ETV Bharat / state

ಬೆಂಗಳೂರು ನಗರದಲ್ಲಿ ಪಟಾಕಿ ನಿಷೇಧಕ್ಕೆ ಚಿಂತನೆ: ಗೃಹಸಚಿವ ಡಾ ಜಿ ಪರಮೇಶ್ವರ್

author img

By ETV Bharat Karnataka Team

Published : Oct 18, 2023, 6:40 PM IST

Updated : Oct 18, 2023, 7:56 PM IST

ಬೆಂಗಳೂರಿನ ಅತ್ತಿಬೆಲೆ ಪಟಾಕಿ ದುರಂತ ಸ್ಥಳಕ್ಕೆ ಭೇಟಿ ನೀಡಿದ ಗೃಹಸಚಿವರು, ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿದರು.

Home Minister checked.
ಪಟಾಕಿ ದುರಂತ ಸ್ಥಳಕ್ಕೆ ಭೇಟಿ ನೀಡಿ ಗೃಹಸಚಿವರು ಪರಿಶೀಲಿಸಿದರು.

ಗೃಹಸಚಿವ ಡಾ ಜಿ ಪರಮೇಶ್ವರ್ ಮಾಧ್ಯಮದವರ ಜೊತೆ ಮಾತನಾಡಿದರು.

ಬೆಂಗಳೂರು: ಅತ್ತಿಬೆಲೆ‌ ಪಟಾಕಿ ದುರಂತಕ್ಕೆ ನಾಲ್ಕೂ‌ ಇಲಾಖೆಗಳ ನಿರ್ಲಕ್ಷ್ಯವೇ ಕಾರಣವಾಗಿದೆ. ಹೀಗಾಗಿ ಇರುವ ಕಾಯಿದೆಗಳಿಗೆ ಇನ್ನೂ ಹೆಚ್ಚಿನ‌ ಶಕ್ತಿ ನೀಡಿ ಅಗ್ನಿ ದುರಂತ ಹಾಗೂ ಪಟಾಕಿ ಅವಘಡಗಳಿಗೆ ಅಂತ್ಯ ಹಾಡುವಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.

ಅತ್ತಿಬೆಲೆ ಪಟಾಕಿ ದುರಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು. ಪಟಾಕಿ ದುರಂತ ರಾಜ್ಯಕ್ಕೊಂದು ಪಾಠ, ಇದರಿಂದ 17 ಮಂದಿ ಈ ವರೆಗೆ ಸಾವಿಗೀಡಾಗಿದ್ದಾರೆ. ಅವರಿಗೆ ದೇವರು ಸದ್ಗತಿ‌ ಒದಗಿಸಲಿ ಎಂದು‌ ಸಂತಾಪ ಸೂಚಿಸಿದರು. ಹೆಚ್ಚುತ್ತಿರುವ ಪಟಾಕಿ ಹಾಗೂ ಅಗ್ನಿ ದುರಂತಗಳಿಗೆ ಕಡಿವಾಣ ಹಾಕಲು ರಾಜ್ಯಾದ್ಯಂತ ಅನ್ವಯಿಸುವಂತೆ ಮುಖ್ಯಮಂತ್ರಿ ಅವರೊಂದಿಗೆ ಸಮಾಲೋಚಿಸಿ ಕಾಯಿದೆಗಳಿಗೆ ಮಾರ್ಪಾಡು ಮಾಡಿ ಕಠಿಣ ಕ್ರಮಗಳಿಗಾಗಿ ಯೋಜಿಸಲಾಗುತ್ತಿದೆ ಎಂದರು.

