ETV Bharat / state

ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ಸಿಎಂ... ಅನರ್ಹರು ಖುಷ್, ಮತದಾರರು ಫುಲ್​ ಖುಷ್​ - ಏತ ನೀರಾವರಿ ಯೋಜನೆಗೆ ಬಿ ಎಸ್​ ಯಡಿಯೂರಪ್ಪ ಚಾಲನೆ ಸುದ್ದಿ

ಹೊಸಕೋಟೆ ವಿಧಾನಸಭಾ ಕ್ಷೇತ್ರದ ಅನುಗೊಂಡನಹಳ್ಳಿ ಹಾಗೂ ಜಡಿಗೆನಹಳ್ಳಿ ವ್ಯಾಪ್ತಿಯ 30 ಕೆರೆಗಳಿಗೆ 100 ಕೋಟಿ ರೂ. ಏತ ನೀರಾವರಿ ಯೋಜನೆಗೆ ಸಿಎಂ ಬಿ. ಎಸ್​. ಯಡಿಯೂರಪ್ಪ ಚಾಲನೆ ನೀಡಿದರು.

30 ಕೆರೆಗಳಿಗೆ ಏತ ನೀರಾವರಿ 100 ಕೋಟಿ ರೂ. ಯೋಜನೆಗೆ ಚಾಲನೆ ನೀಡಿದ ಸಿಎಂ
author img

By

Published : Nov 5, 2019, 2:31 AM IST

ಹೊಸಕೋಟೆ : ಉಪಚುನಾವಣೆ ಹತ್ತಿರವಾಗುತ್ತಿದ್ದಂತೆ ಮತದಾರರನ್ನು ಸೆಳೆಯಲು ಯಡಿಯೂರಪ್ಪ ಸರ್ಕಾರ ಮುಂದಾಗಿದೆ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆದಂತೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ಕ್ಷೇತ್ರದ ಜನತೆಗೆ ಕೆರೆಗಳಿಗೆ ನೀರು ತುಂಬಿಸುವ 100 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಸೋಮವಾರ ಚಾಲನೆ ನೀಡಿದರು.

ಸರ್ಕಾರ ರಚನೆಗೆ ಸಹಕರಿಸಿದ ಅನರ್ಹರಿಗೆ ಭರ್ಜರಿ ಗಿಫ್ಟ್​ ನೀಡುವ ಮೂಲಕ ಋಣ ತೀರಿಸಲು ಬಿಎಸ್​ವೈ ಮುಂದಾಗಿದ್ದಾರೆ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಅನುಗೊಂಡನಹಳ್ಳಿ ಹಾಗೂ ಜಡಿಗೆನಹಳ್ಳಿ ವ್ಯಾಪ್ತಿಯ 30 ಕೆರೆಗಳಿಗೆ 100 ಕೋಟಿ ರೂ. ಮೊತ್ತದ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲು ಪಟ್ಟಣಕ್ಕೆ ಆಗಮಿಸಿದ ಬಿಎಸ್​ವೈಗೆ, ಎಂಟಿಬಿ ಬೃಹತ್ ಸೇಬಿನ ಹಾರ ಹಾಕುವ ಮೂಲಕ ಅದ್ಧೂರಿಯಾಗಿ ಬರಮಾಡಿಕೊಂಡರು. ಆದರೆ ಇದೇ ಕಾರ್ಯಕ್ರಮಕ್ಕೆ ಸಂಸದ ಬಿ. ಎನ್. ಬಚ್ಚೇಗೌಡರು ಗೈರಾಗುವ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.

