ETV Bharat / state

ಸಿಎಂ ಜೊತೆ‌ ಚರ್ಚಿಸಿ ಖಾಸಗಿ ಶಾಲೆಗಳ ಅನುದಾನಕ್ಕೊಳಪಡಿಸುವ ನಿರ್ಣಯ ಅನುಷ್ಠಾನ: ಬಿ ಸಿ ನಾಗೇಶ್

author img

By

Published : Dec 20, 2021, 11:01 PM IST

ಖಾಸಗಿ ಅನುದಾನಿತ ಶಾಲೆಗಳ ಖಾಲಿ ಹುದ್ದೆ ಭರ್ತಿ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ ನಾಗೇಶ್ ಭರವಸೆ ನೀಡಿದ್ದಾರೆ.

b-c-nagesh-talk-about-aided-school-issue
ವಿಧಾನ ಪರಿಷತ್

ಬೆಂಗಳೂರು: 1995 ರವರೆಗೆ ಅನ್ವಯವಾಗುವಂತೆ ಖಾಸಗಿ ಕನ್ನಡ ಶಾಲೆಗಳನ್ನು ಅನುದಾನಕ್ಕೊಳಪಡಿಸುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮತ್ತೊಮ್ಮೆ‌ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ. ಸಿ ನಾಗೇಶ್ ಸ್ಪಷ್ಟಪಡಿಸಿದ್ದಾರೆ.

ವಿಧಾನ ಪರಿಷತ್​ನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಅ. ದೇವೇಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಸರ್ಕಾರಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡುತ್ತಿದ್ದು, 1986 ರಿಂದ ಅನುದಾನ ಸ್ಥಗಿತಗೊಳಿಸಿರುವುದಿಲ್ಲ. 01-06-1987 ರಿಂದ 1994-95ರವರೆಗೆ ಪ್ರಾರಂಭವಾಗಿ ನಿರಂತರವಾಗಿ ನಡೆಯುತ್ತಿರುವ ಕನ್ನಡ ಮಾಧ್ಯಮದ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಲು ಇಚ್ಛಿಸುವ ಆಡಳಿತ ಮಂಡಳಿಗಳು ಸಲ್ಲಿಸುವ ಪ್ರಸ್ತಾವನೆಯನ್ನು ನಿಯಮಾನುಸಾರ ಪರಿಶೀಲಿಸಿ ಕಾಲಕಾಲಕ್ಕೆ ಅನುದಾನಕ್ಕೆ ಒಳಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಖಾಸಗಿ ಕನ್ನಡ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವ ಕುರಿತು 2018 ರಲ್ಲಿ ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 1995ರ ವರೆಗಿನ ಶಾಲೆಗಳನ್ನು ಅನುದಾನಕ್ಕೊಳಪಡಿಸಲು ನಿರ್ಧಾರ ಮಾಡಲಾಗಿದೆ. ನಂತರ ಚುನಾವಣೆ, ಕೋವಿಡ್ ಬಂತು. ಹಾಗಾಗಿ, ಅದರ ಅನುಷ್ಠಾನ ಆಗಿಲ್ಲ. ಈಗ ಮತ್ತೆ ಸಿಎಂ ಜೊತೆ ಸಭೆ ನಡೆಸಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಅನುದಾನಿತ ಶಾಲೆಗಳ ಹುದ್ದೆ ಭರ್ತಿಗೆ ಕ್ರಮ: ಖಾಸಗಿ ಅನುದಾನಿತ ಶಾಲೆಗಳ ಖಾಲಿ ಹುದ್ದೆ ಭರ್ತಿ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ ನಾಗೇಶ್ ಭರವಸೆ ನೀಡಿದ್ದಾರೆ.

ವಿಧಾನ ಪರಿಷತ್​ನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ವೈ. ಎ ನಾರಾಯಣಸ್ವಾಮಿ‌ ವಿಷಯ ಪ್ರಸ್ತಾಪಿಸಿ, ಖಾಸಗಿ ಅನುದಾನಿತ ಶಾಲೆಗಳಲ್ಲಿ 7045 ಹುದ್ದೆ ಖಾಲಿ ಇವೆ. ಅನುದಾನಿತ ಶಾಲೆ‌ಗಳ ಖಾಲಿ ಹುದ್ದೆ ತುಂಬಲು ಎಲ್ಲ ಸರ್ಕಾರಗಳು ನಿರ್ಲಕ್ಷ್ಯ ಮಾಡುತ್ತಾ ಬರುತ್ತಿವೆ.

