ETV Bharat / state

ಗಾಂಜಾ ನಶೆಯಲ್ಲಿ ಬೈಕ್​ ಸವಾರಿ: ಕಾನ್ಸ್​ಸ್ಟೇಬಲ್​​ ಮೇಲೆ ಹಲ್ಲೆಗೆ ಯತ್ನ

author img

By

Published : Aug 30, 2020, 11:47 PM IST

ಬೆಂಗಳೂರಿನ ವಿಜಯನಗರ ಸಂಚಾರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಇಂದು ಗಾಂಜಾ ಸೇವಿಸಿ, ಬೈಕ್​ ಮೇಲೆ ತೆರಳುತ್ತಿದ್ದ ಮೂವರನ್ನು ಪೊಲೀಸ್​ ಕಾನ್ಸ್​ಸ್ಟೇಬಲ್ ತಡೆಯಲು ಯತ್ನಿಸಿದ್ದಾರೆ. ಗಾಂಜಾ ಸೇವಿನೆಯಲ್ಲಿದ್ದ ಮೂವರು ಪೊಲೀಸ್​ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.

Attempted assault on policeman
ಗಾಂಜಾ ನಶೆಯಲ್ಲಿ ಬೈಕ್​ ಸವಾರಿ

ಬೆಂಗಳೂರು: ಗಾಂಜಾ ನಶೆಯಲ್ಲಿ ಹೆಲ್ಮೆಟ್ ಧರಿಸದೆ ಅಡ್ಡಾದಿಡ್ಡಿ ಬೈಕ್ ಚಾಲನೆ ಮಾಡುತ್ತಿದ್ದ ಸವಾರರನ್ನು ಹಿಡಿಯಲು ತೆರಳಿದ ಟ್ರಾಫಿಕ್‌ ಕಾನ್ಸ್​ಸ್ಟೇಬಲ್ ಮೇಲೆಯೇ ಹಲ್ಲೆ ಮಾಡಿರುವ ಘಟನೆ ವಿಜಯನಗರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇಂದು ಬೈಕ್​ನಲ್ಲಿ ಮೂವರು ಸವಾರರು ತೆರಳುತ್ತಿದ್ದಾಗ ಪೊಲೀಸ್​ ಕಾನ್ಸ್​ಸ್ಟೇಬಲ್​ ವಿದ್ಯಾದರ್ ಅಡ್ಡಗಟ್ಟಲು ಮುಂದಾಗಿದ್ದಾರೆ. ಇದರಿಂದ‌ ಆಕ್ರೋಶಗೊಂಡ ಆರೋಪಿಗಳು ಕಾಲಿನಿಂದ ಒದ್ದು, ಪಾರಾಗಲು ಪ್ರಯತ್ನಿದ್ದಾರೆ.

ಡಿಸಿಪಿ ಸಂಜೀವ್

ಆರೋಪಿಗಳಾದ ಅಮರ್ ಖುರೇಶಿ, ಸಯ್ಯದ್ ಸಾಧೀಕ್ ಹಾಗೂ ಓರ್ವ ಅಪ್ರಾಪ್ತ ಬಾಲಕ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಇಬ್ಬರನ್ನು ಇದೀಗ ವಶಕ್ಕೆ‌‌ ಪಡೆಯಲಾಗಿದೆ. ವಿಜಯನಗರ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸರು ಆರೋಪಿಗಳನ್ನು ವಿಚಾರಣೆಗೊಳಪಡಿಸಿದ್ದು, ಆರೋಪಿಗಳು ಗಾಂಜಾ ನಶೆಯಲ್ಲಿದ್ದರು ಎಂಬುದು ದೃಢಪಡಿಸಿದ್ದಾರೆ.

ಬೆಂಗಳೂರು: ಗಾಂಜಾ ನಶೆಯಲ್ಲಿ ಹೆಲ್ಮೆಟ್ ಧರಿಸದೆ ಅಡ್ಡಾದಿಡ್ಡಿ ಬೈಕ್ ಚಾಲನೆ ಮಾಡುತ್ತಿದ್ದ ಸವಾರರನ್ನು ಹಿಡಿಯಲು ತೆರಳಿದ ಟ್ರಾಫಿಕ್‌ ಕಾನ್ಸ್​ಸ್ಟೇಬಲ್ ಮೇಲೆಯೇ ಹಲ್ಲೆ ಮಾಡಿರುವ ಘಟನೆ ವಿಜಯನಗರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇಂದು ಬೈಕ್​ನಲ್ಲಿ ಮೂವರು ಸವಾರರು ತೆರಳುತ್ತಿದ್ದಾಗ ಪೊಲೀಸ್​ ಕಾನ್ಸ್​ಸ್ಟೇಬಲ್​ ವಿದ್ಯಾದರ್ ಅಡ್ಡಗಟ್ಟಲು ಮುಂದಾಗಿದ್ದಾರೆ. ಇದರಿಂದ‌ ಆಕ್ರೋಶಗೊಂಡ ಆರೋಪಿಗಳು ಕಾಲಿನಿಂದ ಒದ್ದು, ಪಾರಾಗಲು ಪ್ರಯತ್ನಿದ್ದಾರೆ.

ಡಿಸಿಪಿ ಸಂಜೀವ್

ಆರೋಪಿಗಳಾದ ಅಮರ್ ಖುರೇಶಿ, ಸಯ್ಯದ್ ಸಾಧೀಕ್ ಹಾಗೂ ಓರ್ವ ಅಪ್ರಾಪ್ತ ಬಾಲಕ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಇಬ್ಬರನ್ನು ಇದೀಗ ವಶಕ್ಕೆ‌‌ ಪಡೆಯಲಾಗಿದೆ. ವಿಜಯನಗರ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸರು ಆರೋಪಿಗಳನ್ನು ವಿಚಾರಣೆಗೊಳಪಡಿಸಿದ್ದು, ಆರೋಪಿಗಳು ಗಾಂಜಾ ನಶೆಯಲ್ಲಿದ್ದರು ಎಂಬುದು ದೃಢಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.