ETV Bharat / state

ಬಿ.ಆರ್.ಪಾಟೀಲ್ ಸಂಪುಟ ಸೇರಬೇಕಿತ್ತು, ಭವಿಷ್ಯದಲ್ಲಿ ಅವರಿಗೆ ಒಳ್ಳೆಯ ದಿನಗಳು ಬರಲಿವೆ: ಸಿದ್ದರಾಮಯ್ಯ

author img

By ETV Bharat Karnataka Team

Published : Oct 11, 2023, 11:02 PM IST

ಬಿ.ಆರ್.ಪಾಟೀಲ್ ಅವರಿಗೆ ಒಳ್ಳೆಯ ದಿನಗಳಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಶಾಸಕ ಬಿ ಆರ್ ಪಾಟೀಲ್​ಗೆ ಜೆಪಿ ಪ್ರಶಸ್ತಿ ಪ್ರದಾನ
ಶಾಸಕ ಬಿ ಆರ್ ಪಾಟೀಲ್​ಗೆ ಜೆಪಿ ಪ್ರಶಸ್ತಿ ಪ್ರದಾನ
ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಒಟ್ಟಿಗೆ ರಾಜಕಾರಣಕ್ಕೆ ಬಂದರೂ ನಾನು ಎರಡು ಬಾರಿ ಮುಖ್ಯಮಂತ್ರಿ ಆದೆ. ಆದರೆ ಬಿ.ಆರ್.ಪಾಟೀಲ್ ಏನೂ ಆಗಲಿಲ್ಲ. ಈ ಬಾರಿ ಅವರನ್ನು ಮಂತ್ರಿ ಮಾಡಬೇಕಿತ್ತು. ಆದರೆ ಅನೇಕ ಕಾರಣಗಳಿಂದ ಅವರನ್ನು ಸಚಿವರನ್ನಾಗಿ ಮಾಡಲಾಗಲಿಲ್ಲ. ಆದರೆ ಮುಂದಿನ ದಿನಗಳಲ್ಲಿ ಅವರಿಗೆ ಒಳ್ಳೆಯ ದಿನಗಳಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕುಮಾರಪಾರ್ಕ್​ನಲ್ಲಿರುವ ಚಿತ್ರಕಲಾ ಪರಿಷತ್​ನಲ್ಲಿ ಭಾರತ್ ಯಾತ್ರಾ ಕೇಂದ್ರ ಆಯೋಜನೆ ಮಾಡಿದ್ದ ಜಯಪ್ರಕಾಶ್ ನಾರಾಯಣ್-122 ಜನ್ಮದಿನಾಚರಣೆ ಮತ್ತು ಜೆಪಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶಾಸಕ ಬಿ ಆರ್ ಪಾಟೀಲ್​ಗೆ ಜೆಪಿ ಪ್ರಶಸ್ತಿ ಪ್ರದಾನ ಮಾಡಿದರು. ನಂತರ ಮಾತನಾಡಿದ ಸಿಎಂ, ಬಿ.ಆರ್.ಪಾಟೀಲ್ ಹಾಗು ನಾನು ಒಟ್ಟಿಗೆ ರಾಜಕಾರಣ ಪ್ರವೇಶ ಮಾಡಿದ್ದೆವು. ಒಟ್ಟಿಗೆ ತಾಲ್ಲೂಕು ಅಭಿವೃದ್ಧಿ ಮಂಡಳಿ ಸದಸ್ಯ ನಂತರ ಶಾಸಕರಾದೆವು. ಇಬ್ಬರೂ ಸಮಾಜವಾದಿ ಹಿನ್ನೆಲೆಯಿಂದ ಬಂದವರು.

ಹಾಗಾಗಿ ಅಂದಿನಿಂದ ಇಂದಿನವರೆಗೂ ಸ್ನೇಹಿತರಾಗಿಯೇ ಉಳಿದಿದ್ದೇವೆ. ಮುಂದೆಯೂ ಸ್ನೇಹಿತರಾಗಿ ಉಳಿಯುತ್ತೇವೆ. ನಾವಿಬ್ಬರೂ ಏಕವಚನದಲ್ಲಿ ಮಾತನಾಡಿಕೊಳ್ಳಲಿದ್ದೇವೆ. ಎರಡು ವರ್ಷ ಚಿಕ್ಕವನಾದರೂ ರಾಜಕೀಯದಲ್ಲಿ ಸಮಾನರು. ಆದರೆ ನಾನು, ಪಾಟೀಲ್ ಅವರಷ್ಟು ಹೋರಾಟಗಾರ ಅಲ್ಲ. ಅವರು ಜೆಪಿ ಚಳುವಳಿಯಲ್ಲಿ ಭಾಗಿಯಾಗಿ ತುರ್ತುಪರಿಸ್ಥಿತಿ ವಿರೋಧಿಸಿ ಜೈಲಿಗೆ ಹೋದರು. ಆದರೆ ನಾನು ತುರ್ತುಪರಿಸ್ಥಿತಿ ವಿರೋಧಿಸಿದರೂ ಜೈಲಿಗೆ ಹೋಗಿರಲಿಲ್ಲ ಎಂದರು.

ಜನಪರ ಚಿಂತನೆ ಮಾಡುವವರಿಂದ ಮಾತ್ರ ಜನರ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಸಾಧ್ಯ. ನಾನು 2013 ರ ಸಿದ್ದರಾಮಯ್ಯ ಆಗಬೇಕು ಎಂದು ಬಿ ಆರ್ ಪಾಟೀಲ್ ಹೇಳಿದ್ದಾರೆ. ಆದರೆ ನಾನು 2013-18 ರ ಸಿದ್ದರಾಮಯ್ಯ ಇದ್ದಂತೆ 2023 ರಿಂದಲೂ ಇದ್ದೇನೆ. ಜನಪರ ಕಾಳಜಿ, ಜನಪರ ಆಡಳಿತ ನೀಡಬೇಕು ಎನ್ನುವ ಆಶಯ ಇದೆ. ನ್ಯಾಯ ಒದಗಿಸುವ ಬದ್ದತೆ ಇದೆ. ನಮ್ಮ ಸಮಾಜದಲ್ಲಿ ಅಸಮಾನತೆ ಇದೆ. ಜಾತಿ ವ್ಯವಸ್ಥೆ ಕಾರಣಕ್ಕೆ ಸಾಮಾಜಿಕ, ಆರ್ಥಿಕ ಅಸಮಾನತೆ ಇದೆ. ಇದನ್ನು ತೊಡಗಿಸದೆ ಪ್ರಜಾಪ್ರಭುತ್ವ ಯಶಸ್ವಿ ಮಾಡಲು ಸಾಧ್ಯವಿಲ್ಲ. ಸಾಮಾಜಿಕ ಅಸಮಾನತೆ ತೊಡೆದುಹಾಕದೆ ಇದ್ದರೆ ಪ್ರಜಾಪ್ರಭುತ್ವಸೌಧವನ್ನು ಅನ್ಯಾಯಕ್ಕೆ ಒಳಗಾದ ಜನರೇ ಧ್ವಂಸ ಮಾಡಲಿದ್ದಾರೆ ಎನ್ನುವ ಎಚ್ಚರಿಕೆ ಮಾತನ್ನು ಅಂಬೇಡ್ಕರ್ ಹೇಳಿದ್ದರು. ಈ ಮಾತುಗಳು ಸದಾ ನನ್ನನ್ನು ಎಚ್ಚರಿಸುತ್ತಲೇ ಇರುತ್ತವೆ. ಹಾಗಾಗಿ ಮೊದಲ ಅವಧಿಯಲ್ಲಿ ಹೇಗಿದ್ದೆನೋ ಈಗಲೂ ಅದೇ ರೀತಿ ಇದ್ದೇನೆ ಎಂದರು.