ಈಗ 2915 ಹುದ್ದೆಗೆ ಅನುಮತಿ ನೀಡಲಾಗಿದೆ. ಇನ್ನು 4,135 ಹುದ್ದೆಗೆ ಅನುಮತಿ ಕೊಟ್ಟಿಲ್ಲ. ಅನುಮತಿ ಕೊಟ್ಟಿರೋದರಲ್ಲಿಯೂ ಅರ್ಧದಷ್ಟೂ ಭರ್ತಿ ಮಾಡಿಕೊಳ್ಳಲಾಗಿಲ್ಲ. ಸರ್ಕಾರಕ್ಕೆ ಅನುದಾನಿತ‌ ಶಾಲೆಗಳ ಮೇಲಿರುವ ಧೋರಣೆಗಳೇನು?, ಖಾಲಿ ಹುದ್ದೆ ಭರ್ತಿಗೆ ಯಾಕೆ ಅನುಮತಿ ಕೊಡುತ್ತಿಲ್ಲ. ಖಾಲಿ ಆಗುವ ಹುದ್ದೆಗಳ ಮಾಹಿತಿ ಸರ್ಕಾರಕ್ಕೆ ಇರುತ್ತೆ. ಮೊದಲೇ ಏಕೆ ಭರ್ತಿಗೆ ಕ್ರಮ ಕೈಗೊಳ್ಳಲ್ಲ ಎಂದು ಪ್ರಶ್ನಿಸಿದರು.

ಇದಕ್ಕೆ‌ ದನಿಗೂಡಿಸಿದ ಬಿಜೆಪಿ ಸದಸ್ಯ ಪುಟ್ಟಣ್ಣ, ಖಾಲಿ ಹುದ್ದೆ ಭರ್ತಿಗೆ ಹಣಕಾಸು ಇಲಾಖೆ‌ ಅನುಮತಿ ನೀಡಿದರೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇಲ್ಲಸಲ್ಲದ‌ ಕಾರಣ ನೀಡಿ ಹುದ್ದೆ ಭರ್ತಿಗೆ ಮುಂದಾಗುತ್ತಿಲ್ಲ. ಇಲ್ಲಸಲ್ಲದ ಕ್ವಯಿರಿ ಹಾಕಿ ತಡೆ ಒಡ್ಡುತ್ತಿದ್ದಾರೆ. ಇದನ್ನ ನಿವಾರಿಸಬೇಕು. ಕೇವಲ ಪತ್ರಿಕೆಗಳಲ್ಲಿ ಜಾಹೀರಾತು ಸರಿಯಾಗಿ ಕೊಟ್ಟಿಲ್ಲ ಎನ್ನುವ ಕಾರಣಕ್ಕೆ‌ 200ಕ್ಕೂ ಹೆಚ್ಚಿನ ಹುದ್ದೆ ಭರ್ತಿ ಮಾಡುವುದನ್ನು ತಡೆ ಹಿಡಿದಿರುವುದು ಸರಿಯಲ್ಲ. ಕೂಡಲೇ ಇದನ್ನು ಸರಿಪಡಿಸಬೇಕು ಎಂದರು.