ಯೋಜನೆ ಉದ್ಘಾಟಿಸಿದ ಸಿಎಂ, ತಾಲೂಕಿನ ಅಭಿವೃದ್ಧಿಗೆ ತಮ್ಮ ಸರ್ಕಾರ ಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು. ಮತ್ತೊಮ್ಮೆ ಎಂ. ಟಿ. ಬಿ. ನಾಗರಾಜ್​ರನ್ನು ಅಯ್ಕೆ ಮಾಡುವಂತೆ ನೆರೆದಿದ್ದವರಿಗೆ ಕರೆ ನೀಡಿದರು. ಎಂ. ಟಿ. ಬಿ. ನಾಗರಾಜ್​ರವರ ಎಲ್ಲಾ ಬೇಡಿಕೆಗಳಿಗೂ ಪೂರಕವಾಗಿ ಸ್ಪಂದಿಸುವ ಭರವಸೆ ನೀಡಿದರು.

100 ಕೋಟಿ ರೂ. ಯೋಜನೆಗೆ ಚಾಲನೆ ನೀಡಿದ ಸಿಎಂ

ಎಂ. ಟಿ. ಬಿ. ನಾಗರಾಜ್ ತಮ್ಮ ಮಾತಿನಲ್ಲಿ ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ನನ್ನನ್ನು ಮಂತ್ರಿಯನ್ನಾಗಿಯೇನೋ ಮಾಡಿದರು. ಆದರೆ ಅಧಿಕಾರ ಮಾತ್ರ ನೀಡಲೇ ಇಲ್ಲವೆಂದು ಕುಟುಕಿದರು. ನನ್ನ ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಸಹಕರಿಸಬೇಕು. ಏತ ನೀರಾವರಿಯಷ್ಟೇ ಅಲ್ಲ. ಕಾವೇರಿ ನಾಲ್ಕನೇ ಹಂತದ ಯೋಜನೆ ಮತ್ತು ಮೇಟ್ರೋ ಯೋಜನೆಯನ್ನು ಹೊಸಕೋಟೆಗೆ ವಿಸ್ತರಿಸಬೇಕೆಂದು ಆಗ್ರಹಿಸಿದರು.

ಒಟ್ಟಾರೆ ಒಂದು‌ ರೀತಿಯಲ್ಲಿ ಎಂ. ಟಿ. ಬಿ. ನಾಗರಾಜ್ ಹೊಸಕೋಟೆಯಲ್ಲಿ ಶಕ್ತಿ ಪ್ರದರ್ಶನ ಮಾಡಿ, ಮುಖ್ಯಮಂತ್ರಿ ಬಿಎಸ್​ವೈ ಬಾಯಿಂದ ತಮ್ಮೆಲ್ಲಾ ಯೋಜನಗಳಿಗೆ ಸಹಕಾರವನ್ನು ಅವರ ಬಾಯಿಂದಲೇ ಹೇಳಿಸುವ ಮೂಲಕ ಬಚ್ಚೇಗೌಡರ ಪಾಳಯಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ ಎಂದರೆ ತಪ್ಪಾಗಲಾರದು.

ಇದೇ ಸಂದರ್ಭದಲ್ಲಿ ಸ್ಥಳೀಯರು ಹೊಸಕೋಟೆಗೆ ಕಾವೇರಿ ನೀರು ಮತ್ತು ಮೆಟ್ರೋ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು. ಇನ್ನು ವೇದಿಕೆ ಮುಂಭಾಗವೇ ಮಾಧ್ಯಮದವರಿಗೆ ಹಾಕಿದ್ದ ಟೇಬಲ್ ತೆರೆವುಗೊಳಿಸಲು ಎಂಟಿಬಿ ಬೆಂಗಲಿಗರು ಹಾಗೂ ಮಾಧ್ಯಮದವರ ನಡುವೆ ವಾಗ್ವಾದ ನಡೆದು ಮಾಧ್ಯಮದವರು ವೇದಿಕೆ ಕಾರ್ಯಕ್ರಮ ಬಹಿಷ್ಕರಿಸಿದ ಘಟನೆಯೂ ನಡೆಯಿತು.

