ETV Bharat / state

ಬಿಬಿಎಂಪಿಯಲ್ಲಿ ಜಂಟಿ ಆಯುಕ್ತ ಚಿದಾನಂದ ದರ್ಬಾರ್: ವರ್ಗಾವಣೆ ಆಗಿದ್ರೂ ಸೀಟ್​ಗೆ ಅಟ್ಟಿಕೊಂಡ ಆಫೀಸರ್ - ಬಿಬಿಎಂಪಿ ಜಂಟಿ ಆಯುಕ್ತ ಚಿದಾನಂದ ಲೆಟೆಸ್ಟ್ ನ್ಯೂಸ್

ಬಿಬಿಎಂಪಿ ಜಂಟಿ ಆಯುಕ್ತರಾದ ಎನ್​.ಚಿದಾನಂದ ಅವರನ್ನು ಸರ್ಕಾರ ಜೂ.8ರಂದು ಕೃಷಿ ಇಲಾಖೆಗೆ ವರ್ಗಾವಣೆ ಮಾಡಿ ಆದೇಶಿಸಿ 6 ತಿಂಗಳು ಕಳೆದಿದೆ. ಇಷ್ಟದರೂ ಅವರು ತಮ್ಮ ಕುರ್ಚಿಯನ್ನು ಬಿಟ್ಟು ಹೋಗಲು ಮನಸ್ಸು ಮಾಡುತ್ತಿಲ್ಲ. ಸರ್ಕಾರದ ಆದೇಶಕ್ಕೂ ಬೆಲೆ ಕೊಡುತ್ತಿಲ್ಲ.

ಜಂಟಿ ಆಯುಕ್ತ ಚಿದಾನಂದ
BBMP Joint Commissioner Chidananda
author img

By

Published : Nov 30, 2020, 5:36 PM IST

ಬೆಂಗಳೂರು : ಬಿಬಿಎಂಪಿ ಜಂಟಿ ಆಯುಕ್ತರೊಬ್ಬರಿಗೆ ಕುರ್ಚಿ ವ್ಯಾಮೋಹ ಶುರುವಾಗಿದ್ದು, ಸರ್ಕಾರ ಎರಡೆರಡು ಭಾರಿ ವರ್ಗಾವಣೆ ಮಾಡಿದ್ರೂ ತಾನು ಕೂತ ಸೀಟ್​ನಿಂದ ಕದಲುತ್ತಿಲ್ಲ. ಅಷ್ಟೇ ಅಲ್ಲದೆ ಇವರ ವಿರುದ್ಧ ಪ್ರಭಾವ ಬಳಸಿ ಹುದ್ದೆಯಲ್ಲಿ ಮುಂದುವರೆದಿರುವ ಆರೋಪ ಕೇಳಿ ಬಂದಿದೆ.

order copy
ಬಿಬಿಎಂಪಿಯಲ್ಲಿ ಜಂಟಿ ಆಯುಕ್ತ ಚಿದಾನಂದ ವರ್ಗಾವಣೆ ಆದೇಶದ ಪ್ರತಿ

ವರ್ಗಾವಣೆ ಆಗಿದ್ರೂ ಸೀಟ್​​ಗೆ ಅಂಟಿಕೊಂಡಿರೊ ಪಾಲಿಕೆ ಜಂಟಿ ಆಯುಕ್ತ :

ಬಿಬಿಎಂಪಿ ಭ್ರಷ್ಟ ಅಧಿಕಾರಿಗಳ ಪಾಲಿನ ಸ್ವರ್ಗ. ಇಲ್ಲಿಗೆ ಬೇಕಂತಲೆ ಅದೆಷ್ಟೋ ಅಧಿಕಾರಿಗಳು ವರ್ಗಾವಣೆ ಮಾಡಿಸಿಕೊಂಡು ಬರುತ್ತಾರೆ. ಇಲ್ಲಿಗೆ ಬಂದವರು ಬೇರೆ ಕಡೆ ವರ್ಗಾವಣೆ ಆದರೂ ಹೋಗೋಕೆ ಹಿಂದೆ ಮುಂದೆ ನೋಡ್ತಾರೆ. ಇನ್ನು ಕೆಲವರು ಪ್ರಭಾವ ಬಳಸಿ ಇಲ್ಲೇ ಉಳಿದುಕೊಳ್ಳಲು ಶತ ಪ್ರಯತ್ನ ಮಾಡ್ತಾರೆ. ಅದರಂತೆ ಬಿಬಿಎಂಪಿ ಜಂಟಿ ಆಯುಕ್ತ ಎನ್​.ಚಿದಾನಂದ ಅವರನ್ನು ಸರ್ಕಾರ ಜೂ.8ರಂದು ಕೃಷಿ ಇಲಾಖೆಗೆ ವರ್ಗಾವಣೆ ಮಾಡಿ ಆದೇಶಿಸಿ 6 ತಿಂಗಳು ಕಳೆದಿದೆ. ಹಿಗಿದ್ದರೂ ಸರ್ಕಾರ ಸೂಚಿಸಿರುವ ಕೃಷಿ ಇಲಾಖೆಯ ಉಪನಿರ್ದೇಶಕ ಸ್ಥಾನಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.