ಇದಕ್ಕೆ ಉತ್ತರಿಸಿದ ಸಚಿವ ನಾಗೇಶ್, ನಿಯಮಾನುಸಾರ ಮುಂದಿನ ದಿನದಲ್ಲಿ ಖಾಲಿ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತದೆ. ರಾಜ್ಯ, ಜಿಲ್ಲಾ ಪತ್ರಿಕೆ ಎರಡರಲ್ಲೂ ಜಾಹೀರಾತು ಕೊಡಬೇಕು ಎನ್ನುವ ನಿರ್ಧಾರದಂತೆ ಈಗ ನೇಮಕಾತಿ ಜಾಹೀರಾತು ನೀಡುವ ಪರಿಪಾಠ ನಡೆಯುತ್ತಿದೆ. ಇದನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತದೆ. ಸಿಎಂ ಜೊತೆ ಸದ್ಯದಲ್ಲೇ ಸಭೆ ನಡೆಸಿ ನೇಮಕಾತಿ ಕುರಿತ ಸಮಸ್ಯೆ ಸರಿಪಡಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಮೊಬೈಲ್ ವ್ಯಸನ ತಪ್ಪಿಸಲು ಶಾಲೆಗಳಲ್ಲಿ ಅರಿವು ಮೂಡಿಸಲಾಗುತ್ತೆ: ಕೊರೊನಾ ಕಾರಣದಿಂದ ಅನಿವಾರ್ಯ ಪರಿಸ್ಥಿತಿಯಲ್ಲಿ ಜಾರಿಗೆ ಬಂದ ಆನ್​ಲೈನ್​ ಶಿಕ್ಷಣ ವ್ಯವಸ್ಥೆಯಿಂದಾಗಿ ಮಕ್ಕಳು ಮೊಬೈಲ್ ಗೆ ವ್ಯಸನಿಗಳಾಗಿದ್ದು, ಇದರಿಂದ ಅವರನ್ನು ಹೊರ ತರುವ ಕುರಿತು ಶಾಲಾ ಹಂತದಲ್ಲೇ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತದೆ ಹಾಗು ತಜ್ಞರ ವರದಿ ಪಡೆದು ಮಕ್ಕಳ ಶೈಕ್ಷಣಿಕ ನಷ್ಟ ಸರಿದೂಗಿಸಲಾಗುತ್ತದೆ ಎಂದು ಹೇಳಿದ್ದಾರೆ.

ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯೆ ತೇಜಸ್ವಿನಿಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ಕೋವಿಡ್ ಕಾರಣಕ್ಕೆ ಮಕ್ಕಳು ಖಿನ್ನತೆಗೆ ಒಳಗಾಗಿದ್ದಾರಾ? ಎನ್ನುವ ಕುರಿತು ಅಧ್ಯಯನ ನಡೆಸಲಾಗುತ್ತದೆ. ಮಕ್ಕಳ ಕಲಿಕೆ ಮೇಲೆ ಯಾವ ಆನ್​ಲೈನ್​ ಶಿಕ್ಷಣ ಪರಿಣಾಮ ಬೀರಿದೆ ಎನ್ನುವ ಕುರಿತು ಮತ್ತು ಶೈಕ್ಷಣಿಕ ನಷ್ಟ ಸರಿಪಡಿಸಲು ಪ್ರಯತ್ನ ನಡೆಸಲಾಗುತ್ತದೆ.

ಈ ಸಂಬಂಧ ತಜ್ಞರ ವರದಿಯನ್ನು ಪಡೆದು ಮಕ್ಕಳ‌ ಶಿಕ್ಷಣದ ನಷ್ಟ ಸರಿಪಡಿಸುವ ಕೆಲಸ ಮಾಡಲಾಗುತ್ತದೆ. ಇದರೊಂದಿಗೆ ಆನ್​ಲೈನ್​ ಶಿಕ್ಷಣದಿಂದ ಮಕ್ಕಳು ಮೊಬೈಲ್​ಗೆ ಅಡಿಕ್ಷನ್ ಆಗಿದ್ದು, ಇದನ್ನು ತಪ್ಪಿಸಲು ಅಗತ್ಯ ಅರಿವು ಮೂಡಿಸುವ ಕೆಲಸವನ್ನು ಶಾಲೆಗಳಲ್ಲಿ ಮಾಡಲಾಗುತ್ತದೆ ಎಂದರು.

ಕಾಂಗ್ರೆಸ್ ಧರಣಿ ನಡುವೆ ನಡೆದ ಪ್ರಶ್ನೋತ್ತರ ಕಲಾಪ: ಸಭಾಪತಿ ಸಂಧಾನ ಸಭೆ ನಂತರವೂ ಸಚಿವ ಭೈರತಿ ಬಸವರಾಜ್ ವಿರುದ್ಧದ ಬಹುಕೋಟಿ ಮೌಲ್ಯದ ಭೂಕಬಳಿಕೆ ಮಾಡಿರುವ ಪ್ರಕರಣದ ಚರ್ಚೆಗೆ ಆಗ್ರಹಿಸಿ ಸದನದಲ್ಲಿ ಕಾಂಗ್ರೆಸ್ ಸದಸ್ಯರು ಧರಣಿ ಮುಂದುವರೆಸಿದ್ದಾರೆ.

