ETV Bharat / state

ಯಶವಂತಪುರ ರಣಕಣದಲ್ಲಿ ಗಾಂಧಿವಾದಿ ಪಕ್ಷೇತರ ಅಭ್ಯರ್ಥಿ ವಿಶೇಷ ಪ್ರಚಾರ...!

author img

By

Published : Nov 19, 2019, 5:56 PM IST

ಯಶವಂತಪುರ ಉಪಚುನಾವಣೆಗೆ ಶಂಭುಲಿಂಗೇಗೌಡ ಎಂಬ ಅಪ್ಪಟ ಗಾಂಧಿವಾದಿ ಯಶವಂತಪುರ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಯಶವಂತಪುರ ರಣಕಣದಲ್ಲಿ ಗಾಂಧಿವಾದಿ ಸ್ಪರ್ಧೆ

ಬೆಂಗಳೂರು:ಯಶವಂತಪುರ ಕ್ಷೇತ್ರ ಈ ಬಾರಿ ಬಿಜೆಪಿ ಮತ್ತು ಜೆಡಿಎಸ್ ನಡುವಿನ ಜಿದ್ದಾಜಿದ್ದಿನ ಕಣ. ಈ ರಣಕಣದಲ್ಲಿ ಗಾಂಧಿವಾದಿಯೊಬ್ಬರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ‌.
ಶಂಭುಲಿಂಗೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿಯವರಾದ 59 ವಯಸ್ಸಿನ ಇವರು ಯಶವಂತಪುರ ಉಪಸಮರದಲ್ಲಿನ ಸ್ಪೆಷಲ್ ಕ್ಯಾಂಡಿಡೇಟ್ ಆಗಿದ್ದಾರೆ. ಗಾಂಧಿ ತತ್ವ, ಸಿದ್ಧಾಂತಗಳನ್ನು ಮೈಗೂಡಿಸಿಕೊಂಡಿರುವ ಶಂಭುಲಿಂಗೇಗೌಡ ಗಾಂಧಿ ವೇಷ, ಕೈಯಲ್ಲಿ ಕೋಲು ಹಿಡಿದು ಪ್ರಸಕ್ತ ರಾಜಕೀಯ ವ್ಯವಸ್ಥೆ ಬದಲಾಯಿಸುವ ಉದ್ದೇಶದೊಂದಿಗೆ ಗಾಂಧಿ ಗೆಟಪ್‌ನಲ್ಲಿ ಚುನಾವಣಾ ರಣಕಣಕ್ಕಿಳಿದಿದ್ದಾರೆ. ನಿನ್ನೆ ನಾಮಪತ್ರ ಸಲ್ಲಿಸುವ ವೇಳೆಯೂ ಒಬ್ಬಂಟಿಯಾಗಿ ಬಂದಿದ್ದ ಶಂಭುಲಿಂಗೇಗೌಡರು, ಗಾಂಧಿ ಗೆಟಪ್‌ನಲ್ಲಿ ಆಗಮಿಸಿ, ಹೇರೋಹಳ್ಳಿಯ ಪಾಲಿಕೆ ಕಚೇರಿಯಲ್ಲಿ ತಮ್ಮ ನಾಮಪತ್ರ ಸಲ್ಲಿಸಿದರು‌. ಈವರೆಗೆ ಸುಮಾರು 20 ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಇವರು ಕಣಕ್ಕಿಳಿದಿದ್ದಾರೆ.

ಯಶವಂತಪುರ ರಣಕಣದಲ್ಲಿ ಗಾಂಧಿವಾದಿ ಸ್ಪರ್ಧೆ..

