ETV Bharat / state

ಕಾರ್ಮಿಕ ಇಲಾಖೆ ಮೇಲೆ‌ ಎಸಿಬಿ ದಾಳಿ ಪ್ರಕರಣ : 10ಕ್ಕೂ ಹೆಚ್ಚು ಅಧಿಕಾರಿಗಳ ಹೇಳಿಕೆ ಪಡೆದ ಎಸಿಬಿ

author img

By

Published : Sep 8, 2021, 5:31 PM IST

ಪತ್ತೆಯಾಗಿರುವ ಹಣಕ್ಕೆ‌ ಈವರೆಗೂ ಪೂರಕ ದಾಖಲೆ ಸಿಕ್ಕಿಲ್ಲ. ಈ ಸಂಬಂಧ ಹಣ ದೊರೆತಿರುವ ಅಧಿಕಾರಿಗಳು ಸೇರಿದಂತೆ ಕಾರ್ಮಿಕ ಭವನದಲ್ಲಿ ಕೆಲಸ ಮಾಡುವ ಹಿರಿಯ ಹಾಗೂ ಕಿರಿಯ ಕಾರ್ಮಿಕ ನಿರೀಕ್ಷಕರು ಸೇರಿ ಹತ್ತಕ್ಕಿಂತ ಹೆಚ್ಚು ಮಂದಿ ಅಧಿಕಾರಿಗಳಿಂದ ಹೇಳಿಕೆ ಪಡೆದುಕೊಳ್ಳಲಾಗಿದೆ. ಹೇಳಿಕೆ ಅಸಲಿತನ ಬಗ್ಗೆ ತನಿಖೆ ಮಾಡಲಾಗುತ್ತಿದ್ದು, ತಪ್ಪಿತಸ್ಥರು ಎಂದು ಕಂಡು ಬಂದರೆ ಕಾನೂನು ಪ್ರಕಾರ ಬಂಧಿಸಲಾಗುವುದು ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ‌..

ಕಾರ್ಮಿಕ ಇಲಾಖೆ ಮೇಲೆ‌ ಎಸಿಬಿ ದಾಳಿ ಪ್ರಕರಣ
ಕಾರ್ಮಿಕ ಇಲಾಖೆ ಮೇಲೆ‌ ಎಸಿಬಿ ದಾಳಿ ಪ್ರಕರಣ

ಬೆಂಗಳೂರು : ಖಾಸಗಿ ಮಧ್ಯವರ್ತಿಗಳ ನೆರವಿನಿಂದ ತಮ್ಮ ವ್ಯಾಪ್ತಿಗೆ ಬರುವ ಕಾರ್ಖಾನೆ ಹಾಗೂ ಸೆಕ್ಯೂರಿಟಿ ಏಜೆನ್ಸಿ ಮಾಲೀಕರಿಂದ ಲಂಚ ಪಡೆಯುತ್ತಿದ್ದ ಆರೋಪದ ಮೇರೆಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕಾರ್ಮಿಕ ಇಲಾಖೆಯ ಮೇಲೆ ದಾಳಿ ಮಾಡಿತ್ತು. ಈ ಪ್ರಕರಣ ಸಂಬಂಧ ನೋಟಿಸ್ ನೀಡಿ 10ಕ್ಕಿಂತ ಹೆಚ್ಚು ಮಂದಿ ಅಧಿಕಾರಿಗಳ ಹೇಳಿಕೆ ದಾಖಲಿಸಿಕೊಂಡಿದೆ‌.

