಿಣಾಮದಿಂದ ಸಿಲಿಕಾನ್ ಸಿಟಿಯಲ್ಲಿ ದಟ್ಟ ಮೋಡ ಕವಿದ ವಾತಾವರಣವಿದೆ. ಶೀತಗಾಳಿ ಬೀಸುತ್ತಿದೆ. ಅಷ್ಟೇ ಅಲ್ಲದೆ, ಅಲ್ಲಲ್ಲಿ ತುಂತುರು ಮಳೆಯಾಗುತ್ತಿದೆ.
ನೈರುತ್ಯ ಬಂಗಾಳ ಉಪಸಾಗರದಲ್ಲಿ ಸೈಕ್ಲೋನ್ ಅಬ್ಬರಿಸುತ್ತಿದೆ. ಇದರ ಎಫೆಕ್ಟ್ ಉದ್ಯಾನ ನಗರಿಗೂ ತಟ್ಟಿದೆ. ಕಳೆದ ರಾತ್ರಿ ವೇಳೆ ಈ ಸೈಕ್ಲೋನ್ ಶ್ರೀಲಂಕಾ ಕರಾವಳಿ ದಾಟಿ, ಪಶ್ಚಿಮ ದಿಕ್ಕಿನಲ್ಲಿ ಚಲಿಸಿ ಇಂದು ಕನ್ಯಾಕುಮಾರಿ ಪ್ರದೇಶಕ್ಕೆ ತಲುಪಿದೆ. ಹೀಗಾಗಿ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುತ್ತಿದೆ.