ಬೆಂಗಳೂರು: ಚರ್ಚ್ ಬಳಿ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ದುರುಳನನ್ನು ಅಶೋಕ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ವಿಲಿಯಮ್ ಪ್ರಕಾಶ್ ಬಂಧಿತ ಆರೋಪಿ.
ಈತ ಕಳೆದ ಸೆಪ್ಟೆಂಬರ್ 10ರ ಶನಿವಾರ ಶಾಂತಲಾ ನಗರದಲ್ಲಿ ಬಳಿ ಇರುವ ಸೆೇಂಟ್ ಚಾಪೆಲ್ ಚರ್ಚ್ನ ಲೈಟ್ ಆಫ್ ಮಾಡಲು ಹೋಗಿದ್ದ ಮಹಿಳೆಯ ಮೇಲೆ ಚಾಕು ತೋರಿಸಿ ಬಲಾತ್ಕಾರಕ್ಕೆ ಯತ್ನಿಸಿದ್ದ. ಆಕೆ ವಿರೋಧ ವ್ಯಕ್ತಪಡಿಸಿದಾಗ ಹಲ್ಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದನು. ಆರೋಪಿ ಬೆದರಿಸಿದ್ದ ಕಾರಣಕ್ಕೆ ಮಹಿಳೆ ಹಾಗೂ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಲು ಹಿಂದೇಟು ಹಾಕಿದ್ದರಂತೆ. ಈ ಪ್ರಕರಣ ಆಪ್ ಪಕ್ಷದ ಮುಖಂಡರಿಗೆ ತಿಳಿದು ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
ಚರ್ಚ್ನಲ್ಲಿ ಸಂತ್ರಸ್ತೆಯ ಪತಿ ಕೆಲಸ ಮಾಡುತ್ತಿದ್ದು, ಅಂದು ಪತಿಯ ಸೂಚನೆಯ ಮೇರೆಗೆ ಚರ್ಚ್ನಲ್ಲಿ ಲೈಟ್ ಆಫ್ ಮಾಡಲು ಮಹಿಳೆ ಅಲ್ಲಿಗೆ ಹೋಗಿದ್ದರಂತೆ. ಆಗ ವಿಲಿಯಂ ಮಹಿಳೆಯ ಮೇಲೆರಗಿದ್ದಾನೆ. ಸಹಾಯಕ್ಕಾಗಿ ಕೂಗಾಡಿದಾಗ ಹೆದರಿದ ಆರೋಪಿ ಗಣೇಶ ಮೆರವಣಿಗೆಯಲ್ಲಿ ಸೇರಿಕೊಂಡು ತಲೆಮರೆಸಿಕೊಂಡಿದ್ದ. ಘಟನೆ ನಡೆದು ಒಂದು ತಿಂಗಳ ಬಳಿಕ ವಿಲಿಯಂ ಪ್ರಕಾಶ್ನ ಬಂಧನವಾಗಿದೆ.
ಇದನ್ನೂ ಓದಿ: ಮಂಡ್ಯ ಅಪ್ರಾಪ್ತೆ ಅತ್ಯಾಚಾರ ಕೊಲೆ ಕೇಸ್: ಬಾಲಕಿ ಮನೆಗೆ ಭುವನ್, ಹರ್ಷಿಕಾ ಭೇಟಿ