ಆಡಳಿತ ಮತ್ತು ಪ್ರತಿಪಕ್ಷ ನಾಯಕರನ್ನು ತಮ್ಮ ಕಚೇರಿಗೆ ಕರೆಸಿಕೊಂಡ ಸಭಾಪತಿ ಬಸವರಾಜ ಹೊರಟ್ಟಿ ಸಂಧಾನ ಸಭೆ ನಡೆಸಿದರು. ಸುಗಮ ಕಲಾಪಕ್ಕೆ ಅನುವು ಮಾಡಿಕೊಡುವಂತೆ ಮಾತುಕತೆ ನಡೆಸಿದರು.‌ ಸಭಾಪತಿಗಳ ಸಂಧಾನಕ್ಕೂ ಜಗ್ಗದ ಕಾಂಗ್ರೆಸ್ ಸದನದಲ್ಲಿ ಧರಣಿ ಮುಂದುವರೆಸಿದೆ.

ಸಂಧಾನಕ್ಕಾಗಿ ಮುಂದೂಡಿಕೆಯಾಗಿದ್ದ ಕಲಾಪವನ್ನು ಮತ್ತೆ ಆರಂಭಿಸಿದ ಸಭಾಪತಿಗಳು ಧರಣಿ ನಿಲ್ಲಿಸುವಂತೆ ಮನವಿ ಮಾಡಿದರು. ಆದರೆ, ಧರಣಿ ನಿಲ್ಲಿಸಲು ಕಾಂಗ್ರೆಸ್ ನಿರಾಕರಿಸಿತು‌. ಕಾಂಗ್ರೆಸ್ ಧರಣಿ ನಡುವೆಯೇ ಸಭಾಪತಿಗಳು ಪ್ರಶ್ನೋತ್ತರ ಕಲಾಪ ಆರಂಭಿಸಿದರು. ಕಾಂಗ್ರೆಸ್ ಸದಸ್ಯರ ಘೋಷಣೆ ಗದ್ದಲದ ನಡುವೆಯೇ ಪ್ರಶ್ನೋತ್ತರ ಕಲಾಪವನ್ನು ನಡೆಸಿದರು.

ಓದಿ: ಗದ್ದಲ ನಡೆಸಿದ ಯಾವುದೇ ಕಿಡಿಗೇಡಿಗಳನ್ನು ಕಾಪಾಡುವುದಿಲ್ಲ.. ಆರಗ ಜ್ಞಾನೇಂದ್ರ ಉತ್ತರ ಧಿಕ್ಕರಿಸಿ ಪ್ರತಿಪಕ್ಷ ಸಭಾತ್ಯಾಗ..

ಬೆಂಗಳೂರು: 1995 ರವರೆಗೆ ಅನ್ವಯವಾಗುವಂತೆ ಖಾಸಗಿ ಕನ್ನಡ ಶಾಲೆಗಳನ್ನು ಅನುದಾನಕ್ಕೊಳಪಡಿಸುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮತ್ತೊಮ್ಮೆ‌ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ. ಸಿ ನಾಗೇಶ್ ಸ್ಪಷ್ಟಪಡಿಸಿದ್ದಾರೆ.

ವಿಧಾನ ಪರಿಷತ್​ನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಅ. ದೇವೇಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಸರ್ಕಾರಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡುತ್ತಿದ್ದು, 1986 ರಿಂದ ಅನುದಾನ ಸ್ಥಗಿತಗೊಳಿಸಿರುವುದಿಲ್ಲ. 01-06-1987 ರಿಂದ 1994-95ರವರೆಗೆ ಪ್ರಾರಂಭವಾಗಿ ನಿರಂತರವಾಗಿ ನಡೆಯುತ್ತಿರುವ ಕನ್ನಡ ಮಾಧ್ಯಮದ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಲು ಇಚ್ಛಿಸುವ ಆಡಳಿತ ಮಂಡಳಿಗಳು ಸಲ್ಲಿಸುವ ಪ್ರಸ್ತಾವನೆಯನ್ನು ನಿಯಮಾನುಸಾರ ಪರಿಶೀಲಿಸಿ ಕಾಲಕಾಲಕ್ಕೆ ಅನುದಾನಕ್ಕೆ ಒಳಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಖಾಸಗಿ ಕನ್ನಡ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವ ಕುರಿತು 2018 ರಲ್ಲಿ ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 1995ರ ವರೆಗಿನ ಶಾಲೆಗಳನ್ನು ಅನುದಾನಕ್ಕೊಳಪಡಿಸಲು ನಿರ್ಧಾರ ಮಾಡಲಾಗಿದೆ. ನಂತರ ಚುನಾವಣೆ, ಕೋವಿಡ್ ಬಂತು. ಹಾಗಾಗಿ, ಅದರ ಅನುಷ್ಠಾನ ಆಗಿಲ್ಲ. ಈಗ ಮತ್ತೆ ಸಿಎಂ ಜೊತೆ ಸಭೆ ನಡೆಸಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಅನುದಾನಿತ ಶಾಲೆಗಳ ಹುದ್ದೆ ಭರ್ತಿಗೆ ಕ್ರಮ: ಖಾಸಗಿ ಅನುದಾನಿತ ಶಾಲೆಗಳ ಖಾಲಿ ಹುದ್ದೆ ಭರ್ತಿ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ ನಾಗೇಶ್ ಭರವಸೆ ನೀಡಿದ್ದಾರೆ.

