ETV Bharat / state

ಸಾಮಾನ್ಯರನ್ನು ಕೂಡಲೇ ಬಂಧಿಸ್ತೀರಿ, ವಿಐಪಿಯನ್ನು ಕೂಡ ಅರೆಸ್ಟ್​ ಮಾಡಿ ಶಕ್ತಿ ಪ್ರದರ್ಶಿಸಲಿ : ವಕೀಲ ಜಗದೀಶ್

author img

By

Published : Apr 2, 2021, 1:09 PM IST

Updated : Apr 2, 2021, 1:19 PM IST

ಜನ ಸಾಮಾನ್ಯರಿಗೆ ಕೂಡಲೇ ಬಂಧಿಸಿ ತಮ್ಮ ಶಕ್ತಿ ತೋರಿಸುವ ಕರ್ನಾಟಕದ ಪೊಲೀಸರು, ಒಬ್ಬ ವಿಐಪಿಯನ್ನ ಕೂಡ ಅರೆಸ್ಟ್​ ಮಾಡಿ ತಮ್ಮ ಶಕ್ತಿ ಪ್ರದರ್ಶನ ಮಾಡಬೇಕಾಗುತ್ತದೆ. ಈ ಮೂಲಕ ಅವರು ಜನರಿಗೆ ನಂಬಿಕೆ ಕೊಡಬೇಕು..

Advocate Jagadeesh on CD case
ವಕೀಲ ಜಗದೀಶ್

ಬೆಂಗಳೂರು : ಸಿಡಿ ಪ್ರಕರಣದ ಆರೋಪಿಗೆ ಲೀಗಲ್​ ನಾಲೆಡ್ಜ್​ ಇಲ್ಲದಿರಬಹುದು. ಅವರಿಗೆ ಈ ಪ್ರಕರಣದ ತೀವ್ರತೆ ಗೊತ್ತಿಲ್ಲ ಅನಿಸುತ್ತೆ. ಇಲ್ಲಿ ಗಂಭೀರ ತನಿಖೆ ನಡೆಯಬೇಕಾಗುತ್ತೆ ಎಂದು ಸಂತ್ರಸ್ತೆಯ ಪರ ವಕೀಲ ಜಗದೀಶ್ ಹೇಳಿದರು.

ತಮ್ಮ ನಿವಾಸದೆದುರು ಮಾತನಾಡಿದ ಅವರು, 164, 161ರಡಿ ದಾಖಲಾದ ಹೇಳಿಕೆಗಳನ್ನು ಇಟ್ಟುಕೊಂಡು ಐಒ ತನಿಖೆ ಮಾಡಬೇಕಾಗುತ್ತದೆ. ಅವರು ನಿಷ್ಪಕ್ಷಪಾತವಾಗಿ ಈ ತನಿಖೆ ಮಾಡಬೇಕಾಗುತ್ತದೆ. ಅವರು ಹಾಗೆಯೇ ತನಿಖೆ ಮಾಡ್ತಿದ್ದಾರೆಂದು ಭಾವಿಸುತ್ತೇನೆ ಎಂದರು.

ಸಂತ್ರಸ್ತೆಯ ಪರ ವಕೀಲ ಜಗದೀಶ್ ಮಾತನಾಡಿರುವುದು..

ಜನ ಸಾಮಾನ್ಯರಿಗೆ ಕೂಡಲೇ ಬಂಧಿಸಿ ತಮ್ಮ ಶಕ್ತಿ ತೋರಿಸುವ ಕರ್ನಾಟಕದ ಪೊಲೀಸರು, ಒಬ್ಬ ವಿಐಪಿಯನ್ನ ಕೂಡ ಅರೆಸ್ಟ್​ ಮಾಡಿ ತಮ್ಮ ಶಕ್ತಿ ಪ್ರದರ್ಶನ ಮಾಡಬೇಕಾಗುತ್ತದೆ. ಈ ಮೂಲಕ ಅವರು ಜನರಿಗೆ ನಂಬಿಕೆ ಕೊಡಬೇಕು.