ಹೊಸಕೋಟೆ : ಉಪಚುನಾವಣೆ ಹತ್ತಿರವಾಗುತ್ತಿದ್ದಂತೆ ಮತದಾರರನ್ನು ಸೆಳೆಯಲು ಯಡಿಯೂರಪ್ಪ ಸರ್ಕಾರ ಮುಂದಾಗಿದೆ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆದಂತೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ಕ್ಷೇತ್ರದ ಜನತೆಗೆ ಕೆರೆಗಳಿಗೆ ನೀರು ತುಂಬಿಸುವ 100 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಸೋಮವಾರ ಚಾಲನೆ ನೀಡಿದರು.

ಸರ್ಕಾರ ರಚನೆಗೆ ಸಹಕರಿಸಿದ ಅನರ್ಹರಿಗೆ ಭರ್ಜರಿ ಗಿಫ್ಟ್​ ನೀಡುವ ಮೂಲಕ ಋಣ ತೀರಿಸಲು ಬಿಎಸ್​ವೈ ಮುಂದಾಗಿದ್ದಾರೆ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಅನುಗೊಂಡನಹಳ್ಳಿ ಹಾಗೂ ಜಡಿಗೆನಹಳ್ಳಿ ವ್ಯಾಪ್ತಿಯ 30 ಕೆರೆಗಳಿಗೆ 100 ಕೋಟಿ ರೂ. ಮೊತ್ತದ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲು ಪಟ್ಟಣಕ್ಕೆ ಆಗಮಿಸಿದ ಬಿಎಸ್​ವೈಗೆ, ಎಂಟಿಬಿ ಬೃಹತ್ ಸೇಬಿನ ಹಾರ ಹಾಕುವ ಮೂಲಕ ಅದ್ಧೂರಿಯಾಗಿ ಬರಮಾಡಿಕೊಂಡರು. ಆದರೆ ಇದೇ ಕಾರ್ಯಕ್ರಮಕ್ಕೆ ಸಂಸದ ಬಿ. ಎನ್. ಬಚ್ಚೇಗೌಡರು ಗೈರಾಗುವ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.

ಯೋಜನೆ ಉದ್ಘಾಟಿಸಿದ ಸಿಎಂ, ತಾಲೂಕಿನ ಅಭಿವೃದ್ಧಿಗೆ ತಮ್ಮ ಸರ್ಕಾರ ಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು. ಮತ್ತೊಮ್ಮೆ ಎಂ. ಟಿ. ಬಿ. ನಾಗರಾಜ್​ರನ್ನು ಅಯ್ಕೆ ಮಾಡುವಂತೆ ನೆರೆದಿದ್ದವರಿಗೆ ಕರೆ ನೀಡಿದರು. ಎಂ. ಟಿ. ಬಿ. ನಾಗರಾಜ್​ರವರ ಎಲ್ಲಾ ಬೇಡಿಕೆಗಳಿಗೂ ಪೂರಕವಾಗಿ ಸ್ಪಂದಿಸುವ ಭರವಸೆ ನೀಡಿದರು.

100 ಕೋಟಿ ರೂ. ಯೋಜನೆಗೆ ಚಾಲನೆ ನೀಡಿದ ಸಿಎಂ

ಎಂ. ಟಿ. ಬಿ. ನಾಗರಾಜ್ ತಮ್ಮ ಮಾತಿನಲ್ಲಿ ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ನನ್ನನ್ನು ಮಂತ್ರಿಯನ್ನಾಗಿಯೇನೋ ಮಾಡಿದರು. ಆದರೆ ಅಧಿಕಾರ ಮಾತ್ರ ನೀಡಲೇ ಇಲ್ಲವೆಂದು ಕುಟುಕಿದರು. ನನ್ನ ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಸಹಕರಿಸಬೇಕು. ಏತ ನೀರಾವರಿಯಷ್ಟೇ ಅಲ್ಲ. ಕಾವೇರಿ ನಾಲ್ಕನೇ ಹಂತದ ಯೋಜನೆ ಮತ್ತು ಮೇಟ್ರೋ ಯೋಜನೆಯನ್ನು ಹೊಸಕೋಟೆಗೆ ವಿಸ್ತರಿಸಬೇಕೆಂದು ಆಗ್ರಹಿಸಿದರು.