ನಾವು ಬಜೆಟ್ ಸಿದ್ದಪಡಿಸುವಾಗ ನಮ್ಮ ಪ್ರಣಾಳಿಕೆ ಇಟ್ಟುಕೊಂಡೇ ಸಿದ್ದಪಡಿಸಲಿದ್ದೇವೆ. ಯಾವ ಸಿಎಂ ಕೂಡ ಕೊಟ್ಟ ಭರವಸೆ ಈಡೇರಿಸಿದ ನಿದರ್ಶನ ಇಲ್ಲ. ಆದರೆ ಹಿಂದೆ ನಾನು ಈಡೇರಿಸಿದ್ದೆ. ಈಗಲೂ ನಾವು ಕೊಟ್ಟಿರುವ ಎಲ್ಲ ಭರವಸೆ ಈಡೇರಿಸಲಿದ್ದೇವೆ. ಪಂಚ ಗ್ಯಾರಂಟಿಯಲ್ಲಿ ನಾಲ್ಕು ಈಡೇರಿಸಿದ್ದು, ಜನವರಿಯಲ್ಲಿ ಐದನೇ ಗ್ಯಾರಂಟಿ ಈಡೇರಿಸಲಿದ್ದೇವೆ. ಯಾವ ಕಾರಣಕ್ಕೂ ಹೆಜ್ಜೆ ಹಿಂದೆ ಇಡಲ್ಲ. ಎಷ್ಟೇ ಹೊರೆಯಾದರೂ ಭರವಸೆ ಈಡೇರಿಸಲಿದ್ದೇವೆ ಎಂದು ಹೇಳಿದರು.

ಐದು ವರ್ಷ ರಾಜ್ಯವನ್ನು ಆರ್ಥಿಕ ದಿವಾಳಿ ಮಾಡಿದರು. ಹಣವಿಲ್ಲದೆ ಯೋಜನೆ ಘೋಷಿಸಿದ್ದಾರೆ. ದೊಡ್ಡ ಮೊತ್ತದ ಬಾಕಿ ಬಿಲ್ ಇವೆ. ನಾನು ಮಧ್ಯದಲ್ಲಿ ಅಧಿಕಾರಕ್ಕೆ ಬಂದರೂ ಬಜೆಟ್ ಮಂಡನೆಯಾಗಿದ್ದರೂ 36 ಸಾವಿರ ಕೋಟಿ ಹೊಂದಿಸಿದ್ದೇವೆ. ಮುಂದಿನ ವರ್ಷ 56 ಸಾವಿರ ಕೋಟಿ ಬೇಕು. ಇದರಲ್ಲಿ ಜಾತಿ, ಧರ್ಮ ಇದೆಯಾ?. ಎಲ್ಲರಿಗೂ ಈ ಯೋಜನೆ ಮಾಡಿಲ್ಲವಾ?. ಇಲ್ಲಿ ಜಾತಿ ಎಲ್ಲಿದೆ?. ಯಾವ ಜಾತಿ ಧರ್ಮ ಬಿಟ್ಟಿದ್ದೇವೆ? ಎಲ್ಲರಿಗೂ ಸರ್ವೋದಯ ಆಗಬೇಕು ಎನ್ನುವ ಆಶಯದಿಂದ ಇದನ್ನು ತಂದಿದ್ದೇವೆ ಎಂದರು.

ಶಾಸಕ ಬಿ ಆರ್ ಪಾಟೀಲ್

ಯೂನಿವರ್ಸಲ್ ಬೇಸಿಕ್ ಇನ್ ಕಮ್ ವ್ಯವಸ್ಥೆ ಯೂರೋಪ್​ನಲ್ಲಿದೆ. ಅದರ ಆಶಯದಂತೆ ನಾವು ಉಚಿತ ಯೋಜನೆ ತಂದಿದ್ದೇವೆ. ಇದರಿಂದ ಜನರಿಗೆ ಕೊಂಡುಕೊಳ್ಳುವ ಶಕ್ತಿ ಬರಲಿದೆ. 75 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಪ್ರಯಾಣದಲ್ಲಿ ಹೋಟೆಲ್​ಗೆ ಹೋಗುತ್ತಾರೆ. ವ್ಯಾಪಾರ ಆಗಿ ಸರ್ಕಾರಕ್ಕೆ ತೆರಿಗೆ ಬಂದು ರಾಜ್ಯದ ಜಿಡಿಪಿ ಹೆಚ್ಚಾಗಲಿದೆ ಎಂದು ಉಚಿತ ಯೋಜನೆ ಸಮರ್ಥಿಸಿಕೊಂಡರು.

ಬಿ.ಆರ್.ಪಾಟೀಲ್​ಗೆ ನನ್ನಲ್ಲಿ ಬದಲಾವಣೆ ಕಂಡಿದೆ. ಹಿಂದಿನ ಸಿದ್ದರಾಮಯ್ಯ ಆಗಬೇಕು ಎನ್ನುತ್ತಿದ್ದಾರೆ. ಆದರೆ ನಾನು ಬದಲಾಗಿಲ್ಲ. ಸ್ವಲ್ಪ ವಯಸ್ಸಿನ ಕಾರಣ ಇರಬಹುದು. ಅದಕ್ಕಾಗಿ ಆ ರೀತಿ ಕಾಣಬಹುದು. ಆದರೆ ಬದ್ದತೆಯಲ್ಲಿ ಬದಲಾವಣೆ ಆಗಿಲ್ಲ. ನಾನು ಅವರಷ್ಟು ಸಮಾಜವಾದಿ ಪಕ್ಷದಲ್ಲಿ ತೊಡಗಿರಲಿಲ್ಲ. ಅವರಿಗೆ ದೇಶದ ಎಲ್ಲ ಸಮಾಜವಾದಿಗಳ ನಂಟಿದೆ. ಬಿ. ಆರ್ ಪಾಟೀಲ್ ನಾವೆಲ್ಲಾ ರಾಜಕೀಯ ಚರ್ಚೆ ಮಾಡುವಾಗ ಸಿಗರೇಟ್ ಸೇದುವುದನ್ನು ಕಲಿತೆ. ಚಾರ್ಮಿನಾರ್ ಸಿಗರೇಟ್ ಸೇದುತ್ತಿದ್ದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