ಬೆಂಗಳೂರಿನಲ್ಲಿ ಪಟಾಕಿ ನಿಷೇಧಕ್ಕೆ ಚಿಂತನೆ: ದೀಪಾವಳಿ ಸಮೀಪಿಸುತ್ತಿರುವುದರಿಂದ ಪಟಾಕಿ ನಿಷೇಧಕ್ಕೆ ಸಾಧಕ ಬಾಧಕ ಕುರಿತು ಯೋಚಿಸಲಾಗುತ್ತಿದೆ.‌ ಮೊದಲ ಬಾರಿಗೆ ಬೆಂಗಳೂರಿನಲ್ಲಿ‌ ಪಟಾಕಿ ನಿಷೇಧ ಪ್ರಾಯೋಗಿಕ ಜಾರಿಗೊಳಿಸಿ ಯಶಸ್ವಿಯಾದರೆ ಇಡೀ ರಾಜ್ಯಕ್ಕೆ ವಿಸ್ತರಿಸಲಾಗುವುದು. ಈಗಾಗಲೇ ದೆಹಲಿಯಲ್ಲಿ ಪಟಾಕಿ ನಿಷೇಧಿಸಲಾಗಿದೆ. ಸರ್ಕಾರ ಆದೇಶಿಸಿರುವಂತೆ ಯಾವುದೇ ಪಕ್ಷದ ಕಾರ್ಯಕ್ರಮಗಳಿಗೆ ಪಟಾಕಿ ನಿಷೇಧಿಸಲಾಗಿದೆ. ಇನ್ನು ಹಬ್ಬಗಳ ಪಟಾಕಿ - ಸ್ಪೋಟಕ ಅಗ್ನಿ ದುರಂತಗಳಿಂದ ಅಮಾಯಕ ಜೀವಗಳು ಬಲಿಯಾಗುತ್ತಿವೆ ಇಂತಹ ದುರಂತಗಳು ಮತ್ತೆ ಮರುಕಳಿಸಬಾರದು ಎಂದು ಸೂಚಿಸಿದರು.

ಅತ್ತಿಬೆಲೆ ದುರಂತ ನಾಲ್ಕು ಇಲಾಖೆಗಳು ಹೊಣೆ:ಅತ್ತಿಬೆಲೆ ದುರಂತಕ್ಕೆ ಕಂದಾಯ, ಪೊಲೀಸ್, ಅಗ್ನಿ ಶಾಮಕವಷ್ಟೇ ಅಲ್ಲದೇ ರಸ್ತೆ ಸಂಚಾರ ಚೆಕ್ ಪೊಸ್ಟ್ ಗಳು ಕಾರಣವಾಗಿವೆ. ಯಾವುದೇ ಸ್ಪೋಟಕಗಳನ್ನು ಸಾಗಣೆ ಮಾಡುವ ಸಂದರ್ಭದಲ್ಲಿ ಎಲ್ಎ7 ನಿಯಮ ಪಾಲಿಸಿ ಪರವಾನಗಿ ಅನುಮತಿ ಪಡೆದಿರಬೇಕು. ಆದರೆ, ತಮಿಳುನಾಡಿಂದ ಬಂದ ಸಾಗಣೆ ವಾಹನ ಎಲ್ಎ5 ಪರವಾನಗಿ ಮಾತ್ರ ಹೊಂದಿದ್ದು, ಇದು ಸಹ ದುರಂತಕ್ಕೆ ಕಾರಣವಾಗಿದೆ. ಸಿಐಡಿ ತಿಳಿಸಿರುವ ವರದಿಯನ್ನು ಒಳಗೊಂಡಂತೆ ನ್ಯಾಯಾಂಗ ತನಿಖೆಗೆ ರಾಜ್ಯಪಾಲರ ಶಿಫಾರಸ್ಸಿನಂತೆ ಸರ್ಕಾರ ಆದೇಶಿಸಿದೆ. ಹೀಗಾಗಿ ಮೂರು ತಿಂಗಳ ಗಡುವಿನಲ್ಲಿ ಸಮರ್ಪಕ ಕೂಲಂಕಷ ತನಿಖೆಯ ವರದಿ ಬರಬೇಕಿದೆ.


