ETV Bharat / state

ಶಿವಾಜಿನಗರದಲ್ಲಿ ಮೂರೂ ಪಕ್ಷಗಳ ಪ್ರಚಾರ ಚುರುಕು : ಮನೆ ಮನೆಗೆ ತೆರಳಿ ಮತಯಾಚನೆ

ಉಪ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಬೈ ಎಲೆಕ್ಷನ್ ಡೇಟ್ ಅನೌನ್ಸ್ ಆದ ದಿನದಿಂದಲೂ ಸೈಲೆಂಟಾಗಿದ್ದ ಶಿವಾಜಿನಗರ ಇಂದು ಸ್ವಲ ಕಳೆಗಟ್ಟಿದ್ದು, ಮೂರು ಪಕ್ಷಗಳ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಕೈಗೊಂಡು ಮನೆಮನೆಗೆ ತೆರಳಿ ಮತಯಾಚನೆ ನಡೆಸಿದರು.

author img

By

Published : Nov 29, 2019, 6:05 AM IST

ಶಿವಾಜಿನಗರದಲ್ಲಿ ಮೂರೂ ಪಕ್ಷಗಳ ಪ್ರಚಾರ ಚುರುಕು
ಶಿವಾಜಿನಗರದಲ್ಲಿ ಮೂರೂ ಪಕ್ಷಗಳ ಪ್ರಚಾರ ಚುರುಕು

ಶಿವಾಜಿನಗರ : ಉಪ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಬೈ ಎಲೆಕ್ಷನ್ ಡೇಟ್ ಅನೌನ್ಸ್ ಆದ ದಿನದಿಂದಲೂ ಸೈಲೆಂಟಾಗಿದ್ದ ಶಿವಾಜಿನಗರ ಇಂದು ಸ್ವಲ ಕಳೆಗಟ್ಟಿದೆ.

ಶಿವಾಜಿನಗರದಲ್ಲಿ ಮೂರೂ ಪಕ್ಷಗಳ ಪ್ರಚಾರ ಚುರುಕು

ಬಿಜೆಪಿ ಅಭ್ಯರ್ಥಿ ಎಂ. ಶರವಣ ಪರ ಸಚಿವ ಸಿಟಿ ರವಿ ಹಾಗೂ ರವಿ ಸುಬ್ರಹ್ಮಣ್ಯ ರೋಡ್ ಶೋ ಮಾಡುವ ಮೂಲಕ ಭರ್ಜರಿ ಪ್ರಚಾರ ಮಾಡಿದರು. ಹೊದಲೆಲ್ಲಾ ಬಿಜೆಪಿ ಅಭ್ಯರ್ಥಿ ಶರವಣಗೆ ಮತದಾರರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ದಿನದಿಂದ ದಿನಕ್ಕೆ ಬಿಜೆಪಿ ಅಭ್ಯರ್ಥಿ ಪ್ರಚಾರ‌ವನ್ನು ಚುರುಕುಗೊಳಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಹರ್ಷದ್ ಕೂಡ ಇಂದು ಸಾವಿರಾರು ಬೆಂಬಲಿಗರ ಜೊತೆ ವಸಂತನಗರ, ಸಂಪಗಿರಾಮನಗರದಲ್ಲಿ ಭರ್ಜರಿ ಪ್ರಚಾರ ಮಾಡಿದರು. ನಂತರ ರಿಜ್ವಾನ್ ಪರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಅವರ ಪತ್ನಿ ಟಬು ವಸಂತ ನಗರದಲ್ಲಿ ಮನೆ‌ ಮನೆಗೆ ತೆರೆಳಿ ಮತಯಾಚನೆ ಮಾಡಿದರು.