ಇಂದು ಗಾಂಧಿ ಗೆಟಪ್​​ನಲ್ಲಿ ಶಂಭುಲಿಂಗೇಗೌಡರು ಟಿವಿಎಸ್ ಮೊಪೆಡ್‌ನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಪ್ರಚಾರ ನಡೆಸುತ್ತಿದ್ದಾರೆ. ಯಶವಂತಪುರ ವಿಧಾನಸಭಾ ಕ್ಷೇತ್ರದಾದ್ಯಂತ ಗಾಂಧಿ ವೇಷ ತೊಟ್ಟು, ಕನ್ನಡ ಬಾವುಟ ಕಟ್ಟಿಕೊಂಡು, ತನ್ನ ಪರ ತಾವೇ ಒಬ್ಬಂಟಿಯಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರಾಮಾಣಿಕವಾಗಿ ಎಲ್ಲಿ ತನಕ‌ ಅಭ್ಯರ್ಥಿಗಳು ಗೆಲ್ಲುವುದಿಲ್ಲವೋ ಅಲ್ಲಿವರೆಗೆ ಶಾಸಕರು ಪ್ರಾಮಾಣಿಕವಾಗಿ ಕೆಲಸ‌ ಮಾಡುವುದಿಲ್ಲ. ಹೀಗಾಗಿ ಪ್ರಾಮಾಣಿಕರನ್ನು ಗೆಲ್ಲಿಸಿ ಎಂಬ ಧ್ಯೇಯದೊಂದಿಗೆ ಶಂಭುಲಿಂಗೇಗೌಡರು ಪ್ರಚಾರ ನಡೆಸುತ್ತಿದ್ದಾರೆ.

ಬೆಂಗಳೂರು:ಯಶವಂತಪುರ ಕ್ಷೇತ್ರ ಈ ಬಾರಿ ಬಿಜೆಪಿ ಮತ್ತು ಜೆಡಿಎಸ್ ನಡುವಿನ ಜಿದ್ದಾಜಿದ್ದಿನ ಕಣ. ಈ ರಣಕಣದಲ್ಲಿ ಗಾಂಧಿವಾದಿಯೊಬ್ಬರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ‌.
ಶಂಭುಲಿಂಗೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿಯವರಾದ 59 ವಯಸ್ಸಿನ ಇವರು ಯಶವಂತಪುರ ಉಪಸಮರದಲ್ಲಿನ ಸ್ಪೆಷಲ್ ಕ್ಯಾಂಡಿಡೇಟ್ ಆಗಿದ್ದಾರೆ. ಗಾಂಧಿ ತತ್ವ, ಸಿದ್ಧಾಂತಗಳನ್ನು ಮೈಗೂಡಿಸಿಕೊಂಡಿರುವ ಶಂಭುಲಿಂಗೇಗೌಡ ಗಾಂಧಿ ವೇಷ, ಕೈಯಲ್ಲಿ ಕೋಲು ಹಿಡಿದು ಪ್ರಸಕ್ತ ರಾಜಕೀಯ ವ್ಯವಸ್ಥೆ ಬದಲಾಯಿಸುವ ಉದ್ದೇಶದೊಂದಿಗೆ ಗಾಂಧಿ ಗೆಟಪ್‌ನಲ್ಲಿ ಚುನಾವಣಾ ರಣಕಣಕ್ಕಿಳಿದಿದ್ದಾರೆ. ನಿನ್ನೆ ನಾಮಪತ್ರ ಸಲ್ಲಿಸುವ ವೇಳೆಯೂ ಒಬ್ಬಂಟಿಯಾಗಿ ಬಂದಿದ್ದ ಶಂಭುಲಿಂಗೇಗೌಡರು, ಗಾಂಧಿ ಗೆಟಪ್‌ನಲ್ಲಿ ಆಗಮಿಸಿ, ಹೇರೋಹಳ್ಳಿಯ ಪಾಲಿಕೆ ಕಚೇರಿಯಲ್ಲಿ ತಮ್ಮ ನಾಮಪತ್ರ ಸಲ್ಲಿಸಿದರು‌. ಈವರೆಗೆ ಸುಮಾರು 20 ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಇವರು ಕಣಕ್ಕಿಳಿದಿದ್ದಾರೆ.

ಯಶವಂತಪುರ ರಣಕಣದಲ್ಲಿ ಗಾಂಧಿವಾದಿ ಸ್ಪರ್ಧೆ..