ಪರವಾನಗಿ ನವೀಕರಣದ ಪ್ರಮಾಣ ಪತ್ರವೂ ನಕಲಿ: ಪಟಾಕಿ ಮಾರಾಟದ ಜಾಗ ಹಾಗೂ ದಾಸ್ತಾನು ಮಳಿಗೆಗಳಿಗೆ ಪರವಾನಗಿ ಅವಧಿ ಅಕ್ಟೋಬರ್​ಗೆ ಮುಗಿದಿದೆ. ಅನಂತರ ನವೀಕರಣಕ್ಕೆ ಅರ್ಜಿ ಸಲ್ಲಿಸಿದ ನವೀಕರಣದ ಪತ್ರವೇ ನಕಲಿಯಾಗಿತ್ತು ಎಂದ ಗೃಹ ಸಚಿವರು, ಈ ಕುರಿತಂತೆ ಪಟಾಕಿ ದಾಸ್ತಾನಿಗೆ 1000 ಕಿಲೋ ಮಿತಿಯಿದೆ. ಆದರೆ, 5000 ಕಿಲೋ ಸಂಗ್ರಹ ಇರುವುದು ಬೆಳಕಿಗೆ ಬಂದಿದೆ. ಹೀಗಾಗಿ ಪರವಾನಗಿದಾರ ರಾಮಸ್ವಾಮಿ ರೆಡ್ಡಿ ವಿರುದ್ಧ ಕಠಿಣ ಕ್ರಮ ಅಗತ್ಯವಿದೆ ಎಂದು ಹೇಳಿದರು.

ಉನ್ನತ ಅಧಿಕಾರಿಗಳು ಕೇಂದ್ರದ ಕಡೆ ಮುಖ: ಆಪರೇಷನ್ ಕಮಲ ಕುರಿತು ಮಾಹಿತಿಯಿಲ್ಲ, ಪರಸ್ಪರ ಶಾಸಕರು ಕೂಡಿ ಔತಣಕೂಟ ಏರ್ಪಡಿಸಿದ್ದರೆ ಅದಕ್ಕೆ ಹೆಚ್ಚಿನ ಮಹತ್ವ ನೀಡಬಾರದು. ಉನ್ನತ ಅಧಿಕಾರಿಗಳಿಗೆ ಆಯಕಟ್ಟಿನ ಸ್ಥಳ ಸಿಗದಿದ್ದಕ್ಕೆ ಕೇಂದ್ರದ ಕಡೆ ಮುಖ ಮಾಡಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ಬಾರಿ ಸಿಎಂ ಆಗಿದ್ದಾರೆ, ಹೀಗಾಗಿ ಎಲ್ಲಿ ಯಾವ ಅಧಿಕಾರಿಯನ್ನು ನಿಯೋಜಿಸಬೇಕೆಂಬ ಅನುಭವ ಅವರಿಗಿದೆ ಎಂದರು.

ಇಷ್ಟಕ್ಕೂ ಕೇಂದ್ರವೇ ಅಂತಹ ಅಧಿಕಾರಿಗಳನ್ನು ನಿಯೋಜಿಸಿ ನಿಯಂತ್ರಿಸುತ್ತಿದೆ, ಎಲ್ಲಿ ಕೆಲಸ ನೀಡಿದರೂ ನಿರ್ವಹಿಸುವ ಶಕ್ತಿ ಹೊಂದಿರಬೇಕೇ ವಿನಃ ಬೇಕಾದೆಡೆಗೆ ಕೂರಿಸಲು ಅಸಾಧ್ಯ, ಇಷ್ಟಕ್ಕೂ ಎಲ್ಲಿ ಇದ್ದರೂ ಕೆಲಸದಲ್ಲಿದ್ದುಕೊಂಡು ವರ್ಗಾವಣೆಗೆ ಯತ್ನಿಸುತ್ತಿದ್ದಾರೆ. ಅವರನ್ನು ಹೊರಗಿಟ್ಟು ಸರ್ಕಾರ ಏನೂ ಮಾಡುತ್ತಿಲ್ಲ ಹೀಗಾಗಿ ಅಂತಹ ವಿಚಾರಗಳಿಗೆ ಮಹತ್ವವಿಲ್ಲ ಎಂದು ಪ್ರತಿಕ್ರಿಯಿಸಿದರು. ಸ್ಥಳದಲ್ಲಿ ಬೆಂಗಳೂರು ಜಿಲ್ಲಾಧಿಕಾರಿ ದಯಾನಂದ್, ಎಎಸ್ಪಿ ಪುರುಷೋತ್ತಮ್, ಡಿವೈಎಸ್ಪಿ ಮೋಹನ್, ತಹಸೀಲ್ದಾರ್ ಶಿವಪ್ಪ ಲಮ್ಹಾಣಿ ಇದ್ದರು.

