ETV Bharat / state

ಕದ್ದ ಮೊಬೈಲ್‌ಗಳಿಗೆ ಫ್ಲ್ಯಾಶ್ ಮಾಡಿಕೊಡಲು ನಿರಾಕರಿಸಿದ ಯುವಕನಿಗೆ ಹಲ್ಲೆ: ಮಹಿಳೆಯ ಗ್ಯಾಂಗ್ ಅರೆಸ್ಟ್

author img

By ETV Bharat Karnataka Team

Published : Oct 3, 2023, 9:43 PM IST

ಬೆಂಗಳೂರಿನ ಹೆಗ್ಗಡೆ ನಗರದ ನಿವಾಸಿಯಾದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.

Sampigehalli station police has arrested three accused.
ಸಂಪಿಗೆಹಳ್ಳಿ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿರುವುದು.

ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್ ಮಾಧ್ಯಮದವರೊಂದಿಗೆ ಮಾತನಾಡಿದರು.

ಬೆಂಗಳೂರು: ಕದ್ದ ಮೊಬೈಲ್​​ಗಳಿಗೆ ಫ್ಲ್ಯಾಶ್ ಮಾಡಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆಗೈದ ಆರೋಪದಡಿ ಯುವತಿ ಸೇರಿದಂತೆ ಮೂವರು ಆರೋಪಿಗಳನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೆಗ್ಗಡೆ ನಗರದ ನಿವಾಸಿ ಇಮ್ರಾನ್ ಉಲ್ಲಾಖಾನ್ ಎಂಬಾತ ಹಲ್ಲೆಗೊಳಗಾಗಿದ್ದಾನೆ. ಈತ ನೀಡಿದ ದೂರಿನ ಮೇರೆಗೆ ಸಾದಿಯಾ, ಸೊಹೈಲ್ ಹಾಗೂ ಉಮರ್ ಎಂಬ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ‌.‌ ಈತನ ಪತ್ತೆ ಕೆಲಸ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಲ್ಲೆಗೊಳಗಾದ ಇಮ್ರಾನ್, ಫೋನ್ ಪೇ ಕ್ಯೂ ಆರ್ ಕೋಡ್ ಬೋರ್ಡ್ ಹಾಕುವ ಕೆಲಸ ಮಾಡಿಕೊಂಡಿದ್ದರು. ಮೊಬೈಲ್ ಫ್ಲ್ಯಾಶ್ ಮಾಡುವ ಬಗ್ಗೆ ಅರಿತುಕೊಂಡಿದ್ದರು. ಈ ಮಧ್ಯೆ ತಲೆಮರೆಸಿಕೊಂಡಿರುವ ಶಾಹಿದ್​​​ಗೆ‌ ಇಮ್ರಾನ್ ಪರಿಚಯವಾಗಿತ್ತು. ಫ್ಲ್ಯಾಶ್ ಮಾಡುವ ಕಲೆ ಅರಿತಿದ್ದ ಇಮ್ರಾನ್​ಗೆ ಶಾಹಿದ್ ಕದ್ದ ಮೊಬೈಲ್‌ ನೀಡಿ ಪ್ಲ್ಯಾಶ್ ಮಾಡಿಸಿಕೊಂಡಿದ್ದರು. ಅದೇ ರೀತಿ ಸಾದಿಯಾ ಸಹ ತಮ್ಮ ಮೊಬೈಲ್ ನೀಡಿ ರೀ ಸೆಟ್​ ಮಾಡಿಸಿಕೊಂಡಿದ್ದಳು.

ಪ್ರತಿನಿತ್ಯ ಮೊಬೈಲ್ ಫ್ಲ್ಯಾಶ್ ಮಾಡಿಸಿಕೊಳ್ಳುವಂತೆ ಆರೋಪಿಗಳು ನೀಡುತ್ತಿರುವುದನ್ನು ಇಮ್ರಾನ್ ಕಂಡು ಅನುಮಾನಗೊಂಡಿದ್ದನು.‌ ಕಳ್ಳತನ ಮಾಡಿದ ಮೊಬೈಲ್‌ಗಳನ್ನು ನೀಡುತ್ತಿರುವ ಬಗ್ಗೆ ಅರಿತು ಮೊಬೈಲ್‌ಗಳನ್ನ ಪ್ಲ್ಯಾಶ್ ಮಾಡಿಸಲು ನಿರಾಕರಿಸಿದ್ದನು. ಅಲ್ಲದೇ ಆರೋಪಿಗಳ ಮೊಬೈಲ್ ‌ಕರೆ ಸ್ವೀಕರಿಸುವುದನ್ನೇ ಬಿಟ್ಟಿದ್ದ. ಇದರಿಂದ ಕೆಂಡಾಮಂಡಲವಾದ ಆರೋಪಿ ಸಾದಿಯಾ ನಿರಂತರ ಪೋನ್ ಮಾಡಿ ಕೊನೆಗೆ ಇಮ್ರಾನ್​ನನ್ನು ಸಂಪರ್ಕಿಸಿ ಭೇಟಿಯಾಗುವಂತೆ ಹೇಳಿದ್ದಳು.

