ETV Bharat / state

ಸಿಗರೇಟ್​ ಸೇದ್ಬೇಡಿ ಎಂದಿದ್ದಕ್ಕೆ ಜಿಮ್​ ಟ್ರೇನರ್​ನನ್ನು ಹಿಗ್ಗಾಮುಗ್ಗಾ ಹೊಡೆದ ಗ್ಯಾಂಗ್​ - J W Marriott building

ಸಿಗರೇಟ್​ ಹೊಗೆ ಬಿಡಬೇಡಿ ಎಂದಿದ್ದಕ್ಕೆ ಆಕ್ರೋಶಗೊಂಡ ರೌಡಿ ಗ್ಯಾಂಗ್​ವೊಂದು ಯುವಕನ ಮೇಲೆ ಏಕಾಏಕಿ ದಾಳಿ ಮಾಡಿ ಮನಬಂದಂತೆ ಥಳಿಸಿದ ಘಟನೆ ನಗರದಲ್ಲಿ ನಡೆದಿದೆ.

ಜಿಮ್ ಟ್ರೈನರ್ ನವೀನ್
author img

By

Published : Aug 6, 2019, 3:21 AM IST

ಬೆಂಗಳೂರು: ಸಿಗರೇಟ್​ ಹೊಗೆ ಬಿಡಬೇಡಿ ಎಂದಿದ್ದಕ್ಕೆ ಆಕ್ರೋಶಗೊಂಡ ರೌಡಿ ಗ್ಯಾಂಗ್​ವೊಂದು ಯುವಕನ ಮೇಲೆ ಏಕಾಏಕಿ ದಾಳಿ ಮಾಡಿ ಮನಬಂದಂತೆ ಥಳಿಸಿದ ಘಟನೆ ನಗರದಲ್ಲಿ ನಡೆದಿದೆ.

ಹಲ್ಲೆಗೊಳಗಾದ ನವೀನ್ ದಾವಣಗೆರೆ ನಿವಾಸಿಯಾಗಿದ್ದು, ಬೆಂಗಳೂರಿನ ಜೆ ಪಿ ನಗರದ ಜಿಮ್​ವೊಂದರಲ್ಲಿ ಟ್ರೇನರ್​ ಆಗಿ ಕೆಲಸ ಮಾಡುತ್ತಿದ್ದರು. ನಗರದ ರಿಂಗ್ ರಸ್ತೆಯ ಜೆ. ಡಬ್ಲೂ ಮ್ಯಾರಿಯೇಟ್ ಬಿಲ್ಡಿಂಗ್ ಟೆರೇಸ್​ನಲ್ಲಿರುವ ನಜಾರ ಪಬ್​ನಲ್ಲಿ ಡಿ ಜೆ ಪಾರ್ಟಿ ಆಯೋಜಿಸಲಾಗಿತ್ತು.

ನವೀನ್ ಸ್ನೇಹಿತ ಜೊತೆ ಪಾರ್ಟಿಯಲ್ಲಿ ಭಾಗಿಯಾಗಿದ್ದರು, ಈ ವೇಳೆ ಆರೋಪಿ ಪ್ರಶಾಂತ್ ಗೌಡ ಸಿಗರೇಟ್ ಸೇದಿಕೊಂಡು ಡ್ಯಾನ್ಸ್ ಮಾಡುತ್ತಿದ್ದ ವೇಳೆ ನವೀನ್ ಕೈಗೆ ತಾಗಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನವೀನ್ ಪಕ್ಕಕ್ಕೆ ಹೋಗಿ ಸಿಗರೇಟ್ ಸೇದಿ ಎಂದು ಸ್ವಲ್ಪ ತಳ್ಳಿದ್ದರಂತೆ.

ಇದನ್ನೆ ನೆಪಮಾಡಿಕೊಂಡ ಪ್ರಶಾಂತ್ ತನ್ನ ಗೆಳೆಯರೊಂದಿಗೆ ಸೇರಿ ನವೀನ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಸದ್ಯ ನವೀನ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ತಮಗೆ ಜೀವ ಬೆದರಿಕೆಯಿದ್ದು ರಕ್ಷಣೆ ನೀಡುವಂತೆ ಪೊಲೀಸರಲ್ಲಿ ನವೀನ್ ಮನವಿ ಮಾಡಿದ್ದಾರೆ.

ಬೆಂಗಳೂರು: ಸಿಗರೇಟ್​ ಹೊಗೆ ಬಿಡಬೇಡಿ ಎಂದಿದ್ದಕ್ಕೆ ಆಕ್ರೋಶಗೊಂಡ ರೌಡಿ ಗ್ಯಾಂಗ್​ವೊಂದು ಯುವಕನ ಮೇಲೆ ಏಕಾಏಕಿ ದಾಳಿ ಮಾಡಿ ಮನಬಂದಂತೆ ಥಳಿಸಿದ ಘಟನೆ ನಗರದಲ್ಲಿ ನಡೆದಿದೆ.