ಇದನ್ನೂಓದಿ:ಅತ್ತಿಬೆಲೆ ಪಟಾಕಿ ದುರಂತ ಸ್ಥಳಕ್ಕೆ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಭೇಟಿ, ಪರಿಶೀಲನೆ

ಗೃಹಸಚಿವ ಡಾ ಜಿ ಪರಮೇಶ್ವರ್ ಮಾಧ್ಯಮದವರ ಜೊತೆ ಮಾತನಾಡಿದರು.

ಬೆಂಗಳೂರು: ಅತ್ತಿಬೆಲೆ‌ ಪಟಾಕಿ ದುರಂತಕ್ಕೆ ನಾಲ್ಕೂ‌ ಇಲಾಖೆಗಳ ನಿರ್ಲಕ್ಷ್ಯವೇ ಕಾರಣವಾಗಿದೆ. ಹೀಗಾಗಿ ಇರುವ ಕಾಯಿದೆಗಳಿಗೆ ಇನ್ನೂ ಹೆಚ್ಚಿನ‌ ಶಕ್ತಿ ನೀಡಿ ಅಗ್ನಿ ದುರಂತ ಹಾಗೂ ಪಟಾಕಿ ಅವಘಡಗಳಿಗೆ ಅಂತ್ಯ ಹಾಡುವಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.

ಅತ್ತಿಬೆಲೆ ಪಟಾಕಿ ದುರಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು. ಪಟಾಕಿ ದುರಂತ ರಾಜ್ಯಕ್ಕೊಂದು ಪಾಠ, ಇದರಿಂದ 17 ಮಂದಿ ಈ ವರೆಗೆ ಸಾವಿಗೀಡಾಗಿದ್ದಾರೆ. ಅವರಿಗೆ ದೇವರು ಸದ್ಗತಿ‌ ಒದಗಿಸಲಿ ಎಂದು‌ ಸಂತಾಪ ಸೂಚಿಸಿದರು. ಹೆಚ್ಚುತ್ತಿರುವ ಪಟಾಕಿ ಹಾಗೂ ಅಗ್ನಿ ದುರಂತಗಳಿಗೆ ಕಡಿವಾಣ ಹಾಕಲು ರಾಜ್ಯಾದ್ಯಂತ ಅನ್ವಯಿಸುವಂತೆ ಮುಖ್ಯಮಂತ್ರಿ ಅವರೊಂದಿಗೆ ಸಮಾಲೋಚಿಸಿ ಕಾಯಿದೆಗಳಿಗೆ ಮಾರ್ಪಾಡು ಮಾಡಿ ಕಠಿಣ ಕ್ರಮಗಳಿಗಾಗಿ ಯೋಜಿಸಲಾಗುತ್ತಿದೆ ಎಂದರು.

ಬೆಂಗಳೂರಿನಲ್ಲಿ ಪಟಾಕಿ ನಿಷೇಧಕ್ಕೆ ಚಿಂತನೆ: ದೀಪಾವಳಿ ಸಮೀಪಿಸುತ್ತಿರುವುದರಿಂದ ಪಟಾಕಿ ನಿಷೇಧಕ್ಕೆ ಸಾಧಕ ಬಾಧಕ ಕುರಿತು ಯೋಚಿಸಲಾಗುತ್ತಿದೆ.‌ ಮೊದಲ ಬಾರಿಗೆ ಬೆಂಗಳೂರಿನಲ್ಲಿ‌ ಪಟಾಕಿ ನಿಷೇಧ ಪ್ರಾಯೋಗಿಕ ಜಾರಿಗೊಳಿಸಿ ಯಶಸ್ವಿಯಾದರೆ ಇಡೀ ರಾಜ್ಯಕ್ಕೆ ವಿಸ್ತರಿಸಲಾಗುವುದು. ಈಗಾಗಲೇ ದೆಹಲಿಯಲ್ಲಿ ಪಟಾಕಿ ನಿಷೇಧಿಸಲಾಗಿದೆ. ಸರ್ಕಾರ ಆದೇಶಿಸಿರುವಂತೆ ಯಾವುದೇ ಪಕ್ಷದ ಕಾರ್ಯಕ್ರಮಗಳಿಗೆ ಪಟಾಕಿ ನಿಷೇಧಿಸಲಾಗಿದೆ. ಇನ್ನು ಹಬ್ಬಗಳ ಪಟಾಕಿ - ಸ್ಪೋಟಕ ಅಗ್ನಿ ದುರಂತಗಳಿಂದ ಅಮಾಯಕ ಜೀವಗಳು ಬಲಿಯಾಗುತ್ತಿವೆ ಇಂತಹ ದುರಂತಗಳು ಮತ್ತೆ ಮರುಕಳಿಸಬಾರದು ಎಂದು ಸೂಚಿಸಿದರು.