ನಾನು ರಾಜಕೀಯಕ್ಕೆ ಬರಲು ನಂಜುಂಡಸ್ವಾಮಿ ಕಾರಣ, ನಮ್ಮ ವಂಶದಲ್ಲಿ ಯಾರೂ ರಾಜಕಾರಣಕ್ಕೆ ಬಂದಿರಲಿಲ್ಲ. ನಮ್ಮ ತಂದೆ ಪಂಚಾಯತಿ ಚುನಾವಣೆಯಲ್ಲಿ ನಿಂತು ಸೋತಿದ್ದರು. ಅದಕ್ಕಾಗಿ ಅವರು‌ ಚುನಾವಣೆ ಮಾತ್ರ ಬೇಡ, ರಾಜಕೀಯ ಬಿಟ್ಟು ವಕೀಲಿಕೆ ಮಾಡಿ ಇಲ್ಲವೇ ವಾಪಸ್ ಮನೆಗೆ ಬಾ ಎಂದಿದ್ದರು. ಕಡೆಗೆ ಊರಿನವರೆಲ್ಲಾ ಸೇರಿಸಿ ತಂದೆಗೆ ಒಪ್ಪಿಸಬೇಕಾಯಿತು ಎಂದು ರಾಜಕೀಯ ಪ್ರವೇಶದ ದಿನಗಳ ಮೆಲುಕು ಹಾಕಿದರು.

1983ರಲ್ಲಿ ಚುನಾವಣೆಗೆ ನಿಂತಾಗ ಜಾರ್ಜ್ ಫರ್ನಾಂಡೀಸ್ 10 ಸಾವಿರ ಹಣ ನೀಡಿದ್ದರು. ಆಗ ಜನರೇ ಹಣ ಕೊಡುತ್ತಿದ್ದರು. ಆದರೆ ಈಗ ಬದಲಾಗಿದೆ. ಅದನ್ನೆಲ್ಲಾ ಹೇಳಲಾಗಲ್ಲ. ಈಗ ನಮ್ಮ ಮುಂದೆ ಸವಾಲಿದೆ. ಜೆಪಿ ಒಂದು ಕ್ರಾಂತಿ ಮಾಡಿದ್ದರು. ಈಗ ಮತ್ತೊಂದು ಕ್ರಾಂತಿ ಮಾಡಬೇಕಿದೆ. ರಾಜಕೀಯ ವ್ಯವಸ್ಥೆ ಬದಲಾವಣೆ ಆಗದೇ ಇದ್ದಲ್ಲಿ ಹೋರಾಟಗಾರರು ರಾಜಕಾರಣದಲ್ಲಿ ಇರುವುದು ಕಷ್ಟವಾಗಲಿದೆ ಎಂದು ಹೇಳಿದರು. ಜೆಪಿ ಪಾರ್ಕ್​ನಲ್ಲಿನ ಜೆ ಪಿ ಪ್ರತಿಮೆ ತೆರವು ಪರಿಶೀಲಿಸಿ ಕೂಡಲೇ ಮರಳಿ ಸ್ಥಾಪಿಸಲು ಕ್ರಮ ವಹಿಸಲಿದ್ದೇವೆ ಎಂದು ಭರವಸೆ ನೀಡಿದರು.

ನಮಗೆ ಹಳೆಯ ಸಿದ್ದರಾಮಯ್ಯಬೇಕು: ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಿ. ಆರ್ ಪಾಟೀಲ್, ನಮಗೆ ಸಿದ್ದರಾಮಯ್ಯ ಈಗಿನ ರೀತಿ ಬೇಡ, 2013 ರ ಸಿದ್ದರಾಮಯ್ಯ ನಮಗೆ ಬೇಕು. ಯಾಕೆ ಅವರು ಬದಲಾಗುತ್ತಿಲ್ಲವೋ ಗೊತ್ತಿಲ್ಲ. ಅಧಿಕಾರ ಮುಖ್ಯವಲ್ಲ, ಅಧಿಕಾರದಲ್ಲಿದ್ದಾಗ ಏನು ಮಾಡಿದ್ದೆವು ಎನ್ನುವುದು ಮುಖ್ಯ ಎಂದು ನಮಗೆ ಹಳೆಯ ಸಿದ್ದರಾಮಯ್ಯ ಬೇಕು ಎನ್ನುವ ಅಪೇಕ್ಷೆ ವ್ಯಕ್ತಪಡಿಸಿದರು.

ನನ್ನ ಜೀವನದಲ್ಲಿ ಐತಿಹಾಸಿಕ ದಿನ, ತುರ್ತು ಪರಿಸ್ಥಿತಿ ಘೋಷಣೆ ಆಗಿತ್ತು. ದಸರಾ ಇತ್ತು. ಜೆಪಿ ಹುಟ್ಟಿದ ದಿನ ಜೈಲು ಸೇರಬೇಕು ಎಂದು ಸಂಕಲ್ಪ ಮಾಡಿ ಪ್ರತಿಭಟನೆ ನಡೆಸಿ ಆರು ತಿಂಗಳು ಜೈಲು ವಾಸ ಅನುಭವಿಸಿದ್ದೆ. ದೊಡ್ಡ ದೊಡ್ಡ ನಾಯಕರು ಬೆಂಗಳೂರಿನಲ್ಲಿ ಜೈಲು ಸೇರಿದ್ದರು. ಆ ಆರು ತಿಂಗಳಲ್ಲಿ ಯಾವುದೇ ವಿಶ್ವವಿದ್ಯಾಲಯದಲ್ಲಿ ಕಲಿಯದ್ದಕ್ಕಿಂತ ಹೆಚ್ಚಿನದ್ದನ್ನೇ ಕಲಿತೆ. ಜೆ ಹೆಚ್ ಪಟೇಲ್ ನಮಗೆಲ್ಲಾ ಮನರಂಜನೆ ನೀಡುತ್ತಿದ್ದರು. ರಾತ್ರಿ ಗುಂಡು ಹಾಕುವ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು. ಅವರ ಗರಡಿಯಲ್ಲಿಯೂ ಬೆಳೆದು ಬಂದೆ ಎಂದು ಹೋರಾಟದ ಆರಂಭದ ದಿನವನ್ನು ಮೆಲುಕುಹಾಕಿದರು.

ಸಂಪೂರ್ಣ ಕ್ರಾಂತಿ ಉದ್ದೇಶದಿಂದ ಬಂದ ಜನತಾ ಸರ್ಕಾರಗಳು ಯಾಕೆ ಮಾಡಲಿಲ್ಲವೋ ಗೊತ್ತಿಲ್ಲ. ಶಿಕ್ಷಣದಲ್ಲಿ ಸುಧಾರಣೆ ತಂದಿದ್ದರೆ ಕೋಮುವಾದ ಇಷ್ಟು ಬೆಳೆಯುತ್ತಿರಲಿಲ್ಲ. ಹಾಗಾಗಿ ನಮ್ಮ ಶಿಕ್ಷಣದಲ್ಲಿ ಬದಲಾವಣೆ ಮಾಡಬೇಕು. ಇಂದೂ ಕೂಡ ಕೋಮುವಾದಿಗಳು ಸಿದ್ದಪಡಿಸಿದ ಪಾಠ ಓದುತ್ತಿದ್ದಾರೆ. ಈ ಪಠ್ಯವನ್ನು ಪರಿಷ್ಕರಿಸಲು ದಿಟ್ಟ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ರಾಜ್ಯದಲ್ಲಿ ಏನೇ ಬದಲಾವಣೆ ಆಗಬೇಕೆಂದರೂ ಸಿದ್ದರಾಮಯ್ಯ ಅವರಿಂದ ಮಾತ್ರ ಸಾಧ್ಯ. ಹಾಗಾಗಿ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಬಡವರಿಗೆ ಭೂಮಿ ಕೊಡಬೇಕು ಎಂದು ಮನವಿ ಮಾಡಿದರು.