ಇಂದು ಗಾಂಧಿ ಗೆಟಪ್​​ನಲ್ಲಿ ಶಂಭುಲಿಂಗೇಗೌಡರು ಟಿವಿಎಸ್ ಮೊಪೆಡ್‌ನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಪ್ರಚಾರ ನಡೆಸುತ್ತಿದ್ದಾರೆ. ಯಶವಂತಪುರ ವಿಧಾನಸಭಾ ಕ್ಷೇತ್ರದಾದ್ಯಂತ ಗಾಂಧಿ ವೇಷ ತೊಟ್ಟು, ಕನ್ನಡ ಬಾವುಟ ಕಟ್ಟಿಕೊಂಡು, ತನ್ನ ಪರ ತಾವೇ ಒಬ್ಬಂಟಿಯಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರಾಮಾಣಿಕವಾಗಿ ಎಲ್ಲಿ ತನಕ‌ ಅಭ್ಯರ್ಥಿಗಳು ಗೆಲ್ಲುವುದಿಲ್ಲವೋ ಅಲ್ಲಿವರೆಗೆ ಶಾಸಕರು ಪ್ರಾಮಾಣಿಕವಾಗಿ ಕೆಲಸ‌ ಮಾಡುವುದಿಲ್ಲ. ಹೀಗಾಗಿ ಪ್ರಾಮಾಣಿಕರನ್ನು ಗೆಲ್ಲಿಸಿ ಎಂಬ ಧ್ಯೇಯದೊಂದಿಗೆ ಶಂಭುಲಿಂಗೇಗೌಡರು ಪ್ರಚಾರ ನಡೆಸುತ್ತಿದ್ದಾರೆ.

Intro:Body:KN_BNG_03_INDEPENDENTCANDIDATE_SPECIAL_SCRIPT_7201951

ಯಶವಂತಪುರ ರಣಕಣದಲ್ಲಿ ಹೀಗೊಬ್ಬ ಗಾಂಧಿವಾದಿ ಪಕ್ಷೇತರ ಅಭ್ಯರ್ಥಿಯಿಂದ ವಿಶೇಷ ಪ್ರಚಾರ!

ಬೆಂಗಳೂರು: ಯಶವಂತಪುರ ಕ್ಷೇತ್ರ ಈ ಬಾರಿ ಬಿಜೆಪಿ ಮತ್ತು ಜೆಡಿಎಸ್ ನಡುವಿನ ಜಿದ್ದಾಜಿದ್ದಿನ ಕಣ. ಈ ರಣಕಣದಲ್ಲಿ ಗಾಂಧಿವಾದಿಯೊಬ್ಬರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ‌.

ಚುನಾವಣೆಗಳು ಹಲವು ಕುತೂಹಲ, ಅಚ್ಚರಿಗಳಿಗೆ ಕಾರಣವಾಗುತ್ತದೆ. ಅನೇಕ ವಿಶೇಷ ಅಭ್ಯರ್ಥಿಗಳು ಕಣಕ್ಕಿಳಿದು, ವ್ಯವಸ್ಥೆ ಬದಲಾಯಿಸುವ ಪಣತೊಡುತ್ತಾರೆ. ಅದೇ ರೀತಿ ಈ ಬಾರಿಯ ಉಪಸಮರವೂ ವಿಶೇಷ ಅಭ್ಯರ್ಥಿಗಳಿಗೆ ಹೊರತಾಗಿಲ್ಲ. ಯಶವಂತಪುರ ಕ್ಷೇತ್ರದಲ್ಲಿ ವಿಶೇಷ ಎಂಬಂತೆ ಪಕ್ಷೇತರ ಅಭ್ಯರ್ಥಿಯೊಬ್ಬರು ಕಣಕ್ಕಿಳಿದಿದ್ದಾರೆ.

ಎಸ್. ಇವರ ಹೆಸರು ಶಂಭುಲಿಂಗೇಗೌಡ. ಮೂಲತ: ಮಂಡ್ಯ ಜಿಲ್ಲೆಯ ಮಳವಳ್ಳಿಯವರು. ಗಾಂಧಿ ತತ್ವ, ಸಿದ್ಧಾಂತಗಳನ್ನು ಮೈಗೂಡಿಸಿಕೊಂಡಿರುವ 59 ವಯಸ್ಸಿನ ಇವರು ಯಶವಂತಪುರ ಉಪಸಮರದಲ್ಲಿನ ಸ್ಪೆಷಲ್ ಕ್ಯಾಂಡಿಡೇಟ್ ಆಗಿದ್ದಾರೆ.

