ETV Bharat / state

ಸಿಎಂ ಬಿಎಸ್​ವೈ ನಿವಾಸಕ್ಕೆ ಹೊಸ ಅತಿಥಿಯ ಆಗಮನ: ಗಂಡು ಕರುವಿಗೆ ಜನ್ಮ ನೀಡಿದ ಕೃಷ್ಣೆ...!

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉಡುಗೊರೆಯಾಗಿ ಪಡೆದಿರುವ ಹಸುಗಳನ್ನು, ತಮ್ಮ ಸರ್ಕಾರಿ ನಿವಾಸ ಕಾವೇರಿಯ ಶೆಡ್​​​ನಲ್ಲಿ ಪೋಷಿಸುತ್ತಿದ್ದಾರೆ.

author img

By

Published : Jun 25, 2020, 10:51 PM IST

A cow that gave birth to a male calf in bsy home
ಸಿಎಂ ಬಿಎಸ್​ವೈ ನಿವಾಸಕ್ಕೆ ಹೊಸ ಅತಿಥಿಯ ಆಗಮನ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನಿವಾಸಕ್ಕೆ ಇಂದು ಹೊಸ ಅತಿಥಿಯ ಆಗಮನವಾಗಿದೆ. ಕಾವೇರಿಯಲ್ಲಿ ಆಶ್ರಯ ಪಡೆದಿರುವ ಕೃಷ್ಣೆ ಕರುವಿಗೆ ಜನ್ಮ ನೀಡಿದ್ದು, ಸಿಎಂ ನಿವಾಸದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉಡುಗೊರೆಯಾಗಿ ಪಡೆದಿರುವ ಹಸುಗಳನ್ನು, ತಮ್ಮ ಸರ್ಕಾರಿ ನಿವಾಸ ಕಾವೇರಿಯ ಶೆಡ್​​​ನಲ್ಲಿ ಪೋಷಿಸುತ್ತಿದ್ದಾರೆ. ಗಿರ್ ತಳಿಯ ಕಾವೇರಿ ಹಾಗೂ ಕೃಷ್ಣೆ ಹಸುಗಳ ಜೊತೆ ಪುಟ್ಟ ಕರು ಭೀಮ ಸಿಎಂ ನಿವಾಸದ ಆವರಣದಲ್ಲಿ ಬೀಡುಬಿಟ್ಟಿವೆ.

ಇಂದು ರಾತ್ರಿ 8.30 ರ ಸಮಯದಲ್ಲಿ ಕೃಷ್ಣೆ ಗಂಡು ಕರುವಿಗೆ ಜನ್ಮ ನೀಡಿದ್ದು, ಸಿಎಂ ನಿವಾಸಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಕಾವೇರಿ ಹಸುವಿನ ಕರು ಭೀಮನಿಗೆ ಇದೀಗ ಕೃಷ್ಣೆಯ ಕರುವಿನ ಸಾಥ್ ಸಿಕ್ಕಂತಾಗಿದೆ.

ಸಿಎಂ ಬಿಎಸ್​ವೈ ನಿವಾಸಕ್ಕೆ ಹೊಸ ಅತಿಥಿಯ ಆಗಮನ

ಪ್ರತಿ ದಿನವೂ ಬೆಳಗ್ಗೆ ವಾಯುವಿಹಾರಕ್ಕೆ ತೆರಳುವ ಸಿಎಂ ಬಿ.ಎಸ್. ಯಡಿಯೂರಪ್ಪ ಕೆಲಕಾಲ ಪುಟ್ಟ ಕರು ಭೀಮನ ಜೊತೆ ಕಳೆಯುತ್ತಾರೆ. ಸಿಎಂ ವಾಕಿಂಗ್ ಬಂದರೆಂದರೆ ಭೀಮ ಸಿಎಂರತ್ತ ನುಗ್ಗಿ ಬರುತ್ತದೆ. ಸಿಎಂ ಬಿಎಸ್​ವೈ ಕೂಡ ಕರುವಿನ ಮೈದಡವುತ್ತಾ ಕಾಲ ಕಳೆಯುತ್ತಾರೆ. ಇದೀಗ ಮತ್ತೊಂದು ಕರು ಸಿಎಂ ನಿವಾಸಕ್ಕೆ ಆಗಮಿಸಿದ್ದು ಸಿಎಂಗೆ ಮತ್ತಷ್ಟು ಖುಷಿ ನೀಡಿದೆ.