ಡೈರಿ ಸರ್ಕಲ್ ಬಳಿಯಿರುವ ಕಾರ್ಮಿಕ ಭವನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಿರಿಯ ಅಧಿಕಾರಿಗಳು, ಖಾಸಗಿ ಮಧ್ಯವರ್ತಿಗಳ ಮೂಲಕ ಕಾರ್ಖಾನೆ ಮಾಲೀಕರು, ಬೃಹತ್ ಮಳಿಗೆಗಳು, ಸೆಕ್ಯೂರಿಟಿ ಏಜೆನ್ಸಿ, ಖಾಸಗಿ ಕಚೇರಿಗಳ ಮೇಲ್ವಿಚಾರಕರು, ಹೋಟೆಲ್, ಒಳಾಂಗಣ ವಿನ್ಯಾಸ ಹಾಗೂ ಕಟ್ಟಡ ಕಾರ್ಮಿಕರು ಹೊಂದಿರುವ ಹಾಗೂ ತಮ್ಮ ವ್ಯಾಪ್ತಿಗೆ ಬರುವ ಸ್ಥಳಕ್ಕೆ ಭೇಟಿ ನೀಡಿ ದಾಖಲಾತಿ ನಿರ್ವಹಣೆ ಸರಿಯಿಲ್ಲ ಎಂದು ಹೇಳಿ ಮಾಲೀಕರಿಗೆ ನೀಡಿ ಅವರಿಂದ ಅಕ್ರಮವಾಗಿ ಅಧಿಕಾರಿಗಳು ಲಂಚ ಪಡೆಯುತ್ತಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

ಖಚಿತ ಮಾಹಿತಿ ಮೇರೆಗೆ ನಿನ್ನೆ ಎಸಿಬಿ ಡಿವೈಎಸ್‌ಪಿ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ಎಂಟು ಮಂದಿ ಇನ್ಸ್‌ಪೆಕ್ಟರ್ ಸೇರಿ 30ಕ್ಕೂ ಹೆಚ್ಚು ಅಧಿಕಾರಿಗಳಿಂದ ಕಾರ್ಮಿಕ ಭವನದಲ್ಲಿನ ಎಂಟು ಕಚೇರಿಗಳ ಮೇಲೆ ಏಕ ಕಾಲದಲ್ಲಿ ದಾಳಿ ನಡೆಸಿ ಶೋಧ ನಡೆಸಿತ್ತು.

ದಾಳಿ ವೇಳೆ ಪೂರಕ ದಾಖಲೆ ಇಲ್ಲದ 1 ಲಕ್ಷಕ್ಕಿಂತ ಹೆಚ್ಚು ಹಣ ಪತ್ತೆಯಾಗಿತ್ತು. ದಾಳಿಯಲ್ಲಿ ಅಧಿಕಾರಿಗಳ ಹಾಗೂ ಸಿಬ್ಬಂದಿ ಪಾತ್ರದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಸಂಬಂಧಿಸಿದ ಅಧಿಕಾರಿಗಳಿಗೆ ಇಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ ಮೇರೆಗೆ ಎಸಿಬಿ ತನಿಖಾಧಿಕಾರಿಗಳ ಮುಂದೆ ಅಧಿಕಾರಿಗಳು ಹಾಜರಾಗಿದ್ದಾರೆ.

ಸರ್ಕಾರಿ ಕಚೇರಿಗಳಲ್ಲಿ ಕರ್ತವ್ಯನಿರ್ವಹಿಸುವ ಅಧಿಕಾರಿ ಅಥವಾ ಸಿಬ್ಬಂದಿ ದಂಡ ಅಥವಾ ಇನ್ನಿತರ ರೂಪಗಳಲ್ಲಿ ಸಂಗ್ರಹಿಸಲಾಗುವ ಹಣವನ್ನು ಆಯಾ ದಿನದ ಕರ್ತವ್ಯ ಮುಗಿದ ಬಳಿಕ ಸಂಬಂಧಿಸಿದ ನೋಂದಣಿ ಪುಸ್ತಕದಲ್ಲಿ ನಮೂದಿಸಬೇಕು. ಆದರೆ, ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಈ ನಿಯಮ‌ ಪಾಲನೆಯಾಗುತ್ತಿಲ್ಲ.