ಹೆಗಡೆನಗರದ ಟೀ ಅಂಗಡಿ ಬಳಿ ಬರುವಂತೆ ಇಮ್ರಾನ್ ಹೇಳಿದ್ದರು. ಕೆಲ ಹೊತ್ತಿನ ಬಳಿಕ ಸಾದಿಯಾ ತನ್ನ ಜೊತೆಗಿದ್ದ‌ ಸಹಚರರನ್ನು ಕಳುಹಿಸಿದ್ದಾಳೆ. ಭೇಟಿಯಾದ ಇಮ್ರಾನ್‌ನನ್ನು ನೋಡುತ್ತಿದ್ದಂತೆ ಲಾಂಗ್​ಗಳಿಂದ ಹಲ್ಲೆಗೆ ಮುಂದಾಗಿದ್ದಾರೆ. ತಪ್ಪಿಸಿಕೊಳ್ಳುಲು ಯತ್ನಿಸಿದ್ದ ಇಮ್ರಾನ್‌ನ ಬೆನ್ನು, ಬಲಗೈ ಮಣಿಕಟ್ಟಿಗೆ ಗಂಭೀರವಾಗಿ ಗಾಯಗೊಳಿಸಿದ್ದಾರೆ. ಖಾಸಗಿ‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇಮ್ರಾನ್ ನೀಡಿದ ದೂರಿನ ಮೇರೆಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್ ತಿಳಿಸಿದರು.

ಆರೋಪಿ ಸಾದಿಯಾ ಹುಡುಗರನ್ನು ಸಂಘಟಿಸಿ ಮೊಬೈಲ್ ಕಳ್ಳತನ ಮಾಡಿಸುತ್ತಿದ್ದಳು. ಈ ಹಿಂದೆ ಜಾಮೀನುಸಹಿತ ಪ್ರಕರಣಗಳಲ್ಲಿ ಭಾಗಿಯಾಗಿದ್ದಳು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂಓದಿ: ಬೆಂಗಳೂರು: ಖರ್ಚಿಗೆ ಕಾಸಿಲ್ಲವೆಂದು ಮೊಬೈಲ್ ಶಾಪ್​ ದೋಚಿದ್ದ ಯುವಕರ ಬಂಧನ

ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್ ಮಾಧ್ಯಮದವರೊಂದಿಗೆ ಮಾತನಾಡಿದರು.

ಬೆಂಗಳೂರು: ಕದ್ದ ಮೊಬೈಲ್​​ಗಳಿಗೆ ಫ್ಲ್ಯಾಶ್ ಮಾಡಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆಗೈದ ಆರೋಪದಡಿ ಯುವತಿ ಸೇರಿದಂತೆ ಮೂವರು ಆರೋಪಿಗಳನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೆಗ್ಗಡೆ ನಗರದ ನಿವಾಸಿ ಇಮ್ರಾನ್ ಉಲ್ಲಾಖಾನ್ ಎಂಬಾತ ಹಲ್ಲೆಗೊಳಗಾಗಿದ್ದಾನೆ. ಈತ ನೀಡಿದ ದೂರಿನ ಮೇರೆಗೆ ಸಾದಿಯಾ, ಸೊಹೈಲ್ ಹಾಗೂ ಉಮರ್ ಎಂಬ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ‌.‌ ಈತನ ಪತ್ತೆ ಕೆಲಸ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಲ್ಲೆಗೊಳಗಾದ ಇಮ್ರಾನ್, ಫೋನ್ ಪೇ ಕ್ಯೂ ಆರ್ ಕೋಡ್ ಬೋರ್ಡ್ ಹಾಕುವ ಕೆಲಸ ಮಾಡಿಕೊಂಡಿದ್ದರು. ಮೊಬೈಲ್ ಫ್ಲ್ಯಾಶ್ ಮಾಡುವ ಬಗ್ಗೆ ಅರಿತುಕೊಂಡಿದ್ದರು. ಈ ಮಧ್ಯೆ ತಲೆಮರೆಸಿಕೊಂಡಿರುವ ಶಾಹಿದ್​​​ಗೆ‌ ಇಮ್ರಾನ್ ಪರಿಚಯವಾಗಿತ್ತು. ಫ್ಲ್ಯಾಶ್ ಮಾಡುವ ಕಲೆ ಅರಿತಿದ್ದ ಇಮ್ರಾನ್​ಗೆ ಶಾಹಿದ್ ಕದ್ದ ಮೊಬೈಲ್‌ ನೀಡಿ ಪ್ಲ್ಯಾಶ್ ಮಾಡಿಸಿಕೊಂಡಿದ್ದರು. ಅದೇ ರೀತಿ ಸಾದಿಯಾ ಸಹ ತಮ್ಮ ಮೊಬೈಲ್ ನೀಡಿ ರೀ ಸೆಟ್​ ಮಾಡಿಸಿಕೊಂಡಿದ್ದಳು.