order copy
ಬಿಬಿಎಂಪಿ ಹೊರಡಿಸಿರುವ ಆದೇಶದ ಪ್ರತಿ

ಸರ್ಕಾರದ ಆದೇಶಕ್ಕೆ ಕಿಂಚಿತ್ತೂ ಕಿಮ್ಮತ್ತು ನೀಡದ ಕೆಎಎಸ್ ಅಧಿಕಾರಿ:

ಆಗಿನ ಮೇಯರ್ ಗೌತಮ್​ ಕುಮಾರ್ ಜೂ.8ರಂದು ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತರಿಗೆ ಪತ್ರ ಬರೆದು ಚಿದಾನಂದರನ್ನು ಸರ್ಕಾರದ ಆದೇಶದಂತೆ ಎತ್ತಂಗಡಿ ಮಾಡಲು ಸೂಚಿಸಿದ್ದಾರೆ. ಇದಕ್ಕೂ ಚಿದಾನಂದ್ ಬಗ್ಗಿಲ್ಲ. ಬಳಿಕ ನಗರಾಭಿವೃದ್ಧಿ ಇಲಾಖೆಯೇ ಆ.​13ರಂದು ಮತ್ತೊಂದು ಪತ್ರ ಬರೆದು ಕೃಷಿ ಇಲಾಖೆಗೆ ಹಿಂದಿರುಗಿಸದ ಬಗ್ಗೆ ಮಾಹಿತಿ ಕೇಳಿದೆ. ಕೂಡಲೇ ಕೃಷಿ ಇಲಾಖೆಗೆ ಹಿಂದಿರುಗಿಸುವಂತೆ ಮತ್ತೆ ಸರ್ಕಾರ ಆದೇಶಿಸಿದೆ. ಇಷ್ಟಾದ್ರೂ ಜಂಟಿ ಆಯುಕ್ತ ಚಿದಾನಂದ ಕವಡೆ ಕಾಸಿನ ಕಿಮ್ಮತ್ತು ನೀಡ್ತಿಲ್ಲ, ಈ ಬಗ್ಗೆ ಸ್ಪಷ್ಟನೆ ಕೇಳಲು ಚಿದಾನಂದ್​ಗೆ ಎಷ್ಟೇ ಬಾರಿ ಕರೆ ಮಾಡಿದ್ರೂ ಸ್ವೀಕರಿಸ್ತಿಲ್ಲ ಎನ್ನಲಾಗುತ್ತಿದೆ.

order copy
ಬಿಬಿಎಂಪಿ ಹೊರಡಿಸಿರುವ ಆದೇಶದ ಪ್ರತಿ

ಬಿಬಿಎಂಪಿ ಜಂಟಿ ಆಯುಕ್ತರಾಗಿ ನೇಮಕ ಆಗಬೇಕೆಂದರೆ ಕೆಎಎಸ್ ಅಥವಾ ಐಎಎಸ್​ ಆಗಿರಬೇಕು. ಆದರೆ ಚಿದಾನಂದ ಕೆಎಎಸ್ ಮಾಡದೆ ಪ್ರಭಾವ ಬಳಸಿ ಜಂಟಿ ಆಯುಕ್ತ ಸ್ಥಾನದಲ್ಲಿ ಮುಂದುವರೆದಿರುವ ಆರೋಪವಿದೆ.

ಬೆಂಗಳೂರು : ಬಿಬಿಎಂಪಿ ಜಂಟಿ ಆಯುಕ್ತರೊಬ್ಬರಿಗೆ ಕುರ್ಚಿ ವ್ಯಾಮೋಹ ಶುರುವಾಗಿದ್ದು, ಸರ್ಕಾರ ಎರಡೆರಡು ಭಾರಿ ವರ್ಗಾವಣೆ ಮಾಡಿದ್ರೂ ತಾನು ಕೂತ ಸೀಟ್​ನಿಂದ ಕದಲುತ್ತಿಲ್ಲ. ಅಷ್ಟೇ ಅಲ್ಲದೆ ಇವರ ವಿರುದ್ಧ ಪ್ರಭಾವ ಬಳಸಿ ಹುದ್ದೆಯಲ್ಲಿ ಮುಂದುವರೆದಿರುವ ಆರೋಪ ಕೇಳಿ ಬಂದಿದೆ.

order copy
ಬಿಬಿಎಂಪಿಯಲ್ಲಿ ಜಂಟಿ ಆಯುಕ್ತ ಚಿದಾನಂದ ವರ್ಗಾವಣೆ ಆದೇಶದ ಪ್ರತಿ

ವರ್ಗಾವಣೆ ಆಗಿದ್ರೂ ಸೀಟ್​​ಗೆ ಅಂಟಿಕೊಂಡಿರೊ ಪಾಲಿಕೆ ಜಂಟಿ ಆಯುಕ್ತ :