ನಮ್ಮ ದೇಶದ ದುರ್ದೈವವಾಗಿದೆ. ಜೆ ಪಿ ಬಿಟ್ಟ ಕನಸನ್ನು ನನಸು ಮಾಡಬೇಕಿದೆ. ಇಂದು ಜೆಪಿ ಎಲ್ಲಾದರೂ ಜೀವಂತವಿದ್ದಿದ್ದರೆ ಕೋಮುವಾದಿ ಶಕ್ತಿ ವಿರುದ್ಧ ದೊಡ್ಡ ಹೋರಾಟ ಮಾಡುತ್ತಿದ್ದರು. ಭ್ರಷ್ಟಾಚಾರ ನಿರ್ಮೂಲನೆ ಕಾನೂನಿನಿಂದ ಮಾಡಬಹುದು, ತಡೆಯಬಹುದು. ಆದರೆ ಕೋಮುವಾದವನ್ನು ಕಾನೂನಿನಿಂದ ತಡೆಯಲು ಸಾಧ್ಯವಿಲ್ಲ, ಗಾಂಧಿ, ಕಬೀರ ನಂಬಿದ ರಾಮರಾಜ್ಯ ತರಬೇಕಾದರೆ ಸಾಮಾಜಿಕ ನ್ಯಾಯ ಮತ್ತೆ ತರಬೇಕಿದೆ ಎಂದರು.

ಈಗಿನ ಸಿದ್ದರಾಮಯ್ಯ ನಮಗೆ 2013 ರ ಸಿದ್ದರಾಮಯ್ಯ ಆಗಬೇಕು. ಇನ್ನು ನಿಮ್ಮಿಂದ ಬದಲಾವಣೆ ಆಗಬೇಕು. ಅದು ಯಾಕೋ ಆಗುತ್ತಿಲ್ಲ ಕಾರಣವೇನೋ ಗೊತ್ತಿಲ್ಲ. ಅಧಿಕಾರ ಎಷ್ಟು ದಿನ ಇರಲಿದೆಯೋ ಗೊತ್ತಿಲ್ಲ. ಇದ್ದಾಗ ಏನು ಮುಖ್ಯ ಕೆಲಸ ಮಾಡುತ್ತೀರಿ ಎನ್ನುವುದು ಮುಖ್ಯ. ಹಾಗಾಗಿ ನಿಮ್ಮ ಇಚ್ಚಾಶಕ್ತಿ ಪ್ರದರ್ಶನ ಮಾಡಿ, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬದಲಾವಣೆ ತರುವ ಕೆಲಸ ಮಾಡಬೇಕೆಂದು ಮನವಿ ಮಾಡಿದರು. ನಂತರ ವಲ್ಲಭ ನಿಕೇತನ ಅನಾಥಾಶ್ರಮಕ್ಕೆ ಪ್ರಶಸ್ತಿ ಮೊತ್ತ 10 ಸಾವಿರ ದೇಣಿಗೆ ನೀಡಿದರು.

ಚಿಂತಕ ನಟರಾಜ್ ಹುಳಿಯಾರ್ ಮಾತನಾಡಿ, ಐದು ವರ್ಷದ ಅಸಮಾಧಾನದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಸ್ವಂತ ಬಲದಿಂದ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಿದೆ. ಈಗ ಪಿಂಚ್ ಹಿಟ್ಟರ್ ಗಳು ಅಪಾಯಕಾರಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಡಿ. ಯಾವ ಕಾರಣಕ್ಕೂ ಕೋಮುವಾದಿಗಳನ್ನು ಕಾಂಗ್ರೆಸ್ ಗೆ ಸೇರಿಸಿಕೊಳ್ಳಬೇಡಿ ಎಂದು ಬಿಜೆಪಿ ನಾಯಕರ ಕಾಂಗ್ರೆಸ್ ಸೇರ್ಪಡೆ ಬೇಡ ಎನ್ನುವ ಮನವಿ ಮಾಡಿದರು. ಇದರ ಜೊತೆ ಕಾಂಗ್ರೆಸ್ ಸರ್ಕಾರ ಮತ್ತಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಲಿ ಎನ್ನುವ ಆಶಯ ವ್ಯಕ್ತಪಡಿಸಿದರು.

ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ ಎಲ್ ಶಂಕರ್ ಮಾತನಾಡಿ, ದೊಡ್ಡ ಹೋರಾಟಗಾರರ ಬಳುವಳಿಯನ್ನು ಜೆಪಿ ಕೊಟ್ಟರು, ಅವರ ಚಳವಳಿ ಕಾರಣದಿಂದ ಸಿದ್ದರಾಮಯ್ಯ, ನಿತೀಶ್ ಕುಮಾರ್, ನವೀನ್ ಪಟ್ನಾಯಕ್, ಮುಲಾಯಂ ಸಿಂಗ್ ಯಾದವ್ ರಂತಹ ನಾಯಕರು ಬೆಳೆದುಬಂದರು ಎಂದು ಜೆಪಿ ಸ್ಮರಣೆ ಮಾಡಿದರು.

ಎಸ್ಸಿ, ಎಸ್ಟಿ ಸಮುದಾಯದವರಿಗೆ ಭೂದಾನದ ಮೂಲಕ ಲಕ್ಷಾಂತರ ಎಕರೆ ಜಾಗ ಸಿಕ್ಕಿತ್ತು. ಆ ಭೂಮಿ ಈಗ ಏನಾಗಿದೆ ಎನ್ನುವುದನ್ನು ಪರಿಶೀಲಿಸಬೇಕು. ಭೂಕಬಳಿಕೆದಾರರಿಗೆ ಸಿಗದಂತೆ ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಮಾಡಿದರು.

ಬಿ. ಆರ್ ಪಾಟೀಲ್​ಗೆ ಸಚಿವ ಸ್ಥಾನ ನೀಡಿರುವುದರಿಂದ ಅವರಿಗೆ ಯಾವುದೇ ನಷ್ಟ ಇಲ್ಲ. ಆದರೆ ಅದು ನಿಮ್ಮ ಸಂಪುಟಕ್ಕೆ ಮತ್ತು ನಿಮ್ಮ ಸರ್ಕಾರಕ್ಕೆ ಆದ ನಷ್ಟ. ಪ್ರಾಮಾಣಿಕ ಹಿನ್ನಲೆ, ಹೋರಾಟದಿಂದ ಬಂದವರು ಬಿ.ಆರ್ ಪಾಟೀಲ್. ಅಂತವರಿಗೆ ಸಂಪುಟದಲ್ಲಿ ಅವಕಾಶ ನೀಡಬೇಕು ಎಂದರು. ನಿಮಗೆ ಮಂತ್ರಿ ಪದವಿಗಿಂತ ಜೆಪಿ ಪ್ರಶಸ್ತಿ ಉತ್ತಮ ಎಂದು ಬಿ.ಆರ್ ಪಾಟೀಲ್ ಅವರನ್ನ ಅಭಿನಂದಿಸಿದರು.