ಪ್ರತಿನಿತ್ಯ ಮೊಬೈಲ್ ಫ್ಲ್ಯಾಶ್ ಮಾಡಿಸಿಕೊಳ್ಳುವಂತೆ ಆರೋಪಿಗಳು ನೀಡುತ್ತಿರುವುದನ್ನು ಇಮ್ರಾನ್ ಕಂಡು ಅನುಮಾನಗೊಂಡಿದ್ದನು.‌ ಕಳ್ಳತನ ಮಾಡಿದ ಮೊಬೈಲ್‌ಗಳನ್ನು ನೀಡುತ್ತಿರುವ ಬಗ್ಗೆ ಅರಿತು ಮೊಬೈಲ್‌ಗಳನ್ನ ಪ್ಲ್ಯಾಶ್ ಮಾಡಿಸಲು ನಿರಾಕರಿಸಿದ್ದನು. ಅಲ್ಲದೇ ಆರೋಪಿಗಳ ಮೊಬೈಲ್ ‌ಕರೆ ಸ್ವೀಕರಿಸುವುದನ್ನೇ ಬಿಟ್ಟಿದ್ದ. ಇದರಿಂದ ಕೆಂಡಾಮಂಡಲವಾದ ಆರೋಪಿ ಸಾದಿಯಾ ನಿರಂತರ ಪೋನ್ ಮಾಡಿ ಕೊನೆಗೆ ಇಮ್ರಾನ್​ನನ್ನು ಸಂಪರ್ಕಿಸಿ ಭೇಟಿಯಾಗುವಂತೆ ಹೇಳಿದ್ದಳು.

ಹೆಗಡೆನಗರದ ಟೀ ಅಂಗಡಿ ಬಳಿ ಬರುವಂತೆ ಇಮ್ರಾನ್ ಹೇಳಿದ್ದರು. ಕೆಲ ಹೊತ್ತಿನ ಬಳಿಕ ಸಾದಿಯಾ ತನ್ನ ಜೊತೆಗಿದ್ದ‌ ಸಹಚರರನ್ನು ಕಳುಹಿಸಿದ್ದಾಳೆ. ಭೇಟಿಯಾದ ಇಮ್ರಾನ್‌ನನ್ನು ನೋಡುತ್ತಿದ್ದಂತೆ ಲಾಂಗ್​ಗಳಿಂದ ಹಲ್ಲೆಗೆ ಮುಂದಾಗಿದ್ದಾರೆ. ತಪ್ಪಿಸಿಕೊಳ್ಳುಲು ಯತ್ನಿಸಿದ್ದ ಇಮ್ರಾನ್‌ನ ಬೆನ್ನು, ಬಲಗೈ ಮಣಿಕಟ್ಟಿಗೆ ಗಂಭೀರವಾಗಿ ಗಾಯಗೊಳಿಸಿದ್ದಾರೆ. ಖಾಸಗಿ‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇಮ್ರಾನ್ ನೀಡಿದ ದೂರಿನ ಮೇರೆಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್ ತಿಳಿಸಿದರು.

ಆರೋಪಿ ಸಾದಿಯಾ ಹುಡುಗರನ್ನು ಸಂಘಟಿಸಿ ಮೊಬೈಲ್ ಕಳ್ಳತನ ಮಾಡಿಸುತ್ತಿದ್ದಳು. ಈ ಹಿಂದೆ ಜಾಮೀನುಸಹಿತ ಪ್ರಕರಣಗಳಲ್ಲಿ ಭಾಗಿಯಾಗಿದ್ದಳು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂಓದಿ: ಬೆಂಗಳೂರು: ಖರ್ಚಿಗೆ ಕಾಸಿಲ್ಲವೆಂದು ಮೊಬೈಲ್ ಶಾಪ್​ ದೋಚಿದ್ದ ಯುವಕರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.