ETV Bharat / state

ಕಲಾಪ ಎಷ್ಟು ದಿನ‌ ನಡೆಯುತ್ತೆ ನೋಡೋಣ: ಮೈತ್ರಿ ಸರ್ಕಾರದ ವಿರುದ್ಧ ಬಿಎಸ್​​ವೈ ಗುಡುಗು - undefined

ವಿಶ್ವಾಸ ಮತ ಚರ್ಚೆ ಮಾಡದೆ ಎಷ್ಟು ದಿನ ಹೀಗೇ ಕಲಾಪ ನಡೆಸುತ್ತಾರೆ ನೊಡೋಣ ಎಂದು ಮೈತ್ರಿ ಸರ್ಕಾರದ‌ ವಿರುದ್ಧ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಗುಡುಗಿದ್ದಾರೆ.

ಕಲಾಪ ಎಷ್ಟು ದಿನ‌ ನಡೆಯುತ್ತೆ ನೋಡೋಣ: ಮೈತ್ರಿ ಸರ್ಕಾರದ ವಿರುದ್ದ ಬಿಎಸ್ವೈ ಗುಡುಗು
author img

By

Published : Jul 18, 2019, 9:36 PM IST

ಬೆಂಗಳೂರು: ವಿಶ್ವಾಸ ಮತ ಚರ್ಚೆ ಮಾಡದೆ ಎಷ್ಟು ದಿನ ಹೀಗೇ ಕಲಾಪ ನಡೆಸುತ್ತಾರೆ ನೊಡೋಣ ಎಂದು ಮೈತ್ರಿ ಸರ್ಕಾರದ‌ ವಿರುದ್ಧ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಗುಡುಗಿದ್ದಾರೆ.

ಬಿ.ಎಸ್.ಯಡಿಯೂರಪ್ಪ ಗುಡುಗು

ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಹುಮತ ಸಾಬೀತಿಗೆ ಅವರೇ ಕೇಳಿದ್ದು, ರಾತ್ರಿ 12 ಗಂಟೆ ಆದರೂ ಚರ್ಚೆಗೆ ಅವಕಾಶ ಕೊಡಿ ಎಂದಿದ್ದೆವು. ಆದರೆ ಅವರಿಗೆ ಕಾಲಹರಣ ಮಾಡುವುದೇ ಉದ್ದೇಶವಾಗಿದೆ. ಕುಂಟು ನೆಪ ಮಾಡಿ ಕಲಾಪ ಮುಂದೂಡುವುದೇ ಕಾಂಗ್ರೆಸ್, ಜೆಡಿಎಸ್ ಸದಸ್ಯರ ಯೋಜನೆ ಆಗಿತ್ತು. ಹೀಗಾಗಿ ನಾವು ರಾತ್ರಿಯಿಡೀ ಸತ್ಯಾಗ್ರಹ ಮಾಡುತ್ತಿದ್ದೇವೆ ಎಂದರು.