ಒಟ್ಟಾರೆ ಒಂದು‌ ರೀತಿಯಲ್ಲಿ ಎಂ. ಟಿ. ಬಿ. ನಾಗರಾಜ್ ಹೊಸಕೋಟೆಯಲ್ಲಿ ಶಕ್ತಿ ಪ್ರದರ್ಶನ ಮಾಡಿ, ಮುಖ್ಯಮಂತ್ರಿ ಬಿಎಸ್​ವೈ ಬಾಯಿಂದ ತಮ್ಮೆಲ್ಲಾ ಯೋಜನಗಳಿಗೆ ಸಹಕಾರವನ್ನು ಅವರ ಬಾಯಿಂದಲೇ ಹೇಳಿಸುವ ಮೂಲಕ ಬಚ್ಚೇಗೌಡರ ಪಾಳಯಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ ಎಂದರೆ ತಪ್ಪಾಗಲಾರದು.

ಇದೇ ಸಂದರ್ಭದಲ್ಲಿ ಸ್ಥಳೀಯರು ಹೊಸಕೋಟೆಗೆ ಕಾವೇರಿ ನೀರು ಮತ್ತು ಮೆಟ್ರೋ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು. ಇನ್ನು ವೇದಿಕೆ ಮುಂಭಾಗವೇ ಮಾಧ್ಯಮದವರಿಗೆ ಹಾಕಿದ್ದ ಟೇಬಲ್ ತೆರೆವುಗೊಳಿಸಲು ಎಂಟಿಬಿ ಬೆಂಗಲಿಗರು ಹಾಗೂ ಮಾಧ್ಯಮದವರ ನಡುವೆ ವಾಗ್ವಾದ ನಡೆದು ಮಾಧ್ಯಮದವರು ವೇದಿಕೆ ಕಾರ್ಯಕ್ರಮ ಬಹಿಷ್ಕರಿಸಿದ ಘಟನೆಯೂ ನಡೆಯಿತು.

Intro:ಹೊಸಕೋಟೆ:

ಹೊಸಕೋಟೆ ಕ್ಷೇತ್ರದಲ್ಲಿ100 ಕೋಟಿ ರೂಗಳ ನೀರಾವರಿ ಯೋಜನೆಗಳಿಗೆ ಸಿಎಂ ಶಂಕುಸ್ಥಾಪನೆ.


ಉಪ ಚುನಾವಣೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಮತದಾರರನ್ನು ಸೆಳೆಯಲು ಯಡಿಯೂರಪ್ಪ ಸರ್ಕಾರ ಮುಂದಾಗಿದ್ದು, ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆದಂತೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ಕ್ಷೇತ್ರದ ಜನತೆಗೆ 100 ಕೋಟಿ ರೂಗಳ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳಿಗೆ ಇಂದು ಚಾಲನೆ ನೀಡಿದರು, ಕಾರ್ಯಕ್ರಮಕ್ಕೆ ಸ್ಥಳೀಯ ಸಂಸದ ಬಿ.ಎನ್.ಬಚ್ಚೇಗೌಡರು ಗೈರಾಗುವ ಮೂಲಕ ಅಸಮಾದಾನ ಹೊರ ಹಾಕಿದ್ದಾರೆ. ಇನ್ನೂ ಇದೇ ಸಂದರ್ಭದಲ್ಲಿ ಸ್ಥಳೀಯರು ಹೊಸಕೋಟೆಗೆ ಕಾವೇರಿ ನೀರು ಮತ್ತು ಮೇಟ್ರೋ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ ಕೂಡ ನಡೆಸಿ ವೇದಿಕೆ ಕಾರ್ಯಕ್ರಮಕ್ಕೆ ಬಿಸಿ ಮುಟ್ಟಿಸಿದರು, ಇನ್ನೂ ವೇದಿಕೆ ಮುಂಭಾಗವೇ ಮಾಧ್ಯಮದವರಿಗೆ ಹಾಕಿದ್ದ ಟೇಬಲ್ ತೆರೆವುಗೊಳಿಸಲು ಎಂಟಿಬಿ ಬೆಂಗಲಿಗರು ಹಾಗೂ ಮಾಧ್ಯಮದವರ ನಡುವೆ ವಾಗ್ವದ ನಡೆದು ಮಾಧ್ಯಮದವರು ವೇದಿಕೆ ಕಾರ್ಯಕ್ರಮ ಬಹಿಷ್ಕರಿಸಿದರು.