ಕೆಲ ದಿನಗಳ ಹಿಂದೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಗಿರ್ ತಳಿಯ ಎರಡು ಹಸು ಒಂದು ಕರುವನ್ನು ಉಡುಗೊರೆಯಾಗಿ ನೀಡಿದ್ದರು. ಅವುಗಳಲ್ಲಿ ಹಾಲು ಕೊಡುವ ಹಸುವಿಗೆ ಕಾವೇರಿ ಮತ್ತೊಂದು ಹಸುವಿಗೆ ಕೃಷ್ಣೆ ಹಾಗೂ ಕರುವಿಗೆ ಭೀಮ ಎಂದು ನಾಮಕರಣ ಮಾಡಿ ಕಾವೇರಿ ನಿವಾಸದ ಆವರಣದಲ್ಲಿಯೇ ಶೆಡ್ ನಿರ್ಮಿಸಿ ಸಾಕಲಾಗುತ್ತಿದೆ.

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನಿವಾಸಕ್ಕೆ ಇಂದು ಹೊಸ ಅತಿಥಿಯ ಆಗಮನವಾಗಿದೆ. ಕಾವೇರಿಯಲ್ಲಿ ಆಶ್ರಯ ಪಡೆದಿರುವ ಕೃಷ್ಣೆ ಕರುವಿಗೆ ಜನ್ಮ ನೀಡಿದ್ದು, ಸಿಎಂ ನಿವಾಸದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉಡುಗೊರೆಯಾಗಿ ಪಡೆದಿರುವ ಹಸುಗಳನ್ನು, ತಮ್ಮ ಸರ್ಕಾರಿ ನಿವಾಸ ಕಾವೇರಿಯ ಶೆಡ್​​​ನಲ್ಲಿ ಪೋಷಿಸುತ್ತಿದ್ದಾರೆ. ಗಿರ್ ತಳಿಯ ಕಾವೇರಿ ಹಾಗೂ ಕೃಷ್ಣೆ ಹಸುಗಳ ಜೊತೆ ಪುಟ್ಟ ಕರು ಭೀಮ ಸಿಎಂ ನಿವಾಸದ ಆವರಣದಲ್ಲಿ ಬೀಡುಬಿಟ್ಟಿವೆ.

ಇಂದು ರಾತ್ರಿ 8.30 ರ ಸಮಯದಲ್ಲಿ ಕೃಷ್ಣೆ ಗಂಡು ಕರುವಿಗೆ ಜನ್ಮ ನೀಡಿದ್ದು, ಸಿಎಂ ನಿವಾಸಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಕಾವೇರಿ ಹಸುವಿನ ಕರು ಭೀಮನಿಗೆ ಇದೀಗ ಕೃಷ್ಣೆಯ ಕರುವಿನ ಸಾಥ್ ಸಿಕ್ಕಂತಾಗಿದೆ.

ಸಿಎಂ ಬಿಎಸ್​ವೈ ನಿವಾಸಕ್ಕೆ ಹೊಸ ಅತಿಥಿಯ ಆಗಮನ

ಪ್ರತಿ ದಿನವೂ ಬೆಳಗ್ಗೆ ವಾಯುವಿಹಾರಕ್ಕೆ ತೆರಳುವ ಸಿಎಂ ಬಿ.ಎಸ್. ಯಡಿಯೂರಪ್ಪ ಕೆಲಕಾಲ ಪುಟ್ಟ ಕರು ಭೀಮನ ಜೊತೆ ಕಳೆಯುತ್ತಾರೆ. ಸಿಎಂ ವಾಕಿಂಗ್ ಬಂದರೆಂದರೆ ಭೀಮ ಸಿಎಂರತ್ತ ನುಗ್ಗಿ ಬರುತ್ತದೆ. ಸಿಎಂ ಬಿಎಸ್​ವೈ ಕೂಡ ಕರುವಿನ ಮೈದಡವುತ್ತಾ ಕಾಲ ಕಳೆಯುತ್ತಾರೆ. ಇದೀಗ ಮತ್ತೊಂದು ಕರು ಸಿಎಂ ನಿವಾಸಕ್ಕೆ ಆಗಮಿಸಿದ್ದು ಸಿಎಂಗೆ ಮತ್ತಷ್ಟು ಖುಷಿ ನೀಡಿದೆ.

ಕೆಲ ದಿನಗಳ ಹಿಂದೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಗಿರ್ ತಳಿಯ ಎರಡು ಹಸು ಒಂದು ಕರುವನ್ನು ಉಡುಗೊರೆಯಾಗಿ ನೀಡಿದ್ದರು. ಅವುಗಳಲ್ಲಿ ಹಾಲು ಕೊಡುವ ಹಸುವಿಗೆ ಕಾವೇರಿ ಮತ್ತೊಂದು ಹಸುವಿಗೆ ಕೃಷ್ಣೆ ಹಾಗೂ ಕರುವಿಗೆ ಭೀಮ ಎಂದು ನಾಮಕರಣ ಮಾಡಿ ಕಾವೇರಿ ನಿವಾಸದ ಆವರಣದಲ್ಲಿಯೇ ಶೆಡ್ ನಿರ್ಮಿಸಿ ಸಾಕಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.