ಗಾಂಧಿ ವೇಶ, ಕೈಯ್ಯಲ್ಲಿ ಕೋಲು ಹಿಡಿದು ಪ್ರಸಕ್ತ ರಾಜಕೀಯ ವ್ಯವಸ್ಥೆ ಬದಲಾಯಿಸುವ ಉದ್ದೇಶದೊಂದಿಗೆ ಕಣಕ್ಕಿಳಿದಿದ್ದಾರೆ. ಗಾಂಧಿವಾದಿಯಾಗಿರುವ ಹಿನ್ನೆಲೆ ಶಂಭುಲಿಂಗೇಗೌಡರು ಅದೇ ಗೆಟ್ ಅಪ್‌ನಲ್ಲಿ ಚುನಾವಣಾ ರಣಕಣಕ್ಕಿಳಿದಿದ್ದಾರೆ.

ನಿನ್ನೆ ನಾಮಪತ್ರ ಸಲ್ಲಿಸುವ ವೇಳೆಯೂ ಒಬ್ಬಂಟಿಯಾಗಿ ಬಂದಿದ್ದ ಶಂಭುಲಿಂಗೇಗೌಡರು, ಗಾಂಧಿ ಗೆಟಪ್ ನಲ್ಲಿ ಆಗಮಿಸಿ, ಹೇರೋಹಳ್ಳಿಯ ಪಾಲಿಕೆ ಕಚೇರಿಯಲ್ಲಿ ತಮ್ಮ ನಾಮಪತ್ರ ಸಲ್ಲಿಸಿದರು‌. ಅಂದ ಹಾಗೆ ಶಂಭುಲಿಂಗೇಗೌಡರು ಇದೇ ಮೊದಲ‌ ಬಾರಿಗೆ ಚುನಾವಣಾ ರಣಕಣಕ್ಕಿಳಿಯುತ್ತಿಲ್ಲ. ಈವರೆಗೆ ಸುಮಾರು 20 ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಇಂದು ಅದೇ ಗಾಂಧಿ ಗೆಟಪ್ ನಲ್ಲಿ ಶಂಭುಲಿಂಗೇಗೌಡರು ಟಿವಿಎಸ್ ಮೊಪೆಡ್ ನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಪ್ರಚಾರ ನಡೆಸುತ್ತಿದ್ದಾರೆ. ಯಶವಂತಪುರ ವಿಧಾನಸಭಾ ಕ್ಷೇತ್ರದಾದ್ಯಂತ ಗಾಂಧಿ ವೇಶತೊಟ್ಟು, ಕನ್ನಡ ಬಾವುಟ ಕಟ್ಟಿಕೊಂಡು, ತನ್ನ ಪರವಾಗಿ ತಾವೇ ಒಬ್ಬಂಟಿಯಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದರು.

ಪ್ರಮಾಣಿಕರು ಚುನಾವಣೆಯಲ್ಲಿ ಗೆಲ್ಲಬೇಕು. ಎಲ್ಲಿವರೆಗೆ ಪ್ರಮಾಣಿಕರು ಚುನಾವಣೆಯಲ್ಲಿ ಗೆಲ್ಲುವುದಿಲ್ಲವೋ ಅಲ್ಲಿವರೆಗೆ ಸಮಾಜ ಉದ್ಧಾರ ಆಗುವುದಿಲ್ಲ ಎಂಬುದು ಶಂಭುಲಿಂಗೇಗೌಡರ ವಾದ. ಪ್ರಾಮಾಣಿಕವಾಗಿ ಎಲ್ಲಿ ತನಕ‌ ಅಭ್ಯರ್ಥಿಗಳು ಗೆಲ್ಲುವುದಿಲ್ಲವೋ ಅಲ್ಲಿವರೆಗೆ ಶಾಸಕರು ಪ್ರಾಮಾಣಿಕವಾಗಿ ಕೆಲಸ‌ ಮಾಡುವುದಿಲ್ಲ. ಹೀಗಾಗಿ ಪ್ರಾಮಾಣಿಕರನ್ನು ಗೆಲ್ಲಿಸಿ ಎಂಬ ಮೂಲವಾಕ್ಯದೊಂದಿಗೆ ಶಂಭುಲಿಂಗೇಗೌಡರು ಪ್ರಚಾರ ನಡೆಸುತ್ತಿದ್ದಾರೆ.Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.