ಬಿಬಿಎಂಪಿ ಭ್ರಷ್ಟ ಅಧಿಕಾರಿಗಳ ಪಾಲಿನ ಸ್ವರ್ಗ. ಇಲ್ಲಿಗೆ ಬೇಕಂತಲೆ ಅದೆಷ್ಟೋ ಅಧಿಕಾರಿಗಳು ವರ್ಗಾವಣೆ ಮಾಡಿಸಿಕೊಂಡು ಬರುತ್ತಾರೆ. ಇಲ್ಲಿಗೆ ಬಂದವರು ಬೇರೆ ಕಡೆ ವರ್ಗಾವಣೆ ಆದರೂ ಹೋಗೋಕೆ ಹಿಂದೆ ಮುಂದೆ ನೋಡ್ತಾರೆ. ಇನ್ನು ಕೆಲವರು ಪ್ರಭಾವ ಬಳಸಿ ಇಲ್ಲೇ ಉಳಿದುಕೊಳ್ಳಲು ಶತ ಪ್ರಯತ್ನ ಮಾಡ್ತಾರೆ. ಅದರಂತೆ ಬಿಬಿಎಂಪಿ ಜಂಟಿ ಆಯುಕ್ತ ಎನ್​.ಚಿದಾನಂದ ಅವರನ್ನು ಸರ್ಕಾರ ಜೂ.8ರಂದು ಕೃಷಿ ಇಲಾಖೆಗೆ ವರ್ಗಾವಣೆ ಮಾಡಿ ಆದೇಶಿಸಿ 6 ತಿಂಗಳು ಕಳೆದಿದೆ. ಹಿಗಿದ್ದರೂ ಸರ್ಕಾರ ಸೂಚಿಸಿರುವ ಕೃಷಿ ಇಲಾಖೆಯ ಉಪನಿರ್ದೇಶಕ ಸ್ಥಾನಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.

order copy
ಬಿಬಿಎಂಪಿ ಹೊರಡಿಸಿರುವ ಆದೇಶದ ಪ್ರತಿ

ಸರ್ಕಾರದ ಆದೇಶಕ್ಕೆ ಕಿಂಚಿತ್ತೂ ಕಿಮ್ಮತ್ತು ನೀಡದ ಕೆಎಎಸ್ ಅಧಿಕಾರಿ:

ಆಗಿನ ಮೇಯರ್ ಗೌತಮ್​ ಕುಮಾರ್ ಜೂ.8ರಂದು ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತರಿಗೆ ಪತ್ರ ಬರೆದು ಚಿದಾನಂದರನ್ನು ಸರ್ಕಾರದ ಆದೇಶದಂತೆ ಎತ್ತಂಗಡಿ ಮಾಡಲು ಸೂಚಿಸಿದ್ದಾರೆ. ಇದಕ್ಕೂ ಚಿದಾನಂದ್ ಬಗ್ಗಿಲ್ಲ. ಬಳಿಕ ನಗರಾಭಿವೃದ್ಧಿ ಇಲಾಖೆಯೇ ಆ.​13ರಂದು ಮತ್ತೊಂದು ಪತ್ರ ಬರೆದು ಕೃಷಿ ಇಲಾಖೆಗೆ ಹಿಂದಿರುಗಿಸದ ಬಗ್ಗೆ ಮಾಹಿತಿ ಕೇಳಿದೆ. ಕೂಡಲೇ ಕೃಷಿ ಇಲಾಖೆಗೆ ಹಿಂದಿರುಗಿಸುವಂತೆ ಮತ್ತೆ ಸರ್ಕಾರ ಆದೇಶಿಸಿದೆ. ಇಷ್ಟಾದ್ರೂ ಜಂಟಿ ಆಯುಕ್ತ ಚಿದಾನಂದ ಕವಡೆ ಕಾಸಿನ ಕಿಮ್ಮತ್ತು ನೀಡ್ತಿಲ್ಲ, ಈ ಬಗ್ಗೆ ಸ್ಪಷ್ಟನೆ ಕೇಳಲು ಚಿದಾನಂದ್​ಗೆ ಎಷ್ಟೇ ಬಾರಿ ಕರೆ ಮಾಡಿದ್ರೂ ಸ್ವೀಕರಿಸ್ತಿಲ್ಲ ಎನ್ನಲಾಗುತ್ತಿದೆ.

order copy
ಬಿಬಿಎಂಪಿ ಹೊರಡಿಸಿರುವ ಆದೇಶದ ಪ್ರತಿ

ಬಿಬಿಎಂಪಿ ಜಂಟಿ ಆಯುಕ್ತರಾಗಿ ನೇಮಕ ಆಗಬೇಕೆಂದರೆ ಕೆಎಎಸ್ ಅಥವಾ ಐಎಎಸ್​ ಆಗಿರಬೇಕು. ಆದರೆ ಚಿದಾನಂದ ಕೆಎಎಸ್ ಮಾಡದೆ ಪ್ರಭಾವ ಬಳಸಿ ಜಂಟಿ ಆಯುಕ್ತ ಸ್ಥಾನದಲ್ಲಿ ಮುಂದುವರೆದಿರುವ ಆರೋಪವಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.