ವಿಧಾನ ಪರಿಷತ್​ನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ವೈ. ಎ ನಾರಾಯಣಸ್ವಾಮಿ‌ ವಿಷಯ ಪ್ರಸ್ತಾಪಿಸಿ, ಖಾಸಗಿ ಅನುದಾನಿತ ಶಾಲೆಗಳಲ್ಲಿ 7045 ಹುದ್ದೆ ಖಾಲಿ ಇವೆ. ಅನುದಾನಿತ ಶಾಲೆ‌ಗಳ ಖಾಲಿ ಹುದ್ದೆ ತುಂಬಲು ಎಲ್ಲ ಸರ್ಕಾರಗಳು ನಿರ್ಲಕ್ಷ್ಯ ಮಾಡುತ್ತಾ ಬರುತ್ತಿವೆ.

ಈಗ 2915 ಹುದ್ದೆಗೆ ಅನುಮತಿ ನೀಡಲಾಗಿದೆ. ಇನ್ನು 4,135 ಹುದ್ದೆಗೆ ಅನುಮತಿ ಕೊಟ್ಟಿಲ್ಲ. ಅನುಮತಿ ಕೊಟ್ಟಿರೋದರಲ್ಲಿಯೂ ಅರ್ಧದಷ್ಟೂ ಭರ್ತಿ ಮಾಡಿಕೊಳ್ಳಲಾಗಿಲ್ಲ. ಸರ್ಕಾರಕ್ಕೆ ಅನುದಾನಿತ‌ ಶಾಲೆಗಳ ಮೇಲಿರುವ ಧೋರಣೆಗಳೇನು?, ಖಾಲಿ ಹುದ್ದೆ ಭರ್ತಿಗೆ ಯಾಕೆ ಅನುಮತಿ ಕೊಡುತ್ತಿಲ್ಲ. ಖಾಲಿ ಆಗುವ ಹುದ್ದೆಗಳ ಮಾಹಿತಿ ಸರ್ಕಾರಕ್ಕೆ ಇರುತ್ತೆ. ಮೊದಲೇ ಏಕೆ ಭರ್ತಿಗೆ ಕ್ರಮ ಕೈಗೊಳ್ಳಲ್ಲ ಎಂದು ಪ್ರಶ್ನಿಸಿದರು.

ಇದಕ್ಕೆ‌ ದನಿಗೂಡಿಸಿದ ಬಿಜೆಪಿ ಸದಸ್ಯ ಪುಟ್ಟಣ್ಣ, ಖಾಲಿ ಹುದ್ದೆ ಭರ್ತಿಗೆ ಹಣಕಾಸು ಇಲಾಖೆ‌ ಅನುಮತಿ ನೀಡಿದರೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇಲ್ಲಸಲ್ಲದ‌ ಕಾರಣ ನೀಡಿ ಹುದ್ದೆ ಭರ್ತಿಗೆ ಮುಂದಾಗುತ್ತಿಲ್ಲ. ಇಲ್ಲಸಲ್ಲದ ಕ್ವಯಿರಿ ಹಾಕಿ ತಡೆ ಒಡ್ಡುತ್ತಿದ್ದಾರೆ. ಇದನ್ನ ನಿವಾರಿಸಬೇಕು. ಕೇವಲ ಪತ್ರಿಕೆಗಳಲ್ಲಿ ಜಾಹೀರಾತು ಸರಿಯಾಗಿ ಕೊಟ್ಟಿಲ್ಲ ಎನ್ನುವ ಕಾರಣಕ್ಕೆ‌ 200ಕ್ಕೂ ಹೆಚ್ಚಿನ ಹುದ್ದೆ ಭರ್ತಿ ಮಾಡುವುದನ್ನು ತಡೆ ಹಿಡಿದಿರುವುದು ಸರಿಯಲ್ಲ. ಕೂಡಲೇ ಇದನ್ನು ಸರಿಪಡಿಸಬೇಕು ಎಂದರು.