ಪತ್ತೆಯಾಗಿರುವ ಹಣಕ್ಕೆ‌ ಈವರೆಗೂ ಪೂರಕ ದಾಖಲೆ ಸಿಕ್ಕಿಲ್ಲ. ಈ ಸಂಬಂಧ ಹಣ ದೊರೆತಿರುವ ಅಧಿಕಾರಿಗಳು ಸೇರಿದಂತೆ ಕಾರ್ಮಿಕ ಭವನದಲ್ಲಿ ಕೆಲಸ ಮಾಡುವ ಹಿರಿಯ ಹಾಗೂ ಕಿರಿಯ ಕಾರ್ಮಿಕ ನಿರೀಕ್ಷಕರು ಸೇರಿ ಹತ್ತಕ್ಕಿಂತ ಹೆಚ್ಚು ಮಂದಿ ಅಧಿಕಾರಿಗಳಿಂದ ಹೇಳಿಕೆ ಪಡೆದುಕೊಳ್ಳಲಾಗಿದೆ. ಹೇಳಿಕೆ ಅಸಲಿತನ ಬಗ್ಗೆ ತನಿಖೆ ಮಾಡಲಾಗುತ್ತಿದ್ದು, ತಪ್ಪಿತಸ್ಥರು ಎಂದು ಕಂಡು ಬಂದರೆ ಕಾನೂನು ಪ್ರಕಾರ ಬಂಧಿಸಲಾಗುವುದು ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ‌.

ಬೆಂಗಳೂರು : ಖಾಸಗಿ ಮಧ್ಯವರ್ತಿಗಳ ನೆರವಿನಿಂದ ತಮ್ಮ ವ್ಯಾಪ್ತಿಗೆ ಬರುವ ಕಾರ್ಖಾನೆ ಹಾಗೂ ಸೆಕ್ಯೂರಿಟಿ ಏಜೆನ್ಸಿ ಮಾಲೀಕರಿಂದ ಲಂಚ ಪಡೆಯುತ್ತಿದ್ದ ಆರೋಪದ ಮೇರೆಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕಾರ್ಮಿಕ ಇಲಾಖೆಯ ಮೇಲೆ ದಾಳಿ ಮಾಡಿತ್ತು. ಈ ಪ್ರಕರಣ ಸಂಬಂಧ ನೋಟಿಸ್ ನೀಡಿ 10ಕ್ಕಿಂತ ಹೆಚ್ಚು ಮಂದಿ ಅಧಿಕಾರಿಗಳ ಹೇಳಿಕೆ ದಾಖಲಿಸಿಕೊಂಡಿದೆ‌.

ಡೈರಿ ಸರ್ಕಲ್ ಬಳಿಯಿರುವ ಕಾರ್ಮಿಕ ಭವನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಿರಿಯ ಅಧಿಕಾರಿಗಳು, ಖಾಸಗಿ ಮಧ್ಯವರ್ತಿಗಳ ಮೂಲಕ ಕಾರ್ಖಾನೆ ಮಾಲೀಕರು, ಬೃಹತ್ ಮಳಿಗೆಗಳು, ಸೆಕ್ಯೂರಿಟಿ ಏಜೆನ್ಸಿ, ಖಾಸಗಿ ಕಚೇರಿಗಳ ಮೇಲ್ವಿಚಾರಕರು, ಹೋಟೆಲ್, ಒಳಾಂಗಣ ವಿನ್ಯಾಸ ಹಾಗೂ ಕಟ್ಟಡ ಕಾರ್ಮಿಕರು ಹೊಂದಿರುವ ಹಾಗೂ ತಮ್ಮ ವ್ಯಾಪ್ತಿಗೆ ಬರುವ ಸ್ಥಳಕ್ಕೆ ಭೇಟಿ ನೀಡಿ ದಾಖಲಾತಿ ನಿರ್ವಹಣೆ ಸರಿಯಿಲ್ಲ ಎಂದು ಹೇಳಿ ಮಾಲೀಕರಿಗೆ ನೀಡಿ ಅವರಿಂದ ಅಕ್ರಮವಾಗಿ ಅಧಿಕಾರಿಗಳು ಲಂಚ ಪಡೆಯುತ್ತಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

