ETV Bharat / state

ಈಗ ಸತ್ಯ ಏನು ಅಂತಾ ಜನರಿಗೆ ಗೊತ್ತಾಗಿದೆ: ಕೆ.ಜೆ.ಜಾರ್ಜ್​​

author img

By

Published : Nov 21, 2019, 7:18 PM IST

ಬಿಜೆಪಿ ರಾಜಕೀಯ ದ್ವೇಷದಿಂದ ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡಿತ್ತು. ಈಗ ಸಿಬಿಐ, ಕೋರ್ಟ್​ಗೆ ಬಿ ವರದಿ ಸಲ್ಲಿಸುವ ಮೂಲಕ ಸತ್ಯವನ್ನು ತಿಳಿಸಿದೆ ಎಂದು ಮಾಜಿ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

ಮಾಜಿ ಸಚಿವ ಕೆ.ಜೆ.ಜಾರ್ಜ್

ಬೆಂಗಳೂರು: ನನ್ನ ಬಗ್ಗೆ ಸಿಬಿಐ ಕೋರ್ಟ್​ಗೆ​ ಬಿ ರಿಪೋರ್ಟ್ ಸಲ್ಲಿಸಿದೆ. ನನ್ನ ಮೇಲೆ ಮಾಡಿದ್ದ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಮಾಜಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

ಮಾಜಿ ಸಚಿವ ಕೆ.ಜೆ.ಜಾರ್ಜ್

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಡಿವೈಎಸ್​​ಪಿ ಗಣಪತಿ ಪ್ರಕರಣದಲ್ಲಿ ಸಿಬಿಐನಿಂದ ಕೋರ್ಟ್​ಗೆ ಬಿ ರಿಪೋರ್ಟ್ ಸಲ್ಲಿಕೆ ವಿಚಾರ ಪ್ರಸ್ತಾಪಿಸಿ, ಬಿ.ಗಣಪತಿ ಮಾತ್ರವಲ್ಲ, ಡಿ.ಕೆ.ರವಿ ಕೇಸ್​ನಲ್ಲೂ ರಾಜಕೀಯ ದುರುದ್ದೇಶದಿಂದ ಆರೋಪ ಮಾಡಲಾಗಿತ್ತು ಎಂದರು. ಈಗ ಸತ್ಯ ಏನು ಅಂತ ಜನರಿಗೆ ಗೊತ್ತಾಗಿದೆ ಎಂದರು.

ಜೈಲಿನಲ್ಲಿರಬೇಕಾದವರು ಸಚಿವರಾಗಿದ್ದಾರೆ ಎಂದು ಪ್ರಧಾನಿ ಮೋದಿ ನನ್ನನ್ನು ಟೀಕಿಸಿದ್ದರು. ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಮಾಡಿದ ಬಿಜೆಪಿಗೆ ಈಗ ಉತ್ತರ ಸಿಕ್ಕಿದೆ.

ಕೆ.ಆರ್.ಪುರಂ ಉಪ ಚುನಾವಣೆ ಹಿನ್ನೆಲೆ ಕೆ.ಆರ್.ಪುರಂ ಕ್ಷೇತ್ರದ ಮುಖಂಡರ ಸಭೆ ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆಯಿತು. ಮಾಜಿ ಸಚಿವ ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ಉಮಾಶ್ರೀ, ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ, ನಾರಾಯಣಸ್ವಾಮಿ ಎಂಎಲ್​ಸಿ ಯು.ಬಿ.ವೆಂಕಟೇಶ್, ಸ್ಥಳೀಯ ಮುಖಂಡರು ಭಾಗಿಯಾಗಿದ್ದರು. ಚುನಾವಣೆ ಪ್ರಚಾರ, ತಂತ್ರಗಾರಿಕೆ ಕುರಿತು ಚರ್ಚಿಸಲಾಯಿತು.