ಇನ್ನು ನಾನೇನು ಕಮ್ಮಿ ಇಲ್ಲ ಎನ್ನುವಂತೆ ಪ್ರಚಾರ ಕಣದಲ್ಲಿ ಅಬ್ಬರಿಸುತ್ತಿರುವ ಜೆಡಿಎಸ್ ಅಭ್ಯರ್ಥಿ ತನ್ವೀರ್ ಅಹ್ಮದುಲ್ಲಾ ಸ್ಥಳೀಯ ನಾಯಕರ ಜೊತೆ ಸಂಪಗಿರಾಮ ನಗರ ಹಾಗೂ ಜಯಮಹಲ್ ವಾರ್ಡ್​ನ ಮನೆಮನೆಗೆ ತೆರಳಿ ಮತಯಾಚನೆ ಮಾಡಿದ್ದಾರೆ. ಜೆಡಿಎಸ್ ಮೂಲಗಳ ಪ್ರಕಾರ ಇಂದು ಶಿವಾಜಿನಗರದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಖಾಡಕ್ಕೆ ಇಳಿಯುವ ಸಾಧ್ಯತೆ ಇದೆ.

ಇಂದು ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಹರ್ಷದ್ ಪರ ಪ್ರಚಾರ ಮಾಡಲು ಕನಕಪುರ ಬಂಡೆ ಡಿ.ಕೆ ಶಿವಕುಮಾರ್ ಶಿವಾಜಿನಗರಕ್ಕೆ ಎಂಟ್ರಿಕೊಡಲಿದ್ದು, ಶಿವಾಜಿ ನಗರದಲ್ಲಿ ಜೋಡೆತ್ತುಗಳ ಅರ್ಭಟ ಜೋರಾಗಿರಲಿದೆ.

ಶಿವಾಜಿನಗರ : ಉಪ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಬೈ ಎಲೆಕ್ಷನ್ ಡೇಟ್ ಅನೌನ್ಸ್ ಆದ ದಿನದಿಂದಲೂ ಸೈಲೆಂಟಾಗಿದ್ದ ಶಿವಾಜಿನಗರ ಇಂದು ಸ್ವಲ ಕಳೆಗಟ್ಟಿದೆ.

ಶಿವಾಜಿನಗರದಲ್ಲಿ ಮೂರೂ ಪಕ್ಷಗಳ ಪ್ರಚಾರ ಚುರುಕು

ಬಿಜೆಪಿ ಅಭ್ಯರ್ಥಿ ಎಂ. ಶರವಣ ಪರ ಸಚಿವ ಸಿಟಿ ರವಿ ಹಾಗೂ ರವಿ ಸುಬ್ರಹ್ಮಣ್ಯ ರೋಡ್ ಶೋ ಮಾಡುವ ಮೂಲಕ ಭರ್ಜರಿ ಪ್ರಚಾರ ಮಾಡಿದರು. ಹೊದಲೆಲ್ಲಾ ಬಿಜೆಪಿ ಅಭ್ಯರ್ಥಿ ಶರವಣಗೆ ಮತದಾರರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ದಿನದಿಂದ ದಿನಕ್ಕೆ ಬಿಜೆಪಿ ಅಭ್ಯರ್ಥಿ ಪ್ರಚಾರ‌ವನ್ನು ಚುರುಕುಗೊಳಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಹರ್ಷದ್ ಕೂಡ ಇಂದು ಸಾವಿರಾರು ಬೆಂಬಲಿಗರ ಜೊತೆ ವಸಂತನಗರ, ಸಂಪಗಿರಾಮನಗರದಲ್ಲಿ ಭರ್ಜರಿ ಪ್ರಚಾರ ಮಾಡಿದರು. ನಂತರ ರಿಜ್ವಾನ್ ಪರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಅವರ ಪತ್ನಿ ಟಬು ವಸಂತ ನಗರದಲ್ಲಿ ಮನೆ‌ ಮನೆಗೆ ತೆರೆಳಿ ಮತಯಾಚನೆ ಮಾಡಿದರು.