ಅತ್ತಿಬೆಲೆ ದುರಂತ ನಾಲ್ಕು ಇಲಾಖೆಗಳು ಹೊಣೆ:ಅತ್ತಿಬೆಲೆ ದುರಂತಕ್ಕೆ ಕಂದಾಯ, ಪೊಲೀಸ್, ಅಗ್ನಿ ಶಾಮಕವಷ್ಟೇ ಅಲ್ಲದೇ ರಸ್ತೆ ಸಂಚಾರ ಚೆಕ್ ಪೊಸ್ಟ್ ಗಳು ಕಾರಣವಾಗಿವೆ. ಯಾವುದೇ ಸ್ಪೋಟಕಗಳನ್ನು ಸಾಗಣೆ ಮಾಡುವ ಸಂದರ್ಭದಲ್ಲಿ ಎಲ್ಎ7 ನಿಯಮ ಪಾಲಿಸಿ ಪರವಾನಗಿ ಅನುಮತಿ ಪಡೆದಿರಬೇಕು. ಆದರೆ, ತಮಿಳುನಾಡಿಂದ ಬಂದ ಸಾಗಣೆ ವಾಹನ ಎಲ್ಎ5 ಪರವಾನಗಿ ಮಾತ್ರ ಹೊಂದಿದ್ದು, ಇದು ಸಹ ದುರಂತಕ್ಕೆ ಕಾರಣವಾಗಿದೆ. ಸಿಐಡಿ ತಿಳಿಸಿರುವ ವರದಿಯನ್ನು ಒಳಗೊಂಡಂತೆ ನ್ಯಾಯಾಂಗ ತನಿಖೆಗೆ ರಾಜ್ಯಪಾಲರ ಶಿಫಾರಸ್ಸಿನಂತೆ ಸರ್ಕಾರ ಆದೇಶಿಸಿದೆ. ಹೀಗಾಗಿ ಮೂರು ತಿಂಗಳ ಗಡುವಿನಲ್ಲಿ ಸಮರ್ಪಕ ಕೂಲಂಕಷ ತನಿಖೆಯ ವರದಿ ಬರಬೇಕಿದೆ.


ಪರವಾನಗಿ ನವೀಕರಣದ ಪ್ರಮಾಣ ಪತ್ರವೂ ನಕಲಿ: ಪಟಾಕಿ ಮಾರಾಟದ ಜಾಗ ಹಾಗೂ ದಾಸ್ತಾನು ಮಳಿಗೆಗಳಿಗೆ ಪರವಾನಗಿ ಅವಧಿ ಅಕ್ಟೋಬರ್​ಗೆ ಮುಗಿದಿದೆ. ಅನಂತರ ನವೀಕರಣಕ್ಕೆ ಅರ್ಜಿ ಸಲ್ಲಿಸಿದ ನವೀಕರಣದ ಪತ್ರವೇ ನಕಲಿಯಾಗಿತ್ತು ಎಂದ ಗೃಹ ಸಚಿವರು, ಈ ಕುರಿತಂತೆ ಪಟಾಕಿ ದಾಸ್ತಾನಿಗೆ 1000 ಕಿಲೋ ಮಿತಿಯಿದೆ. ಆದರೆ, 5000 ಕಿಲೋ ಸಂಗ್ರಹ ಇರುವುದು ಬೆಳಕಿಗೆ ಬಂದಿದೆ. ಹೀಗಾಗಿ ಪರವಾನಗಿದಾರ ರಾಮಸ್ವಾಮಿ ರೆಡ್ಡಿ ವಿರುದ್ಧ ಕಠಿಣ ಕ್ರಮ ಅಗತ್ಯವಿದೆ ಎಂದು ಹೇಳಿದರು.