ಬೆಂಗಳೂರು: ನನ್ನ ಬಗ್ಗೆ ಸಿಬಿಐ ಕೋರ್ಟ್​ಗೆ​ ಬಿ ರಿಪೋರ್ಟ್ ಸಲ್ಲಿಸಿದೆ. ನನ್ನ ಮೇಲೆ ಮಾಡಿದ್ದ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಮಾಜಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

ಮಾಜಿ ಸಚಿವ ಕೆ.ಜೆ.ಜಾರ್ಜ್

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಡಿವೈಎಸ್​​ಪಿ ಗಣಪತಿ ಪ್ರಕರಣದಲ್ಲಿ ಸಿಬಿಐನಿಂದ ಕೋರ್ಟ್​ಗೆ ಬಿ ರಿಪೋರ್ಟ್ ಸಲ್ಲಿಕೆ ವಿಚಾರ ಪ್ರಸ್ತಾಪಿಸಿ, ಬಿ.ಗಣಪತಿ ಮಾತ್ರವಲ್ಲ, ಡಿ.ಕೆ.ರವಿ ಕೇಸ್​ನಲ್ಲೂ ರಾಜಕೀಯ ದುರುದ್ದೇಶದಿಂದ ಆರೋಪ ಮಾಡಲಾಗಿತ್ತು ಎಂದರು. ಈಗ ಸತ್ಯ ಏನು ಅಂತ ಜನರಿಗೆ ಗೊತ್ತಾಗಿದೆ ಎಂದರು.

ಜೈಲಿನಲ್ಲಿರಬೇಕಾದವರು ಸಚಿವರಾಗಿದ್ದಾರೆ ಎಂದು ಪ್ರಧಾನಿ ಮೋದಿ ನನ್ನನ್ನು ಟೀಕಿಸಿದ್ದರು. ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಮಾಡಿದ ಬಿಜೆಪಿಗೆ ಈಗ ಉತ್ತರ ಸಿಕ್ಕಿದೆ.

ಕೆ.ಆರ್.ಪುರಂ ಉಪ ಚುನಾವಣೆ ಹಿನ್ನೆಲೆ ಕೆ.ಆರ್.ಪುರಂ ಕ್ಷೇತ್ರದ ಮುಖಂಡರ ಸಭೆ ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆಯಿತು. ಮಾಜಿ ಸಚಿವ ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ಉಮಾಶ್ರೀ, ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ, ನಾರಾಯಣಸ್ವಾಮಿ ಎಂಎಲ್​ಸಿ ಯು.ಬಿ.ವೆಂಕಟೇಶ್, ಸ್ಥಳೀಯ ಮುಖಂಡರು ಭಾಗಿಯಾಗಿದ್ದರು. ಚುನಾವಣೆ ಪ್ರಚಾರ, ತಂತ್ರಗಾರಿಕೆ ಕುರಿತು ಚರ್ಚಿಸಲಾಯಿತು.