ಮುಖ್ಯಮಂತ್ರಿ ಬಿ.ಎಸ್.ಯಡುಯೂರಪ್ಪ ಸರ್ಕಾರ ರಚನೆಗೆ ಸಹಕರಿಸಿದ ಅನರ್ಹರಿಗೆ ಭರ್ಜರಿ ಗೀಫ್ಟ್ ನೀಡುವ ಮೂಲಕ ಋಣ ತೀರಿಸಲು ಮುಂದಾಗಿದ್ದಾರೆ, ಹೊಸಕೊಟೆ ವಿಧಾನಸಭಾ ಕ್ಷೇತ್ರದ ಅನುಗೊಂಡನಹಳ್ಳಿ ಹಾಗೂ ಜಡಿಗೆನಹಳ್ಳಿ ಹೋಬಳಿ ವ್ಯಾಪ್ತಿಯ 30 ಕೆರೆಗಳಿಗೆ ಏತ ನೀರಾವರಿ 100ಕೋಟಿ ರೂಗಳ ಯೋಜನೆಗೆ ಚಾಲನೆ ನೀಡಲು ಪಟ್ಟಣಕ್ಕೆ ಆಗಮಿಸಿದಾಗ ಅದ್ದೂರಿಯಾಗಿ ಎಂಟಿಬಿ.ನಾಗರಾಜ್ ಬರ ಮಾಡಿಕೊಂಡರು, ಬೃಹತ್ ಸೇಬಿನ ಹಾರ ಹಾಕುವ ಮೂಲಕ ಬರ ಮಾಡಿಕೊಂಡರು, ಮುಖ್ಯಮಂತ್ರಿಗಳ ಜೊತೇ ಆಗಮಿಸಿದ್ದ ಸಚಿವ, ಆರ್. ಅಶೋಕ್ ಡಾ: ಬಾಬಾ ಸಾಹೇಬ ಅಂಬೇಡ್ಕರ್ ಪುತ್ಥಳಿಗೆ ಹಾಗೂ ಕೆಂಪೇಗೌಡರ ಪುತ್ಥಳಿ ಮಾಲಾರ್ಪಣೆ ಮೂಲಕ ಗೌರವ ಸೂಚಿಸಿ ವೇದಿಕೆಯಲ್ಲಿ ಆಸೀನರಾದರು, ಕೆ.ಆರ್. ಪುರಂನ ಎಸ್ ಟಿ ಪಿ ಯಿಂದ ಅನುಗೊಂಡನಹಳ್ಳಿ ಹೋಬಳಿಯ 30ಕೆರೆಗಳಿಗೆ ಏತ ನೀರಾವರಿ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿ ತಾಲೂಕಿನ ಅಭಿವೃದ್ಧಿಗೆ ತಮ್ಮ ಸರ್ಕಾರ ಪೂರ್ಣ ಸಹಕಾರ ನೀಡುವ ಭರವಸೆ ನೀಡಿ ಮತ್ತೊಮ್ಮೆ ಎಂ.ಟಿ.ಬಿ.ನಾಗರಾಜ್ ರವರನ್ನು ಅಯ್ಕೆ ಮಾಡುವಂತೆ ನೆರೆದಿದ್ದವರಿಗೆ ಕರೆ ನೀಡಿದರು. ಎಂ.ಟಿ.ಬಿ.ನಾಗರಾಜ್ ರವರ ಎಲ್ಲಾ ಬೇಡಿಕೆಗಳಿಗೂ ಪೂರಕವಾಗಿ ಸ್ಪಂದಿಸುವ ಭರವಸೆ ನೀಡಿದರು.