ಉನ್ನತ ಅಧಿಕಾರಿಗಳು ಕೇಂದ್ರದ ಕಡೆ ಮುಖ: ಆಪರೇಷನ್ ಕಮಲ ಕುರಿತು ಮಾಹಿತಿಯಿಲ್ಲ, ಪರಸ್ಪರ ಶಾಸಕರು ಕೂಡಿ ಔತಣಕೂಟ ಏರ್ಪಡಿಸಿದ್ದರೆ ಅದಕ್ಕೆ ಹೆಚ್ಚಿನ ಮಹತ್ವ ನೀಡಬಾರದು. ಉನ್ನತ ಅಧಿಕಾರಿಗಳಿಗೆ ಆಯಕಟ್ಟಿನ ಸ್ಥಳ ಸಿಗದಿದ್ದಕ್ಕೆ ಕೇಂದ್ರದ ಕಡೆ ಮುಖ ಮಾಡಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ಬಾರಿ ಸಿಎಂ ಆಗಿದ್ದಾರೆ, ಹೀಗಾಗಿ ಎಲ್ಲಿ ಯಾವ ಅಧಿಕಾರಿಯನ್ನು ನಿಯೋಜಿಸಬೇಕೆಂಬ ಅನುಭವ ಅವರಿಗಿದೆ ಎಂದರು.

ಇಷ್ಟಕ್ಕೂ ಕೇಂದ್ರವೇ ಅಂತಹ ಅಧಿಕಾರಿಗಳನ್ನು ನಿಯೋಜಿಸಿ ನಿಯಂತ್ರಿಸುತ್ತಿದೆ, ಎಲ್ಲಿ ಕೆಲಸ ನೀಡಿದರೂ ನಿರ್ವಹಿಸುವ ಶಕ್ತಿ ಹೊಂದಿರಬೇಕೇ ವಿನಃ ಬೇಕಾದೆಡೆಗೆ ಕೂರಿಸಲು ಅಸಾಧ್ಯ, ಇಷ್ಟಕ್ಕೂ ಎಲ್ಲಿ ಇದ್ದರೂ ಕೆಲಸದಲ್ಲಿದ್ದುಕೊಂಡು ವರ್ಗಾವಣೆಗೆ ಯತ್ನಿಸುತ್ತಿದ್ದಾರೆ. ಅವರನ್ನು ಹೊರಗಿಟ್ಟು ಸರ್ಕಾರ ಏನೂ ಮಾಡುತ್ತಿಲ್ಲ ಹೀಗಾಗಿ ಅಂತಹ ವಿಚಾರಗಳಿಗೆ ಮಹತ್ವವಿಲ್ಲ ಎಂದು ಪ್ರತಿಕ್ರಿಯಿಸಿದರು. ಸ್ಥಳದಲ್ಲಿ ಬೆಂಗಳೂರು ಜಿಲ್ಲಾಧಿಕಾರಿ ದಯಾನಂದ್, ಎಎಸ್ಪಿ ಪುರುಷೋತ್ತಮ್, ಡಿವೈಎಸ್ಪಿ ಮೋಹನ್, ತಹಸೀಲ್ದಾರ್ ಶಿವಪ್ಪ ಲಮ್ಹಾಣಿ ಇದ್ದರು.

ಇದನ್ನೂಓದಿ:ಅತ್ತಿಬೆಲೆ ಪಟಾಕಿ ದುರಂತ ಸ್ಥಳಕ್ಕೆ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಭೇಟಿ, ಪರಿಶೀಲನೆ

Last Updated : Oct 18, 2023, 7:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.