ಇದಕ್ಕೆ ಉತ್ತರಿಸಿದ ಸಚಿವ ನಾಗೇಶ್, ನಿಯಮಾನುಸಾರ ಮುಂದಿನ ದಿನದಲ್ಲಿ ಖಾಲಿ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತದೆ. ರಾಜ್ಯ, ಜಿಲ್ಲಾ ಪತ್ರಿಕೆ ಎರಡರಲ್ಲೂ ಜಾಹೀರಾತು ಕೊಡಬೇಕು ಎನ್ನುವ ನಿರ್ಧಾರದಂತೆ ಈಗ ನೇಮಕಾತಿ ಜಾಹೀರಾತು ನೀಡುವ ಪರಿಪಾಠ ನಡೆಯುತ್ತಿದೆ. ಇದನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತದೆ. ಸಿಎಂ ಜೊತೆ ಸದ್ಯದಲ್ಲೇ ಸಭೆ ನಡೆಸಿ ನೇಮಕಾತಿ ಕುರಿತ ಸಮಸ್ಯೆ ಸರಿಪಡಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಮೊಬೈಲ್ ವ್ಯಸನ ತಪ್ಪಿಸಲು ಶಾಲೆಗಳಲ್ಲಿ ಅರಿವು ಮೂಡಿಸಲಾಗುತ್ತೆ: ಕೊರೊನಾ ಕಾರಣದಿಂದ ಅನಿವಾರ್ಯ ಪರಿಸ್ಥಿತಿಯಲ್ಲಿ ಜಾರಿಗೆ ಬಂದ ಆನ್​ಲೈನ್​ ಶಿಕ್ಷಣ ವ್ಯವಸ್ಥೆಯಿಂದಾಗಿ ಮಕ್ಕಳು ಮೊಬೈಲ್ ಗೆ ವ್ಯಸನಿಗಳಾಗಿದ್ದು, ಇದರಿಂದ ಅವರನ್ನು ಹೊರ ತರುವ ಕುರಿತು ಶಾಲಾ ಹಂತದಲ್ಲೇ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತದೆ ಹಾಗು ತಜ್ಞರ ವರದಿ ಪಡೆದು ಮಕ್ಕಳ ಶೈಕ್ಷಣಿಕ ನಷ್ಟ ಸರಿದೂಗಿಸಲಾಗುತ್ತದೆ ಎಂದು ಹೇಳಿದ್ದಾರೆ.

ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯೆ ತೇಜಸ್ವಿನಿಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ಕೋವಿಡ್ ಕಾರಣಕ್ಕೆ ಮಕ್ಕಳು ಖಿನ್ನತೆಗೆ ಒಳಗಾಗಿದ್ದಾರಾ? ಎನ್ನುವ ಕುರಿತು ಅಧ್ಯಯನ ನಡೆಸಲಾಗುತ್ತದೆ. ಮಕ್ಕಳ ಕಲಿಕೆ ಮೇಲೆ ಯಾವ ಆನ್​ಲೈನ್​ ಶಿಕ್ಷಣ ಪರಿಣಾಮ ಬೀರಿದೆ ಎನ್ನುವ ಕುರಿತು ಮತ್ತು ಶೈಕ್ಷಣಿಕ ನಷ್ಟ ಸರಿಪಡಿಸಲು ಪ್ರಯತ್ನ ನಡೆಸಲಾಗುತ್ತದೆ.