ಹಲ್ಲೆಗೊಳಗಾದ ನವೀನ್ ದಾವಣಗೆರೆ ನಿವಾಸಿಯಾಗಿದ್ದು, ಬೆಂಗಳೂರಿನ ಜೆ ಪಿ ನಗರದ ಜಿಮ್​ವೊಂದರಲ್ಲಿ ಟ್ರೇನರ್​ ಆಗಿ ಕೆಲಸ ಮಾಡುತ್ತಿದ್ದರು. ನಗರದ ರಿಂಗ್ ರಸ್ತೆಯ ಜೆ. ಡಬ್ಲೂ ಮ್ಯಾರಿಯೇಟ್ ಬಿಲ್ಡಿಂಗ್ ಟೆರೇಸ್​ನಲ್ಲಿರುವ ನಜಾರ ಪಬ್​ನಲ್ಲಿ ಡಿ ಜೆ ಪಾರ್ಟಿ ಆಯೋಜಿಸಲಾಗಿತ್ತು.

ನವೀನ್ ಸ್ನೇಹಿತ ಜೊತೆ ಪಾರ್ಟಿಯಲ್ಲಿ ಭಾಗಿಯಾಗಿದ್ದರು, ಈ ವೇಳೆ ಆರೋಪಿ ಪ್ರಶಾಂತ್ ಗೌಡ ಸಿಗರೇಟ್ ಸೇದಿಕೊಂಡು ಡ್ಯಾನ್ಸ್ ಮಾಡುತ್ತಿದ್ದ ವೇಳೆ ನವೀನ್ ಕೈಗೆ ತಾಗಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನವೀನ್ ಪಕ್ಕಕ್ಕೆ ಹೋಗಿ ಸಿಗರೇಟ್ ಸೇದಿ ಎಂದು ಸ್ವಲ್ಪ ತಳ್ಳಿದ್ದರಂತೆ.

ಇದನ್ನೆ ನೆಪಮಾಡಿಕೊಂಡ ಪ್ರಶಾಂತ್ ತನ್ನ ಗೆಳೆಯರೊಂದಿಗೆ ಸೇರಿ ನವೀನ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಸದ್ಯ ನವೀನ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ತಮಗೆ ಜೀವ ಬೆದರಿಕೆಯಿದ್ದು ರಕ್ಷಣೆ ನೀಡುವಂತೆ ಪೊಲೀಸರಲ್ಲಿ ನವೀನ್ ಮನವಿ ಮಾಡಿದ್ದಾರೆ.

ವಿದ್ವತ್ ಮೇಲೆ‌ ನಲಪಾಡ್ ಗ್ಯಾಂಗ್ ಮಾದರಿಯಲ್ಲೇ ಹಲ್ಲೆ: ಸಿಗರೇಟು ಹೊಗೆ ಬಿಡಬೇಡಿ ಎಂದಿದಕ್ಕೆ ಗ್ಯಾಂಗ್ ಕಟ್ಟಿ ಹಲ್ಲೆ

ಬೆಂಗಳೂರು: ದೇಶದಲ್ಲೆ ಬೆಚ್ಚಿ ಬೀಳಿಸಿದ್ದ ನಲಪಾಡ್ ಗ್ಯಾಂಗ್ ಹಲ್ಲೆ ಮಾಡಿದ ಮಾದರಿಯಲ್ಲಿ ರಾಜ್ಯ ರಾಜಧಾನಿಯಲ್ಲಿ ಗ್ಯಾಂಗ್ ಕಟ್ಟಿಕೊಂಡ ಗುಂಪೊಂದು ಕ್ಲಬ್ ನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಯುವಕನೊಬ್ಬನಿಗೆ ಮಾರಣಾಂತಿಕ ಹಲ್ಲೆ ನಡೆಸಿದೆ.