Body:ಇನ್ನೂ ಈ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್.ಅಶೋಕ್, ಅನರ್ಹ ಶಾಸಕ ಹಾಗು ಎಂಟಿಬಿ ನಾಗರಾಜ್ ಇನ್ನು ಅನೇಕ ಮುಖಂಡರು ಭಾಗವಹಿಸಿದ್ದರು, ಎಂ.ಟಿ.ಬಿ.ನಾಗರಾಜ್ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಸಮ್ಮೀಶ್ರ ಸರ್ಕಾರದ ವಿರುದ್ದ ವಾಗ್ದಳಿ ನಡೆಸಿದರು, ನನ್ನನ್ನ ಮಂತ್ರಿಯನ್ನಾಗಿಯೇನೊ ಮಾಡಿದರು, ಆದರೆ ಅಧಿಕಾರ ಮಾತ್ರ ನೀಡಲೇ ಇಲ್ಲವೆಂದು ಕುಟುಕಿದರು, ಹಾಗೇಯೆ ತಾಲೂಕು‌ ವೇಗವಾಗಿ ಬೆಳೆಯುತ್ತಿದೆ ನನ್ನ ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಸಹಕರಿಸಬೇಕು ಏತ ನೀರಾವರಿಯಷ್ಟೇ ಅಲ್ಲ ಬದಲಿಗೆ ಕಾವೇರಿ ನಾಲ್ಕನೇ ಹಂತದ ಯೋಜನೆಯಲ್ಲಿ ನಮ್ಮ ತಾಲೂಕನ್ನು ಸೇರಿಸಬೇಕೆಂದು ಮನವಿ ಮಾಡುತ್ತಾ ಹಾಗೇಯೆ ಮೇಟ್ರೋ ಯೋಜನೆಯನ್ನು ಹೊಸಕೋಟೆಗೆ ವಿಸ್ತರಿಸಬೇಕೆಂದು ಆಗ್ರಹಿಸಿದರು.Conclusion:ಒಟ್ಟಾರೆ ಒಂದು‌ ರೀತಿಯಲ್ಲಿ ಎಂ.ಟಿ.ಬಿ.ನಾಗರಾಜ್ ಹೊಸಕೋಟೆಯಲ್ಲಿ ಶಕ್ತಿ ಪ್ರದರ್ಶನ ಮಾಡಿ, ಮುಖ್ಯಮಂತ್ರಿ ಬಿ.ಎಸ್.ವೈರವರ ಬಾಯಿಂದ ತಮ್ಮೇಲ್ಲಾ ಯೋಜನಗಳಿಗೆ ಸಹಕಾರವನ್ನು ಅವರ ಬಾಯಿಂದಲೇ ಹೇಳಿಸುವ ಮೂಲಕ ಬಚ್ಚೇಗೌಡರ ಪಾಳೇಯಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆಂದರೆ
ತಪ್ಪಾಗಲಾರದು.

ಧರ್ಮರಾಜು ಎಂ. ಕೆ ಆರ್ ಪುರ.

ಬೈಟ್:ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಗಳು


ಬೈಟ್ : ಎಂ.ಟಿ.ಬಿ.ನಾಗರಾಜ್, ಅನರ್ಹ ಶಾಸಕ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.