ಈ ಸಂಬಂಧ ತಜ್ಞರ ವರದಿಯನ್ನು ಪಡೆದು ಮಕ್ಕಳ‌ ಶಿಕ್ಷಣದ ನಷ್ಟ ಸರಿಪಡಿಸುವ ಕೆಲಸ ಮಾಡಲಾಗುತ್ತದೆ. ಇದರೊಂದಿಗೆ ಆನ್​ಲೈನ್​ ಶಿಕ್ಷಣದಿಂದ ಮಕ್ಕಳು ಮೊಬೈಲ್​ಗೆ ಅಡಿಕ್ಷನ್ ಆಗಿದ್ದು, ಇದನ್ನು ತಪ್ಪಿಸಲು ಅಗತ್ಯ ಅರಿವು ಮೂಡಿಸುವ ಕೆಲಸವನ್ನು ಶಾಲೆಗಳಲ್ಲಿ ಮಾಡಲಾಗುತ್ತದೆ ಎಂದರು.

ಕಾಂಗ್ರೆಸ್ ಧರಣಿ ನಡುವೆ ನಡೆದ ಪ್ರಶ್ನೋತ್ತರ ಕಲಾಪ: ಸಭಾಪತಿ ಸಂಧಾನ ಸಭೆ ನಂತರವೂ ಸಚಿವ ಭೈರತಿ ಬಸವರಾಜ್ ವಿರುದ್ಧದ ಬಹುಕೋಟಿ ಮೌಲ್ಯದ ಭೂಕಬಳಿಕೆ ಮಾಡಿರುವ ಪ್ರಕರಣದ ಚರ್ಚೆಗೆ ಆಗ್ರಹಿಸಿ ಸದನದಲ್ಲಿ ಕಾಂಗ್ರೆಸ್ ಸದಸ್ಯರು ಧರಣಿ ಮುಂದುವರೆಸಿದ್ದಾರೆ.

ಆಡಳಿತ ಮತ್ತು ಪ್ರತಿಪಕ್ಷ ನಾಯಕರನ್ನು ತಮ್ಮ ಕಚೇರಿಗೆ ಕರೆಸಿಕೊಂಡ ಸಭಾಪತಿ ಬಸವರಾಜ ಹೊರಟ್ಟಿ ಸಂಧಾನ ಸಭೆ ನಡೆಸಿದರು. ಸುಗಮ ಕಲಾಪಕ್ಕೆ ಅನುವು ಮಾಡಿಕೊಡುವಂತೆ ಮಾತುಕತೆ ನಡೆಸಿದರು.‌ ಸಭಾಪತಿಗಳ ಸಂಧಾನಕ್ಕೂ ಜಗ್ಗದ ಕಾಂಗ್ರೆಸ್ ಸದನದಲ್ಲಿ ಧರಣಿ ಮುಂದುವರೆಸಿದೆ.

ಸಂಧಾನಕ್ಕಾಗಿ ಮುಂದೂಡಿಕೆಯಾಗಿದ್ದ ಕಲಾಪವನ್ನು ಮತ್ತೆ ಆರಂಭಿಸಿದ ಸಭಾಪತಿಗಳು ಧರಣಿ ನಿಲ್ಲಿಸುವಂತೆ ಮನವಿ ಮಾಡಿದರು. ಆದರೆ, ಧರಣಿ ನಿಲ್ಲಿಸಲು ಕಾಂಗ್ರೆಸ್ ನಿರಾಕರಿಸಿತು‌. ಕಾಂಗ್ರೆಸ್ ಧರಣಿ ನಡುವೆಯೇ ಸಭಾಪತಿಗಳು ಪ್ರಶ್ನೋತ್ತರ ಕಲಾಪ ಆರಂಭಿಸಿದರು. ಕಾಂಗ್ರೆಸ್ ಸದಸ್ಯರ ಘೋಷಣೆ ಗದ್ದಲದ ನಡುವೆಯೇ ಪ್ರಶ್ನೋತ್ತರ ಕಲಾಪವನ್ನು ನಡೆಸಿದರು.

ಓದಿ: ಗದ್ದಲ ನಡೆಸಿದ ಯಾವುದೇ ಕಿಡಿಗೇಡಿಗಳನ್ನು ಕಾಪಾಡುವುದಿಲ್ಲ.. ಆರಗ ಜ್ಞಾನೇಂದ್ರ ಉತ್ತರ ಧಿಕ್ಕರಿಸಿ ಪ್ರತಿಪಕ್ಷ ಸಭಾತ್ಯಾಗ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.