ಇದನ್ನೂ ಓದಿ: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯಿದೆ ವಾಪಸ್​ ಬೇಡ: ಸಿಎಂಗೆ ಪ್ರಭು ಚೌಹಾಣ್ ಮನವಿ

ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಒಟ್ಟಿಗೆ ರಾಜಕಾರಣಕ್ಕೆ ಬಂದರೂ ನಾನು ಎರಡು ಬಾರಿ ಮುಖ್ಯಮಂತ್ರಿ ಆದೆ. ಆದರೆ ಬಿ.ಆರ್.ಪಾಟೀಲ್ ಏನೂ ಆಗಲಿಲ್ಲ. ಈ ಬಾರಿ ಅವರನ್ನು ಮಂತ್ರಿ ಮಾಡಬೇಕಿತ್ತು. ಆದರೆ ಅನೇಕ ಕಾರಣಗಳಿಂದ ಅವರನ್ನು ಸಚಿವರನ್ನಾಗಿ ಮಾಡಲಾಗಲಿಲ್ಲ. ಆದರೆ ಮುಂದಿನ ದಿನಗಳಲ್ಲಿ ಅವರಿಗೆ ಒಳ್ಳೆಯ ದಿನಗಳಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕುಮಾರಪಾರ್ಕ್​ನಲ್ಲಿರುವ ಚಿತ್ರಕಲಾ ಪರಿಷತ್​ನಲ್ಲಿ ಭಾರತ್ ಯಾತ್ರಾ ಕೇಂದ್ರ ಆಯೋಜನೆ ಮಾಡಿದ್ದ ಜಯಪ್ರಕಾಶ್ ನಾರಾಯಣ್-122 ಜನ್ಮದಿನಾಚರಣೆ ಮತ್ತು ಜೆಪಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶಾಸಕ ಬಿ ಆರ್ ಪಾಟೀಲ್​ಗೆ ಜೆಪಿ ಪ್ರಶಸ್ತಿ ಪ್ರದಾನ ಮಾಡಿದರು. ನಂತರ ಮಾತನಾಡಿದ ಸಿಎಂ, ಬಿ.ಆರ್.ಪಾಟೀಲ್ ಹಾಗು ನಾನು ಒಟ್ಟಿಗೆ ರಾಜಕಾರಣ ಪ್ರವೇಶ ಮಾಡಿದ್ದೆವು. ಒಟ್ಟಿಗೆ ತಾಲ್ಲೂಕು ಅಭಿವೃದ್ಧಿ ಮಂಡಳಿ ಸದಸ್ಯ ನಂತರ ಶಾಸಕರಾದೆವು. ಇಬ್ಬರೂ ಸಮಾಜವಾದಿ ಹಿನ್ನೆಲೆಯಿಂದ ಬಂದವರು.

ಹಾಗಾಗಿ ಅಂದಿನಿಂದ ಇಂದಿನವರೆಗೂ ಸ್ನೇಹಿತರಾಗಿಯೇ ಉಳಿದಿದ್ದೇವೆ. ಮುಂದೆಯೂ ಸ್ನೇಹಿತರಾಗಿ ಉಳಿಯುತ್ತೇವೆ. ನಾವಿಬ್ಬರೂ ಏಕವಚನದಲ್ಲಿ ಮಾತನಾಡಿಕೊಳ್ಳಲಿದ್ದೇವೆ. ಎರಡು ವರ್ಷ ಚಿಕ್ಕವನಾದರೂ ರಾಜಕೀಯದಲ್ಲಿ ಸಮಾನರು. ಆದರೆ ನಾನು, ಪಾಟೀಲ್ ಅವರಷ್ಟು ಹೋರಾಟಗಾರ ಅಲ್ಲ. ಅವರು ಜೆಪಿ ಚಳುವಳಿಯಲ್ಲಿ ಭಾಗಿಯಾಗಿ ತುರ್ತುಪರಿಸ್ಥಿತಿ ವಿರೋಧಿಸಿ ಜೈಲಿಗೆ ಹೋದರು. ಆದರೆ ನಾನು ತುರ್ತುಪರಿಸ್ಥಿತಿ ವಿರೋಧಿಸಿದರೂ ಜೈಲಿಗೆ ಹೋಗಿರಲಿಲ್ಲ ಎಂದರು.

ಜನಪರ ಚಿಂತನೆ ಮಾಡುವವರಿಂದ ಮಾತ್ರ ಜನರ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಸಾಧ್ಯ. ನಾನು 2013 ರ ಸಿದ್ದರಾಮಯ್ಯ ಆಗಬೇಕು ಎಂದು ಬಿ ಆರ್ ಪಾಟೀಲ್ ಹೇಳಿದ್ದಾರೆ. ಆದರೆ ನಾನು 2013-18 ರ ಸಿದ್ದರಾಮಯ್ಯ ಇದ್ದಂತೆ 2023 ರಿಂದಲೂ ಇದ್ದೇನೆ. ಜನಪರ ಕಾಳಜಿ, ಜನಪರ ಆಡಳಿತ ನೀಡಬೇಕು ಎನ್ನುವ ಆಶಯ ಇದೆ. ನ್ಯಾಯ ಒದಗಿಸುವ ಬದ್ದತೆ ಇದೆ. ನಮ್ಮ ಸಮಾಜದಲ್ಲಿ ಅಸಮಾನತೆ ಇದೆ. ಜಾತಿ ವ್ಯವಸ್ಥೆ ಕಾರಣಕ್ಕೆ ಸಾಮಾಜಿಕ, ಆರ್ಥಿಕ ಅಸಮಾನತೆ ಇದೆ. ಇದನ್ನು ತೊಡಗಿಸದೆ ಪ್ರಜಾಪ್ರಭುತ್ವ ಯಶಸ್ವಿ ಮಾಡಲು ಸಾಧ್ಯವಿಲ್ಲ. ಸಾಮಾಜಿಕ ಅಸಮಾನತೆ ತೊಡೆದುಹಾಕದೆ ಇದ್ದರೆ ಪ್ರಜಾಪ್ರಭುತ್ವಸೌಧವನ್ನು ಅನ್ಯಾಯಕ್ಕೆ ಒಳಗಾದ ಜನರೇ ಧ್ವಂಸ ಮಾಡಲಿದ್ದಾರೆ ಎನ್ನುವ ಎಚ್ಚರಿಕೆ ಮಾತನ್ನು ಅಂಬೇಡ್ಕರ್ ಹೇಳಿದ್ದರು. ಈ ಮಾತುಗಳು ಸದಾ ನನ್ನನ್ನು ಎಚ್ಚರಿಸುತ್ತಲೇ ಇರುತ್ತವೆ. ಹಾಗಾಗಿ ಮೊದಲ ಅವಧಿಯಲ್ಲಿ ಹೇಗಿದ್ದೆನೋ ಈಗಲೂ ಅದೇ ರೀತಿ ಇದ್ದೇನೆ ಎಂದರು.