ಇನ್ನು ನಾನೇನು ಕಮ್ಮಿ ಇಲ್ಲ ಎನ್ನುವಂತೆ ಪ್ರಚಾರ ಕಣದಲ್ಲಿ ಅಬ್ಬರಿಸುತ್ತಿರುವ ಜೆಡಿಎಸ್ ಅಭ್ಯರ್ಥಿ ತನ್ವೀರ್ ಅಹ್ಮದುಲ್ಲಾ ಸ್ಥಳೀಯ ನಾಯಕರ ಜೊತೆ ಸಂಪಗಿರಾಮ ನಗರ ಹಾಗೂ ಜಯಮಹಲ್ ವಾರ್ಡ್​ನ ಮನೆಮನೆಗೆ ತೆರಳಿ ಮತಯಾಚನೆ ಮಾಡಿದ್ದಾರೆ. ಜೆಡಿಎಸ್ ಮೂಲಗಳ ಪ್ರಕಾರ ಇಂದು ಶಿವಾಜಿನಗರದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಖಾಡಕ್ಕೆ ಇಳಿಯುವ ಸಾಧ್ಯತೆ ಇದೆ.

ಇಂದು ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಹರ್ಷದ್ ಪರ ಪ್ರಚಾರ ಮಾಡಲು ಕನಕಪುರ ಬಂಡೆ ಡಿ.ಕೆ ಶಿವಕುಮಾರ್ ಶಿವಾಜಿನಗರಕ್ಕೆ ಎಂಟ್ರಿಕೊಡಲಿದ್ದು, ಶಿವಾಜಿ ನಗರದಲ್ಲಿ ಜೋಡೆತ್ತುಗಳ ಅರ್ಭಟ ಜೋರಾಗಿರಲಿದೆ.

Intro:ಶಿವಾಜಿನಗರದಲ್ಲಿ ಪ್ರಚಾರ ಚುರುಕುಗೊಳಿಸಿದ ಮೂರು ಪಕ್ಷದ ಅಭ್ಯರ್ಥಿಗಳು. ನಾಳೆ ಶಿವಾಜಿ ನಗರ ಅಖಾಡಕ್ಕೆ ಟ್ರಬಲ್ ಶೂಟರ್ ಎಂಟ್ರಿ


ಉಪ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಬೈ ಎಲೆಕ್ಷನ್ ಡೇಟ್ ಅನೌನ್ಸ್ ಆದ ದಿನದಿಂದಲೂ ಸೈಲೆಂಟಾಗಿದ್ದ ಶಿವಾಜಿನಗರ ನಗರ ರಣಕಣ.ಇಂದು ಸ್ವಲ ಕಳೆಗಟ್ಟಿದ್ದು. ಪ್ರಮುಖ ಮೂರು ಪಕ್ಷಗಳ ಅಭ್ಯರ್ಥಿ ಗಳು ಬಿರುಸಿನ ಪ್ರಚಾರ ಕೈಗೊಂಡಿದ್ದು.ಮನೆಮನೆಗೆ ತೆರಳಿ ಮತದಾರರ ಮನವೊಲಿಕೆಗೆ ಮುಂದಾಗಿದ್ದಾರೆ.