ಇಡೀ ದೇಶದ ಜನ ಕಲಾಪ ವೀಕ್ಷಿಸಿದ್ದು, ಸರ್ಕಾರಕ್ಕೆ ಬಹುಮತ ಇಲ್ಲ. ಹೀಗಾಗಿ ನಾವು ಅವಿಶ್ವಾಸ ನಿರ್ಣಯಕ್ಕೆ ಒತ್ತಾಯ ಮಾಡಿದ್ದೆವು. ಆದರೆ ಸ್ಪೀಕರ್ ರಮೇಶ್ ಕುಮಾರ್ ಅವರು, ಸಿಎಂ ಅವರು ವಿಶ್ವಾಸ ಮತಕ್ಕೆ ಅವಕಾಶ ಕೊಡಿ ಅಂತಾ ಕೇಳಿದ್ದಾರೆ ಅಂದಿದ್ದರು. ಅದಕ್ಕೆ ನಾವು ಅವಕಾಶ ನೀಡಿದ್ದೆವು. ವಿಶ್ವಾಸ ಮತಯಾಚನೆ ನಿರ್ಣಯ ಮಂಡಿಸಲಾಗದೆ ಸಿಎಂ 15 ನಿಮಿಷ ಮಾತನಾಡಿದರು. ಕಾಂಗ್ರೆಸ್, ಜೆಡಿಎಸ್ 98 ಸದಸ್ಯರಿದ್ದು, ನಾವು 105 ಶಾಸಕರಿದ್ದೆವು. ಬಹುಮತ ಇಲ್ಲದಿದ್ದರೂ ಮತಕ್ಕೆ ಹಾಕಲಿಲ್ಲ.
15 ಶಾಸಕರು ಸುಪ್ರೀಂ ಕೋರ್ಟ್​ಗೆ ಹೋಗಿದ್ದು, ಶಾಸಕರು ಸದನಕ್ಕೆ ಬರುವುದು, ಬಿಡುವುದು ಅವರಿಷ್ಟ ಎಂದು ಸುಪ್ರೀಂ ಕೋರ್ಟ್​ ತಿಳಿಸಿದೆ. ಆದರೂ ಕಲಾಪದಲ್ಲಿ ಅನಗತ್ಯವಾಗಿ ಈ ವಿಷಯವನ್ನು ಎಳೆದು ಕಾಲಹರಣ ಮಾಡಲಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸುಪ್ರೀಂ ಕೋರ್ಟ್ ಎಲ್ಲವನ್ನೂ‌ ಗಮನಿಸುತ್ತಿದೆ. ರಾಜ್ಯಪಾಲರು ಕೂಡ ನಮ್ಮ ದೂರು ಆಧರಿಸಿ ಸಂದೇಶ ರವಾನಿಸಿದ್ದಾರೆ. ರಾಜ್ಯಪಾಲರ ಸಂದೇಶಕ್ಕೂ ಸ್ಪಷ್ಟೀಕರಣವಿಲ್ಲದೇ ಪ್ರಜಾತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದಾರೆ. ಅಭಿವೃದ್ಧಿ ಕಾರ್ಯ ನಿಂತುಹೋಗಿದ್ದು, ಬಹುಮತ ಕಳೆದುಕೊಂಡ ಮೇಲೆ ರಾಜೀನಾಮೆ ಕೊಡಬೇಕಿತ್ತು. ದೇಶ ಎಲ್ಲವನ್ನೂ ಗಮನಿಸುತ್ತಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

ಬೆಂಗಳೂರು: ವಿಶ್ವಾಸ ಮತ ಚರ್ಚೆ ಮಾಡದೆ ಎಷ್ಟು ದಿನ ಹೀಗೇ ಕಲಾಪ ನಡೆಸುತ್ತಾರೆ ನೊಡೋಣ ಎಂದು ಮೈತ್ರಿ ಸರ್ಕಾರದ‌ ವಿರುದ್ಧ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಗುಡುಗಿದ್ದಾರೆ.

ಬಿ.ಎಸ್.ಯಡಿಯೂರಪ್ಪ ಗುಡುಗು

ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಹುಮತ ಸಾಬೀತಿಗೆ ಅವರೇ ಕೇಳಿದ್ದು, ರಾತ್ರಿ 12 ಗಂಟೆ ಆದರೂ ಚರ್ಚೆಗೆ ಅವಕಾಶ ಕೊಡಿ ಎಂದಿದ್ದೆವು. ಆದರೆ ಅವರಿಗೆ ಕಾಲಹರಣ ಮಾಡುವುದೇ ಉದ್ದೇಶವಾಗಿದೆ. ಕುಂಟು ನೆಪ ಮಾಡಿ ಕಲಾಪ ಮುಂದೂಡುವುದೇ ಕಾಂಗ್ರೆಸ್, ಜೆಡಿಎಸ್ ಸದಸ್ಯರ ಯೋಜನೆ ಆಗಿತ್ತು. ಹೀಗಾಗಿ ನಾವು ರಾತ್ರಿಯಿಡೀ ಸತ್ಯಾಗ್ರಹ ಮಾಡುತ್ತಿದ್ದೇವೆ ಎಂದರು.