ನಾವು ಬಜೆಟ್ ಸಿದ್ದಪಡಿಸುವಾಗ ನಮ್ಮ ಪ್ರಣಾಳಿಕೆ ಇಟ್ಟುಕೊಂಡೇ ಸಿದ್ದಪಡಿಸಲಿದ್ದೇವೆ. ಯಾವ ಸಿಎಂ ಕೂಡ ಕೊಟ್ಟ ಭರವಸೆ ಈಡೇರಿಸಿದ ನಿದರ್ಶನ ಇಲ್ಲ. ಆದರೆ ಹಿಂದೆ ನಾನು ಈಡೇರಿಸಿದ್ದೆ. ಈಗಲೂ ನಾವು ಕೊಟ್ಟಿರುವ ಎಲ್ಲ ಭರವಸೆ ಈಡೇರಿಸಲಿದ್ದೇವೆ. ಪಂಚ ಗ್ಯಾರಂಟಿಯಲ್ಲಿ ನಾಲ್ಕು ಈಡೇರಿಸಿದ್ದು, ಜನವರಿಯಲ್ಲಿ ಐದನೇ ಗ್ಯಾರಂಟಿ ಈಡೇರಿಸಲಿದ್ದೇವೆ. ಯಾವ ಕಾರಣಕ್ಕೂ ಹೆಜ್ಜೆ ಹಿಂದೆ ಇಡಲ್ಲ. ಎಷ್ಟೇ ಹೊರೆಯಾದರೂ ಭರವಸೆ ಈಡೇರಿಸಲಿದ್ದೇವೆ ಎಂದು ಹೇಳಿದರು.

ಐದು ವರ್ಷ ರಾಜ್ಯವನ್ನು ಆರ್ಥಿಕ ದಿವಾಳಿ ಮಾಡಿದರು. ಹಣವಿಲ್ಲದೆ ಯೋಜನೆ ಘೋಷಿಸಿದ್ದಾರೆ. ದೊಡ್ಡ ಮೊತ್ತದ ಬಾಕಿ ಬಿಲ್ ಇವೆ. ನಾನು ಮಧ್ಯದಲ್ಲಿ ಅಧಿಕಾರಕ್ಕೆ ಬಂದರೂ ಬಜೆಟ್ ಮಂಡನೆಯಾಗಿದ್ದರೂ 36 ಸಾವಿರ ಕೋಟಿ ಹೊಂದಿಸಿದ್ದೇವೆ. ಮುಂದಿನ ವರ್ಷ 56 ಸಾವಿರ ಕೋಟಿ ಬೇಕು. ಇದರಲ್ಲಿ ಜಾತಿ, ಧರ್ಮ ಇದೆಯಾ?. ಎಲ್ಲರಿಗೂ ಈ ಯೋಜನೆ ಮಾಡಿಲ್ಲವಾ?. ಇಲ್ಲಿ ಜಾತಿ ಎಲ್ಲಿದೆ?. ಯಾವ ಜಾತಿ ಧರ್ಮ ಬಿಟ್ಟಿದ್ದೇವೆ? ಎಲ್ಲರಿಗೂ ಸರ್ವೋದಯ ಆಗಬೇಕು ಎನ್ನುವ ಆಶಯದಿಂದ ಇದನ್ನು ತಂದಿದ್ದೇವೆ ಎಂದರು.

ಶಾಸಕ ಬಿ ಆರ್ ಪಾಟೀಲ್

ಯೂನಿವರ್ಸಲ್ ಬೇಸಿಕ್ ಇನ್ ಕಮ್ ವ್ಯವಸ್ಥೆ ಯೂರೋಪ್​ನಲ್ಲಿದೆ. ಅದರ ಆಶಯದಂತೆ ನಾವು ಉಚಿತ ಯೋಜನೆ ತಂದಿದ್ದೇವೆ. ಇದರಿಂದ ಜನರಿಗೆ ಕೊಂಡುಕೊಳ್ಳುವ ಶಕ್ತಿ ಬರಲಿದೆ. 75 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಪ್ರಯಾಣದಲ್ಲಿ ಹೋಟೆಲ್​ಗೆ ಹೋಗುತ್ತಾರೆ. ವ್ಯಾಪಾರ ಆಗಿ ಸರ್ಕಾರಕ್ಕೆ ತೆರಿಗೆ ಬಂದು ರಾಜ್ಯದ ಜಿಡಿಪಿ ಹೆಚ್ಚಾಗಲಿದೆ ಎಂದು ಉಚಿತ ಯೋಜನೆ ಸಮರ್ಥಿಸಿಕೊಂಡರು.

ಬಿ.ಆರ್.ಪಾಟೀಲ್​ಗೆ ನನ್ನಲ್ಲಿ ಬದಲಾವಣೆ ಕಂಡಿದೆ. ಹಿಂದಿನ ಸಿದ್ದರಾಮಯ್ಯ ಆಗಬೇಕು ಎನ್ನುತ್ತಿದ್ದಾರೆ. ಆದರೆ ನಾನು ಬದಲಾಗಿಲ್ಲ. ಸ್ವಲ್ಪ ವಯಸ್ಸಿನ ಕಾರಣ ಇರಬಹುದು. ಅದಕ್ಕಾಗಿ ಆ ರೀತಿ ಕಾಣಬಹುದು. ಆದರೆ ಬದ್ದತೆಯಲ್ಲಿ ಬದಲಾವಣೆ ಆಗಿಲ್ಲ. ನಾನು ಅವರಷ್ಟು ಸಮಾಜವಾದಿ ಪಕ್ಷದಲ್ಲಿ ತೊಡಗಿರಲಿಲ್ಲ. ಅವರಿಗೆ ದೇಶದ ಎಲ್ಲ ಸಮಾಜವಾದಿಗಳ ನಂಟಿದೆ. ಬಿ. ಆರ್ ಪಾಟೀಲ್ ನಾವೆಲ್ಲಾ ರಾಜಕೀಯ ಚರ್ಚೆ ಮಾಡುವಾಗ ಸಿಗರೇಟ್ ಸೇದುವುದನ್ನು ಕಲಿತೆ. ಚಾರ್ಮಿನಾರ್ ಸಿಗರೇಟ್ ಸೇದುತ್ತಿದ್ದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

ನಾನು ರಾಜಕೀಯಕ್ಕೆ ಬರಲು ನಂಜುಂಡಸ್ವಾಮಿ ಕಾರಣ, ನಮ್ಮ ವಂಶದಲ್ಲಿ ಯಾರೂ ರಾಜಕಾರಣಕ್ಕೆ ಬಂದಿರಲಿಲ್ಲ. ನಮ್ಮ ತಂದೆ ಪಂಚಾಯತಿ ಚುನಾವಣೆಯಲ್ಲಿ ನಿಂತು ಸೋತಿದ್ದರು. ಅದಕ್ಕಾಗಿ ಅವರು‌ ಚುನಾವಣೆ ಮಾತ್ರ ಬೇಡ, ರಾಜಕೀಯ ಬಿಟ್ಟು ವಕೀಲಿಕೆ ಮಾಡಿ ಇಲ್ಲವೇ ವಾಪಸ್ ಮನೆಗೆ ಬಾ ಎಂದಿದ್ದರು. ಕಡೆಗೆ ಊರಿನವರೆಲ್ಲಾ ಸೇರಿಸಿ ತಂದೆಗೆ ಒಪ್ಪಿಸಬೇಕಾಯಿತು ಎಂದು ರಾಜಕೀಯ ಪ್ರವೇಶದ ದಿನಗಳ ಮೆಲುಕು ಹಾಕಿದರು.