ಸಂಪಂಗಿರಾಮನಗರ ವಾರ್ಡ್ ನಲ್ಲಿ ಇಂದು ಬಿಜೆಪಿ ಅಭ್ಯರ್ಥಿ ಎಂ ಶರವಣ ಪರ ಸಚಿವ ಸಿಟಿ ರವಿ ಹಾಗೂ ರವಿ ಸುಬ್ರಹ್ಮಣ್ಯ ರೋಡ್ ಶೋ ಮಾಡುವ ಮೂಲಕ ಭರ್ಜರಿ ಪ್ರಚಾರ ಮಾಡಿದ್ದಾರೆ.ಅಲ್ಲದೆ ಹೊದಲೆಲ್ಲಾ ಬಿಜೆಪಿ ಅಭ್ಯರ್ಥಿಗೆ ಶರವಣ ಗೆ ಮತದಾರರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ದಿನದಿಂದ ದಿನಕ್ಕೆ ಬಿಜೆಪಿ ಅಭ್ಯರ್ಥಿ ಪ್ರಚಾರ‌ವನ್ನು ಚುರುಕುಗೊಳಿಸಿದ್ದಾರೆ.
Body:ಇದರ ಜೊತೆ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಹರ್ಷದ್ ಕೂಡ ಇಂದು ಸಾವಿರಾರು ಬೆಂಬಲಿಗರ ಜೊತೆ ವಸಂತನಗರ, ಸಂಪಗಿರಾಮನಗರದಲ್ಲಿ ಭರ್ಜರಿ ಪ್ರಚಾರ ಮಾಡಿದ್ದಾರೆ.ಅಲ್ಲದೆ ಇಂದು ಸಂಜೆ ರಿಜ್ವಾನ್ ಪರ ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡುರಾವ್ ಅವರ ಪತ್ನಿ ಟಬು ದಿನೇಶ್ ಗುಂಡುರಾವ್ ವಸಂತ
ನಗರದಲ್ಲಿ ಮನೆ‌ಮನೆಗೆ ತೆರೆಳಿ ಮತಯಾಚನೆ
ಮಾಡಿದ್ದಾರೆ.

ಇನ್ನು ನಾನೇನು ಕಮ್ಮಿ ಇಲ್ಲ ಎನ್ನುವಂತೆ ಪ್ರಚಾರ ಕಣದಲ್ಲಿ ಅಬ್ಬರಿಸುತ್ತಿರುವ ಜೆಡಿಎಸ್ ಅಭ್ಯರ್ಥಿ ತನ್ವೀರ್ ಅಹಮದ್ ವುಲ್ಲಾ ಸ್ಥಳೀಯ ನಾಯಕರ ಜೊತೆಗೂಡಿ ಸಂಪಗಿರಾಮ ನಗರ ಹಾಗೂ ಜಯಮಹಲ್ ವಾರ್ಡ್ ನಲ್ಲಿ ಮನೆಮನೆಗೆ ತೆರಳಿ ಮತಯಾಚನೆ ಮಾಡಿದ್ದಾರೆ.ಅಲ್ಲದೆ ಇಂದು ಸಂಜೆ ಸಂಪಂಗಿ ರಾಮನಗರಕ್ಕೆ ಪ್ರಚಾರಕ್ಕೆ ದೇವೆಗೌಡರು ಬರಲು ಸಮಯ ನಿಗಧಿಯಾಗಿತ್ತು.ಅದರೆ ಕೊನೆಯ ಕ್ಷಣದಲ್ಲಿ ದೊಡ್ಡ ಗೌಡರ ವೇಳಾ ಪಟ್ಟಿ ಬದಲಾದ ಕಾರಣ ಪ್ರಚಾರಕ್ಕೆ ಗೈರಾದರು. Conclusion:ಇನ್ನೂ ಜೆಡಿಎಸ್ ಮೂಲಗಳ ಪ್ರಕಾರ ನಾಳೆ ಶಿವಾಜಿ.
ನಗರದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ
ಅಖಾಡಕ್ಕೆ ಇಳಿಯುವಸಾಧ್ಯತೆ ಇದ್ದು. ಶಿವಾಜಿನಗರದಲ್ಲಿ
ಕುಮಾರ ಸ್ವಾಮಿ ರೋಡ್ ಶೋ ನಡೆಸುವ ಸಾಧ್ಯತೆ ಇದೆ.
ಅಲ್ಲದೆ ನಾಳೆ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಹರ್ಷದ್ ಪರ ಪ್ರಚಾರ ಮಾಡಲು ಕನಕಪುರ ಬಂಡೆ ಶಿವಕುಮಾರ್ ಶಿವಾಜಿನಗರಕ್ಕೆ ಎಂಟ್ರಿವಕೊಡಲಿದ್ದು ನಾಳೆ ಶಿವಾಜಿ
ನಗರದಲ್ಲಿ ಜೋಡೆತ್ತುಗಳ ಅರ್ಭಟ ಜೋರಾಗಿರಲಿದೆ.

ಸತೀಶ ಎಂಬಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.