ಇಡೀ ದೇಶದ ಜನ ಕಲಾಪ ವೀಕ್ಷಿಸಿದ್ದು, ಸರ್ಕಾರಕ್ಕೆ ಬಹುಮತ ಇಲ್ಲ. ಹೀಗಾಗಿ ನಾವು ಅವಿಶ್ವಾಸ ನಿರ್ಣಯಕ್ಕೆ ಒತ್ತಾಯ ಮಾಡಿದ್ದೆವು. ಆದರೆ ಸ್ಪೀಕರ್ ರಮೇಶ್ ಕುಮಾರ್ ಅವರು, ಸಿಎಂ ಅವರು ವಿಶ್ವಾಸ ಮತಕ್ಕೆ ಅವಕಾಶ ಕೊಡಿ ಅಂತಾ ಕೇಳಿದ್ದಾರೆ ಅಂದಿದ್ದರು. ಅದಕ್ಕೆ ನಾವು ಅವಕಾಶ ನೀಡಿದ್ದೆವು. ವಿಶ್ವಾಸ ಮತಯಾಚನೆ ನಿರ್ಣಯ ಮಂಡಿಸಲಾಗದೆ ಸಿಎಂ 15 ನಿಮಿಷ ಮಾತನಾಡಿದರು. ಕಾಂಗ್ರೆಸ್, ಜೆಡಿಎಸ್ 98 ಸದಸ್ಯರಿದ್ದು, ನಾವು 105 ಶಾಸಕರಿದ್ದೆವು. ಬಹುಮತ ಇಲ್ಲದಿದ್ದರೂ ಮತಕ್ಕೆ ಹಾಕಲಿಲ್ಲ.
15 ಶಾಸಕರು ಸುಪ್ರೀಂ ಕೋರ್ಟ್​ಗೆ ಹೋಗಿದ್ದು, ಶಾಸಕರು ಸದನಕ್ಕೆ ಬರುವುದು, ಬಿಡುವುದು ಅವರಿಷ್ಟ ಎಂದು ಸುಪ್ರೀಂ ಕೋರ್ಟ್​ ತಿಳಿಸಿದೆ. ಆದರೂ ಕಲಾಪದಲ್ಲಿ ಅನಗತ್ಯವಾಗಿ ಈ ವಿಷಯವನ್ನು ಎಳೆದು ಕಾಲಹರಣ ಮಾಡಲಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸುಪ್ರೀಂ ಕೋರ್ಟ್ ಎಲ್ಲವನ್ನೂ‌ ಗಮನಿಸುತ್ತಿದೆ. ರಾಜ್ಯಪಾಲರು ಕೂಡ ನಮ್ಮ ದೂರು ಆಧರಿಸಿ ಸಂದೇಶ ರವಾನಿಸಿದ್ದಾರೆ. ರಾಜ್ಯಪಾಲರ ಸಂದೇಶಕ್ಕೂ ಸ್ಪಷ್ಟೀಕರಣವಿಲ್ಲದೇ ಪ್ರಜಾತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದಾರೆ. ಅಭಿವೃದ್ಧಿ ಕಾರ್ಯ ನಿಂತುಹೋಗಿದ್ದು, ಬಹುಮತ ಕಳೆದುಕೊಂಡ ಮೇಲೆ ರಾಜೀನಾಮೆ ಕೊಡಬೇಕಿತ್ತು. ದೇಶ ಎಲ್ಲವನ್ನೂ ಗಮನಿಸುತ್ತಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

Intro:


ಬೆಂಗಳೂರು: ವಿಶ್ವಾಸ ಮತ ಚರ್ಚೆ ಮಾಡದೆ ಎಷ್ಟು ದಿನ ಹೀಗೇ ಕಲಾಪ ನಡೆಸುತ್ತಾರೆ ನೊಡೋಣ ಎಂದು ಮೈತ್ರಿ ಸರ್ಕಾರದ‌ ವಿರುದ್ಧ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಗುಡುಗಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು,ಬಹುತಮ ಸಾಬೀತಿಗೆ ಅವರೇ ಕೇಳಿದ್ದರು ರಾತ್ರಿ 12 ಗಂಟೆ ಆದರೂ ಚರ್ಚೆಗೆ ಅವಕಾಶ ಕೊಡಿ ಎಂದಿದ್ದೆವು ಆದರೆ ಅವರಿಗೆ ಕಾಲಹರಣ ಮಾಡುವುದೇ ಉದ್ದೇಶವಾಗಿದೆ. ಕುಂಟು ನೆಪಮಾಡಿ ಕಲಾಪ ಮುಂದೂಡುವುದೇ ಕಾಂಗ್ರೆಸ್,ಜೆಡಿಎಸ್ ಸದಸ್ಯರ ಯೋಜನೆ ಆಗಿತ್ತು ಹೀಗಾಗಿ ನಾವು ರಾತ್ರಿಯಿಡೀ ಸತ್ಯಾಗ್ರಹ ಮಾಡುತ್ತಿದ್ದೇವೆ ಎಂದರು.