1983ರಲ್ಲಿ ಚುನಾವಣೆಗೆ ನಿಂತಾಗ ಜಾರ್ಜ್ ಫರ್ನಾಂಡೀಸ್ 10 ಸಾವಿರ ಹಣ ನೀಡಿದ್ದರು. ಆಗ ಜನರೇ ಹಣ ಕೊಡುತ್ತಿದ್ದರು. ಆದರೆ ಈಗ ಬದಲಾಗಿದೆ. ಅದನ್ನೆಲ್ಲಾ ಹೇಳಲಾಗಲ್ಲ. ಈಗ ನಮ್ಮ ಮುಂದೆ ಸವಾಲಿದೆ. ಜೆಪಿ ಒಂದು ಕ್ರಾಂತಿ ಮಾಡಿದ್ದರು. ಈಗ ಮತ್ತೊಂದು ಕ್ರಾಂತಿ ಮಾಡಬೇಕಿದೆ. ರಾಜಕೀಯ ವ್ಯವಸ್ಥೆ ಬದಲಾವಣೆ ಆಗದೇ ಇದ್ದಲ್ಲಿ ಹೋರಾಟಗಾರರು ರಾಜಕಾರಣದಲ್ಲಿ ಇರುವುದು ಕಷ್ಟವಾಗಲಿದೆ ಎಂದು ಹೇಳಿದರು. ಜೆಪಿ ಪಾರ್ಕ್​ನಲ್ಲಿನ ಜೆ ಪಿ ಪ್ರತಿಮೆ ತೆರವು ಪರಿಶೀಲಿಸಿ ಕೂಡಲೇ ಮರಳಿ ಸ್ಥಾಪಿಸಲು ಕ್ರಮ ವಹಿಸಲಿದ್ದೇವೆ ಎಂದು ಭರವಸೆ ನೀಡಿದರು.

ನಮಗೆ ಹಳೆಯ ಸಿದ್ದರಾಮಯ್ಯಬೇಕು: ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಿ. ಆರ್ ಪಾಟೀಲ್, ನಮಗೆ ಸಿದ್ದರಾಮಯ್ಯ ಈಗಿನ ರೀತಿ ಬೇಡ, 2013 ರ ಸಿದ್ದರಾಮಯ್ಯ ನಮಗೆ ಬೇಕು. ಯಾಕೆ ಅವರು ಬದಲಾಗುತ್ತಿಲ್ಲವೋ ಗೊತ್ತಿಲ್ಲ. ಅಧಿಕಾರ ಮುಖ್ಯವಲ್ಲ, ಅಧಿಕಾರದಲ್ಲಿದ್ದಾಗ ಏನು ಮಾಡಿದ್ದೆವು ಎನ್ನುವುದು ಮುಖ್ಯ ಎಂದು ನಮಗೆ ಹಳೆಯ ಸಿದ್ದರಾಮಯ್ಯ ಬೇಕು ಎನ್ನುವ ಅಪೇಕ್ಷೆ ವ್ಯಕ್ತಪಡಿಸಿದರು.

ನನ್ನ ಜೀವನದಲ್ಲಿ ಐತಿಹಾಸಿಕ ದಿನ, ತುರ್ತು ಪರಿಸ್ಥಿತಿ ಘೋಷಣೆ ಆಗಿತ್ತು. ದಸರಾ ಇತ್ತು. ಜೆಪಿ ಹುಟ್ಟಿದ ದಿನ ಜೈಲು ಸೇರಬೇಕು ಎಂದು ಸಂಕಲ್ಪ ಮಾಡಿ ಪ್ರತಿಭಟನೆ ನಡೆಸಿ ಆರು ತಿಂಗಳು ಜೈಲು ವಾಸ ಅನುಭವಿಸಿದ್ದೆ. ದೊಡ್ಡ ದೊಡ್ಡ ನಾಯಕರು ಬೆಂಗಳೂರಿನಲ್ಲಿ ಜೈಲು ಸೇರಿದ್ದರು. ಆ ಆರು ತಿಂಗಳಲ್ಲಿ ಯಾವುದೇ ವಿಶ್ವವಿದ್ಯಾಲಯದಲ್ಲಿ ಕಲಿಯದ್ದಕ್ಕಿಂತ ಹೆಚ್ಚಿನದ್ದನ್ನೇ ಕಲಿತೆ. ಜೆ ಹೆಚ್ ಪಟೇಲ್ ನಮಗೆಲ್ಲಾ ಮನರಂಜನೆ ನೀಡುತ್ತಿದ್ದರು. ರಾತ್ರಿ ಗುಂಡು ಹಾಕುವ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು. ಅವರ ಗರಡಿಯಲ್ಲಿಯೂ ಬೆಳೆದು ಬಂದೆ ಎಂದು ಹೋರಾಟದ ಆರಂಭದ ದಿನವನ್ನು ಮೆಲುಕುಹಾಕಿದರು.

ಸಂಪೂರ್ಣ ಕ್ರಾಂತಿ ಉದ್ದೇಶದಿಂದ ಬಂದ ಜನತಾ ಸರ್ಕಾರಗಳು ಯಾಕೆ ಮಾಡಲಿಲ್ಲವೋ ಗೊತ್ತಿಲ್ಲ. ಶಿಕ್ಷಣದಲ್ಲಿ ಸುಧಾರಣೆ ತಂದಿದ್ದರೆ ಕೋಮುವಾದ ಇಷ್ಟು ಬೆಳೆಯುತ್ತಿರಲಿಲ್ಲ. ಹಾಗಾಗಿ ನಮ್ಮ ಶಿಕ್ಷಣದಲ್ಲಿ ಬದಲಾವಣೆ ಮಾಡಬೇಕು. ಇಂದೂ ಕೂಡ ಕೋಮುವಾದಿಗಳು ಸಿದ್ದಪಡಿಸಿದ ಪಾಠ ಓದುತ್ತಿದ್ದಾರೆ. ಈ ಪಠ್ಯವನ್ನು ಪರಿಷ್ಕರಿಸಲು ದಿಟ್ಟ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ರಾಜ್ಯದಲ್ಲಿ ಏನೇ ಬದಲಾವಣೆ ಆಗಬೇಕೆಂದರೂ ಸಿದ್ದರಾಮಯ್ಯ ಅವರಿಂದ ಮಾತ್ರ ಸಾಧ್ಯ. ಹಾಗಾಗಿ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಬಡವರಿಗೆ ಭೂಮಿ ಕೊಡಬೇಕು ಎಂದು ಮನವಿ ಮಾಡಿದರು.