Intro:newsBody:ಡಿಕೆ ರವಿ ಗಣಪತಿ ಎರಡೂ ಪ್ರಕರಣದ ಸತ್ಯವೇನೆಂದು ಜನರಿಗೆ ತಿಳಿದಿದೆ: ಜಾರ್ಜ್

ಬೆಂಗಳೂರು: ನನ್ನ ಬಗ್ಗೆ ಸಿಬಿಐ ಕೋರ್ಟ್ಗೆ ಬಿ- ರಿಪೋರ್ಟ್ ಸಲ್ಲಿಸಿದೆ. ಇದರಿಂದ ನಮಗೆ ತುಂಬಾ ಸಂತೋಷವಾಗಿದೆ. ನನ್ನ ಮೇಲೆ ಮಾಡಿದ್ದ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಮಾಜಿ ಸಚಿವ ಕೆ.ಜೆ. ಜಾರ್ಜ್ ಅಭಿಪ್ರಾಯ ಪಟ್ಟಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿ ಡಿವೈಎಸ್ ಪಿ ಗಣಪತಿ ಪ್ರಕರಣದಲ್ಲಿ ಸಿಬಿಐನಿಂದ ಕೋರ್ಟ್ ಗೆ ಬಿ- ರಿಪೋರ್ಟ್ ಸಲ್ಲಿಕೆ ವಿಚಾರ ಕುರಿತು ಪ್ರಸ್ತಾಪಿಸಿ, ಬಿ. ಗಣಪತಿ ಮಾತ್ರವಲ್ಲ, ಡಿ.ಕೆ ರವಿ ಕೇಸ್ ನಲ್ಲೂ ಇಲ್ಲಸಲ್ಲದ ಆರೋಪ ಮಾಡಿದ್ರು. ಈಗ ಸತ್ಯ ಏನು ಅಂತ ಜನರಿಗೆ ಗೊತ್ತಾಗಿದೆ. ಅವತ್ತು ಪ್ರಧಾನಿ ನರೇಂದ್ರ ಮೋದಿ ಅವರೇ ಬೆಂಗಳೂರಿಗೆ ಬಂದಿದ್ದಾಗ ನನ್ನ ಬಗ್ಗೆ ಮಾತನಾಡಿದ್ದರು. ಜೈಲಿನಲ್ಲಿರಬೇಕಾದವರು ಸಚಿವರಾಗಿದ್ದಾರೆ ಅಂದಿದ್ದರು. ಬಿಜೆಪಿಯವರೂ ನಿರಂತರ ಆರೋಪ ಮಾಡಿದ್ದರು. ನನ್ನನ್ನ ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಮಾಡಿದ್ದರು. ಈಗ ಎಲ್ಲವೂ ಬಯಲಾಗಿದೆ. ಅಂದು ಡಿಸ್ಕಷನ್ ನಲ್ಲಿ ಕೂತು ಮಾತನಾಡಿದ್ದವರು ಏನ್ ಹೇಳ್ತಾರೆ ಎಂದು ಪ್ರಶ್ನಿಸಿದರು.
ಅಂದು ಪಕ್ಷ ನನ್ನ ಹಿಂದೆ ನಿಂತಿತ್ತು. ನಮ್ಮ ನಾಯಕರು ನನ್ನ ಬೆಂಬಲಕ್ಕೆ ನಿಂತಿದ್ದರು. ಈಗ ಸಿಬಿಐ ನನ್ನ ಬಗ್ಗೆ ರಿಪೋರ್ಟ್ ಕೊಟ್ಟಿದೆ. ಇದಕ್ಕಿಂತ ಇನ್ನೇನು ಬೇಕು. ಅಲ್ಪಸಂಖ್ಯಾತನೆಂಬ ಕಾರಣಕ್ಕೆ ಬಿಜೆಪಿ ಟಾರ್ಗೆಟ್ ಮಾಡಿತೇ ಎಂಬ ಪ್ರಶ್ನೆಗೆ, ನಾನು ಅಲ್ಪಸಂಖ್ಯಾತನೆಂದು ಬೆಳೆದು ಬಂದವನಲ್ಲ. ಆದರೆ ಸುಖಾ ಸುಮ್ಮನೆ ನನ್ನನ್ನ ಟಾರ್ಗೆಟ್ ಮಾಡಿದ್ರು. ಎರಡೂ ಪ್ರಕರಣಗಳಲ್ಲೂ ನನಗೆ ನ್ಯಾಯ ಸಿಕ್ಕಿದೆ. ಇದಕ್ಕಿಂತ ಇನ್ನೇನು ಬೇಕು ಎಂದರು.
ಕೆಪಿಸಿಸಿ ಸಭೆ
ಕೆ.ಆರ್.ಪುರಂ ಉಪಚುನಾವಣೆ ಹಿನ್ನೆಲೆ ಕೆ.ಆರ್.ಪುರಂ ಕ್ಷೇತ್ರದ ಮುಖಂಡರ ಸಭೆ ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆಯಿತು. ಮಾಜಿ ಸಚಿವ ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ಉಮಾಶ್ರೀ, ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ, ನಾರಾಯಣಸ್ವಾಮಿ ಎಂಎಲ್ ಸಿ ಯು.ಬಿ.ವೆಂಕಟೇಶ್,ಸ್ಥಳೀಯ ಮುಖಂಡರು ಭಾಗಿಯಾಗಿದ್ದರು. ಚುನಾವಣೆ ಪ್ರಚಾರ, ತಂತ್ರಗಾರಿಕೆ ಕುರಿತು ಚರ್ಚೆ ನಡೆಯಿತು.
Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.