ಇಡೀ ದೇಶದ ಜನ ಕಲಾಪ ವೀಕ್ಷಿಸಿದ್ದಾರೆ ಸರ್ಕಾರಕ್ಕೆ ಬಹುಮತ ಇಲ್ಲ ಹೀಗಾಗಿ ನಾವು ಅವಿಶ್ವಾಸ ನಿರ್ಣಯಕ್ಕೆ ಒತ್ತಾಯ ಮಾಡಿದ್ದೆವು ಆದರೆ ಸ್ಪೀಕರ್ ರಮೇಶ್ ಕುಮಾರ್ ಅವರು ಸಿಎಂ ಅವರು ಕೇಳಿರುವಂತೆ ವಿಶ್ವಾಸಮತಕ್ಕೆ ಅವಕಾಶ ಕೊಡಿ ಅಂದರು ಅದಕ್ಕೆ ನಾವು ಅವಕಾಶ ನೀಡಿದ್ದೆವು ವಿಶ್ವಾಸಮತಯಾಚನೆ ನಿರ್ಣಯ ಮಂಡಿಸಲಾಗಿದೆ ಸಿಎಂ 15 ನಿಮಿಷ ಮಾತನಾಡಿದರು ಆ ನಂತರ ಉದ್ದೇಶಪೂರ್ವಕವಾಗಿ ಎಳೆದರು ಕಾಂಗ್ರೆಸ್,ಜೆಡಿಎಸ್ 98 ಸದಸ್ಯರಿದ್ದರು ನಾವು 105 ಶಾಸಕರಿದ್ದೆವು ಬಹುಮತ ಇಲ್ಲದಿದ್ದರೂ ಮತಕ್ಕೆ ಹಾಕಲಿಲ್ಲ
15 ಶಾಸಕರು ಸುಪ್ರೀಂ ಕೋರ್ಟ್ ಗೆ ಹೋಗಿದ್ದಾರೆ ಶಾಸಕರು ಸದನಕ್ಕೆ ಬರುವುದು,ಬಿಡುವುದು ಅವರಿಷ್ಟ ಎಂದು ಸುಪ್ರೀಂ ಕೋರ್ಟೇ ತಿಳಿಸಿದೆ ಆದರೂ ಕಲಾಪದಲ್ಲಿ ಅನಗತ್ಯವಾಗಿ ಈ ವಿಷಯವನ್ನು ಎಳೆದು ಕಾಲಹರಣ ಮಾಡಲಾಯಿತು ಎಂದು ಅಸಮಧಾನ ವ್ಯಕ್ತಪಡಿಸಿದರು.

ವಿಪ್ ನೀಡಲು ನಮ ಅಭ್ಯಂತರವಿರಲಿಲ್ಲ ಶಾಸಕರಿಲ್ಲದೆ ಬಹುಮತ ಕಳೆದುಕೊಳ್ಳುತ್ತೇವೆ ಇದನ್ನ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದರು ಬಹುಮತ ಇಲ್ಲವೆನ್ನುವುದು ಸಿಎಂಗೆ ಗೊತ್ತಿರಲಿಲ್ಲವೇ ವಿನಾಃಕಾರಣ ಕಾಲಹರಣ ಮಾಡಿದ್ದಾರೆ
ಸುಪ್ರೀಂಕೋರ್ಟ್ ಎಲ್ಲವನ್ನೂ‌ ಗಮನಿಸುತ್ತಿದೆ ರಾಜ್ಯಪಾಲರು ಕೂಡ ನಮ ದೂರು ಆಧರಿಸಿ ಸಂದೇಶ ರವಾನಿಸಿದ್ದಾರೆ ರಾಜ್ಯಪಾಲರ ಸಂದೇಶಕ್ಕೂ ಸ್ಪಷ್ಟೀಕರಣವಿಲ್ಲ ಪ್ರಜಾತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದಾರೆ ಅಭಿವೃದ್ಧಿ ಕಾರ್ಯ ನಿಂತುಹೋಗಿವೆ‌ ವರ್ಗಾವಣೆ ದಂಧೆ ನಡೆಯುತ್ತಿದೆ ಬಹುಮತ ಕಳೆದುಕೊಂಡ ಮೇಲೆ ರಾಜೀನಾಮೆ ಕೊಡಬೇಕಿತ್ತು ದೇಶ ಎಲ್ಲವನ್ನೂ ಗಮನಿಸುತ್ತಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.
Body:.Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.