ನಮ್ಮ ದೇಶದ ದುರ್ದೈವವಾಗಿದೆ. ಜೆ ಪಿ ಬಿಟ್ಟ ಕನಸನ್ನು ನನಸು ಮಾಡಬೇಕಿದೆ. ಇಂದು ಜೆಪಿ ಎಲ್ಲಾದರೂ ಜೀವಂತವಿದ್ದಿದ್ದರೆ ಕೋಮುವಾದಿ ಶಕ್ತಿ ವಿರುದ್ಧ ದೊಡ್ಡ ಹೋರಾಟ ಮಾಡುತ್ತಿದ್ದರು. ಭ್ರಷ್ಟಾಚಾರ ನಿರ್ಮೂಲನೆ ಕಾನೂನಿನಿಂದ ಮಾಡಬಹುದು, ತಡೆಯಬಹುದು. ಆದರೆ ಕೋಮುವಾದವನ್ನು ಕಾನೂನಿನಿಂದ ತಡೆಯಲು ಸಾಧ್ಯವಿಲ್ಲ, ಗಾಂಧಿ, ಕಬೀರ ನಂಬಿದ ರಾಮರಾಜ್ಯ ತರಬೇಕಾದರೆ ಸಾಮಾಜಿಕ ನ್ಯಾಯ ಮತ್ತೆ ತರಬೇಕಿದೆ ಎಂದರು.

ಈಗಿನ ಸಿದ್ದರಾಮಯ್ಯ ನಮಗೆ 2013 ರ ಸಿದ್ದರಾಮಯ್ಯ ಆಗಬೇಕು. ಇನ್ನು ನಿಮ್ಮಿಂದ ಬದಲಾವಣೆ ಆಗಬೇಕು. ಅದು ಯಾಕೋ ಆಗುತ್ತಿಲ್ಲ ಕಾರಣವೇನೋ ಗೊತ್ತಿಲ್ಲ. ಅಧಿಕಾರ ಎಷ್ಟು ದಿನ ಇರಲಿದೆಯೋ ಗೊತ್ತಿಲ್ಲ. ಇದ್ದಾಗ ಏನು ಮುಖ್ಯ ಕೆಲಸ ಮಾಡುತ್ತೀರಿ ಎನ್ನುವುದು ಮುಖ್ಯ. ಹಾಗಾಗಿ ನಿಮ್ಮ ಇಚ್ಚಾಶಕ್ತಿ ಪ್ರದರ್ಶನ ಮಾಡಿ, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬದಲಾವಣೆ ತರುವ ಕೆಲಸ ಮಾಡಬೇಕೆಂದು ಮನವಿ ಮಾಡಿದರು. ನಂತರ ವಲ್ಲಭ ನಿಕೇತನ ಅನಾಥಾಶ್ರಮಕ್ಕೆ ಪ್ರಶಸ್ತಿ ಮೊತ್ತ 10 ಸಾವಿರ ದೇಣಿಗೆ ನೀಡಿದರು.

ಚಿಂತಕ ನಟರಾಜ್ ಹುಳಿಯಾರ್ ಮಾತನಾಡಿ, ಐದು ವರ್ಷದ ಅಸಮಾಧಾನದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಸ್ವಂತ ಬಲದಿಂದ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಿದೆ. ಈಗ ಪಿಂಚ್ ಹಿಟ್ಟರ್ ಗಳು ಅಪಾಯಕಾರಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಡಿ. ಯಾವ ಕಾರಣಕ್ಕೂ ಕೋಮುವಾದಿಗಳನ್ನು ಕಾಂಗ್ರೆಸ್ ಗೆ ಸೇರಿಸಿಕೊಳ್ಳಬೇಡಿ ಎಂದು ಬಿಜೆಪಿ ನಾಯಕರ ಕಾಂಗ್ರೆಸ್ ಸೇರ್ಪಡೆ ಬೇಡ ಎನ್ನುವ ಮನವಿ ಮಾಡಿದರು. ಇದರ ಜೊತೆ ಕಾಂಗ್ರೆಸ್ ಸರ್ಕಾರ ಮತ್ತಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಲಿ ಎನ್ನುವ ಆಶಯ ವ್ಯಕ್ತಪಡಿಸಿದರು.

ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ ಎಲ್ ಶಂಕರ್ ಮಾತನಾಡಿ, ದೊಡ್ಡ ಹೋರಾಟಗಾರರ ಬಳುವಳಿಯನ್ನು ಜೆಪಿ ಕೊಟ್ಟರು, ಅವರ ಚಳವಳಿ ಕಾರಣದಿಂದ ಸಿದ್ದರಾಮಯ್ಯ, ನಿತೀಶ್ ಕುಮಾರ್, ನವೀನ್ ಪಟ್ನಾಯಕ್, ಮುಲಾಯಂ ಸಿಂಗ್ ಯಾದವ್ ರಂತಹ ನಾಯಕರು ಬೆಳೆದುಬಂದರು ಎಂದು ಜೆಪಿ ಸ್ಮರಣೆ ಮಾಡಿದರು.

ಎಸ್ಸಿ, ಎಸ್ಟಿ ಸಮುದಾಯದವರಿಗೆ ಭೂದಾನದ ಮೂಲಕ ಲಕ್ಷಾಂತರ ಎಕರೆ ಜಾಗ ಸಿಕ್ಕಿತ್ತು. ಆ ಭೂಮಿ ಈಗ ಏನಾಗಿದೆ ಎನ್ನುವುದನ್ನು ಪರಿಶೀಲಿಸಬೇಕು. ಭೂಕಬಳಿಕೆದಾರರಿಗೆ ಸಿಗದಂತೆ ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಮಾಡಿದರು.

ಬಿ. ಆರ್ ಪಾಟೀಲ್​ಗೆ ಸಚಿವ ಸ್ಥಾನ ನೀಡಿರುವುದರಿಂದ ಅವರಿಗೆ ಯಾವುದೇ ನಷ್ಟ ಇಲ್ಲ. ಆದರೆ ಅದು ನಿಮ್ಮ ಸಂಪುಟಕ್ಕೆ ಮತ್ತು ನಿಮ್ಮ ಸರ್ಕಾರಕ್ಕೆ ಆದ ನಷ್ಟ. ಪ್ರಾಮಾಣಿಕ ಹಿನ್ನಲೆ, ಹೋರಾಟದಿಂದ ಬಂದವರು ಬಿ.ಆರ್ ಪಾಟೀಲ್. ಅಂತವರಿಗೆ ಸಂಪುಟದಲ್ಲಿ ಅವಕಾಶ ನೀಡಬೇಕು ಎಂದರು. ನಿಮಗೆ ಮಂತ್ರಿ ಪದವಿಗಿಂತ ಜೆಪಿ ಪ್ರಶಸ್ತಿ ಉತ್ತಮ ಎಂದು ಬಿ.ಆರ್ ಪಾಟೀಲ್ ಅವರನ್ನ ಅಭಿನಂದಿಸಿದರು.

ಇದನ್ನೂ ಓದಿ: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯಿದೆ ವಾಪಸ್​ ಬೇಡ: ಸಿಎಂಗೆ ಪ್ರಭು ಚೌಹಾಣ್ ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.