ಸಿಗರೇಟು ಹೊಗೆ ಬಿಡಬೇಡಿ ಎಂದು ಎಂದಿದ್ದಕ್ಕೆ ಅಕ್ರೋಶಗೊಂಡ ರೌಡಿ ಗ್ಯಾಂಗ್ ಯುವಕನ ಮೇಲೆ ಏಕಾಏಕಿ ದಾಳಿ ಮಾಡಿ ಮನಬಂದಂತೆ ಥಳಿಸಿದ್ದಾರೆ.
 ನವೀನ್ ಬೆಳ್ಳುಂಡಿ ವಿರೇಶ್ ಹಲ್ಲೆಗೊಳ್ಳಗಾದ ದುದೈರ್ವಿ.
ಆರೋಪಿಗಳಾದ ಪ್ರಶಾಂತ್ ಗೌಡ, ಅರುಣ್ ಗೌಡ, ಶ್ರೀನಿಧಿ, ಪ್ರಜ್ವಲ್ ಎಂಬುವರ ವಿರುದ್ದ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾವಣಗೆರೆ ಮೂಲದ ನವೀನ್ ನಗರದ ಜೆ.ಪಿ.ನಗರದಲ್ಲಿ ವಾಸವಾಗಿದ್ದು ಜೀವನಕ್ಕಾಗಿ ಜಿಮ್ ವೊಂದರಲ್ಲಿ ಟ್ರೈನಿಂಗ್ ನೀಡುವ ಕೆಲಸ ಮಾಡುತ್ತಿದ್ದ. ಕಳೆದ ಶನಿವಾರ ಮಧ್ಯರಾತ್ರಿ ಹಿಂದೆ ಸ್ನೇಹಿತರ ಜೊತೆಗೂಡಿ ಅಮೃತಹಳ್ಳಿ ಪೊಲೀಸ್ ಟಾಣೆ ವ್ಯಾಪ್ತಿಯ ಹೆಬ್ಬಾಳ  ರಿಂಗ್ ರಸ್ತೆಯಲ್ಲಿರುವ ಜೆ.ಡಬ್ಲೂ.ಮ್ಯಾರಿಯೇಟ್ ಬಿಲ್ಡಿಂಗ್ ಟೆರೇಸ್ ನಲ್ಲಿರುವ ನಜಾರ ಪಬ್ ನಲ್ಲಿ ಪಾರ್ಟಿ ಇತ್ತು.
ಬೂಮ್ ಬಾಕ್ಸ್ ಕ್ಲಬ್ ನ  ಡಿ.ಜೆ.ಮ್ಯೂಸಿಕ್ ಪಾರ್ಟಿ ಆಯೋಜಿಸಿತ್ತು. 
ಹಲ್ಲೆಗೊಳಗಾದ ಜಿಮ್ ಟ್ರೈನರ್ ನವೀನ್ ಬೆಳ್ಳುಡ್ಡಿ ಸ್ನೇಹಿತ ಸಚಿನ್ ಕುಮಾರ್, ಪ್ರಶಾಂತ್ ಜೊತೆ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಆರೋಪಿ ಪ್ರಶಾಂತ್ ಗೌಡ ಸಿಗರೇಟ್ ಸೇದಿಕೊಂಡು ಡ್ಯಾನ್ ಆಡುತ್ತಿದ್ದ ವೇಳೆ ಎರಡು ಮೂರು ಸಲ ಸಿಗರೇಟ್ ನವೀನ್ ಬೆಳ್ಳುಡ್ಡಿಗೆ ತಗುಲಿದೆ.‌ ಇದಕ್ಕೆ ಆಕ್ಷೇಪ ವ್ಯಕ್ತಿಪಡಿಸಿದ ನವೀನ್ ಪಕ್ಕಕ್ಕೆ ಹೋಗಿ ಸಿಗರೇಟ್ ಸೇದಿ ಎಂದು ಪ್ರಶಾತ್ ಗೆ ಹೇಳಿ ಸ್ವಲ್ಪ ತಳ್ಳಿದ್ದಾರೆ. ಇದನ್ನೇ  ನೆಪ ಮಾಡಿಕೊಂಡ ಪ್ರಶಾಂತ್ ತನ್ನ ಐದಾರು ಜನ ಸ್ನೇಹಿತರೊಂದಿಗೆ ಸೇರಿ ನವೀನ್ ಮೇಳೆ ಕೈಕಾಲುಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ವೇಳೆ ನವೀನ್ ಸ್ನೇಹಿತರು ಗಲಾಟೆ ಬಿಡಿಸಿ ಹೊರಬಂದರೂ ಮತ್ತೆ ಆರೋಪಿಗಳು ಹಲ್ಲೆ ಮಾಡಿದ್ದು ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿಗಳು ತಲೆಮರೆಸಿಕೊಂಡಿದ್ದು, ತಮಗೆ ಜೀವ ಬೆದರಿಕೆವೊಡ್ಡಿದ್ದಾರೆ‌. ಹೀಗಾಗಿ ತಮಗೆ ರಕ್ಷಣೆ ನೀಡಬೇಕೆಂದು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.


ETV Bharat Logo

Copyright © 2025 Ushodaya Enterprises Pvt. Ltd., All Rights Reserved.