ಜನಸಾಮಾನ್ಯರು ಒಂದು ಮಾಸ್ಕ್​ ಹಾಕಿಲ್ಲ ಅಂತ ಕರೆತಂದು ಅಪರಾಧಿ ತೋರಿಸುವಾಗ, ಈ ಕೇಸ್​ನಲ್ಲಿ ಆರೋಪಿ ನಾಲ್ಕು ದಿನ ಬಿಟ್ಟು ಬಂದು ಹೇಳಿಕೆ ಕೊಡುವೆ ಎಂದರೆ ಎಸ್​ಐಟಿ ಲಿಬರ್ಟಿ ಕೊಡುತ್ತೆ. ಅದೇ ಜನಸಾಮಾನ್ಯನಿಗೆ ಕೊಡುತ್ತಿದ್ದರಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಸಿಡಿ ತನಿಖೆ ಮುಗಿದ ಬಳಿಕ ಟೀಕೆ ಮಾಡಲಿ, ಈಗ ಟೀಕೆ ಮಾಡುವ ಅಗತ್ಯವಿಲ್ಲ: ಪ್ರವೀಣ್ ಸೂದ್

ಬೆಂಗಳೂರು : ಸಿಡಿ ಪ್ರಕರಣದ ಆರೋಪಿಗೆ ಲೀಗಲ್​ ನಾಲೆಡ್ಜ್​ ಇಲ್ಲದಿರಬಹುದು. ಅವರಿಗೆ ಈ ಪ್ರಕರಣದ ತೀವ್ರತೆ ಗೊತ್ತಿಲ್ಲ ಅನಿಸುತ್ತೆ. ಇಲ್ಲಿ ಗಂಭೀರ ತನಿಖೆ ನಡೆಯಬೇಕಾಗುತ್ತೆ ಎಂದು ಸಂತ್ರಸ್ತೆಯ ಪರ ವಕೀಲ ಜಗದೀಶ್ ಹೇಳಿದರು.

ತಮ್ಮ ನಿವಾಸದೆದುರು ಮಾತನಾಡಿದ ಅವರು, 164, 161ರಡಿ ದಾಖಲಾದ ಹೇಳಿಕೆಗಳನ್ನು ಇಟ್ಟುಕೊಂಡು ಐಒ ತನಿಖೆ ಮಾಡಬೇಕಾಗುತ್ತದೆ. ಅವರು ನಿಷ್ಪಕ್ಷಪಾತವಾಗಿ ಈ ತನಿಖೆ ಮಾಡಬೇಕಾಗುತ್ತದೆ. ಅವರು ಹಾಗೆಯೇ ತನಿಖೆ ಮಾಡ್ತಿದ್ದಾರೆಂದು ಭಾವಿಸುತ್ತೇನೆ ಎಂದರು.

ಸಂತ್ರಸ್ತೆಯ ಪರ ವಕೀಲ ಜಗದೀಶ್ ಮಾತನಾಡಿರುವುದು..

ಜನ ಸಾಮಾನ್ಯರಿಗೆ ಕೂಡಲೇ ಬಂಧಿಸಿ ತಮ್ಮ ಶಕ್ತಿ ತೋರಿಸುವ ಕರ್ನಾಟಕದ ಪೊಲೀಸರು, ಒಬ್ಬ ವಿಐಪಿಯನ್ನ ಕೂಡ ಅರೆಸ್ಟ್​ ಮಾಡಿ ತಮ್ಮ ಶಕ್ತಿ ಪ್ರದರ್ಶನ ಮಾಡಬೇಕಾಗುತ್ತದೆ. ಈ ಮೂಲಕ ಅವರು ಜನರಿಗೆ ನಂಬಿಕೆ ಕೊಡಬೇಕು.

ಜನಸಾಮಾನ್ಯರು ಒಂದು ಮಾಸ್ಕ್​ ಹಾಕಿಲ್ಲ ಅಂತ ಕರೆತಂದು ಅಪರಾಧಿ ತೋರಿಸುವಾಗ, ಈ ಕೇಸ್​ನಲ್ಲಿ ಆರೋಪಿ ನಾಲ್ಕು ದಿನ ಬಿಟ್ಟು ಬಂದು ಹೇಳಿಕೆ ಕೊಡುವೆ ಎಂದರೆ ಎಸ್​ಐಟಿ ಲಿಬರ್ಟಿ ಕೊಡುತ್ತೆ. ಅದೇ ಜನಸಾಮಾನ್ಯನಿಗೆ ಕೊಡುತ್ತಿದ್ದರಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಸಿಡಿ ತನಿಖೆ ಮುಗಿದ ಬಳಿಕ ಟೀಕೆ ಮಾಡಲಿ, ಈಗ ಟೀಕೆ ಮಾಡುವ ಅಗತ್ಯವಿಲ್ಲ: ಪ್ರವೀಣ್ ಸೂದ್

Last Updated : Apr 2, 2021, 1:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.