ಖಚಿತ ಮಾಹಿತಿ ಮೇರೆಗೆ ನಿನ್ನೆ ಎಸಿಬಿ ಡಿವೈಎಸ್‌ಪಿ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ಎಂಟು ಮಂದಿ ಇನ್ಸ್‌ಪೆಕ್ಟರ್ ಸೇರಿ 30ಕ್ಕೂ ಹೆಚ್ಚು ಅಧಿಕಾರಿಗಳಿಂದ ಕಾರ್ಮಿಕ ಭವನದಲ್ಲಿನ ಎಂಟು ಕಚೇರಿಗಳ ಮೇಲೆ ಏಕ ಕಾಲದಲ್ಲಿ ದಾಳಿ ನಡೆಸಿ ಶೋಧ ನಡೆಸಿತ್ತು.

ದಾಳಿ ವೇಳೆ ಪೂರಕ ದಾಖಲೆ ಇಲ್ಲದ 1 ಲಕ್ಷಕ್ಕಿಂತ ಹೆಚ್ಚು ಹಣ ಪತ್ತೆಯಾಗಿತ್ತು. ದಾಳಿಯಲ್ಲಿ ಅಧಿಕಾರಿಗಳ ಹಾಗೂ ಸಿಬ್ಬಂದಿ ಪಾತ್ರದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಸಂಬಂಧಿಸಿದ ಅಧಿಕಾರಿಗಳಿಗೆ ಇಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ ಮೇರೆಗೆ ಎಸಿಬಿ ತನಿಖಾಧಿಕಾರಿಗಳ ಮುಂದೆ ಅಧಿಕಾರಿಗಳು ಹಾಜರಾಗಿದ್ದಾರೆ.

ಸರ್ಕಾರಿ ಕಚೇರಿಗಳಲ್ಲಿ ಕರ್ತವ್ಯನಿರ್ವಹಿಸುವ ಅಧಿಕಾರಿ ಅಥವಾ ಸಿಬ್ಬಂದಿ ದಂಡ ಅಥವಾ ಇನ್ನಿತರ ರೂಪಗಳಲ್ಲಿ ಸಂಗ್ರಹಿಸಲಾಗುವ ಹಣವನ್ನು ಆಯಾ ದಿನದ ಕರ್ತವ್ಯ ಮುಗಿದ ಬಳಿಕ ಸಂಬಂಧಿಸಿದ ನೋಂದಣಿ ಪುಸ್ತಕದಲ್ಲಿ ನಮೂದಿಸಬೇಕು. ಆದರೆ, ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಈ ನಿಯಮ‌ ಪಾಲನೆಯಾಗುತ್ತಿಲ್ಲ.

ಪತ್ತೆಯಾಗಿರುವ ಹಣಕ್ಕೆ‌ ಈವರೆಗೂ ಪೂರಕ ದಾಖಲೆ ಸಿಕ್ಕಿಲ್ಲ. ಈ ಸಂಬಂಧ ಹಣ ದೊರೆತಿರುವ ಅಧಿಕಾರಿಗಳು ಸೇರಿದಂತೆ ಕಾರ್ಮಿಕ ಭವನದಲ್ಲಿ ಕೆಲಸ ಮಾಡುವ ಹಿರಿಯ ಹಾಗೂ ಕಿರಿಯ ಕಾರ್ಮಿಕ ನಿರೀಕ್ಷಕರು ಸೇರಿ ಹತ್ತಕ್ಕಿಂತ ಹೆಚ್ಚು ಮಂದಿ ಅಧಿಕಾರಿಗಳಿಂದ ಹೇಳಿಕೆ ಪಡೆದುಕೊಳ್ಳಲಾಗಿದೆ. ಹೇಳಿಕೆ ಅಸಲಿತನ ಬಗ್ಗೆ ತನಿಖೆ ಮಾಡಲಾಗುತ್ತಿದ್ದು, ತಪ್ಪಿತಸ್ಥರು ಎಂದು ಕಂಡು ಬಂದರೆ ಕಾನೂನು ಪ್ರಕಾರ ಬಂಧಿಸಲಾಗುವುದು ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.